newsfirstkannada.com

130ಕ್ಕೂ ಹೆಚ್ಚು ಸ್ಥಾನ ಗೆದ್ದಿರೋ ಸಿದ್ದು ಸರ್ಕಾರವನ್ನೇ ಕೆಡವಲು ಸ್ಕೆಚ್ ಹಾಕಿದ್ರಾ? ಏನಿದು ಡಿಕೆಶಿ ಆರೋಪ?

Share :

25-07-2023

    ಸಿದ್ದರಾಮಯ್ಯ ಸರ್ಕಾರವನ್ನೇ ಕೆಡವಲು ಸ್ಕೆಚ್​​

    ಡಿಸಿಎಂ ಡಿ.ಕೆ ಶಿವಕುಮಾರ್​ ಸ್ಫೋಟಕ ಹೇಳಿಕೆ

    ಬಿಜೆಪಿ, ಜೆಡಿಎಸ್​ ವಿರುದ್ಧ ಡಿಸಿಎಂ ಆರೋಪ

ಬೆಂಗಳೂರು: ರಾಜಕೀಯದಲ್ಲಿ ಯಾವಾಗ ಏನು ಬೇಕಾದರೂ ನಡೆಯುತ್ತೆ ಎಂಬುದಕ್ಕೆ ಮಹಾರಾಷ್ಟ್ರದ ಬೆಳವಣಿಗೆಯೇ ಸಾಕ್ಷಿ. ಈಗ ಕರ್ನಾಟಕದ ರಾಜಕೀಯದಲ್ಲೂ ಮಹಾ ಬೆಳವಣಿಗೆಯ ಸುಳಿವು ಸಿಕ್ಕಿದೆ. ಸಿದ್ದರಾಮಯ್ಯ ಸರ್ಕಾರಕ್ಕೆ ಸಿಂಗಾಪುರದಲ್ಲಿ ಚಕ್ರವ್ಯೂಹ ರೆಡಿಯಾಗುತ್ತಿದೆ ಎಂಬ ಹೊಸ ಬಾಂಬ್​​​ ಡಿಸಿಎಂ ಡಿ.ಕೆ ಶಿವಕುಮಾರ್​​ ಸಿಡಿಸಿದ್ದಾರೆ.

ಸಿದ್ದು​ ಸರ್ಕಾರ ಪತನಕ್ಕೆ ವಿದೇಶದಲ್ಲಿ ರೆಡಿ ಆಗುತ್ತಿದ್ಯಾ ಸ್ಕೆಚ್​​?

ಹೌದು, ಡಿಸಿಎಂ ಡಿ.ಕೆ ಶಿವಕುಮಾರ್​ ನೀಡಿರೋ ಹೇಳಿಕೆಯೀಗ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಇದರ ಜೊತೆಗೆ ಪ್ರಚಂಡ ಬಹುಮತದ ಸರ್ಕಾರಕ್ಕೂ ಆಪರೇಷನ್​ ಆತಂಕ ಶುರುವಾಗಿದ್ಯಾ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದು ಸರಿಯಾಗಿ ಇನ್ನೂ ಮೂರು ತಿಂಗಳು ಆಗಿಲ್ಲ. ಚುನಾವಣೆ ವೇಳೆ ಘೋಷಿಸಿದ್ದ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುವುದರಲ್ಲೇ ಸರ್ಕಾರ ಬ್ಯುಸಿ ಆಗಿದೆ. ಮತ್ತೊಂದೆಡೆ ಸದ್ದಿಲ್ಲದ್ದೇ ರಾಜಕೀಯ ಚದುರಂಗದಾಟ ಶುರುವಾಗಿರುವ ಸುಳಿವು ಸಿಕ್ಕಿದೆ. ಮಹಾರಾಷ್ಟ್ರದಲ್ಲಿ ಅಜಿತ್​ ಪವಾರ್​, ಎನ್​ಸಿಪಿ ತೊರೆದು ಶಿಂಧೆ ಸರ್ಕಾರದ ಜೊತೆ ಕೈ ಜೋಡಿಸಿದ್ದರು. ಈ ಬೆಳವಣಿಗೆ ಬೆನ್ನಲ್ಲೇ, ಜೆಡಿಎಸ್​ ಮತ್ತು ಬಿಜೆಪಿ ನಾಯಕರು ಕರ್ನಾಟಕದಲ್ಲೂ ಅಜಿತ್​ ಪವಾರ್​ ಸೃಷ್ಟಿ ಆಗ್ತಾರೆ ನೋಡ್ತಿರಿ ಎಂದು ಹೇಳಿಕೆ ನೀಡಿದ್ದರು. ಇದೀಗ ಖುದ್ದು ಡಿಸಿಎಂ ಡಿ.ಕೆ ಶಿವಕುಮಾರ್​ ಅವರೇ ಹೊಸ ಬಾಂಬ್​ ಸಿಡಿಸಿದ್ದಾರೆ. ಬೆಂಗಳೂರಿನಲ್ಲಿ ತಂತ್ರ ಮಾಡಿದ್ರೆ ನಮಗೆ ಗೊತ್ತಾಗುತ್ತೆ ಎಂದು ಸಿಂಗಾಪುರದಲ್ಲಿ ಕುಳಿತು ಸರ್ಕಾರ ಪತನಕ್ಕೆ ಸಂಚು ಮಾಡ್ತಿದ್ದಾರೆ ಎಂದು ಡಿಕೆಶಿ ನೀಡಿರುವ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಸಿಂಗಾಪುರದಿಂದ ಸ್ಕೆಚ್​ ಹಾಕಿದ ಆ ರಾಜಕಾರಣಿ ಯಾರು?

ಕಾಂಗ್ರೆಸ್​ ಸರ್ಕಾರ ಪತನಕ್ಕೆ ಒಬ್ಬ ರಾಜಕಾರಣಿ ಸಿಂಗಾಪುರದಲ್ಲಿ ಕುಳಿತು ಷಡ್ಯಂತ್ರ ಮಾಡ್ತಿದ್ದಾರೆ ಎಂದು ಡಿಕೆ.ಶಿವಕುಮಾರ್​ ಗಂಭೀರ ಆರೋಪ ಮಾಡಿದ್ದಾರೆ. ಇದೀಗ ಆ ರಾಜಕಾರಣಿ ಯಾರು ಎಂಬ ಚರ್ಚೆ ರಾಜ್ಯ ರಾಜಕೀಯದಲ್ಲಿ ಕಾಡ್ಗಿಚ್ಚಿನಂತೆ ಆವರಿಸಿದೆ.

ಮತ್ತೊಂದು ಮೂಲಗಳ ಪ್ರಕಾರ, ಡಿ.ಕೆ ಶಿವಕುಮಾರ್​, ಪರೋಕ್ಷವಾಗಿ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ಆರೋಪ ಮಾಡಿದ್ರಾ ಎಂಬ ಸಂಶಯ ಮೂಡಿದೆ. ಸದ್ಯ ಮಾಜಿ ಸಿಎಂ ಕುಮಾರಸ್ವಾಮಿ ಸಿಂಗಾಪುರ ಪ್ರವಾಸದಲ್ಲಿದ್ದಾರೆ. ಇದೀಗ ಡಿ.ಕೆ ಶಿವಕುಮಾರ್​ ಮಾತುಗಳನ್ನ ಕೇಳ್ತಿದ್ರೆ, ದಳಪತಿಯತ್ತ ಸಂಶಯ ಕಣ್ಣು ತಿರುಗಿದೆ. ಯಾಕಂದ್ರೆ ಕೆಲ ದಿನಗಳ ಹಿಂದೆ ಮಾಜಿ ಸಿಎಂ ಹೆಚ್​ಡಿಕೆ, ಮಹಾರಾಷ್ಟ್ರದ ಅಜಿತ್​ ಪವಾರ್​ನಂತೆ ಕರ್ನಾಟದಲ್ಲೂ ಹುಟ್ಟಿಕೊಳ್ಳಬಹುದು ಎಂದಿದ್ದರು. ಇನ್ನು ಮಾಜಿ ಸಚಿವ ಈಶ್ವರಪ್ಪ ಕೂಡ, ಕಾಂಗ್ರೆಸ್​ ಸರ್ಕಾರದಲ್ಲಿ 3 ತಿಂಗಳಲ್ಲೇ ಪತನವಾಗಲಿದೆ ಅಂದಿದ್ರು.

ಬಹುಮತದ ಸರ್ಕಾರಕ್ಕೂ ಕಾಡ್ತಿದ್ಯಾ ಆಪರೇಷನ್​ ಭೀತಿ?

ಆಡಳಿತ ಪಕ್ಷ ಮತ್ತು ವಿಪಕ್ಷಗಳ ನಾಯಕರ ಹೇಳಿಕೆಗಳನ್ನು ನೋಡುತ್ತಿದ್ದರೆ, ಪ್ರಚಂಡ ಬಹುಮತದ ಸರ್ಕಾರಕ್ಕೂ ಆಪರೇಷನ್​ ಆತಂಕ ಶುರುವಾಗಿದೆಯೇ ಎಂಬ ಸಂಶಯ ಮೂಡುತ್ತೆ. ಇತ್ತೀಚಿಗೆ ಬಿಜೆಪಿ-ಜೆಡಿಎಸ್​ ನಾಯಕರು ಕೂಡ ದೋಸ್ತಿ ಮಾಡಿಕೊಂಡಂತೆ ಕಾಣುತ್ತಿದೆ. ಹೀಗಾಗಿ ರಾಜ್ಯ ರಾಜಕೀಯದಲ್ಲಿ ಮೈತ್ರಿ ಲೆಕ್ಕಾಚಾರವೂ ಶುರುವಾಗಿದೆ.

‘ಆಪರೇಷನ್​’ ಲೆಕ್ಕಾಚಾರ

224 ಸ್ಥಾನ ಇರುವ ವಿಧಾನಸಭೆಯಲ್ಲಿ ಸರ್ಕಾರ ರಚನೆಗೆ 113 ಶಾಸಕರ ಬಹುಮತ ಬೇಕು. ಸದ್ಯ 135 ಶಾಸಕರ ಬಲದಿಂದ ಕಾಂಗ್ರೆಸ್​ ಸರ್ಕಾರ ರಚನೆ ಮಾಡಿದೆ. ಒಂದು ವೇಳೆ ಬಿಜೆಪಿ-ಜೆಡಿಎಸ್​ ಇಬ್ಬರು ಸೇರಿದರೆ 85 ಶಾಸಕರು ಆಗಲಿದ್ದಾರೆ. ಆದರೆ ಬಹುಮತಕ್ಕೆ 113 ಶಾಸಕರ ಸಂಖ್ಯೆ ಅಗತ್ಯವಿದ್ದು, ಮೈತ್ರಿಯಾದ್ರೂ ಸರ್ಕಾರ ರಚನೆಗೆ 28 ಶಾಸಕರ ಕೊರತೆ ಆಗಲಿದೆ. ಹೀಗಾಗಿ ಕಾಂಗ್ರೆಸ್​ ಬಲ ಕಡಿಮೆ ಮಾಡಲು ಆಪರೇಷನ್ ಕಮಲ ಅಗತ್ಯ. ಹೀಗಾಗಿ ಕಡಿಮೆ ಅಂದ್ರೂ 55ಕ್ಕೂ ಹೆಚ್ಚು ಶಾಸಕರನ್ನು ಸೆಳೆಯಲೇಬೇಕು. 55 ಶಾಸಕರನ್ನು ಸೆಳೆದ್ರೆ ಆಗ ಕಾಂಗ್ರೆಸ್​ ಬಲ 80ಕ್ಕೆ ಕುಸಿಯಲಿದೆ. ಆಗ ಬಹುಮತ ಸಾಬೀತಿಗೆ 85 ಸಂಖ್ಯಾ ಬಲ ಬೇಕಾಗಲಿದ್ದು, ಜೆಡಿಎಸ್​-ಬಿಜೆಪಿ ಮೈತ್ರಿಯಿಂದ ಸರ್ಕಾರ ರಚಿಸಬಹುದು. ಆದ್ರೆ, ಅಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಶಾಸಕರನ್ನು ಸೆಳೆಯುವುದು ಕಷ್ಟದ ಮಾತೇ ಸರಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

130ಕ್ಕೂ ಹೆಚ್ಚು ಸ್ಥಾನ ಗೆದ್ದಿರೋ ಸಿದ್ದು ಸರ್ಕಾರವನ್ನೇ ಕೆಡವಲು ಸ್ಕೆಚ್ ಹಾಕಿದ್ರಾ? ಏನಿದು ಡಿಕೆಶಿ ಆರೋಪ?

https://newsfirstlive.com/wp-content/uploads/2023/07/Siddu_DKS-1.jpg

    ಸಿದ್ದರಾಮಯ್ಯ ಸರ್ಕಾರವನ್ನೇ ಕೆಡವಲು ಸ್ಕೆಚ್​​

    ಡಿಸಿಎಂ ಡಿ.ಕೆ ಶಿವಕುಮಾರ್​ ಸ್ಫೋಟಕ ಹೇಳಿಕೆ

    ಬಿಜೆಪಿ, ಜೆಡಿಎಸ್​ ವಿರುದ್ಧ ಡಿಸಿಎಂ ಆರೋಪ

ಬೆಂಗಳೂರು: ರಾಜಕೀಯದಲ್ಲಿ ಯಾವಾಗ ಏನು ಬೇಕಾದರೂ ನಡೆಯುತ್ತೆ ಎಂಬುದಕ್ಕೆ ಮಹಾರಾಷ್ಟ್ರದ ಬೆಳವಣಿಗೆಯೇ ಸಾಕ್ಷಿ. ಈಗ ಕರ್ನಾಟಕದ ರಾಜಕೀಯದಲ್ಲೂ ಮಹಾ ಬೆಳವಣಿಗೆಯ ಸುಳಿವು ಸಿಕ್ಕಿದೆ. ಸಿದ್ದರಾಮಯ್ಯ ಸರ್ಕಾರಕ್ಕೆ ಸಿಂಗಾಪುರದಲ್ಲಿ ಚಕ್ರವ್ಯೂಹ ರೆಡಿಯಾಗುತ್ತಿದೆ ಎಂಬ ಹೊಸ ಬಾಂಬ್​​​ ಡಿಸಿಎಂ ಡಿ.ಕೆ ಶಿವಕುಮಾರ್​​ ಸಿಡಿಸಿದ್ದಾರೆ.

ಸಿದ್ದು​ ಸರ್ಕಾರ ಪತನಕ್ಕೆ ವಿದೇಶದಲ್ಲಿ ರೆಡಿ ಆಗುತ್ತಿದ್ಯಾ ಸ್ಕೆಚ್​​?

ಹೌದು, ಡಿಸಿಎಂ ಡಿ.ಕೆ ಶಿವಕುಮಾರ್​ ನೀಡಿರೋ ಹೇಳಿಕೆಯೀಗ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಇದರ ಜೊತೆಗೆ ಪ್ರಚಂಡ ಬಹುಮತದ ಸರ್ಕಾರಕ್ಕೂ ಆಪರೇಷನ್​ ಆತಂಕ ಶುರುವಾಗಿದ್ಯಾ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದು ಸರಿಯಾಗಿ ಇನ್ನೂ ಮೂರು ತಿಂಗಳು ಆಗಿಲ್ಲ. ಚುನಾವಣೆ ವೇಳೆ ಘೋಷಿಸಿದ್ದ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುವುದರಲ್ಲೇ ಸರ್ಕಾರ ಬ್ಯುಸಿ ಆಗಿದೆ. ಮತ್ತೊಂದೆಡೆ ಸದ್ದಿಲ್ಲದ್ದೇ ರಾಜಕೀಯ ಚದುರಂಗದಾಟ ಶುರುವಾಗಿರುವ ಸುಳಿವು ಸಿಕ್ಕಿದೆ. ಮಹಾರಾಷ್ಟ್ರದಲ್ಲಿ ಅಜಿತ್​ ಪವಾರ್​, ಎನ್​ಸಿಪಿ ತೊರೆದು ಶಿಂಧೆ ಸರ್ಕಾರದ ಜೊತೆ ಕೈ ಜೋಡಿಸಿದ್ದರು. ಈ ಬೆಳವಣಿಗೆ ಬೆನ್ನಲ್ಲೇ, ಜೆಡಿಎಸ್​ ಮತ್ತು ಬಿಜೆಪಿ ನಾಯಕರು ಕರ್ನಾಟಕದಲ್ಲೂ ಅಜಿತ್​ ಪವಾರ್​ ಸೃಷ್ಟಿ ಆಗ್ತಾರೆ ನೋಡ್ತಿರಿ ಎಂದು ಹೇಳಿಕೆ ನೀಡಿದ್ದರು. ಇದೀಗ ಖುದ್ದು ಡಿಸಿಎಂ ಡಿ.ಕೆ ಶಿವಕುಮಾರ್​ ಅವರೇ ಹೊಸ ಬಾಂಬ್​ ಸಿಡಿಸಿದ್ದಾರೆ. ಬೆಂಗಳೂರಿನಲ್ಲಿ ತಂತ್ರ ಮಾಡಿದ್ರೆ ನಮಗೆ ಗೊತ್ತಾಗುತ್ತೆ ಎಂದು ಸಿಂಗಾಪುರದಲ್ಲಿ ಕುಳಿತು ಸರ್ಕಾರ ಪತನಕ್ಕೆ ಸಂಚು ಮಾಡ್ತಿದ್ದಾರೆ ಎಂದು ಡಿಕೆಶಿ ನೀಡಿರುವ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಸಿಂಗಾಪುರದಿಂದ ಸ್ಕೆಚ್​ ಹಾಕಿದ ಆ ರಾಜಕಾರಣಿ ಯಾರು?

ಕಾಂಗ್ರೆಸ್​ ಸರ್ಕಾರ ಪತನಕ್ಕೆ ಒಬ್ಬ ರಾಜಕಾರಣಿ ಸಿಂಗಾಪುರದಲ್ಲಿ ಕುಳಿತು ಷಡ್ಯಂತ್ರ ಮಾಡ್ತಿದ್ದಾರೆ ಎಂದು ಡಿಕೆ.ಶಿವಕುಮಾರ್​ ಗಂಭೀರ ಆರೋಪ ಮಾಡಿದ್ದಾರೆ. ಇದೀಗ ಆ ರಾಜಕಾರಣಿ ಯಾರು ಎಂಬ ಚರ್ಚೆ ರಾಜ್ಯ ರಾಜಕೀಯದಲ್ಲಿ ಕಾಡ್ಗಿಚ್ಚಿನಂತೆ ಆವರಿಸಿದೆ.

ಮತ್ತೊಂದು ಮೂಲಗಳ ಪ್ರಕಾರ, ಡಿ.ಕೆ ಶಿವಕುಮಾರ್​, ಪರೋಕ್ಷವಾಗಿ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ಆರೋಪ ಮಾಡಿದ್ರಾ ಎಂಬ ಸಂಶಯ ಮೂಡಿದೆ. ಸದ್ಯ ಮಾಜಿ ಸಿಎಂ ಕುಮಾರಸ್ವಾಮಿ ಸಿಂಗಾಪುರ ಪ್ರವಾಸದಲ್ಲಿದ್ದಾರೆ. ಇದೀಗ ಡಿ.ಕೆ ಶಿವಕುಮಾರ್​ ಮಾತುಗಳನ್ನ ಕೇಳ್ತಿದ್ರೆ, ದಳಪತಿಯತ್ತ ಸಂಶಯ ಕಣ್ಣು ತಿರುಗಿದೆ. ಯಾಕಂದ್ರೆ ಕೆಲ ದಿನಗಳ ಹಿಂದೆ ಮಾಜಿ ಸಿಎಂ ಹೆಚ್​ಡಿಕೆ, ಮಹಾರಾಷ್ಟ್ರದ ಅಜಿತ್​ ಪವಾರ್​ನಂತೆ ಕರ್ನಾಟದಲ್ಲೂ ಹುಟ್ಟಿಕೊಳ್ಳಬಹುದು ಎಂದಿದ್ದರು. ಇನ್ನು ಮಾಜಿ ಸಚಿವ ಈಶ್ವರಪ್ಪ ಕೂಡ, ಕಾಂಗ್ರೆಸ್​ ಸರ್ಕಾರದಲ್ಲಿ 3 ತಿಂಗಳಲ್ಲೇ ಪತನವಾಗಲಿದೆ ಅಂದಿದ್ರು.

ಬಹುಮತದ ಸರ್ಕಾರಕ್ಕೂ ಕಾಡ್ತಿದ್ಯಾ ಆಪರೇಷನ್​ ಭೀತಿ?

ಆಡಳಿತ ಪಕ್ಷ ಮತ್ತು ವಿಪಕ್ಷಗಳ ನಾಯಕರ ಹೇಳಿಕೆಗಳನ್ನು ನೋಡುತ್ತಿದ್ದರೆ, ಪ್ರಚಂಡ ಬಹುಮತದ ಸರ್ಕಾರಕ್ಕೂ ಆಪರೇಷನ್​ ಆತಂಕ ಶುರುವಾಗಿದೆಯೇ ಎಂಬ ಸಂಶಯ ಮೂಡುತ್ತೆ. ಇತ್ತೀಚಿಗೆ ಬಿಜೆಪಿ-ಜೆಡಿಎಸ್​ ನಾಯಕರು ಕೂಡ ದೋಸ್ತಿ ಮಾಡಿಕೊಂಡಂತೆ ಕಾಣುತ್ತಿದೆ. ಹೀಗಾಗಿ ರಾಜ್ಯ ರಾಜಕೀಯದಲ್ಲಿ ಮೈತ್ರಿ ಲೆಕ್ಕಾಚಾರವೂ ಶುರುವಾಗಿದೆ.

‘ಆಪರೇಷನ್​’ ಲೆಕ್ಕಾಚಾರ

224 ಸ್ಥಾನ ಇರುವ ವಿಧಾನಸಭೆಯಲ್ಲಿ ಸರ್ಕಾರ ರಚನೆಗೆ 113 ಶಾಸಕರ ಬಹುಮತ ಬೇಕು. ಸದ್ಯ 135 ಶಾಸಕರ ಬಲದಿಂದ ಕಾಂಗ್ರೆಸ್​ ಸರ್ಕಾರ ರಚನೆ ಮಾಡಿದೆ. ಒಂದು ವೇಳೆ ಬಿಜೆಪಿ-ಜೆಡಿಎಸ್​ ಇಬ್ಬರು ಸೇರಿದರೆ 85 ಶಾಸಕರು ಆಗಲಿದ್ದಾರೆ. ಆದರೆ ಬಹುಮತಕ್ಕೆ 113 ಶಾಸಕರ ಸಂಖ್ಯೆ ಅಗತ್ಯವಿದ್ದು, ಮೈತ್ರಿಯಾದ್ರೂ ಸರ್ಕಾರ ರಚನೆಗೆ 28 ಶಾಸಕರ ಕೊರತೆ ಆಗಲಿದೆ. ಹೀಗಾಗಿ ಕಾಂಗ್ರೆಸ್​ ಬಲ ಕಡಿಮೆ ಮಾಡಲು ಆಪರೇಷನ್ ಕಮಲ ಅಗತ್ಯ. ಹೀಗಾಗಿ ಕಡಿಮೆ ಅಂದ್ರೂ 55ಕ್ಕೂ ಹೆಚ್ಚು ಶಾಸಕರನ್ನು ಸೆಳೆಯಲೇಬೇಕು. 55 ಶಾಸಕರನ್ನು ಸೆಳೆದ್ರೆ ಆಗ ಕಾಂಗ್ರೆಸ್​ ಬಲ 80ಕ್ಕೆ ಕುಸಿಯಲಿದೆ. ಆಗ ಬಹುಮತ ಸಾಬೀತಿಗೆ 85 ಸಂಖ್ಯಾ ಬಲ ಬೇಕಾಗಲಿದ್ದು, ಜೆಡಿಎಸ್​-ಬಿಜೆಪಿ ಮೈತ್ರಿಯಿಂದ ಸರ್ಕಾರ ರಚಿಸಬಹುದು. ಆದ್ರೆ, ಅಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಶಾಸಕರನ್ನು ಸೆಳೆಯುವುದು ಕಷ್ಟದ ಮಾತೇ ಸರಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Load More