newsfirstkannada.com

ನೀವೂ ಶಾಕ್​ ಆದ್ರಾ.. ಇದ್ದಕ್ಕಿದ್ದಂತೆ ಎಮರ್ಜೆನ್ಸಿ ಮೆಸೇಜ್ ಕಳುಹಿಸಿ ಎಚ್ಚರಿಸಿದ ಟೆಲಿಕಾಂ ಇಲಾಖೆ; ಏನಾಯ್ತು?

Share :

15-09-2023

    ಭೂಕಂಪ, ಪ್ರವಾಹದಂತಹ ತುರ್ತು ಪರಿಸ್ಥಿತಿಯಲ್ಲಿ ಈ ರೀತಿಯ ಅಲರ್ಟ್

    ಎಮರ್ಜೆನ್ಸಿ ಮೆಸೇಜ್‌ನಿಂದ ಯಾರು ಆತಂಕಗೊಳ್ಳುವ ಅವಶ್ಯಕತೆ ಇಲ್ಲ

    ಮಧ್ಯಾಹ್ನವೇ ಹಲವು ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಬಂದ ಸಂದೇಶ

ಈಗಂತೂ ಯಾರ ಬಳಿ ಸ್ಮಾರ್ಟ್​ ಫೋನ್ ಇಲ್ಲ ಹೇಳಿ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರ ತನಕ ಎಲ್ಲರ ಕೈಯಲ್ಲೂ ಸ್ಮಾರ್ಟ್​ ಫೋನ್ ಇದ್ದೇ ಇರುತ್ತೆ. ದೇಶಾದ್ಯಂತ ಸ್ಮಾರ್ಟ್ ಫೋನ್ ಬಳಕೆದಾರರಿಗೆ ಇವತ್ತು ಒಂದು ಎಮರ್ಜೆನ್ಸಿ ಮೆಸೇಜ್ ಬಂದಿದೆ. ಸುರಕ್ಷತೆಯ ದೃಷ್ಟಿಯಿಂದ ಈ ಎಮರ್ಜೆನ್ಸಿ ಮೆಸೇಜ್ ಅಲರ್ಟ್ ರವಾನೆಯಾಗಿದೆ.

ಇದನ್ನು ಓದಿ: ಬೆಂಗಳೂರಿನ ಹಲವೆಡೆ ಮಳೆ; ವಾಹನ ಸವಾರರ ಪರದಾಟ

 

ಇದು ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯಿಂದ ಸೆಲ್ ಬ್ರಾಡ್‌ಕಾಸ್ಟಿಂಗ್ ಸಿಸ್ಟಮ್ ಮೂಲಕ ಕಳುಹಿಸಲಾದ ಮಾದರಿ ಪರೀಕ್ಷಾ ಸಂದೇಶವಾಗಿದೆ. ತುರ್ತು ಮೆಸೇಜ್​ನಲ್ಲಿ ಈ ರೀತಿ ಸಂದೇಶ ಕಳುಹಿಸಲಾಗಿದೆ. ಗ್ರಾಹಕರ ಕಡೆಯಿಂದ ಯಾವುದೇ ಕ್ರಿಯೆಯ ಅಗತ್ಯವಿಲ್ಲದ ಕಾರಣ ಈ ಸಂದೇಶವನ್ನು ನಿರ್ಲಕ್ಷಿಸಬಹುದಾಗಿದೆ. ಅಲ್ಲದೆ ಈ ಸಂದೇಶವನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಅನುಷ್ಠಾನಗೊಳಿಸುತ್ತಿರುವ TEST ಪ್ಯಾನ್-ಇಂಡಿಯಾ ತುರ್ತು ಎಚ್ಚರಿಕೆ ವ್ಯವಸ್ಥೆಗೆ ಕಳುಹಿಸಲಾಗಿದೆ. ಈ ಮೆಸೇಜ್‌ ಅನ್ನು ತುರ್ತು ಸಂದರ್ಭದ ಬಳಕೆಗಾಗಿ ಪರೀಕ್ಷೆ ಮಾಡಲಾಗುತ್ತಿದ್ದು ಭೂಕಂಪ, ಪ್ರವಾಹ ಸೇರಿದಂತೆ ಯಾವುದೇ ತುರ್ತು ಸಂದರ್ಭದಲ್ಲಿ ಈ ಎಮರ್ಜೆನ್ಸಿ ಮೆಸೇಜ್ ಅಲರ್ಟ್ ಬಳಸಬಹುದಾಗಿದೆ.

ಎಮರ್ಜೆನ್ಸಿ ಮೆಸೇಜ್ ಅಲರ್ಟ್ ತುರ್ತು ಸಂದರ್ಭಗಳಲ್ಲಿ ಸಮಯೋಚಿತ ಎಚ್ಚರಿಕೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಇಂದು ಮಧ್ಯಾಹ್ನ ಹಲವು ದೇಶದ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಈ ರೀತಿಯಾ ಮೆಸೇಜ್ ಸೆಂಡ್ ಆಗಿದ್ದು, ಎಮರ್ಜನ್ಸಿ ಅಲರ್ಟ್​ನಿಂದ ಯಾರು ಆತಂಕಗೊಳ್ಳುವ ಅವಶ್ಯಕತೆ ಇಲ್ಲ ಎಂದು ಭಾರತ ಸರ್ಕಾರದ ದೂರಸಂಪರ್ಕ ಇಲಾಖೆ ತಿಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನೀವೂ ಶಾಕ್​ ಆದ್ರಾ.. ಇದ್ದಕ್ಕಿದ್ದಂತೆ ಎಮರ್ಜೆನ್ಸಿ ಮೆಸೇಜ್ ಕಳುಹಿಸಿ ಎಚ್ಚರಿಸಿದ ಟೆಲಿಕಾಂ ಇಲಾಖೆ; ಏನಾಯ್ತು?

https://newsfirstlive.com/wp-content/uploads/2023/09/Phone-call-1.jpg

    ಭೂಕಂಪ, ಪ್ರವಾಹದಂತಹ ತುರ್ತು ಪರಿಸ್ಥಿತಿಯಲ್ಲಿ ಈ ರೀತಿಯ ಅಲರ್ಟ್

    ಎಮರ್ಜೆನ್ಸಿ ಮೆಸೇಜ್‌ನಿಂದ ಯಾರು ಆತಂಕಗೊಳ್ಳುವ ಅವಶ್ಯಕತೆ ಇಲ್ಲ

    ಮಧ್ಯಾಹ್ನವೇ ಹಲವು ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಬಂದ ಸಂದೇಶ

ಈಗಂತೂ ಯಾರ ಬಳಿ ಸ್ಮಾರ್ಟ್​ ಫೋನ್ ಇಲ್ಲ ಹೇಳಿ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರ ತನಕ ಎಲ್ಲರ ಕೈಯಲ್ಲೂ ಸ್ಮಾರ್ಟ್​ ಫೋನ್ ಇದ್ದೇ ಇರುತ್ತೆ. ದೇಶಾದ್ಯಂತ ಸ್ಮಾರ್ಟ್ ಫೋನ್ ಬಳಕೆದಾರರಿಗೆ ಇವತ್ತು ಒಂದು ಎಮರ್ಜೆನ್ಸಿ ಮೆಸೇಜ್ ಬಂದಿದೆ. ಸುರಕ್ಷತೆಯ ದೃಷ್ಟಿಯಿಂದ ಈ ಎಮರ್ಜೆನ್ಸಿ ಮೆಸೇಜ್ ಅಲರ್ಟ್ ರವಾನೆಯಾಗಿದೆ.

ಇದನ್ನು ಓದಿ: ಬೆಂಗಳೂರಿನ ಹಲವೆಡೆ ಮಳೆ; ವಾಹನ ಸವಾರರ ಪರದಾಟ

 

ಇದು ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯಿಂದ ಸೆಲ್ ಬ್ರಾಡ್‌ಕಾಸ್ಟಿಂಗ್ ಸಿಸ್ಟಮ್ ಮೂಲಕ ಕಳುಹಿಸಲಾದ ಮಾದರಿ ಪರೀಕ್ಷಾ ಸಂದೇಶವಾಗಿದೆ. ತುರ್ತು ಮೆಸೇಜ್​ನಲ್ಲಿ ಈ ರೀತಿ ಸಂದೇಶ ಕಳುಹಿಸಲಾಗಿದೆ. ಗ್ರಾಹಕರ ಕಡೆಯಿಂದ ಯಾವುದೇ ಕ್ರಿಯೆಯ ಅಗತ್ಯವಿಲ್ಲದ ಕಾರಣ ಈ ಸಂದೇಶವನ್ನು ನಿರ್ಲಕ್ಷಿಸಬಹುದಾಗಿದೆ. ಅಲ್ಲದೆ ಈ ಸಂದೇಶವನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಅನುಷ್ಠಾನಗೊಳಿಸುತ್ತಿರುವ TEST ಪ್ಯಾನ್-ಇಂಡಿಯಾ ತುರ್ತು ಎಚ್ಚರಿಕೆ ವ್ಯವಸ್ಥೆಗೆ ಕಳುಹಿಸಲಾಗಿದೆ. ಈ ಮೆಸೇಜ್‌ ಅನ್ನು ತುರ್ತು ಸಂದರ್ಭದ ಬಳಕೆಗಾಗಿ ಪರೀಕ್ಷೆ ಮಾಡಲಾಗುತ್ತಿದ್ದು ಭೂಕಂಪ, ಪ್ರವಾಹ ಸೇರಿದಂತೆ ಯಾವುದೇ ತುರ್ತು ಸಂದರ್ಭದಲ್ಲಿ ಈ ಎಮರ್ಜೆನ್ಸಿ ಮೆಸೇಜ್ ಅಲರ್ಟ್ ಬಳಸಬಹುದಾಗಿದೆ.

ಎಮರ್ಜೆನ್ಸಿ ಮೆಸೇಜ್ ಅಲರ್ಟ್ ತುರ್ತು ಸಂದರ್ಭಗಳಲ್ಲಿ ಸಮಯೋಚಿತ ಎಚ್ಚರಿಕೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಇಂದು ಮಧ್ಯಾಹ್ನ ಹಲವು ದೇಶದ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಈ ರೀತಿಯಾ ಮೆಸೇಜ್ ಸೆಂಡ್ ಆಗಿದ್ದು, ಎಮರ್ಜನ್ಸಿ ಅಲರ್ಟ್​ನಿಂದ ಯಾರು ಆತಂಕಗೊಳ್ಳುವ ಅವಶ್ಯಕತೆ ಇಲ್ಲ ಎಂದು ಭಾರತ ಸರ್ಕಾರದ ದೂರಸಂಪರ್ಕ ಇಲಾಖೆ ತಿಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More