ಅರಸಿ ಬಂದ ನಾಯಕತ್ವವನ್ನು ಬೇಡ ಎಂದಿದ್ದ ಸಚಿನ್ ತೆಂಡುಲ್ಕರ್
ಟೀಂ ಇಂಡಿಯಾಗೆ ಸರಿಯಾದ ನಾಯಕನನ್ನು ಸಜೆಸ್ಟ್ ಮಾಡಿದ್ದ ಮಾಸ್ಟರ್ ಬ್ಲಾಸ್ಟರ್
ಭಾರತೀಯ ಕ್ರಿಕೆಟ್ನ ಚಿತ್ರಣವನ್ನೇ ಬದಲಿಸಿ ಬಿಟ್ರು ಸಚಿನ್ ಸಜೆಸ್ಟ್ ಮಾಡಿದ್ದ ವ್ಯಕ್ತಿ
ಟೀಮ್ ಇಂಡಿಯಾ ನಾಯಕತ್ವ ಹುಡುಕಿಕೊಂಡು ಬಂದ್ರೆ ಯಾರಾದ್ರೂ ಬಿಡ್ತಾರಾ.? ಆದರೆ, ಸಚಿನ್ ತೆಂಡುಲ್ಕರ್ ಆಫರ್ನ ರಿಜೆಕ್ಟ್ ಮಾಡಿ ಬೇರೊಬ್ಬರನ್ನ ಸಜೆಸ್ಟ್ ಮಾಡಿದ್ರಂತೆ. ಸಚಿನ್ರ ಆ ಸಜೆಶನ್ ಭಾರತೀಯ ಕ್ರಿಕೆಟ್ ಅನ್ನೇ ಬದಲಾಯಿಸಿಬಿಡ್ತು. ಅಷ್ಟಕ್ಕೂ ಸಚಿನ್ ನಾಯಕತ್ವ ಬೇಡ ಅಂದಿದ್ಯಾಕೆ.? ಯಾರನ್ನ ಸಜೆಸ್ಟ್ ಮಾಡಿದ್ರು.? ಇಲ್ಲಿದೆ ಮಾಹಿತಿ.
2007ರ ಇಂಗ್ಲೆಂಡ್ ಪ್ರವಾಸದ ವೇಳೆ ಟೀಮ್ ಇಂಡಿಯಾ ನಾಯಕತ್ವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ರನ್ನ ಅರಸಿ ಬಂದಿತ್ತಂತೆ. ಅಂದಿನ ಬಿಸಿಸಿಐ ಅಧ್ಯಕ್ಷ ಶರದ್ ಪವಾರ್, ಓವಲ್ ಪಂದ್ಯಕ್ಕೂ ಮುನ್ನ ಸಚಿನ್ಗೆ ನಾಯಕತ್ವ ವಹಿಸಿಕೊಳ್ಳುವಂತೆ ಒತ್ತಾಯಿಸಿದ್ರಂತೆ. ಆದರೆ, ಸಚಿನ್ ಈ ಆಫರ್ ಅನ್ನ ನಿರಾಕರಿಸಿ ಬಿಟ್ರಂತೆ. ಬದಲಾಗಿ ಒಂದು ಸಲಹೆ ನೀಡಿದ್ರಂತೆ. ಆ ಸಲಹೆ ಇಡೀ ಭಾರತೀಯ ಕ್ರಿಕೆಟ್ನ ಚಿತ್ರಣವನ್ನೇ ಬದಲಿಸಿ ಬಿಡ್ತು.
ಅಂದು ನಡೆದ ಮೀಟಿಂಗ್ನಲ್ಲಿ ಶರದ್ ಪವಾರ್ ನೀನೆ ಲೀಡರ್ಶಿಪ್ ರೋಲ್ನ ನಿಭಾಯಿಸಬೇಕು ಎಂದು ಹೇಳಿದ್ರಂತೆ. ಇದಕ್ಕೆ ಉತ್ತರಿಸಿದ್ದ ಸಚಿನ್, ಹಿರಿಯ ಆಟಗಾರನಾಗಿ ಲೀಡರ್ಶಿಪ್ ರೋಲ್ ಯಾವಾಗಲೂ ನಿಭಾಯಿಸ್ತಿನಿ. ಆದರೆ ಕ್ಯಾಪ್ಟನ್ ಟ್ಯಾಗ್ ಬೇಡ ಎಂದ್ರಂತೆ. ನನ್ನ ದೇಹ ತುಂಬಾ ಸಮಸ್ಯೆಯಲ್ಲಿದೆ. ನನ್ನ ಎರಡೂ ಆ್ಯಂಕಲ್ ಇಂಜುರಿಯಾಗಿವೆ. ಫೀಲ್ಡ್ನಲ್ಲಿ ತುಂಬಾ ಹೊತ್ತು ಇರೋದಕ್ಕೆ ಆಗ್ತಿಲ್ಲ. ಡ್ರೆಸ್ಸಿಂಗ್ ರೂಮ್ಗೆ ಹೋಗಿ ಆಗಾಗ ಐಸ್ಪ್ಯಾಕ್ ಇಡೋಕೆ ಆಗಲ್ಲ ಎಂದರಂತೆ.
ಆದರೆ, ನನ್ನ ಬಳಿ ಒಂದು ಸಲಹೆ ಇದೆ ಎಂದ ಸಚಿನ್, ಎಮ್.ಎಸ್ ಧೋನಿಯ ಹೆಸರನ್ನ ಸೂಚಿಸಿದ್ರಂತೆ. ನಾನು ಸ್ಲಿಪ್ ಫೀಲ್ಡಿಂಗ್ ಮಾಡುವಾಗ ತುಂಬಾ ಮಾತನಾಡಿದ್ದೇನೆ. ಧೋನಿಯ ಕ್ರಿಕೆಟಿಂಗ್ ಬ್ರೈನ್ ಅದ್ಭುತವಾಗಿದ್ದು, ಆತ ಆ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಎಂದು ಸಚಿನ್, ಪವಾರ್ಗೆ ತಿಳಿಸಿದ್ರಂತೆ. ಆ ನಂತರದ್ದು ಈಗ ಇತಿಹಾಸ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಅರಸಿ ಬಂದ ನಾಯಕತ್ವವನ್ನು ಬೇಡ ಎಂದಿದ್ದ ಸಚಿನ್ ತೆಂಡುಲ್ಕರ್
ಟೀಂ ಇಂಡಿಯಾಗೆ ಸರಿಯಾದ ನಾಯಕನನ್ನು ಸಜೆಸ್ಟ್ ಮಾಡಿದ್ದ ಮಾಸ್ಟರ್ ಬ್ಲಾಸ್ಟರ್
ಭಾರತೀಯ ಕ್ರಿಕೆಟ್ನ ಚಿತ್ರಣವನ್ನೇ ಬದಲಿಸಿ ಬಿಟ್ರು ಸಚಿನ್ ಸಜೆಸ್ಟ್ ಮಾಡಿದ್ದ ವ್ಯಕ್ತಿ
ಟೀಮ್ ಇಂಡಿಯಾ ನಾಯಕತ್ವ ಹುಡುಕಿಕೊಂಡು ಬಂದ್ರೆ ಯಾರಾದ್ರೂ ಬಿಡ್ತಾರಾ.? ಆದರೆ, ಸಚಿನ್ ತೆಂಡುಲ್ಕರ್ ಆಫರ್ನ ರಿಜೆಕ್ಟ್ ಮಾಡಿ ಬೇರೊಬ್ಬರನ್ನ ಸಜೆಸ್ಟ್ ಮಾಡಿದ್ರಂತೆ. ಸಚಿನ್ರ ಆ ಸಜೆಶನ್ ಭಾರತೀಯ ಕ್ರಿಕೆಟ್ ಅನ್ನೇ ಬದಲಾಯಿಸಿಬಿಡ್ತು. ಅಷ್ಟಕ್ಕೂ ಸಚಿನ್ ನಾಯಕತ್ವ ಬೇಡ ಅಂದಿದ್ಯಾಕೆ.? ಯಾರನ್ನ ಸಜೆಸ್ಟ್ ಮಾಡಿದ್ರು.? ಇಲ್ಲಿದೆ ಮಾಹಿತಿ.
2007ರ ಇಂಗ್ಲೆಂಡ್ ಪ್ರವಾಸದ ವೇಳೆ ಟೀಮ್ ಇಂಡಿಯಾ ನಾಯಕತ್ವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ರನ್ನ ಅರಸಿ ಬಂದಿತ್ತಂತೆ. ಅಂದಿನ ಬಿಸಿಸಿಐ ಅಧ್ಯಕ್ಷ ಶರದ್ ಪವಾರ್, ಓವಲ್ ಪಂದ್ಯಕ್ಕೂ ಮುನ್ನ ಸಚಿನ್ಗೆ ನಾಯಕತ್ವ ವಹಿಸಿಕೊಳ್ಳುವಂತೆ ಒತ್ತಾಯಿಸಿದ್ರಂತೆ. ಆದರೆ, ಸಚಿನ್ ಈ ಆಫರ್ ಅನ್ನ ನಿರಾಕರಿಸಿ ಬಿಟ್ರಂತೆ. ಬದಲಾಗಿ ಒಂದು ಸಲಹೆ ನೀಡಿದ್ರಂತೆ. ಆ ಸಲಹೆ ಇಡೀ ಭಾರತೀಯ ಕ್ರಿಕೆಟ್ನ ಚಿತ್ರಣವನ್ನೇ ಬದಲಿಸಿ ಬಿಡ್ತು.
ಅಂದು ನಡೆದ ಮೀಟಿಂಗ್ನಲ್ಲಿ ಶರದ್ ಪವಾರ್ ನೀನೆ ಲೀಡರ್ಶಿಪ್ ರೋಲ್ನ ನಿಭಾಯಿಸಬೇಕು ಎಂದು ಹೇಳಿದ್ರಂತೆ. ಇದಕ್ಕೆ ಉತ್ತರಿಸಿದ್ದ ಸಚಿನ್, ಹಿರಿಯ ಆಟಗಾರನಾಗಿ ಲೀಡರ್ಶಿಪ್ ರೋಲ್ ಯಾವಾಗಲೂ ನಿಭಾಯಿಸ್ತಿನಿ. ಆದರೆ ಕ್ಯಾಪ್ಟನ್ ಟ್ಯಾಗ್ ಬೇಡ ಎಂದ್ರಂತೆ. ನನ್ನ ದೇಹ ತುಂಬಾ ಸಮಸ್ಯೆಯಲ್ಲಿದೆ. ನನ್ನ ಎರಡೂ ಆ್ಯಂಕಲ್ ಇಂಜುರಿಯಾಗಿವೆ. ಫೀಲ್ಡ್ನಲ್ಲಿ ತುಂಬಾ ಹೊತ್ತು ಇರೋದಕ್ಕೆ ಆಗ್ತಿಲ್ಲ. ಡ್ರೆಸ್ಸಿಂಗ್ ರೂಮ್ಗೆ ಹೋಗಿ ಆಗಾಗ ಐಸ್ಪ್ಯಾಕ್ ಇಡೋಕೆ ಆಗಲ್ಲ ಎಂದರಂತೆ.
ಆದರೆ, ನನ್ನ ಬಳಿ ಒಂದು ಸಲಹೆ ಇದೆ ಎಂದ ಸಚಿನ್, ಎಮ್.ಎಸ್ ಧೋನಿಯ ಹೆಸರನ್ನ ಸೂಚಿಸಿದ್ರಂತೆ. ನಾನು ಸ್ಲಿಪ್ ಫೀಲ್ಡಿಂಗ್ ಮಾಡುವಾಗ ತುಂಬಾ ಮಾತನಾಡಿದ್ದೇನೆ. ಧೋನಿಯ ಕ್ರಿಕೆಟಿಂಗ್ ಬ್ರೈನ್ ಅದ್ಭುತವಾಗಿದ್ದು, ಆತ ಆ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಎಂದು ಸಚಿನ್, ಪವಾರ್ಗೆ ತಿಳಿಸಿದ್ರಂತೆ. ಆ ನಂತರದ್ದು ಈಗ ಇತಿಹಾಸ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ