ವಿಶ್ವಕಪ್ನಲ್ಲಿ ಇಂಡಿಯನ್ ಬೌಲರ್ಗಳ ಪರಾಕ್ರಮ..!
5 ಬಾರಿ 200 ಕ್ಕಿಂತ ಕಮ್ಮಿ.. 2 ಬಾರಿ 100 ಕ್ಕಿಂತ ಕಮ್ಮಿ..!
ಮಾಂಬ್ರೆ ಕೋಚಿಂಗ್ ಬಗ್ಗೆ ಇತ್ತು ಅನುಮಾನ..!
ಟೀಮ್ ಇಂಡಿಯಾ. ಸದ್ಯ ವಿಶ್ವಕಪ್ನಲ್ಲಿ ಮೋಸ್ಟ್ಡಿಸ್ಟ್ರಕ್ಟಿವ್ ಬೌಲಿಂಗ್ ಅಟ್ಯಾಕ್ ಹೊಂದಿರೋ ಟೀಮ್. ಆದರೆ, ಇದೇ ಟೀಮ್ ಇಂಡಿಯಾದ ಬೌಲಿಂಗ್ ವಿಭಾಗವನ್ನ ವಿಶ್ವಕಪ್ಗೂ ಮುನ್ನ ಟೀಕಿಸಿದ್ದೆ ಹೆಚ್ಚು. ಆದರೀಗ ಇದೆಲ್ಲವೂ ಬದಲಾಗಿದೆ. ಇದಕ್ಕೆಲ್ಲಾ ಕಾರಣ ಆ ಒಬ್ಬ. ಆತನ್ಯಾರು ಗೊತ್ತಾ?.
ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಮುಟ್ಟಿದೆಲ್ಲ ಚಿನ್ನ. ಬ್ಯಾಟಿಂಗ್ ದಾಂಡಿಗರು ದಾಂಗುಡಿ ಇಡ್ತಿದ್ರೆ. ಬೌಲಿಂಗ್ನಲ್ಲಿ ಬೌಲರ್ಗಳು ರಣ ಭಯಾನಕ ಸ್ಪೆಲ್ಗಳು ಎದುರಾಳಿಗಳ ನಿದ್ದೆ ಗೆಡಿಸಿದೆ. ಪರಿಣಾಮ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ದಂಡಯಾತ್ರೆ ನಡೆಸ್ತಿದೆ. ಈ ಸಕ್ಸಸ್ ಸಿಕ್ರೇಟ್ ಟೀಮ್ ಇಂಡಿಯಾದ ಬೌಲರ್ಗಳ ಅಟ್ಯಾಕಿಂಗ್ ಸ್ಪೆಲ್..!
ಟೀಮ್ ಇಂಡಿಯಾ ಅಟ್ಯಾಕಿಂಗ್ಗೆ ವಿಶ್ವವೇ ಸಲಾಂ..!
ಸದ್ಯ ವಿಶ್ವಕಪ್ನಲ್ಲಿ ಇತರೆ 9 ತಂಡಗಳ ಬೌಲಿಂಗ್ನದ್ದೇ ಒಂದು ಲೆಕ್ಕವಾದ್ರೆ. ಟೀಮ್ ಇಂಡಿಯಾ ಬೌಲರ್ಗಳದ್ದೇ ಒಂದು ಲೆಕ್ಕ. ಕಾರಣ ವಿಶ್ವಕಪ್ನಲ್ಲಿ ಇಂಡಿಯನ್ ಬೌಲರ್ಗಳು ಮಾಡ್ತಿರುವ ಪರಾಕ್ರಮ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಟೀಮ್ ಇಂಡಿಯಾದ 8 ಗೆಲುವುಗಳು.
8 ಪಂದ್ಯ ಒಮ್ಮೆಯೂ 300 ರನ್ ಗಡಿ ದಾಟಿಲ್ಲ.!
ವಿಶ್ವಕಪ್ನಲ್ಲಿ ಟೀಮ್ ಇಂಡಿಯಾದ ಬೌಲಿಂಗ್ ಅಟ್ಯಾಕ್ ಯಾವ ಮಟ್ಟಕ್ಕೇ ಡಾಮಿನೇಟ್ ಮಾಡ್ತಿದೆ ಅಂದ್ರೆ, 8 ಪಂದ್ಯಗಳಲ್ಲಿ ಟೀಮ್ ಇಂಡಿಯಾ ಬೌಲರ್ಗಳು ಒಮ್ಮೆಯೂ ಎದುರಾಳಿ ತಂಡವನ್ನ 300 ರನ್ ಕ್ರಾಸ್ ಮಾಡಲು ಬಿಟ್ಟಿಲ್ಲ. ಅಷ್ಟೇ ಯಾಕೆ… 5 ಪಂದ್ಯಗಳಲ್ಲಿ 200 ಕ್ಕಿಂತ ಎದುರಾಳಿಯನ್ನ ಬಗ್ಗುಬಡಿದಿರುವ ಟೀಮ್ ಇಂಡಿಯಾ, 2 ತಂಡಗಳನ್ನ ನೂರರೊಳಗೆ ಆಲೌಟ್ ಮಾಡಿದೆ. ಟೀಮ್ ಇಂಡಿಯಾದ ಈ ಬೌಲಿಂಗ್ ಸಕ್ಸಸ್ ಹಿಂದೆ ಒಬ್ಬ ವ್ಯಕ್ತಿಯ ಕಠಿಣ ಶ್ರಮ ಇದೆ.
ಇದನ್ನು ಓದಿ: 4 ವರ್ಷ, 1589 ದಿನ.. ಅಂದು ಟೀಂ ಇಂಡಿಯಾ ಕ್ರಿಕೆಟಿಗರು ಸುರಿಸಿದ ಕಣ್ಣೀರಿಗೆ ಬ್ರೇಕ್ ಹಾಕಲು ಬಂತು ಟೈಮ್!
ಆನ್ಫೀಲ್ಡ್ ಸಕ್ಸಸ್ ಹಿಂದೆ ಪರಾಸ್ ಮಾಂಬ್ರೆ..!
ವಿಶ್ವಕಪ್ನಲ್ಲಿ ಟೀಮ್ ಇಂಡಿಯಾದ ಬೌಲರ್ಗಳು ಈ ಮಟ್ಟಕ್ಕೆ ಸೌಂಡ್ ಮಾಡ್ತಿದ್ದಾರೆ ಅಂದ್ರೆ, ಅದಕ್ಕೆ ಪ್ರಮುಖ ಕಾರಣವೇ ಬೌಲಿಂಗ್ ಕೋಚ್ ಪರಾಸ್ ಮಾಂಬ್ರೆ. ಆಟಗಾರರ ಜೊತೆ ಸದಾ ಬೆರೆಯುವ ಮಾಂಬ್ರೆ, ಆಟಗಾರರ ಪಾಲಿನ ಸ್ಪೂರ್ತಿ ಚಿಲುಮೆಯಾಗಿದ್ದಾರೆ. ಓರ್ವ ಆಟಗಾರ ಬೆಂಚ್ನಲ್ಲಿದ್ದರೂ, ಮೋಟಿವೇಟ್ ಮಾಡುವ ಮಾಂಬ್ರೆ, ನೆಟ್ಸ್ನಲ್ಲಿ ಹೆಚ್ಚು ಆಟಗಾರರ ಜೊತೆಯೇ ಬೆರೆಯುತ್ತಾರೆ. ಟೆಕ್ನಿಕಲಿ ಟಿಪ್ಸ್ ನೀಡ್ತಾ ಆಟಗಾರರನ್ನ ಹುರಿದುಂಬಿಸ್ತಾರೆ. ಇದರ ಪರಿಣಾಮವೇ ವಿಶ್ವಕಪ್ನಲ್ಲಿ ಇಂಡಿಯನ್ ಬೌಲರ್ಸ್ ನೆಕ್ಸ್ಟ್ ಲೆವೆಲ್ ಬೌಲಿಂಗ್ ಮಾಡ್ತಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ, ಎದುರಾಳಿ ವಿಕೆಟ್ ಬೇಟೆಗೆ A, B, C ಪ್ಲಾನ್ ರೆಡಿ ಇರುತ್ತೆ.
ಮಾಂಬ್ರೆ ಅಡಿ ಬೌಲರ್ಗಳ ಪ್ರದರ್ಶನ -ಪಂದ್ಯ ವಿಕೆಟ್ ಏಕಾನಮಿ
ಮೊಹಮ್ಮದ್ ಸಿರಾಜ್ 37 64 4.85
ಕುಲ್ದೀಪ್ ಯಾದವ್ 33 57 4.63
ಶಾರ್ದೂಲ್ ಠಾಕೂರ್ 32 43 5.89
ಮೊಹಮ್ಮದ್ ಶಮಿ 19 39 5.07
ಜಸ್ಪ್ರೀತ್ ಬೂಮ್ರಾ 19 36 4.27
ಹೌದು! ಮಾಂಬ್ರೆ ಅಡಿಯಲ್ಲಿ 37 ಏಕದಿನ ಪಂದ್ಯಗಳನ್ನಾಡಿರುವ ಮೊಹಮ್ಮದ್ ಸಿರಾಜ್, 64 ವಿಕೆಟ್ ಬೇಟೆಯಾಡಿ 4.85ರ ಏಕಾನಮಿ ಕಾಯ್ದುಕೊಂಡಿದ್ರೆ. ಕುಲ್ದೀಪ್ ಯಾದವ್, 33 ಪಂದ್ಯಗಳಿಂದ 57 ವಿಕೆಟ್ ಉರುಳಿಸಿ 4.63ರ ಏಕಾನಮಿ ಕಾಯ್ದಕೊಂಡಿದ್ದಾರೆ. ಇನ್ನು ಶಾರ್ದೂಲ್ ಠಾಕೂರ್ 32 ಪಂದ್ಯಗಳಿಂದ 43 ವಿಕೆಟ್ ಉರುಳಿಸಿದ್ದು, 5.89ರ ಏಕಾನಮಿ ಹೊಂದಿದ್ದಾರೆ. ಮೊಹಮ್ಮದ್ ಶಮಿ ಹಾಗೂ ಜಸ್ಪ್ರೀತ್ ಬೂಮ್ರಾ ತಲಾ 19 ಪಂದ್ಯಗಳನ್ನಾಡಿದ್ದಾರೆ. ಈ ಪೈಕಿ ಶಮಿ 39 ವಿಕೆಟ್ ಉರುಳಿಸಿದ್ರೆ. ಬೂಮ್ರಾ 36 ವಿಕೆಟ್ ಬೇಟೆಯಾಡಿ 4.27ರ ಏಕನಾಮಿ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ರೆ, ಇಂತಹ ಪರಾಸ್ ಮಾಂಬ್ರೆಯ ಆರಂಭಿಕ ದಿನಗಳು ನಿಜಕ್ಕೂ ಅಪಮಾನದಿಂದಲೇ ಕೂಡಿತ್ತು.
ಇದನ್ನು ಓದಿ: ವಿಶ್ವಕಪ್ ಟೂರ್ನಿಯಲ್ಲಿ ಡೂಪ್ಲಿಕೇಟ್ ಹವಾ.. ಪಂದ್ಯ ವೀಕ್ಷಿಸಿದ ಧೋನಿ, ಕೊಹ್ಲಿ, ನರೈನ್ ನೋಡಿ ಫ್ಯಾನ್ಸ್ ಶಾಕ್
ಆರಂಭಿಕ ದಿನಗಳಲ್ಲಿ ಟೀಕೆ, ಟಿಪ್ಪಣೆ.. ಆರೋಪ
ಹೌದು.! ಭರತ್ ಅರುಣ್ ನಿರ್ಗಮನದ ಬಳಿಕ ಬೌಲಿಂಗ್ ಕೋಚ್ ಆಗಿ ಎಂಟ್ರಿ ಕೊಟ್ಟ ಮಾಂಬ್ರೆಯ ಆರಂಭಿಕ ದಿನಗಳು ಕಷ್ಟಕರವಾಗಿತ್ತು. ಎನ್ಸಿಎನಲ್ಲಿ ಕೆಲಸ ಮಾಡಿದ್ದ ಮಾಂಬ್ರೆಯನ್ನ ಕೋಚ್ ದ್ರಾವಿಡ್ ಕರೆತಂದಿದ್ರು. ಹೀಗಾಗಿ ದ್ರಾವಿಡ್ ಫ್ರೆಂಡ್ ಎಂಬ ಆರೋಪ ಕೇಳಿ ಬಂದಿತ್ತು. ಇಂಟರ್ನ್ಯಾಷನಲ್ ಕ್ರಿಕೆಟ್ನಲ್ಲಿ ಆಟಗಾರನಾಗಿ ಸಕ್ಸಸ್ ಕಾಣದ ಪರಾಸ್, ಇಂಡಿಯನ್ ಟೀಮ್ನಲ್ಲಿ ಏನ್ ಮಾಡ್ತಾರೆ ಎಂದೇ ಟೀಕಿಸಿ ಕಾಲೆಳೆದಿದ್ದುಂಟು. ಆದ್ರೀಗ ಇದಕ್ಕೆಲ್ಲಾ ಇಂಡಿಯನ್ ಬೌಲರ್ಗಳು ಈಗ ಉತ್ತರ ನೀಡ್ತಿದ್ದಾರೆ.
ಅದೇನೇ ಆಗಲಿ.. ವಿಶ್ವಕಪ್ನಲ್ಲಿ ಇಂಡಿಯನ್ ಬೌಲರ್ಗಳು ನೆಕ್ಸ್ಟ್ ಲೆವೆನ್ ಪರ್ಫಾಮೆನ್ಸ್ ನೀಡ್ತಿದ್ದು, ಪರಾಸ್ ಅಂಡರ್ನಲ್ಲಿ ಮೋಸ್ಟ್ ಡೇಂಜರಸ್ ಆಗಿ ಕಾಣ್ತಿದೆ. ಇದು ಹೀಗೆ ಮುಂದುವರಿದು ವಿಶ್ವ ಕಿರೀಟಕ್ಕೆ ಮುತ್ತಿಡುವಂತೆ ಮಾಡಲಿ ಅನ್ನೋದೇ ಎಲ್ಲರ ಆಶಯ
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ವಿಶ್ವಕಪ್ನಲ್ಲಿ ಇಂಡಿಯನ್ ಬೌಲರ್ಗಳ ಪರಾಕ್ರಮ..!
5 ಬಾರಿ 200 ಕ್ಕಿಂತ ಕಮ್ಮಿ.. 2 ಬಾರಿ 100 ಕ್ಕಿಂತ ಕಮ್ಮಿ..!
ಮಾಂಬ್ರೆ ಕೋಚಿಂಗ್ ಬಗ್ಗೆ ಇತ್ತು ಅನುಮಾನ..!
ಟೀಮ್ ಇಂಡಿಯಾ. ಸದ್ಯ ವಿಶ್ವಕಪ್ನಲ್ಲಿ ಮೋಸ್ಟ್ಡಿಸ್ಟ್ರಕ್ಟಿವ್ ಬೌಲಿಂಗ್ ಅಟ್ಯಾಕ್ ಹೊಂದಿರೋ ಟೀಮ್. ಆದರೆ, ಇದೇ ಟೀಮ್ ಇಂಡಿಯಾದ ಬೌಲಿಂಗ್ ವಿಭಾಗವನ್ನ ವಿಶ್ವಕಪ್ಗೂ ಮುನ್ನ ಟೀಕಿಸಿದ್ದೆ ಹೆಚ್ಚು. ಆದರೀಗ ಇದೆಲ್ಲವೂ ಬದಲಾಗಿದೆ. ಇದಕ್ಕೆಲ್ಲಾ ಕಾರಣ ಆ ಒಬ್ಬ. ಆತನ್ಯಾರು ಗೊತ್ತಾ?.
ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಮುಟ್ಟಿದೆಲ್ಲ ಚಿನ್ನ. ಬ್ಯಾಟಿಂಗ್ ದಾಂಡಿಗರು ದಾಂಗುಡಿ ಇಡ್ತಿದ್ರೆ. ಬೌಲಿಂಗ್ನಲ್ಲಿ ಬೌಲರ್ಗಳು ರಣ ಭಯಾನಕ ಸ್ಪೆಲ್ಗಳು ಎದುರಾಳಿಗಳ ನಿದ್ದೆ ಗೆಡಿಸಿದೆ. ಪರಿಣಾಮ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ದಂಡಯಾತ್ರೆ ನಡೆಸ್ತಿದೆ. ಈ ಸಕ್ಸಸ್ ಸಿಕ್ರೇಟ್ ಟೀಮ್ ಇಂಡಿಯಾದ ಬೌಲರ್ಗಳ ಅಟ್ಯಾಕಿಂಗ್ ಸ್ಪೆಲ್..!
ಟೀಮ್ ಇಂಡಿಯಾ ಅಟ್ಯಾಕಿಂಗ್ಗೆ ವಿಶ್ವವೇ ಸಲಾಂ..!
ಸದ್ಯ ವಿಶ್ವಕಪ್ನಲ್ಲಿ ಇತರೆ 9 ತಂಡಗಳ ಬೌಲಿಂಗ್ನದ್ದೇ ಒಂದು ಲೆಕ್ಕವಾದ್ರೆ. ಟೀಮ್ ಇಂಡಿಯಾ ಬೌಲರ್ಗಳದ್ದೇ ಒಂದು ಲೆಕ್ಕ. ಕಾರಣ ವಿಶ್ವಕಪ್ನಲ್ಲಿ ಇಂಡಿಯನ್ ಬೌಲರ್ಗಳು ಮಾಡ್ತಿರುವ ಪರಾಕ್ರಮ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಟೀಮ್ ಇಂಡಿಯಾದ 8 ಗೆಲುವುಗಳು.
8 ಪಂದ್ಯ ಒಮ್ಮೆಯೂ 300 ರನ್ ಗಡಿ ದಾಟಿಲ್ಲ.!
ವಿಶ್ವಕಪ್ನಲ್ಲಿ ಟೀಮ್ ಇಂಡಿಯಾದ ಬೌಲಿಂಗ್ ಅಟ್ಯಾಕ್ ಯಾವ ಮಟ್ಟಕ್ಕೇ ಡಾಮಿನೇಟ್ ಮಾಡ್ತಿದೆ ಅಂದ್ರೆ, 8 ಪಂದ್ಯಗಳಲ್ಲಿ ಟೀಮ್ ಇಂಡಿಯಾ ಬೌಲರ್ಗಳು ಒಮ್ಮೆಯೂ ಎದುರಾಳಿ ತಂಡವನ್ನ 300 ರನ್ ಕ್ರಾಸ್ ಮಾಡಲು ಬಿಟ್ಟಿಲ್ಲ. ಅಷ್ಟೇ ಯಾಕೆ… 5 ಪಂದ್ಯಗಳಲ್ಲಿ 200 ಕ್ಕಿಂತ ಎದುರಾಳಿಯನ್ನ ಬಗ್ಗುಬಡಿದಿರುವ ಟೀಮ್ ಇಂಡಿಯಾ, 2 ತಂಡಗಳನ್ನ ನೂರರೊಳಗೆ ಆಲೌಟ್ ಮಾಡಿದೆ. ಟೀಮ್ ಇಂಡಿಯಾದ ಈ ಬೌಲಿಂಗ್ ಸಕ್ಸಸ್ ಹಿಂದೆ ಒಬ್ಬ ವ್ಯಕ್ತಿಯ ಕಠಿಣ ಶ್ರಮ ಇದೆ.
ಇದನ್ನು ಓದಿ: 4 ವರ್ಷ, 1589 ದಿನ.. ಅಂದು ಟೀಂ ಇಂಡಿಯಾ ಕ್ರಿಕೆಟಿಗರು ಸುರಿಸಿದ ಕಣ್ಣೀರಿಗೆ ಬ್ರೇಕ್ ಹಾಕಲು ಬಂತು ಟೈಮ್!
ಆನ್ಫೀಲ್ಡ್ ಸಕ್ಸಸ್ ಹಿಂದೆ ಪರಾಸ್ ಮಾಂಬ್ರೆ..!
ವಿಶ್ವಕಪ್ನಲ್ಲಿ ಟೀಮ್ ಇಂಡಿಯಾದ ಬೌಲರ್ಗಳು ಈ ಮಟ್ಟಕ್ಕೆ ಸೌಂಡ್ ಮಾಡ್ತಿದ್ದಾರೆ ಅಂದ್ರೆ, ಅದಕ್ಕೆ ಪ್ರಮುಖ ಕಾರಣವೇ ಬೌಲಿಂಗ್ ಕೋಚ್ ಪರಾಸ್ ಮಾಂಬ್ರೆ. ಆಟಗಾರರ ಜೊತೆ ಸದಾ ಬೆರೆಯುವ ಮಾಂಬ್ರೆ, ಆಟಗಾರರ ಪಾಲಿನ ಸ್ಪೂರ್ತಿ ಚಿಲುಮೆಯಾಗಿದ್ದಾರೆ. ಓರ್ವ ಆಟಗಾರ ಬೆಂಚ್ನಲ್ಲಿದ್ದರೂ, ಮೋಟಿವೇಟ್ ಮಾಡುವ ಮಾಂಬ್ರೆ, ನೆಟ್ಸ್ನಲ್ಲಿ ಹೆಚ್ಚು ಆಟಗಾರರ ಜೊತೆಯೇ ಬೆರೆಯುತ್ತಾರೆ. ಟೆಕ್ನಿಕಲಿ ಟಿಪ್ಸ್ ನೀಡ್ತಾ ಆಟಗಾರರನ್ನ ಹುರಿದುಂಬಿಸ್ತಾರೆ. ಇದರ ಪರಿಣಾಮವೇ ವಿಶ್ವಕಪ್ನಲ್ಲಿ ಇಂಡಿಯನ್ ಬೌಲರ್ಸ್ ನೆಕ್ಸ್ಟ್ ಲೆವೆಲ್ ಬೌಲಿಂಗ್ ಮಾಡ್ತಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ, ಎದುರಾಳಿ ವಿಕೆಟ್ ಬೇಟೆಗೆ A, B, C ಪ್ಲಾನ್ ರೆಡಿ ಇರುತ್ತೆ.
ಮಾಂಬ್ರೆ ಅಡಿ ಬೌಲರ್ಗಳ ಪ್ರದರ್ಶನ -ಪಂದ್ಯ ವಿಕೆಟ್ ಏಕಾನಮಿ
ಮೊಹಮ್ಮದ್ ಸಿರಾಜ್ 37 64 4.85
ಕುಲ್ದೀಪ್ ಯಾದವ್ 33 57 4.63
ಶಾರ್ದೂಲ್ ಠಾಕೂರ್ 32 43 5.89
ಮೊಹಮ್ಮದ್ ಶಮಿ 19 39 5.07
ಜಸ್ಪ್ರೀತ್ ಬೂಮ್ರಾ 19 36 4.27
ಹೌದು! ಮಾಂಬ್ರೆ ಅಡಿಯಲ್ಲಿ 37 ಏಕದಿನ ಪಂದ್ಯಗಳನ್ನಾಡಿರುವ ಮೊಹಮ್ಮದ್ ಸಿರಾಜ್, 64 ವಿಕೆಟ್ ಬೇಟೆಯಾಡಿ 4.85ರ ಏಕಾನಮಿ ಕಾಯ್ದುಕೊಂಡಿದ್ರೆ. ಕುಲ್ದೀಪ್ ಯಾದವ್, 33 ಪಂದ್ಯಗಳಿಂದ 57 ವಿಕೆಟ್ ಉರುಳಿಸಿ 4.63ರ ಏಕಾನಮಿ ಕಾಯ್ದಕೊಂಡಿದ್ದಾರೆ. ಇನ್ನು ಶಾರ್ದೂಲ್ ಠಾಕೂರ್ 32 ಪಂದ್ಯಗಳಿಂದ 43 ವಿಕೆಟ್ ಉರುಳಿಸಿದ್ದು, 5.89ರ ಏಕಾನಮಿ ಹೊಂದಿದ್ದಾರೆ. ಮೊಹಮ್ಮದ್ ಶಮಿ ಹಾಗೂ ಜಸ್ಪ್ರೀತ್ ಬೂಮ್ರಾ ತಲಾ 19 ಪಂದ್ಯಗಳನ್ನಾಡಿದ್ದಾರೆ. ಈ ಪೈಕಿ ಶಮಿ 39 ವಿಕೆಟ್ ಉರುಳಿಸಿದ್ರೆ. ಬೂಮ್ರಾ 36 ವಿಕೆಟ್ ಬೇಟೆಯಾಡಿ 4.27ರ ಏಕನಾಮಿ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ರೆ, ಇಂತಹ ಪರಾಸ್ ಮಾಂಬ್ರೆಯ ಆರಂಭಿಕ ದಿನಗಳು ನಿಜಕ್ಕೂ ಅಪಮಾನದಿಂದಲೇ ಕೂಡಿತ್ತು.
ಇದನ್ನು ಓದಿ: ವಿಶ್ವಕಪ್ ಟೂರ್ನಿಯಲ್ಲಿ ಡೂಪ್ಲಿಕೇಟ್ ಹವಾ.. ಪಂದ್ಯ ವೀಕ್ಷಿಸಿದ ಧೋನಿ, ಕೊಹ್ಲಿ, ನರೈನ್ ನೋಡಿ ಫ್ಯಾನ್ಸ್ ಶಾಕ್
ಆರಂಭಿಕ ದಿನಗಳಲ್ಲಿ ಟೀಕೆ, ಟಿಪ್ಪಣೆ.. ಆರೋಪ
ಹೌದು.! ಭರತ್ ಅರುಣ್ ನಿರ್ಗಮನದ ಬಳಿಕ ಬೌಲಿಂಗ್ ಕೋಚ್ ಆಗಿ ಎಂಟ್ರಿ ಕೊಟ್ಟ ಮಾಂಬ್ರೆಯ ಆರಂಭಿಕ ದಿನಗಳು ಕಷ್ಟಕರವಾಗಿತ್ತು. ಎನ್ಸಿಎನಲ್ಲಿ ಕೆಲಸ ಮಾಡಿದ್ದ ಮಾಂಬ್ರೆಯನ್ನ ಕೋಚ್ ದ್ರಾವಿಡ್ ಕರೆತಂದಿದ್ರು. ಹೀಗಾಗಿ ದ್ರಾವಿಡ್ ಫ್ರೆಂಡ್ ಎಂಬ ಆರೋಪ ಕೇಳಿ ಬಂದಿತ್ತು. ಇಂಟರ್ನ್ಯಾಷನಲ್ ಕ್ರಿಕೆಟ್ನಲ್ಲಿ ಆಟಗಾರನಾಗಿ ಸಕ್ಸಸ್ ಕಾಣದ ಪರಾಸ್, ಇಂಡಿಯನ್ ಟೀಮ್ನಲ್ಲಿ ಏನ್ ಮಾಡ್ತಾರೆ ಎಂದೇ ಟೀಕಿಸಿ ಕಾಲೆಳೆದಿದ್ದುಂಟು. ಆದ್ರೀಗ ಇದಕ್ಕೆಲ್ಲಾ ಇಂಡಿಯನ್ ಬೌಲರ್ಗಳು ಈಗ ಉತ್ತರ ನೀಡ್ತಿದ್ದಾರೆ.
ಅದೇನೇ ಆಗಲಿ.. ವಿಶ್ವಕಪ್ನಲ್ಲಿ ಇಂಡಿಯನ್ ಬೌಲರ್ಗಳು ನೆಕ್ಸ್ಟ್ ಲೆವೆನ್ ಪರ್ಫಾಮೆನ್ಸ್ ನೀಡ್ತಿದ್ದು, ಪರಾಸ್ ಅಂಡರ್ನಲ್ಲಿ ಮೋಸ್ಟ್ ಡೇಂಜರಸ್ ಆಗಿ ಕಾಣ್ತಿದೆ. ಇದು ಹೀಗೆ ಮುಂದುವರಿದು ವಿಶ್ವ ಕಿರೀಟಕ್ಕೆ ಮುತ್ತಿಡುವಂತೆ ಮಾಡಲಿ ಅನ್ನೋದೇ ಎಲ್ಲರ ಆಶಯ
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ