newsfirstkannada.com

ಅಧಿಕಾರಿಗಳ ಸಭೆಯಲ್ಲೇ ಸುಧಾಕರ್​ ಮೇಲೆ ಶಾಸಕ ಪ್ರದೀಪ್​ ಈಶ್ವರ್​ ಕೆಂಡಾಮಂಡಲ!

Share :

29-05-2023

    ಸುಧಾಕರ್​ ಮೇಲೆ ಶಾಸಕ ಪ್ರದೀಪ್​ ಈಶ್ವರ್​ ಕೆಂಡಾಮಂಡಲ!

    ಅಧಿಕಾರಿಗಳಿಗೆ ಕಾಂಗ್ರೆಸ್​​ ಶಾಸಕ ಪ್ರದೀಪ್ ಈಶ್ವರ್ ಖಡಕ್​ ಸೂಚನೆ

    ರಾಜಕೀಯ ವ್ಯಕ್ತಿಯಾಗಲೀ ಯಾರ ಮಾತು ಕೇಳಬೇಡಿ!

ಚಿಕ್ಕಬಳ್ಳಾಪುರ: ಯಾವುದೇ ರಾಜಕೀಯ ಒತ್ತಡವಿಲ್ಲದೆ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಕಾಂಗ್ರೆಸ್​​ ಶಾಸಕ ಪ್ರದೀಪ್ ಈಶ್ವರ್ ಖಡಕ್​ ಸೂಚನೆ ನೀಡಿದ್ದಾರೆ. ಇಂದು ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತಾಡಿದ ಶಾಸಕ ಪ್ರದೀಪ್ ಈಶ್ವರ್, ಯಾರ ಒತ್ತಡಕ್ಕೂ ಮಣಿಯಬೇಡಿ. ನನ್ನ ಫಾಲೋವರ್ಸ್​​​ ಆಗಲೀ, ರಾಜಕೀಯ ವ್ಯಕ್ತಿಯಾಗಲೀ ಯಾರ ಮಾತು ಕೇಳಬೇಡಿ. ನಾನೇ ಹೇಳುವತನಕ ಯಾರ ಬಗ್ಗೆಯೂ ಯೋಚನೆ ಮಾಡಬೇಡಿ. ನ್ಯಾಯಯುತವಾಗಿ ಜನ ಪರ ಕೆಲಸ ಮಾಡಿ ಎಂದರು.

ಈ ಹಿಂದೆ ಚಿಕ್ಕಬಳ್ಳಾಪುರ ಜನತೆಗೆ ಹಕ್ಕು ಪತ್ರಗಳನ್ನು ಹಂಚಲಾಗಿತ್ತು. ಹಕ್ಕು ಪತ್ರಗಳನ್ನು ಸ್ವತಃ ಚಿಕ್ಕಬಳ್ಳಾಪುರ ಉಪವಿಭಾಗಾಧಿಕಾರಿ ಡಾ. ಸಂತೋಷ್ ಕುಮಾರ್ ಹಾಗೂ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಸೇರಿದಂತೆ ಹಲವು ಅಧಿಕಾರಿಗಳು ಹಂಚಿದ್ದರು. ಅದು ಸುಧಾಕರ್​ ಅವರು ಸಚಿವರಾಗಿದ್ದಾಗ ಹಂಚಿದ್ದಾರೆ. ಅನಧಿಕೃತವಾಗಿ ಹಕ್ಕು ಪತ್ರಗಳನ್ನು ಹಂಚಿದವರು ಯಾರೇ ಆಗಲೀ ಅವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು. ಕ್ರಮ ಕೈಗೊಳ್ಳಲಿಲ್ಲ ಎಂದರೆ ನಿಮ್ಮ ವಿರುದ್ಧ ನಾನು ಕ್ರಮ ಕೈಗೊಳ್ಳುತ್ತೇನೆ. ಇದರ ಬಗ್ಗೆ ಶಾಸನ ಸಭೆಯಲ್ಲಿ ಪ್ರಶ್ನಿಸಿ ಅಧಿಕಾರಿಗಳ ವಿರುದ್ಧ ಎಫ್​​ಐಆರ್ ದಾಖಲು ಮಾಡಿಸುತ್ತೇನೆ ಎಂದು ಶಾಸಕ ಪ್ರದೀಪ್ ಈಶ್ವರ್ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಧಿಕಾರಿಗಳ ಸಭೆಯಲ್ಲೇ ಸುಧಾಕರ್​ ಮೇಲೆ ಶಾಸಕ ಪ್ರದೀಪ್​ ಈಶ್ವರ್​ ಕೆಂಡಾಮಂಡಲ!

https://newsfirstlive.com/wp-content/uploads/2023/05/sudakar-4.jpg

    ಸುಧಾಕರ್​ ಮೇಲೆ ಶಾಸಕ ಪ್ರದೀಪ್​ ಈಶ್ವರ್​ ಕೆಂಡಾಮಂಡಲ!

    ಅಧಿಕಾರಿಗಳಿಗೆ ಕಾಂಗ್ರೆಸ್​​ ಶಾಸಕ ಪ್ರದೀಪ್ ಈಶ್ವರ್ ಖಡಕ್​ ಸೂಚನೆ

    ರಾಜಕೀಯ ವ್ಯಕ್ತಿಯಾಗಲೀ ಯಾರ ಮಾತು ಕೇಳಬೇಡಿ!

ಚಿಕ್ಕಬಳ್ಳಾಪುರ: ಯಾವುದೇ ರಾಜಕೀಯ ಒತ್ತಡವಿಲ್ಲದೆ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಕಾಂಗ್ರೆಸ್​​ ಶಾಸಕ ಪ್ರದೀಪ್ ಈಶ್ವರ್ ಖಡಕ್​ ಸೂಚನೆ ನೀಡಿದ್ದಾರೆ. ಇಂದು ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತಾಡಿದ ಶಾಸಕ ಪ್ರದೀಪ್ ಈಶ್ವರ್, ಯಾರ ಒತ್ತಡಕ್ಕೂ ಮಣಿಯಬೇಡಿ. ನನ್ನ ಫಾಲೋವರ್ಸ್​​​ ಆಗಲೀ, ರಾಜಕೀಯ ವ್ಯಕ್ತಿಯಾಗಲೀ ಯಾರ ಮಾತು ಕೇಳಬೇಡಿ. ನಾನೇ ಹೇಳುವತನಕ ಯಾರ ಬಗ್ಗೆಯೂ ಯೋಚನೆ ಮಾಡಬೇಡಿ. ನ್ಯಾಯಯುತವಾಗಿ ಜನ ಪರ ಕೆಲಸ ಮಾಡಿ ಎಂದರು.

ಈ ಹಿಂದೆ ಚಿಕ್ಕಬಳ್ಳಾಪುರ ಜನತೆಗೆ ಹಕ್ಕು ಪತ್ರಗಳನ್ನು ಹಂಚಲಾಗಿತ್ತು. ಹಕ್ಕು ಪತ್ರಗಳನ್ನು ಸ್ವತಃ ಚಿಕ್ಕಬಳ್ಳಾಪುರ ಉಪವಿಭಾಗಾಧಿಕಾರಿ ಡಾ. ಸಂತೋಷ್ ಕುಮಾರ್ ಹಾಗೂ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಸೇರಿದಂತೆ ಹಲವು ಅಧಿಕಾರಿಗಳು ಹಂಚಿದ್ದರು. ಅದು ಸುಧಾಕರ್​ ಅವರು ಸಚಿವರಾಗಿದ್ದಾಗ ಹಂಚಿದ್ದಾರೆ. ಅನಧಿಕೃತವಾಗಿ ಹಕ್ಕು ಪತ್ರಗಳನ್ನು ಹಂಚಿದವರು ಯಾರೇ ಆಗಲೀ ಅವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು. ಕ್ರಮ ಕೈಗೊಳ್ಳಲಿಲ್ಲ ಎಂದರೆ ನಿಮ್ಮ ವಿರುದ್ಧ ನಾನು ಕ್ರಮ ಕೈಗೊಳ್ಳುತ್ತೇನೆ. ಇದರ ಬಗ್ಗೆ ಶಾಸನ ಸಭೆಯಲ್ಲಿ ಪ್ರಶ್ನಿಸಿ ಅಧಿಕಾರಿಗಳ ವಿರುದ್ಧ ಎಫ್​​ಐಆರ್ ದಾಖಲು ಮಾಡಿಸುತ್ತೇನೆ ಎಂದು ಶಾಸಕ ಪ್ರದೀಪ್ ಈಶ್ವರ್ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More