newsfirstkannada.com

ಕುವೆಂಪು ನಾಡಿಗೆ ಕಳಂಕ ತರುವಂತಹ ತೀರ್ಥಹಳ್ಳಿ ಬ್ರದರ್ಸ್​ ಪ್ಲಾನ್..​ ಯಾರದ್ದು ಗೊತ್ತಾ?

Share :

19-09-2023

    ರಾಷ್ಟ್ರಕವಿ ಕುವೆಂಪು ನಾಡಿಗೆ ಕಳಂಕ ತರಲು ಮುಂದಾದ ಶಂಕಿತರು

    ವಿದೇಶದಲ್ಲೇ ಕುಳಿತು ಉಗ್ರವಾದದ ಪಾಠ ಮಾಡುತ್ತಿದ್ದ ಅರಾಫತ್​ ಅಲಿ

    ಗೋಡೆ ಬರಹ ಪ್ರಕರಣದಲ್ಲಿ ಸಿಕ್ಕಿಬಿದ್ದವರು ಮಾಡಿದ್ದ ಪ್ಲಾನ್​ ಏನೆಲ್ಲಾ ಗೊತ್ತಾ?

ಶಿವಮೊಗ್ಗ ಟ್ರಯಲ್​ ಬ್ಲಾಸ್ಟ್​, ಕದ್ರಿ ದೇವಸ್ಥಾನ ಸ್ಫೋಟಕ್ಕೆ ಸಂಚು, ಮಂಗಳೂರು ಕುಕ್ಕರ್​ ಬ್ಲಾಸ್ಟ್​ ಸೇರಿದಂತೆ ಹಲವು ಪ್ರಕರಣದಲ್ಲಿ ಭಾಗಿಯಾಗಿದ್ದ ಐಸಿಸ್ ಶಂಕಿತ ಉಗ್ರ ಅರಾಫತ್ ಅಲಿ ಬಂಧನವಾಗಿದೆ. ಬಂಧನ‌ದ ಬಳಿಕ ಎನ್​ಐಎ ತನಿಖೆಯಲ್ಲಿ‌ ಮತ್ತೊಂದು ವಿಧ್ವಂಸಕ ಕೃತ್ಯ ಹೊರಬಿದ್ದಿದೆ. ರಾಷ್ಟ್ರಕವಿ ಕುವೆಂಪು ಹುಟ್ಟೂರಾದ ತೀರ್ಥಹಳ್ಳಿಗೆ ಕುಖ್ಯಾತ ಹೆಸರನ್ನು ತರಬೇಕು ಎಂದು ಸಂಚು ರೂಪಿಸಿರುವ ವಿಚಾರ ತನಿಖೆ ವೇಳೆ ಗೊತ್ತಾಗಿದೆ.​​

ಹುಟ್ಟೂರಿಗೆ ಕಳಂಕ ತರಲು ಮುಂದಾದ ಶಂಕಿತರು

ಶಂಕಿತ ಉಗ್ರ ಅರಾಫತ್​ ಅಲಿ ಕುವೆಂಪು ಹುಟ್ಟೂರಿಗೆ ತೀರ್ಥಹಳ್ಳಿ ಬ್ರದರ್ಸ್ ಎಂಬ ಹೆಸರನ್ನು ತರಬೇಕು ಎಂದು ಪ್ರಯತ್ನಿಸಿದ್ದ. ಆದರೆ ಈ ಕಾನ್ಸೆಪ್ಟ್ ಹುಟ್ಟು ಹಾಕಿದ್ದೆ ಅಬ್ದುಲ್ ಮತೀನ್. ಈತ ಎನ್ಐಎ ಮೋಸ್ಟ್ ವಾಂಟೇಡ್ ಆಗಿದ್ದು, 2014 ರಲ್ಲೇ ಉಗ್ರವಾದದ ನಂಟು ಅಂಟಿಸಿಕೊಂಡಿದ್ದನು.

ವಿದೇಶಕ್ಕೆ ಎಸ್ಕೇಸ್​ ಆಗಿದ್ದ ಮತೀನ್​

ಎನ್ಐಎ ಮೋಸ್ಟ್ ವಾಂಟೇಡ್ ಅಬ್ದುಲ್ ಮತೀನ್​ಗೆ ಉಗ್ರರ ನಂಟು ಹೊಂದಿದ ಬಳಿಕ ವಿದೇಶಕ್ಕೆ ಎಸ್ಕೇಪ್ ಆಗಿದ್ದ. ಈ ವೇಳೆ 2020 ರಲ್ಲಿ ಮಾಜ್ ಮುನೀರ್, ಶಾರೀಕ್, ಹಾಗೂ ಅರಾಫತ್ ಅಲಿ ಮೂವರು ಗೋಡೆ ಬರಹ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದರು. ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ಅಬ್ದುಲ್ ಮತೀನ್ ಇವರನ್ನು ಕಂಟ್ಯಾಕ್ಟ್ ಮಾಡಿದ್ದನು. ಅಬ್ದುಲ್ ಮತೀನ್ ಸೂಚನೆಯಂತೆ ಅರಾಫತ್ ಅಲಿಯೂ ವಿದೇಶಕ್ಕೆ ಎಸ್ಕೇಪ್ ಆಗಿದ್ದನು. ನಂತರ ಅಲ್ಲಿಂದ ಶಾರೀಕ್ ಹಾಗೂ ಮಾಜ್ ಮುನೀರ್​​ಗೆ ಉಗ್ರವಾದ ಬಗ್ಗೆ ಪಾಠ ಮಾಡುತ್ತಿದ್ದ ಎನ್ನಲಾಗಿದೆ.

ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಪ್ರಕರಣ

ಅರಾಫತ್ ಅಲಿ ಇವ್ರಿಗೆ ಮೊದಲು ಟ್ರೈನಿಂಗ್ ಆಗಿ ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಮಾಡಿಸಿದ್ದನು. ಬಳಿಕ ಕದ್ರಿ ದೇವಸ್ಥಾನದಲ್ಲಿ ಸ್ಫೋಟಗೊಳಿಸುವಂತೆ ಮೊದಲ ಟಾರ್ಗೆಟ್​​ ನೀಡಿದ್ದ. ಆದರೆ ಮೊದಲ‌ ಯತ್ನವೇ ವಿಫಲವಾಗಿತ್ತು. ದಾರಿ ಮಧ್ಯೆಯೇ ಕುಕ್ಕರ್ ಬಾಂಬ್ ಬ್ಲಾಸ್ಟ್ ಆಗಿತ್ತು. ಹೀಗಾಗಿ ಅವರು ಹಾಕಿಕೊಂಡಿದ್ದ ಸಂಚು ಫೇಲ್​ ಆಗಿತ್ತು. ಇದರಿಂದ ತೀರ್ಥಹಳ್ಳಿ ಬ್ರದರ್ಸ್ ಎಂಬ ಕುಖ್ಯಾತ ಹೆಸರನ್ನು ಮುನ್ನೆಲೆಗೆ ತರುವ ಕನಸು ಫೇಲ್​ ಆಯ್ತು. ತನ್ನ ಪ್ಲಾನ್​ ಫೇಲ್​ ಆಯ್ತು ಎಂದ ಅರಾಫತ್​ ಅಲಿ ಕೀನ್ಯಾದ ನೈರೋಬಿಯಿಂದ ಭಾರತಕ್ಕೆ ವಾಪಸ್ಸು ಬಂದ. ಈ ವೇಳೆ ದೆಹಲಿಯಲ್ಲಿ ಎನ್​ಐಎ ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಅರೆಸ್ಟ್​ ವೇಳೆ ವಿಧ್ವಂಸಕ ಕೃತ್ಯದ ಬಗ್ಗೆ ಬಾಯಿ ಬಿಚ್ಚಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕುವೆಂಪು ನಾಡಿಗೆ ಕಳಂಕ ತರುವಂತಹ ತೀರ್ಥಹಳ್ಳಿ ಬ್ರದರ್ಸ್​ ಪ್ಲಾನ್..​ ಯಾರದ್ದು ಗೊತ್ತಾ?

https://newsfirstlive.com/wp-content/uploads/2023/09/NIA-1.jpg

    ರಾಷ್ಟ್ರಕವಿ ಕುವೆಂಪು ನಾಡಿಗೆ ಕಳಂಕ ತರಲು ಮುಂದಾದ ಶಂಕಿತರು

    ವಿದೇಶದಲ್ಲೇ ಕುಳಿತು ಉಗ್ರವಾದದ ಪಾಠ ಮಾಡುತ್ತಿದ್ದ ಅರಾಫತ್​ ಅಲಿ

    ಗೋಡೆ ಬರಹ ಪ್ರಕರಣದಲ್ಲಿ ಸಿಕ್ಕಿಬಿದ್ದವರು ಮಾಡಿದ್ದ ಪ್ಲಾನ್​ ಏನೆಲ್ಲಾ ಗೊತ್ತಾ?

ಶಿವಮೊಗ್ಗ ಟ್ರಯಲ್​ ಬ್ಲಾಸ್ಟ್​, ಕದ್ರಿ ದೇವಸ್ಥಾನ ಸ್ಫೋಟಕ್ಕೆ ಸಂಚು, ಮಂಗಳೂರು ಕುಕ್ಕರ್​ ಬ್ಲಾಸ್ಟ್​ ಸೇರಿದಂತೆ ಹಲವು ಪ್ರಕರಣದಲ್ಲಿ ಭಾಗಿಯಾಗಿದ್ದ ಐಸಿಸ್ ಶಂಕಿತ ಉಗ್ರ ಅರಾಫತ್ ಅಲಿ ಬಂಧನವಾಗಿದೆ. ಬಂಧನ‌ದ ಬಳಿಕ ಎನ್​ಐಎ ತನಿಖೆಯಲ್ಲಿ‌ ಮತ್ತೊಂದು ವಿಧ್ವಂಸಕ ಕೃತ್ಯ ಹೊರಬಿದ್ದಿದೆ. ರಾಷ್ಟ್ರಕವಿ ಕುವೆಂಪು ಹುಟ್ಟೂರಾದ ತೀರ್ಥಹಳ್ಳಿಗೆ ಕುಖ್ಯಾತ ಹೆಸರನ್ನು ತರಬೇಕು ಎಂದು ಸಂಚು ರೂಪಿಸಿರುವ ವಿಚಾರ ತನಿಖೆ ವೇಳೆ ಗೊತ್ತಾಗಿದೆ.​​

ಹುಟ್ಟೂರಿಗೆ ಕಳಂಕ ತರಲು ಮುಂದಾದ ಶಂಕಿತರು

ಶಂಕಿತ ಉಗ್ರ ಅರಾಫತ್​ ಅಲಿ ಕುವೆಂಪು ಹುಟ್ಟೂರಿಗೆ ತೀರ್ಥಹಳ್ಳಿ ಬ್ರದರ್ಸ್ ಎಂಬ ಹೆಸರನ್ನು ತರಬೇಕು ಎಂದು ಪ್ರಯತ್ನಿಸಿದ್ದ. ಆದರೆ ಈ ಕಾನ್ಸೆಪ್ಟ್ ಹುಟ್ಟು ಹಾಕಿದ್ದೆ ಅಬ್ದುಲ್ ಮತೀನ್. ಈತ ಎನ್ಐಎ ಮೋಸ್ಟ್ ವಾಂಟೇಡ್ ಆಗಿದ್ದು, 2014 ರಲ್ಲೇ ಉಗ್ರವಾದದ ನಂಟು ಅಂಟಿಸಿಕೊಂಡಿದ್ದನು.

ವಿದೇಶಕ್ಕೆ ಎಸ್ಕೇಸ್​ ಆಗಿದ್ದ ಮತೀನ್​

ಎನ್ಐಎ ಮೋಸ್ಟ್ ವಾಂಟೇಡ್ ಅಬ್ದುಲ್ ಮತೀನ್​ಗೆ ಉಗ್ರರ ನಂಟು ಹೊಂದಿದ ಬಳಿಕ ವಿದೇಶಕ್ಕೆ ಎಸ್ಕೇಪ್ ಆಗಿದ್ದ. ಈ ವೇಳೆ 2020 ರಲ್ಲಿ ಮಾಜ್ ಮುನೀರ್, ಶಾರೀಕ್, ಹಾಗೂ ಅರಾಫತ್ ಅಲಿ ಮೂವರು ಗೋಡೆ ಬರಹ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದರು. ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ಅಬ್ದುಲ್ ಮತೀನ್ ಇವರನ್ನು ಕಂಟ್ಯಾಕ್ಟ್ ಮಾಡಿದ್ದನು. ಅಬ್ದುಲ್ ಮತೀನ್ ಸೂಚನೆಯಂತೆ ಅರಾಫತ್ ಅಲಿಯೂ ವಿದೇಶಕ್ಕೆ ಎಸ್ಕೇಪ್ ಆಗಿದ್ದನು. ನಂತರ ಅಲ್ಲಿಂದ ಶಾರೀಕ್ ಹಾಗೂ ಮಾಜ್ ಮುನೀರ್​​ಗೆ ಉಗ್ರವಾದ ಬಗ್ಗೆ ಪಾಠ ಮಾಡುತ್ತಿದ್ದ ಎನ್ನಲಾಗಿದೆ.

ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಪ್ರಕರಣ

ಅರಾಫತ್ ಅಲಿ ಇವ್ರಿಗೆ ಮೊದಲು ಟ್ರೈನಿಂಗ್ ಆಗಿ ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಮಾಡಿಸಿದ್ದನು. ಬಳಿಕ ಕದ್ರಿ ದೇವಸ್ಥಾನದಲ್ಲಿ ಸ್ಫೋಟಗೊಳಿಸುವಂತೆ ಮೊದಲ ಟಾರ್ಗೆಟ್​​ ನೀಡಿದ್ದ. ಆದರೆ ಮೊದಲ‌ ಯತ್ನವೇ ವಿಫಲವಾಗಿತ್ತು. ದಾರಿ ಮಧ್ಯೆಯೇ ಕುಕ್ಕರ್ ಬಾಂಬ್ ಬ್ಲಾಸ್ಟ್ ಆಗಿತ್ತು. ಹೀಗಾಗಿ ಅವರು ಹಾಕಿಕೊಂಡಿದ್ದ ಸಂಚು ಫೇಲ್​ ಆಗಿತ್ತು. ಇದರಿಂದ ತೀರ್ಥಹಳ್ಳಿ ಬ್ರದರ್ಸ್ ಎಂಬ ಕುಖ್ಯಾತ ಹೆಸರನ್ನು ಮುನ್ನೆಲೆಗೆ ತರುವ ಕನಸು ಫೇಲ್​ ಆಯ್ತು. ತನ್ನ ಪ್ಲಾನ್​ ಫೇಲ್​ ಆಯ್ತು ಎಂದ ಅರಾಫತ್​ ಅಲಿ ಕೀನ್ಯಾದ ನೈರೋಬಿಯಿಂದ ಭಾರತಕ್ಕೆ ವಾಪಸ್ಸು ಬಂದ. ಈ ವೇಳೆ ದೆಹಲಿಯಲ್ಲಿ ಎನ್​ಐಎ ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಅರೆಸ್ಟ್​ ವೇಳೆ ವಿಧ್ವಂಸಕ ಕೃತ್ಯದ ಬಗ್ಗೆ ಬಾಯಿ ಬಿಚ್ಚಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More