ಮುಲ್ತಾನ್ ಟೆಸ್ಟ್ನಲ್ಲಿ ತೆಂಡೂಲ್ಕರ್ 194 ರನ್ ಬಾರಿಸಿದ್ರು
ಸಚಿನ್ 200ರ ಸನಿಹದಲ್ಲಿದ್ದಾಗ ಇನ್ನಿಂಗ್ಸ್ ಡಿಕ್ಲೆರ್ ಮಾಡಿದ್ರು
ಸಚಿನ್ ಬಳಿ ತೆರಳಿ ದ್ರಾವಿಡ್ ಕೊಟ್ಟ ಸ್ಪಷ್ಟನೆ ಏನು ಗೊತ್ತಾ?
ಮುಲ್ತಾನ್ ಟೆಸ್ಟ್ನಲ್ಲಿ ಸಚಿನ್ ತೆಂಡುಲ್ಕರ್ 194 ರನ್ಗಳಿಸಿದ್ದಾಗ ಕ್ಯಾಪ್ಟನ್ ರಾಹುಲ್ ದ್ರಾವಿಡ್ ಇನ್ನಿಂಗ್ಸ್ ಡಿಕ್ಲೆರ್ ಮಾಡಿದ್ಯಾಕೆ.? ಕ್ರಿಕೆಟ್ ಅಭಿಮಾನಿಗಳನ್ನ ಇಂದಿಗೂ ಕಾಡ್ತಿರೋ ಮಿಲಿಯನ್ ಡಾಲರ್ ಪ್ರಶ್ನೆಯಿದು. ಈ ಪ್ರಶ್ನೆಗೆ ದ್ರಾವಿಡ್ ಉತ್ತರ ಏನು ಗೊತ್ತಾ? ಈ ಸ್ಟೋರಿ ಗಮನವಿಟ್ಟು ಓದಿ.
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್, ದಿ ವಾಲ್ ರಾಹುಲ್ ದ್ರಾವಿಡ್. ಕ್ರಿಕೆಟ್ ಲೋಕ ಕಂಡ ಶ್ರೇಷ್ಠ ಆಟಗಾರರು. ಟೀಮ್ ಇಂಡಿಯಾದ ಅದೆಷ್ಟೋ ಗೆಲುವುಗಳಲ್ಲಿ ಸಚಿನ್ – ದ್ರಾವಿಡ್ ಪಾತ್ರ ಮಹತ್ವದ್ದು. ಇವರಿಬ್ಬರಿಗಿದ್ದ determination, dedication, discipline ಇಂದಿಗೂ ಯುವ ಕ್ರಿಕೆಟಿಗರಿಗೆ ಪಾಠ. ಆನ್ ಫೀಲ್ಡ್ನ ಆಟದ ಹೊರತಾಗಿ ಇವರಿಬ್ಬರೂ ಜೀವದ ಗೆಳೆಯರು. ಇಂಥಾ ಜೀವದ ಗೆಳೆಯರ ಮಧ್ಯೆ ಈ ಹಿಂದೆ ಒಂದು ಕಾರಣಕ್ಕೆ ಸಣ್ಣ ಮನಸ್ತಾಪ ಬಂದಿದ್ದು. ಅಭಿಮಾನಿಗಳಿಗಂತೂ ಇಂದಿಗೂ ಅದು ಮಿಲಯನ್ ಡಾಲರ್ ಪ್ರಶ್ನೆಯಾಗಿದೆ.
ಇನ್ನಿಂಗ್ಸ್ ಡಿಕ್ಲೆರ್ ಮಾಡಿ ಶಾಕ್ ನೀಡಿದ್ರು
ಅದು ಭಾರತ – ಪಾಕಿಸ್ತಾನ ನಡುವಿನ ಟೆಸ್ಟ್ ಪಂದ್ಯ. ಮುಲ್ತಾನ್ನಲ್ಲಿ ನಡೀತಾ ಇದ್ದ ಟೆಸ್ಟ್ ಪಂದ್ಯದ 2ನೇ ದಿನದಾಟದಲ್ಲಿ ಸಚಿನ್ ತೆಂಡುಲ್ಕರ್ 194 ರನ್ಗಳಿಸಿ ಬ್ಯಾಟಿಂಗ್ ಮಾಡ್ತಿದ್ರು. ಮಾಸ್ಟರ್ ಬ್ಲಾಸ್ಟರ್ ದ್ವಿಶತಕ ಸಿಡಿಸೋದನ್ನ ನೋಡಿಕೊಳ್ಳಲು ಅಭಿಮಾನಿಗಳು ಕಾತರಾಗಿದ್ರು. ಆದರೆ, ಇದಕ್ಕಿದ್ದಂತೆ ಕ್ಯಾಪ್ಟನ್ ರಾಹುಲ್ ದ್ರಾವಿಡ್ ಇನ್ನಿಂಗ್ಸ್ ಡಿಕ್ಲೆರ್ ಮಾಡಿ ಶಾಕ್ ನೀಡಿಬಿಟ್ರು. ಸಚಿನ್ ಡಬಲ್ ಸೆಂಚುರಿಗೆ 6 ರನ್ ಬೇಕಿದ್ದಾಗ ದ್ರಾವಿಡ್ ಇನ್ನಿಂಗ್ಸ್ ಡಿಕ್ಲೆರ್ ಮಾಡಿದ್ದು ದೊಡ್ಡ ವಿವಾದಕ್ಕೆ ಕಾರಣವಾಯ್ತು. ಸಚಿನ್ ತೆಂಡುಲ್ಕರ್ ಕೂಡ ಬೇಸರ ಹೊರಹಾಕಿದ್ರು.
ಸ್ಪಷ್ಟನೆ ನೀಡಿದ ದ್ರಾವಿಡ್
ವರ್ಷಗಳ ಬಳಿಕ ಅಂದು ಡಿಕ್ಲೆರ್ ಮಾಡಿದ್ಯಾಕೆ ಎಂಬ ಪ್ರಶ್ನೆಗೆ ದ್ರಾವಿಡ್ ನೀಡಿದ ಉತ್ತರ ಟೀಮ್ ಗೇಮ್ಪ್ಲಾನ್.! ಅವತ್ತಿನ ದಿನದಾಟದ ಕೊನೆಯ 1 ಗಂಟೆ ಪಾಕಿಸ್ತಾನಕ್ಕೆ ನೀಡಬೇಕು ಅನ್ನೋದು ಟೀಮ್ ಮ್ಯಾನೇಜ್ಮೆಂಟ್ ಗೇಮ್ ಪ್ಲಾನ್ ಆಗಿತ್ತಂತೆ. ಆಗ, ವೈಯಕ್ತಿಕ ದಾಖಲೆಗಳಿಗಿಂತ ತಂಡದ ಗೇಮ್ ಪ್ಲಾನ್ ಮುಖ್ಯ ಎಂಬ ನಿಲುವು ತಳೆದು ಕ್ಯಾಪ್ಟನ್ ದ್ರಾವಿಡ್ ಇನ್ನಿಂಗ್ಸ್ ಡಿಕ್ಲೆರ್ ಮಾಡಿದ್ರಂತೆ. ಇಷ್ಟೇ ಅಲ್ಲ ಆ ಬಳಿಕ ಬೇಸರಗೊಂಡಿದ್ದ ಸಚಿನ್ ಬಳಿ ತೆರಳಿಯೂ ಈ ಬಗ್ಗೆ ಸ್ಪಷ್ಟನೆ ನೀಡಿದ್ರಂತೆ. ಇದನ್ನ ಸಚಿನ್ ತಮ್ಮ ಆತ್ಮಕಥೆಯಲ್ಲಿ ಬರೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಮುಲ್ತಾನ್ ಟೆಸ್ಟ್ನಲ್ಲಿ ತೆಂಡೂಲ್ಕರ್ 194 ರನ್ ಬಾರಿಸಿದ್ರು
ಸಚಿನ್ 200ರ ಸನಿಹದಲ್ಲಿದ್ದಾಗ ಇನ್ನಿಂಗ್ಸ್ ಡಿಕ್ಲೆರ್ ಮಾಡಿದ್ರು
ಸಚಿನ್ ಬಳಿ ತೆರಳಿ ದ್ರಾವಿಡ್ ಕೊಟ್ಟ ಸ್ಪಷ್ಟನೆ ಏನು ಗೊತ್ತಾ?
ಮುಲ್ತಾನ್ ಟೆಸ್ಟ್ನಲ್ಲಿ ಸಚಿನ್ ತೆಂಡುಲ್ಕರ್ 194 ರನ್ಗಳಿಸಿದ್ದಾಗ ಕ್ಯಾಪ್ಟನ್ ರಾಹುಲ್ ದ್ರಾವಿಡ್ ಇನ್ನಿಂಗ್ಸ್ ಡಿಕ್ಲೆರ್ ಮಾಡಿದ್ಯಾಕೆ.? ಕ್ರಿಕೆಟ್ ಅಭಿಮಾನಿಗಳನ್ನ ಇಂದಿಗೂ ಕಾಡ್ತಿರೋ ಮಿಲಿಯನ್ ಡಾಲರ್ ಪ್ರಶ್ನೆಯಿದು. ಈ ಪ್ರಶ್ನೆಗೆ ದ್ರಾವಿಡ್ ಉತ್ತರ ಏನು ಗೊತ್ತಾ? ಈ ಸ್ಟೋರಿ ಗಮನವಿಟ್ಟು ಓದಿ.
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್, ದಿ ವಾಲ್ ರಾಹುಲ್ ದ್ರಾವಿಡ್. ಕ್ರಿಕೆಟ್ ಲೋಕ ಕಂಡ ಶ್ರೇಷ್ಠ ಆಟಗಾರರು. ಟೀಮ್ ಇಂಡಿಯಾದ ಅದೆಷ್ಟೋ ಗೆಲುವುಗಳಲ್ಲಿ ಸಚಿನ್ – ದ್ರಾವಿಡ್ ಪಾತ್ರ ಮಹತ್ವದ್ದು. ಇವರಿಬ್ಬರಿಗಿದ್ದ determination, dedication, discipline ಇಂದಿಗೂ ಯುವ ಕ್ರಿಕೆಟಿಗರಿಗೆ ಪಾಠ. ಆನ್ ಫೀಲ್ಡ್ನ ಆಟದ ಹೊರತಾಗಿ ಇವರಿಬ್ಬರೂ ಜೀವದ ಗೆಳೆಯರು. ಇಂಥಾ ಜೀವದ ಗೆಳೆಯರ ಮಧ್ಯೆ ಈ ಹಿಂದೆ ಒಂದು ಕಾರಣಕ್ಕೆ ಸಣ್ಣ ಮನಸ್ತಾಪ ಬಂದಿದ್ದು. ಅಭಿಮಾನಿಗಳಿಗಂತೂ ಇಂದಿಗೂ ಅದು ಮಿಲಯನ್ ಡಾಲರ್ ಪ್ರಶ್ನೆಯಾಗಿದೆ.
ಇನ್ನಿಂಗ್ಸ್ ಡಿಕ್ಲೆರ್ ಮಾಡಿ ಶಾಕ್ ನೀಡಿದ್ರು
ಅದು ಭಾರತ – ಪಾಕಿಸ್ತಾನ ನಡುವಿನ ಟೆಸ್ಟ್ ಪಂದ್ಯ. ಮುಲ್ತಾನ್ನಲ್ಲಿ ನಡೀತಾ ಇದ್ದ ಟೆಸ್ಟ್ ಪಂದ್ಯದ 2ನೇ ದಿನದಾಟದಲ್ಲಿ ಸಚಿನ್ ತೆಂಡುಲ್ಕರ್ 194 ರನ್ಗಳಿಸಿ ಬ್ಯಾಟಿಂಗ್ ಮಾಡ್ತಿದ್ರು. ಮಾಸ್ಟರ್ ಬ್ಲಾಸ್ಟರ್ ದ್ವಿಶತಕ ಸಿಡಿಸೋದನ್ನ ನೋಡಿಕೊಳ್ಳಲು ಅಭಿಮಾನಿಗಳು ಕಾತರಾಗಿದ್ರು. ಆದರೆ, ಇದಕ್ಕಿದ್ದಂತೆ ಕ್ಯಾಪ್ಟನ್ ರಾಹುಲ್ ದ್ರಾವಿಡ್ ಇನ್ನಿಂಗ್ಸ್ ಡಿಕ್ಲೆರ್ ಮಾಡಿ ಶಾಕ್ ನೀಡಿಬಿಟ್ರು. ಸಚಿನ್ ಡಬಲ್ ಸೆಂಚುರಿಗೆ 6 ರನ್ ಬೇಕಿದ್ದಾಗ ದ್ರಾವಿಡ್ ಇನ್ನಿಂಗ್ಸ್ ಡಿಕ್ಲೆರ್ ಮಾಡಿದ್ದು ದೊಡ್ಡ ವಿವಾದಕ್ಕೆ ಕಾರಣವಾಯ್ತು. ಸಚಿನ್ ತೆಂಡುಲ್ಕರ್ ಕೂಡ ಬೇಸರ ಹೊರಹಾಕಿದ್ರು.
ಸ್ಪಷ್ಟನೆ ನೀಡಿದ ದ್ರಾವಿಡ್
ವರ್ಷಗಳ ಬಳಿಕ ಅಂದು ಡಿಕ್ಲೆರ್ ಮಾಡಿದ್ಯಾಕೆ ಎಂಬ ಪ್ರಶ್ನೆಗೆ ದ್ರಾವಿಡ್ ನೀಡಿದ ಉತ್ತರ ಟೀಮ್ ಗೇಮ್ಪ್ಲಾನ್.! ಅವತ್ತಿನ ದಿನದಾಟದ ಕೊನೆಯ 1 ಗಂಟೆ ಪಾಕಿಸ್ತಾನಕ್ಕೆ ನೀಡಬೇಕು ಅನ್ನೋದು ಟೀಮ್ ಮ್ಯಾನೇಜ್ಮೆಂಟ್ ಗೇಮ್ ಪ್ಲಾನ್ ಆಗಿತ್ತಂತೆ. ಆಗ, ವೈಯಕ್ತಿಕ ದಾಖಲೆಗಳಿಗಿಂತ ತಂಡದ ಗೇಮ್ ಪ್ಲಾನ್ ಮುಖ್ಯ ಎಂಬ ನಿಲುವು ತಳೆದು ಕ್ಯಾಪ್ಟನ್ ದ್ರಾವಿಡ್ ಇನ್ನಿಂಗ್ಸ್ ಡಿಕ್ಲೆರ್ ಮಾಡಿದ್ರಂತೆ. ಇಷ್ಟೇ ಅಲ್ಲ ಆ ಬಳಿಕ ಬೇಸರಗೊಂಡಿದ್ದ ಸಚಿನ್ ಬಳಿ ತೆರಳಿಯೂ ಈ ಬಗ್ಗೆ ಸ್ಪಷ್ಟನೆ ನೀಡಿದ್ರಂತೆ. ಇದನ್ನ ಸಚಿನ್ ತಮ್ಮ ಆತ್ಮಕಥೆಯಲ್ಲಿ ಬರೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ