ಡಾಲಿ ಧನಂಜಯ್ ನಟನೆಯ ಟಗರು ಪಲ್ಯ ಚಿತ್ರದಲ್ಲಿ ಅಭಿನಯಿಸಿದ ಟಗರು
ಟಗರು ಮಾಲೀಕನಿಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ವಿರೋಧ!
ಬಕ್ರೀದ್ ಹಬ್ಬಕ್ಕೆ ಗುರಿಯಾದ 7 ಸ್ಟಾರ್ ಸುಲ್ತಾನ್ ಪರ ಭರ್ಜರಿ ಅಭಿಯಾನ
ಬಾಗಲಕೋಟೆ: ಡಾಲಿ ಧನಂಜಯ್ ನಟನೆಯ ‘ಟಗರು ಪಲ್ಯ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ 7 ಸ್ಟಾರ್ ಸುಲ್ತಾನ್, ಇದುವರೆಗೂ ಸಾಕಷ್ಟು ಕಾಳಗಳಲ್ಲಿ ಜಯಭೇರಿ ಬಾರಿಸಿ ಲಕ್ಷ, ಲಕ್ಷ ಬಹುಮಾನ, ಬೈಕ್, ಚಿನ್ನ ಸೇರಿದಂತೆ ಹಲವು ಉಡುಗೊರೆ ತನ್ನದಾಗಿಸಿಕೊಂಡಿದೆ. 7 ಸ್ಟಾರ್ ಸುಲ್ತಾನ್ನನ್ನು ಬಾಗಲಕೋಟೆ ಜಿಲ್ಲೆ ತಾಲೂಕಿನ ಸುತಗುಂಡಾರ ಗ್ರಾಮದ ಯೂನಿಸ್ ಎಂಬುವವರು ನೋಡಿಕೊಳ್ಳುತ್ತಿದ್ದಾರೆ.
ಇದೀಗ ಈ ಟಗರಿನ ಮಾಲೀಕನಿಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಭಾರೀ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಎರಡೂವರೆ ವರ್ಷಗಳ ಹಿಂದೆ ಮೊಹಮ್ಮದ್ ಯುನಿಸ್ ಗಡೇದ್ ಅವರು ಈ ಟಗರನ್ನು ರಾಂಪುರ ಗ್ರಾಮದ ಬಸು ಎಂಬುವರಿಂದ ಖರೀದಿ ಮಾಡಿದ್ದರು. ಈ ಟಗರಿಗೆ ಬರೋಬ್ಬರಿ 1,88,500 ರೂಪಾಯಿ ಕೊಟ್ಟು ಖರೀದಿ ಮಾಡಿದ್ದರು. ಇದೀಗ ಮಾಲೀಕ ಯೂನಿಸ್ ಬಕ್ರೀದ್ ಹಬ್ಬಕ್ಕೆ ಟಗರನ್ನು ಬಲಿ ಕೊಡಲು ಮುಂದಾಗಿದ್ದಾರೆ. ಹೀಗಾಗಿ ಆ ಟಗರಿನ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಬೇಸರ ಹೊರ ಹಾಕುತ್ತಿದ್ದಾರೆ.
ರಾಜ್ಯಾದ್ಯಂತ 34 ಕಣದಲ್ಲಿ ಭಾಗವಹಿಸಿದ ಟಗರು, ಸತತ 34ಕ್ಕೂ ಹೆಚ್ಚು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ. 20 ಲಕ್ಷಕ್ಕೂ ಅಧಿಕ ಹಣ, 1 ಬುಲೆಟ್ ಬೈಕ್, 1 ಎಚ್ಎಫ್ ಡಿಲಕ್ಸ್, ಎಚ್ಎಫ್ ಹಂಡ್ರೆಡ್, ಒಂದೂವರೆ ತೊಲೆ (15 ಗ್ರಾಂ) ಬಂಗಾರ ಗೆದ್ದಿದೆ.
ಸದ್ಯ ಇನ್ಸ್ಟಾಗ್ರಾಮ್ ರೀಲ್ಸ್ ಹಾಗೂ ಫೇಸ್ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಟಗರಿನ ಮಾಲೀಕನಿಗೆ ಒತ್ತಾಯ ಮಾಡುತ್ತಿದ್ದಾರೆ. ಹರಕೆ ತೀರಿಸಲೇಬೇಕು ಅಂತಾ ಟಗರು ಮಾಲೀಕ ಹೇಳಿದ್ದಾರೆ. ಈ ಬಗ್ಗೆ ವಿಡಿಯೋ ಮಾಡಿರುವ ಬಿಎಸ್ಎಫ್ ಯೋಧ ಸಂತೋಷ ಬಾವಿಕಟ್ಟಿ ಎಂಬವರು ಸಹ, ಟಗರು ಕುರುಬಾನಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಡಾಲಿ ಧನಂಜಯ್ ನಟನೆಯ ಟಗರು ಪಲ್ಯ ಚಿತ್ರದಲ್ಲಿ ಅಭಿನಯಿಸಿದ ಟಗರು
ಟಗರು ಮಾಲೀಕನಿಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ವಿರೋಧ!
ಬಕ್ರೀದ್ ಹಬ್ಬಕ್ಕೆ ಗುರಿಯಾದ 7 ಸ್ಟಾರ್ ಸುಲ್ತಾನ್ ಪರ ಭರ್ಜರಿ ಅಭಿಯಾನ
ಬಾಗಲಕೋಟೆ: ಡಾಲಿ ಧನಂಜಯ್ ನಟನೆಯ ‘ಟಗರು ಪಲ್ಯ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ 7 ಸ್ಟಾರ್ ಸುಲ್ತಾನ್, ಇದುವರೆಗೂ ಸಾಕಷ್ಟು ಕಾಳಗಳಲ್ಲಿ ಜಯಭೇರಿ ಬಾರಿಸಿ ಲಕ್ಷ, ಲಕ್ಷ ಬಹುಮಾನ, ಬೈಕ್, ಚಿನ್ನ ಸೇರಿದಂತೆ ಹಲವು ಉಡುಗೊರೆ ತನ್ನದಾಗಿಸಿಕೊಂಡಿದೆ. 7 ಸ್ಟಾರ್ ಸುಲ್ತಾನ್ನನ್ನು ಬಾಗಲಕೋಟೆ ಜಿಲ್ಲೆ ತಾಲೂಕಿನ ಸುತಗುಂಡಾರ ಗ್ರಾಮದ ಯೂನಿಸ್ ಎಂಬುವವರು ನೋಡಿಕೊಳ್ಳುತ್ತಿದ್ದಾರೆ.
ಇದೀಗ ಈ ಟಗರಿನ ಮಾಲೀಕನಿಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಭಾರೀ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಎರಡೂವರೆ ವರ್ಷಗಳ ಹಿಂದೆ ಮೊಹಮ್ಮದ್ ಯುನಿಸ್ ಗಡೇದ್ ಅವರು ಈ ಟಗರನ್ನು ರಾಂಪುರ ಗ್ರಾಮದ ಬಸು ಎಂಬುವರಿಂದ ಖರೀದಿ ಮಾಡಿದ್ದರು. ಈ ಟಗರಿಗೆ ಬರೋಬ್ಬರಿ 1,88,500 ರೂಪಾಯಿ ಕೊಟ್ಟು ಖರೀದಿ ಮಾಡಿದ್ದರು. ಇದೀಗ ಮಾಲೀಕ ಯೂನಿಸ್ ಬಕ್ರೀದ್ ಹಬ್ಬಕ್ಕೆ ಟಗರನ್ನು ಬಲಿ ಕೊಡಲು ಮುಂದಾಗಿದ್ದಾರೆ. ಹೀಗಾಗಿ ಆ ಟಗರಿನ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಬೇಸರ ಹೊರ ಹಾಕುತ್ತಿದ್ದಾರೆ.
ರಾಜ್ಯಾದ್ಯಂತ 34 ಕಣದಲ್ಲಿ ಭಾಗವಹಿಸಿದ ಟಗರು, ಸತತ 34ಕ್ಕೂ ಹೆಚ್ಚು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ. 20 ಲಕ್ಷಕ್ಕೂ ಅಧಿಕ ಹಣ, 1 ಬುಲೆಟ್ ಬೈಕ್, 1 ಎಚ್ಎಫ್ ಡಿಲಕ್ಸ್, ಎಚ್ಎಫ್ ಹಂಡ್ರೆಡ್, ಒಂದೂವರೆ ತೊಲೆ (15 ಗ್ರಾಂ) ಬಂಗಾರ ಗೆದ್ದಿದೆ.
ಸದ್ಯ ಇನ್ಸ್ಟಾಗ್ರಾಮ್ ರೀಲ್ಸ್ ಹಾಗೂ ಫೇಸ್ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಟಗರಿನ ಮಾಲೀಕನಿಗೆ ಒತ್ತಾಯ ಮಾಡುತ್ತಿದ್ದಾರೆ. ಹರಕೆ ತೀರಿಸಲೇಬೇಕು ಅಂತಾ ಟಗರು ಮಾಲೀಕ ಹೇಳಿದ್ದಾರೆ. ಈ ಬಗ್ಗೆ ವಿಡಿಯೋ ಮಾಡಿರುವ ಬಿಎಸ್ಎಫ್ ಯೋಧ ಸಂತೋಷ ಬಾವಿಕಟ್ಟಿ ಎಂಬವರು ಸಹ, ಟಗರು ಕುರುಬಾನಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ