ಸಾರ್ವಜನಿಕರೇ ಬೀದಿ ನಾಯಿಗಳ ಬಗ್ಗೆ ಎಚ್ಚರ..! ಎಚ್ಚರ..!
ಚಂಡೀಗಡ ಹೈಕೋರ್ಟ್ನಿಂದ ಮಹತ್ವದ ಆದೇಶ; ಏನದು?
ಬೀದಿ ನಾಯಿ ಕಂಟ್ರೋಲ್ ಮಾಡಿ, ಇಲ್ಲದಿದ್ರೆ ಪರಿಹಾರ ಕೊಡಿ ಎಂದ ಕೋರ್ಟ್
ಚಂಡೀಗಡ: ಬೀದಿ ನಾಯಿಗಳನ್ನು ಕಂಟ್ರೋಲ್ ಮಾಡಿ ಇಲ್ಲದೆ ಹೋದರೆ ಕಡಿತಕ್ಕೆ ಒಳಗಾದ ಸಂತ್ರಸ್ತರಿಗೆ ಪರಿಹಾರ ನೀಡಿ ಎಂದು ಹೈಕೋರ್ಟ್ ಆದೇಶಿಸಿದೆ. ಇನ್ಮುಂದೆ ಒಂದು ವೇಳೆ ನಾಯಿ ಕಚ್ಚಿದರೆ ಒಂದು ಗಾಯಕ್ಕೆ 10 ಸಾವಿರ ಪರಿಹಾರ ನೀಡಬೇಕು ಎಂದು ಚಂಡೀಗಡ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
ಇತ್ತೀಚೆಗೆ ಬೀದಿ ನಾಯಿ ಕಚ್ಚಿದ್ದಕ್ಕೆ ವಾಘ್ ಬಾಕ್ರಿ ಟೀ ಗ್ರೂಮ್ ಚೇರ್ಮನ್ ಪರಾಗ್ ದೇಸಾಯ್ ಸಾವನ್ನಪ್ಪಿದ್ದರು. ಇದೇ ರೀತಿ ನಿತ್ಯ ನೂರಾರು ಕೇಸುಗಳು ವರದಿಯಾಗುತ್ತಿದ್ದವು. ಹೀಗಾಗಿ ಸುಮಾರು 190ಕ್ಕೂ ಹೆಚ್ಚು ಮಂದಿ ಹೈಕೋರ್ಟ್ ಮೊರೆ ಹೋಗಿದ್ದರು. ಸದ್ಯ ಈ ಕುರಿತು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ನಾಯಿ ಕಚ್ಚಿದ್ರೆ ಒಂದು ಗಾಯಕ್ಕೆ 10 ಸಾವಿರ, 2 ಗಾಯಕ್ಕೆ 20 ಸಾವಿರ ನೀಡಿ ಎಂದು ಹೇಳಿದೆ.
ಪಂಜಾಬ್, ಹರಿಯಾಣ, ಚಂಡೀಗಡದಲ್ಲಿ ಈ ಆದೇಶ ಪಾಲಿಸಬೇಕು. ಸಂಬಂಧಪಟ್ಟ ಸರ್ಕಾರ ಸಮಿತಿ ಒಂದು ರಚನೆ ಮಾಡಿ ಆದೇಶವನ್ನು ಅನುಷ್ಠಾನ ಮಾಡಬೇಕು ಎಂದಿದೆ. ಇನ್ನೂ, ಹೈಕೋರ್ಟ್ ಆದೇಶದ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಸಾರ್ವಜನಿಕರೇ ಬೀದಿ ನಾಯಿಗಳ ಬಗ್ಗೆ ಎಚ್ಚರ..! ಎಚ್ಚರ..!
ಚಂಡೀಗಡ ಹೈಕೋರ್ಟ್ನಿಂದ ಮಹತ್ವದ ಆದೇಶ; ಏನದು?
ಬೀದಿ ನಾಯಿ ಕಂಟ್ರೋಲ್ ಮಾಡಿ, ಇಲ್ಲದಿದ್ರೆ ಪರಿಹಾರ ಕೊಡಿ ಎಂದ ಕೋರ್ಟ್
ಚಂಡೀಗಡ: ಬೀದಿ ನಾಯಿಗಳನ್ನು ಕಂಟ್ರೋಲ್ ಮಾಡಿ ಇಲ್ಲದೆ ಹೋದರೆ ಕಡಿತಕ್ಕೆ ಒಳಗಾದ ಸಂತ್ರಸ್ತರಿಗೆ ಪರಿಹಾರ ನೀಡಿ ಎಂದು ಹೈಕೋರ್ಟ್ ಆದೇಶಿಸಿದೆ. ಇನ್ಮುಂದೆ ಒಂದು ವೇಳೆ ನಾಯಿ ಕಚ್ಚಿದರೆ ಒಂದು ಗಾಯಕ್ಕೆ 10 ಸಾವಿರ ಪರಿಹಾರ ನೀಡಬೇಕು ಎಂದು ಚಂಡೀಗಡ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
ಇತ್ತೀಚೆಗೆ ಬೀದಿ ನಾಯಿ ಕಚ್ಚಿದ್ದಕ್ಕೆ ವಾಘ್ ಬಾಕ್ರಿ ಟೀ ಗ್ರೂಮ್ ಚೇರ್ಮನ್ ಪರಾಗ್ ದೇಸಾಯ್ ಸಾವನ್ನಪ್ಪಿದ್ದರು. ಇದೇ ರೀತಿ ನಿತ್ಯ ನೂರಾರು ಕೇಸುಗಳು ವರದಿಯಾಗುತ್ತಿದ್ದವು. ಹೀಗಾಗಿ ಸುಮಾರು 190ಕ್ಕೂ ಹೆಚ್ಚು ಮಂದಿ ಹೈಕೋರ್ಟ್ ಮೊರೆ ಹೋಗಿದ್ದರು. ಸದ್ಯ ಈ ಕುರಿತು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ನಾಯಿ ಕಚ್ಚಿದ್ರೆ ಒಂದು ಗಾಯಕ್ಕೆ 10 ಸಾವಿರ, 2 ಗಾಯಕ್ಕೆ 20 ಸಾವಿರ ನೀಡಿ ಎಂದು ಹೇಳಿದೆ.
ಪಂಜಾಬ್, ಹರಿಯಾಣ, ಚಂಡೀಗಡದಲ್ಲಿ ಈ ಆದೇಶ ಪಾಲಿಸಬೇಕು. ಸಂಬಂಧಪಟ್ಟ ಸರ್ಕಾರ ಸಮಿತಿ ಒಂದು ರಚನೆ ಮಾಡಿ ಆದೇಶವನ್ನು ಅನುಷ್ಠಾನ ಮಾಡಬೇಕು ಎಂದಿದೆ. ಇನ್ನೂ, ಹೈಕೋರ್ಟ್ ಆದೇಶದ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ