ಸೋಶಿಯಲ್ ಮೀಡಿಯಾ ಮೂಲಕ ಅಂತರಾಳ ಹೇಳಿದ ಪೂಜಾರ
ಟ್ವಿಟರ್ನಲ್ಲಿ ಶೇರ್ ಮಾಡಿದ ವಿಡಿಯೋಗೆ ಕೊಟ್ಟ ಕ್ಯಾಪ್ಷನ್ ಏನು..?
ವೆಸ್ಟ್ ವಿಂಡೀಸ್ ಟೆಸ್ಟ್ ಸರಣಿಯಿಂದ ಚೆತೇಶ್ವರ್ ಪೂಜಾರ ಡ್ರಾಪ್..!
ಜುಲೈನಲ್ಲಿ ನಡೆಯುವ ವೆಸ್ಟ್ ಇಂಡೀಸ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಗೆ ಭಾರತ ತಂಡದ ಆಟಗಾರರ ಹೆಸರನ್ನು ಘೋಷಣೆ ಮಾಡಲಾಗಿದೆ. ಇದರಲ್ಲಿ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಹೆಸರು ಇಲ್ಲ. ಇದರಿಂದ ಎಚ್ಚೆತ್ತುಕೊಂಡಿರುವ ಪೂಜಾರ ನೆಟ್ ಪ್ರಾಕ್ಟೀಸ್ಗೆ ಮರಳಿದ್ದಾರೆ.
ತಂಡದಿಂದ ಕೈಬಿಡುತ್ತಿದ್ದಂತೆಯೇ ಪೂಜಾರ, ಮತ್ತೆ ಪ್ರ್ಯಾಕ್ಟೀಸ್ಗೆ ಮರಳಿದ್ದಾರೆ. ಈ ಹಿಂದೆ ಐಪಿಎಲ್ ಸಂದರ್ಭದಲ್ಲೂ ಕೌಂಟಿ ಕ್ರಿಕೆಟ್ ಆಡುವ ಮೂಲಕ ಗಮನ ಸೆಳೆದಿದ್ದರು. ಇದೀಗ ಮುಂಬರು ದುಲೀಪ್ ಟ್ರೋಫಿ ಹಿನ್ನೆಲೆಯಲ್ಲಿ ಅವರು ಮತ್ತೆ ಬ್ಯಾಟ್ ಹಿಡಿದಿದ್ದಾರೆ. ಈ ಮೂಲಕ ತಮಗೆ ಕ್ರಿಕೆಟ್ ಮೇಲಿನ ಬದ್ಧತೆ ಮತ್ತು ಪ್ರೀತಿ ಏನು ಅನ್ನೋದನ್ನು ತೋರಿಸಿದ್ದಾರೆ. ಇನ್ನು ಪ್ರ್ಯಾಕ್ಟೀಸ್ ಮಾಡ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರುವ ಪೂಜಾರ, ಕ್ರಿಕೆಟ್ ಬಾಲ್ ಮತ್ತು ಬ್ಯಾಟ್ ಸಿಂಬಲ್ ಹಾಕಿ, Love ಎಮೋಜಿ ಹಾಕಿದ್ದಾರೆ.
ಟೀಮ್ ಇಂಡಿಯಾ ಇತ್ತೀಚಿಗೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ನಲ್ಲಿ ಸೋತು ಭಾರೀ ಮುಖಭಂಗ ಅನುಭವಿಸಿತ್ತು. ಈ ವಿಶ್ವ ಟೆಸ್ಟ್ನಲ್ಲಿ ಪೂಜಾರ ಬ್ಯಾಟಿಂಗ್ ಉತ್ತಮವಾಗಿರಲಿಲ್ಲ. ಇದರಿದ ಭಾರತ ತಂಡದ ಆಯ್ಕೆ ಮಂಡಳಿ ವೆಸ್ಟ್ ಟೂರ್ನಿಗೆ ಪೂಜಾರ ಹೆಸರನ್ನು ಕೈ ಬಿಟ್ಟಿದ್ದರು. ಟೆಸ್ಟ್ ಸ್ಪೆಷಲಿಸ್ಟ್ ಪೂಜಾರ ಮುಂದಿನ ದುಲೀಪ್ ಟ್ರೋಫಿಯನ್ನು ಪಶ್ಚಿಮ ವಲಯಕ್ಕಾಗಿ ಆಡಲಿದ್ದಾರೆ. ಇದಕ್ಕಾಗಿ ಅವರು ರಾಜ್ಕೋಟ್ದಲ್ಲಿನ ಅಕಾಡೆಮಿಯಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಿದರು. ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯಗಳಲ್ಲಿ ಪೂಜಾರ ಬದಲಿಗೆ ಯುವ ಆಟಗಾರ ಯಶಸ್ವಿ ಜೈಸ್ವಾಲ್ಗೆ ಅವಕಾಶ ನೀಡಲಾಗಿದೆ.
ಈ ಬಗ್ಗೆ ಪೂಜಾರ ಅವರ ತಂದೆ ಅರವಿಂದ್ ಅವರು ಮಾತನಾಡಿ, ಟೀಮ್ನಿಂದ ಹೆಸರು ಕೈ ಬಿಟ್ಟಿದ್ದಾರೆ ಎಂದು ಇದೇ ಅಂತ್ಯವಲ್ಲ. ಚೇತೇಶ್ವರ ಪೂಜಾರ ಅವರು ಮಾನಸಿಕವಾಗಿ ತುಂಬಾ ಬಲಶಾಲಿಯಾಗಿದ್ದಾರೆ. ತಮ್ಮ ತಪ್ಪುಗಳನ್ನು ಮನವರಿಕೆ ಮಾಡಿಕೊಂಡು ಶೀಘ್ರದಲ್ಲೇ ಪುಟಿದೇಳುತ್ತಾರೆ ಎಂದಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಸೋಶಿಯಲ್ ಮೀಡಿಯಾ ಮೂಲಕ ಅಂತರಾಳ ಹೇಳಿದ ಪೂಜಾರ
ಟ್ವಿಟರ್ನಲ್ಲಿ ಶೇರ್ ಮಾಡಿದ ವಿಡಿಯೋಗೆ ಕೊಟ್ಟ ಕ್ಯಾಪ್ಷನ್ ಏನು..?
ವೆಸ್ಟ್ ವಿಂಡೀಸ್ ಟೆಸ್ಟ್ ಸರಣಿಯಿಂದ ಚೆತೇಶ್ವರ್ ಪೂಜಾರ ಡ್ರಾಪ್..!
ಜುಲೈನಲ್ಲಿ ನಡೆಯುವ ವೆಸ್ಟ್ ಇಂಡೀಸ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಗೆ ಭಾರತ ತಂಡದ ಆಟಗಾರರ ಹೆಸರನ್ನು ಘೋಷಣೆ ಮಾಡಲಾಗಿದೆ. ಇದರಲ್ಲಿ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಹೆಸರು ಇಲ್ಲ. ಇದರಿಂದ ಎಚ್ಚೆತ್ತುಕೊಂಡಿರುವ ಪೂಜಾರ ನೆಟ್ ಪ್ರಾಕ್ಟೀಸ್ಗೆ ಮರಳಿದ್ದಾರೆ.
ತಂಡದಿಂದ ಕೈಬಿಡುತ್ತಿದ್ದಂತೆಯೇ ಪೂಜಾರ, ಮತ್ತೆ ಪ್ರ್ಯಾಕ್ಟೀಸ್ಗೆ ಮರಳಿದ್ದಾರೆ. ಈ ಹಿಂದೆ ಐಪಿಎಲ್ ಸಂದರ್ಭದಲ್ಲೂ ಕೌಂಟಿ ಕ್ರಿಕೆಟ್ ಆಡುವ ಮೂಲಕ ಗಮನ ಸೆಳೆದಿದ್ದರು. ಇದೀಗ ಮುಂಬರು ದುಲೀಪ್ ಟ್ರೋಫಿ ಹಿನ್ನೆಲೆಯಲ್ಲಿ ಅವರು ಮತ್ತೆ ಬ್ಯಾಟ್ ಹಿಡಿದಿದ್ದಾರೆ. ಈ ಮೂಲಕ ತಮಗೆ ಕ್ರಿಕೆಟ್ ಮೇಲಿನ ಬದ್ಧತೆ ಮತ್ತು ಪ್ರೀತಿ ಏನು ಅನ್ನೋದನ್ನು ತೋರಿಸಿದ್ದಾರೆ. ಇನ್ನು ಪ್ರ್ಯಾಕ್ಟೀಸ್ ಮಾಡ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರುವ ಪೂಜಾರ, ಕ್ರಿಕೆಟ್ ಬಾಲ್ ಮತ್ತು ಬ್ಯಾಟ್ ಸಿಂಬಲ್ ಹಾಕಿ, Love ಎಮೋಜಿ ಹಾಕಿದ್ದಾರೆ.
ಟೀಮ್ ಇಂಡಿಯಾ ಇತ್ತೀಚಿಗೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ನಲ್ಲಿ ಸೋತು ಭಾರೀ ಮುಖಭಂಗ ಅನುಭವಿಸಿತ್ತು. ಈ ವಿಶ್ವ ಟೆಸ್ಟ್ನಲ್ಲಿ ಪೂಜಾರ ಬ್ಯಾಟಿಂಗ್ ಉತ್ತಮವಾಗಿರಲಿಲ್ಲ. ಇದರಿದ ಭಾರತ ತಂಡದ ಆಯ್ಕೆ ಮಂಡಳಿ ವೆಸ್ಟ್ ಟೂರ್ನಿಗೆ ಪೂಜಾರ ಹೆಸರನ್ನು ಕೈ ಬಿಟ್ಟಿದ್ದರು. ಟೆಸ್ಟ್ ಸ್ಪೆಷಲಿಸ್ಟ್ ಪೂಜಾರ ಮುಂದಿನ ದುಲೀಪ್ ಟ್ರೋಫಿಯನ್ನು ಪಶ್ಚಿಮ ವಲಯಕ್ಕಾಗಿ ಆಡಲಿದ್ದಾರೆ. ಇದಕ್ಕಾಗಿ ಅವರು ರಾಜ್ಕೋಟ್ದಲ್ಲಿನ ಅಕಾಡೆಮಿಯಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಿದರು. ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯಗಳಲ್ಲಿ ಪೂಜಾರ ಬದಲಿಗೆ ಯುವ ಆಟಗಾರ ಯಶಸ್ವಿ ಜೈಸ್ವಾಲ್ಗೆ ಅವಕಾಶ ನೀಡಲಾಗಿದೆ.
ಈ ಬಗ್ಗೆ ಪೂಜಾರ ಅವರ ತಂದೆ ಅರವಿಂದ್ ಅವರು ಮಾತನಾಡಿ, ಟೀಮ್ನಿಂದ ಹೆಸರು ಕೈ ಬಿಟ್ಟಿದ್ದಾರೆ ಎಂದು ಇದೇ ಅಂತ್ಯವಲ್ಲ. ಚೇತೇಶ್ವರ ಪೂಜಾರ ಅವರು ಮಾನಸಿಕವಾಗಿ ತುಂಬಾ ಬಲಶಾಲಿಯಾಗಿದ್ದಾರೆ. ತಮ್ಮ ತಪ್ಪುಗಳನ್ನು ಮನವರಿಕೆ ಮಾಡಿಕೊಂಡು ಶೀಘ್ರದಲ್ಲೇ ಪುಟಿದೇಳುತ್ತಾರೆ ಎಂದಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ