newsfirstkannada.com

‘ಭಾರತ ಹಿಂದೂ ರಾಷ್ಟ್ರ’ ಹೇಳಿಕೆ ವಿವಾದ: ಕಾಂಗ್ರೆಸ್​ ನಾಯಕರ ಮಧ್ಯೆಯೇ ಬೀದಿ ಜಗಳ!

Share :

16-08-2023

    ಕಮಲ್​​ ನಾಥ್​​ ಹಿಂದೂ ರಾಷ್ಟ್ರ ಸ್ಟೇಟ್​ಮೆಂಟ್​​..!

    ಕಾಂಗ್ರೆಸ್​ ಲೀಡರ್,​ ಮಾಜಿ ಸಿಎಂ ಕಮಲ್​ ನಾಥ್

    ಮಾಜಿ ಸಿಎಂಗೆ ದಿಗ್ವಿಜಯ್ ಸಿಂಗ್ ಸಖತ್​​ ಕೌಂಟರ್​​

ಭೋಪಾಲ್​​: ಬಾಗೇಶ್ವರ್ ಧಾಮದ ಮುಖ್ಯ ಅರ್ಚಕ ಧೀರೇಂದ್ರ ಶಾಸ್ತ್ರಿಗೆ ಆತಿಥ್ಯ ನೀಡಿದ ಬಳಿಕ ಮಾತಾಡಿದ ಮಧ್ಯಪ್ರದೇಶದ ಮಾಜಿ ಸಿಎಂ ಕಮಲ್​ ನಾಥ್​​​, ಭಾರತದಲ್ಲಿ ಶೇ.82ರಷ್ಚು ಮಂದಿ ಹಿಂದೂಗಳೇ ಇದ್ದಾರೆ. ಹೀಗಾಗಿ ಹಿಂದೂ ರಾಷ್ಟ್ರ ಹೌದೋ ಅಲ್ಲವೋ ಎನ್ನುವ ಚರ್ಚೆಯೇ ಬೇಕಿಲ್ಲ ಎಂದಿದ್ದರು. ಈ ಹೇಳಿಕೆಗೆ ಈಗ ಕಾಂಗ್ರೆಸ್​ ಹಿರಿಯ ನಾಯಕ, ಮಾಜಿ ಸಿಎಂ ದಿಗ್ವಿಜಯ್ ಸಿಂಗ್ ಕೌಂಟರ್​ ಕೊಟ್ಟಿದ್ದಾರೆ.

ರಾಜೀನಾಮೆ ನೀಡಿ ಎಂದ ದಿಗ್ವಿಜಯ್ ಸಿಂಗ್!

ಇನ್ನು, ಈ ಕುರಿತು ಮಾಧ್ಯಮಗಳೊಂದಿಗೆ ಮಾತಾಡಿದ ಮಾಜಿ ಸಿಎಂ ದಿಗ್ವಿಜಯ್ ಸಿಂಗ್, ಭಾರತ ಯಾವುದೋ ಒಂದು ಧರ್ಮಕ್ಕೆ ಸೇರಿದ ರಾಷ್ಟ್ರವಲ್ಲ. ಇದು ಹಿಂದೂ ಅಥವಾ ಮುಸ್ಲಿಂ ರಾಷ್ಟ್ರದ ಪ್ರಶ್ನೆಯಲ್ಲ. ಭಾರತ ಎಲ್ಲರಿಗೂ ಸೇರಿದ್ದು. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಸಿಖ್​​, ಜೈನ​​, ಬೌದ್ಧ ಎನ್ನದೇ ಎಲ್ಲರೂ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ್ದಾರೆ ಎಂದರು.

ಭಗತ್ ಸಿಂಗ್ ಜಗೆ ಅಶ್ಫಾಕುಲ್ಲಾ ಎಂಬ ಹೋರಾಟಗಾರನನ್ನು ಗಲ್ಲಿಗೇರಿಸಲಾಗಿದೆ. ಹೀಗಾಗಿ ಭಾರತ ಹಿಂದೂ ರಾಷ್ಟ್ರ ಎಂದು ಮಾತಾಡುವ ಜನ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಭಜರಂಗದಳ ನಿಷೇಧವಿಲ್ಲ

ಸದ್ಯದಲ್ಲೇ ನಡೆಯಲಿರೋ ಮಧ್ಯಪ್ರದೇಶ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​​ ಗೆದ್ದರೆ ಬಜರಂಗದ ನಿಷೇಧ ಮಾಡುವುದಿಲ್ಲ. ಬಜರಂಗದಳದಲ್ಲೂ ಒಳ್ಳೆ ಜನ ಇದ್ದಾರೆ. ಆದರೆ, ಗಲಭೆ ಮಾಡೋ ಯಾರನ್ನು ಬಿಡೋ ಮಾತೇ ಇಲ್ಲ ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

 

‘ಭಾರತ ಹಿಂದೂ ರಾಷ್ಟ್ರ’ ಹೇಳಿಕೆ ವಿವಾದ: ಕಾಂಗ್ರೆಸ್​ ನಾಯಕರ ಮಧ್ಯೆಯೇ ಬೀದಿ ಜಗಳ!

https://newsfirstlive.com/wp-content/uploads/2023/08/Kamal-Nath-and-Digvijay-Singh.jpg

    ಕಮಲ್​​ ನಾಥ್​​ ಹಿಂದೂ ರಾಷ್ಟ್ರ ಸ್ಟೇಟ್​ಮೆಂಟ್​​..!

    ಕಾಂಗ್ರೆಸ್​ ಲೀಡರ್,​ ಮಾಜಿ ಸಿಎಂ ಕಮಲ್​ ನಾಥ್

    ಮಾಜಿ ಸಿಎಂಗೆ ದಿಗ್ವಿಜಯ್ ಸಿಂಗ್ ಸಖತ್​​ ಕೌಂಟರ್​​

ಭೋಪಾಲ್​​: ಬಾಗೇಶ್ವರ್ ಧಾಮದ ಮುಖ್ಯ ಅರ್ಚಕ ಧೀರೇಂದ್ರ ಶಾಸ್ತ್ರಿಗೆ ಆತಿಥ್ಯ ನೀಡಿದ ಬಳಿಕ ಮಾತಾಡಿದ ಮಧ್ಯಪ್ರದೇಶದ ಮಾಜಿ ಸಿಎಂ ಕಮಲ್​ ನಾಥ್​​​, ಭಾರತದಲ್ಲಿ ಶೇ.82ರಷ್ಚು ಮಂದಿ ಹಿಂದೂಗಳೇ ಇದ್ದಾರೆ. ಹೀಗಾಗಿ ಹಿಂದೂ ರಾಷ್ಟ್ರ ಹೌದೋ ಅಲ್ಲವೋ ಎನ್ನುವ ಚರ್ಚೆಯೇ ಬೇಕಿಲ್ಲ ಎಂದಿದ್ದರು. ಈ ಹೇಳಿಕೆಗೆ ಈಗ ಕಾಂಗ್ರೆಸ್​ ಹಿರಿಯ ನಾಯಕ, ಮಾಜಿ ಸಿಎಂ ದಿಗ್ವಿಜಯ್ ಸಿಂಗ್ ಕೌಂಟರ್​ ಕೊಟ್ಟಿದ್ದಾರೆ.

ರಾಜೀನಾಮೆ ನೀಡಿ ಎಂದ ದಿಗ್ವಿಜಯ್ ಸಿಂಗ್!

ಇನ್ನು, ಈ ಕುರಿತು ಮಾಧ್ಯಮಗಳೊಂದಿಗೆ ಮಾತಾಡಿದ ಮಾಜಿ ಸಿಎಂ ದಿಗ್ವಿಜಯ್ ಸಿಂಗ್, ಭಾರತ ಯಾವುದೋ ಒಂದು ಧರ್ಮಕ್ಕೆ ಸೇರಿದ ರಾಷ್ಟ್ರವಲ್ಲ. ಇದು ಹಿಂದೂ ಅಥವಾ ಮುಸ್ಲಿಂ ರಾಷ್ಟ್ರದ ಪ್ರಶ್ನೆಯಲ್ಲ. ಭಾರತ ಎಲ್ಲರಿಗೂ ಸೇರಿದ್ದು. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಸಿಖ್​​, ಜೈನ​​, ಬೌದ್ಧ ಎನ್ನದೇ ಎಲ್ಲರೂ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ್ದಾರೆ ಎಂದರು.

ಭಗತ್ ಸಿಂಗ್ ಜಗೆ ಅಶ್ಫಾಕುಲ್ಲಾ ಎಂಬ ಹೋರಾಟಗಾರನನ್ನು ಗಲ್ಲಿಗೇರಿಸಲಾಗಿದೆ. ಹೀಗಾಗಿ ಭಾರತ ಹಿಂದೂ ರಾಷ್ಟ್ರ ಎಂದು ಮಾತಾಡುವ ಜನ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಭಜರಂಗದಳ ನಿಷೇಧವಿಲ್ಲ

ಸದ್ಯದಲ್ಲೇ ನಡೆಯಲಿರೋ ಮಧ್ಯಪ್ರದೇಶ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​​ ಗೆದ್ದರೆ ಬಜರಂಗದ ನಿಷೇಧ ಮಾಡುವುದಿಲ್ಲ. ಬಜರಂಗದಳದಲ್ಲೂ ಒಳ್ಳೆ ಜನ ಇದ್ದಾರೆ. ಆದರೆ, ಗಲಭೆ ಮಾಡೋ ಯಾರನ್ನು ಬಿಡೋ ಮಾತೇ ಇಲ್ಲ ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

 

Load More