ಗ್ರಾಹಕರೇ, ವಿದ್ಯುತ್ ಬಿಲ್ ಕಟ್ಟಲ್ಲ ಅಂದ್ರೆ ಪವರ್ ಕಟ್ ಪ್ರಯೋಗ
ಗೃಹಜ್ಯೋತಿ ಯೋಜನೆ ಜಾರಿಗೆ ಬರೋವರೆಗೆ ವಿದ್ಯುತ್ ಬಿಲ್ ಕಟ್ಟಿ
ಹೀಗೆ ಮಾಡಿದ್ರೆ ಲೈಸನ್ಸ್ ಕೂಡ ರದ್ದು ಮಾಡಲು ಮುಂದಾದ ಇಲಾಖೆ
ಕಟ್ಟಲ್ಲಾ..ಕಟ್ಟಲ್ಲಾ..ಕರೆಟ್ ಬಿಲ್ ಕಟ್ಟಲ್ಲಾ ಎಂದವರಿಗೆ ಇಂಧನ ಇಲಾಖೆಯಿಂದ ಬಿಗ್ ಶಾಕ್ ನೀಡಿದೆ. ವಿದ್ಯುತ್ ಬಿಲ್ ಪಾವತಿಸದಿದ್ರೆ ಮುಲಾಜಿಲ್ಲದೇ ಪವರ್ ಕಟ್ ಮಾಡಲು ನಿರ್ಧರಿಸಿದೆ.
ರಾಜ್ಯದ ಎಸ್ಕಾಂಗಳಿಗೆ ಇಂಧನ ಇಲಾಖೆಯಿಂದ ಸೂಚನೆ ಹೊರಡಿಸಿದೆ. ಬಿಲ್ ಕಟ್ಟಲ್ಲ ಎಂದು ವಾಗ್ವಾದಕ್ಕಿಳಿದವರಿಗೆ ಪವರ್ ಕಟ್ ಮಾಡಿ ಎಂದು ಹೇಳಿದೆ.
ಗೃಹಜ್ಯೋತಿ ಯೋಜನೆ ಜಾರಿಗೆ ಬಂದಿಲ್ಲ
ಸಿದ್ದರಾಮಯ್ಯ ಸರ್ಕಾರ ಚುನಾವಣೆಗೂ ಮುನ್ನ ಗ್ಯಾರಂಟಿ ಯೋಜನೆಯನ್ನು ಜಾರಿಗೊಳಿಸುವುದಾಗಿ ಪ್ರಚಾರ ಮಾಡಿತ್ತು. ಅದರಲ್ಲಿ 200 ಯುನಿಟ್ ವಿದ್ಯುತ್ ಉಚಿತ ಎಂಬುದನ್ನು ಸಾರಿ ಸಾರಿ ಹೇಳಿತ್ತು. ಹೀಗಾಗಿ ಸಿದ್ದರಾಮಯ್ಯ ಸರ್ಕಾರ ಆಡಳಿತಕ್ಕೆ ಬಂದಂತೆ ಜನರು ವಿದ್ಯುತ್ ಬಿಲ್ ಕಟ್ಟಲು ಹಿಂದೇಟು ಹಾಕಿದ್ದಾರೆ. ಲೈನ್ ಮ್ಯಾನ್ಗಳು ಬಿಲ್ ಕಟ್ಟಿ ಎಂದು ಹೇಳಿದರೆ ಗ್ರಾಹಕರು ಅವರ ಮೇಲೆಯೇ ದರ್ಪ ತೋರುತ್ತಿದ್ದಾರೆ. ಹೀಗಾಗಿ ವಿದ್ಯುತ್ ಇಲಾಖೆಗೆ ಇದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ಇಂಧನ ಇಲಾಖೆ ಸೂಕ್ತ ನಿರ್ಧಾರ ತೆಗೆದುಕೊಂಡು ವಿದ್ಯುತ್ ಬಿಲ್ ಕಟ್ಟಲ್ಲ ಎಂದವರಿಗೆ ಪವರ್ ಕಟ್ ಪ್ರಯೋಗಿಸಲು ಮುಂದಾಗಿದೆ.
ಎಚ್ಚರ! ಲೈಸೆನ್ಸ್ ರದ್ದಾಗುತ್ತೆ
ಅಧಿಕೃತ ಆದೇಶ ಹೊರಬೀಳುವರೆಗೂ ಬಿಲ್ ಕಟ್ಟಲೇಬೇಕು ಎಂದು ಇಂಧನ ಇಲಾಖೆ ಹೇಳಿದೆ. ಬಿಲ್ ಕಟ್ಟದಿದ್ರೆ, ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಸೂಚನೆ ನೀಡಿದೆ. ಎರಡು ತಿಂಗಳು ಬಾಕಿ ಇರುವ ಮನೆಗಳಲ್ಲಿ ಪವರ್ ಕಟ್. 3 ತಿಂಗಳು ಬಿಲ್ ಬಾಕಿ ಇದ್ರೆ ಲೈಸೆನ್ಸ್ ರದ್ದು ಮಾಡಲು ಮುಂದಾಗಿದೆ. ಇದರ ನಡುವೆ ರಾಜ್ಯದ ಜನತೆ 200 ಯೂನಿಟ್ ಉಚಿತ ವಿದ್ಯುತ್ ಆದೇಶಕ್ಕಾಗಿ ಕಾಯುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಗ್ರಾಹಕರೇ, ವಿದ್ಯುತ್ ಬಿಲ್ ಕಟ್ಟಲ್ಲ ಅಂದ್ರೆ ಪವರ್ ಕಟ್ ಪ್ರಯೋಗ
ಗೃಹಜ್ಯೋತಿ ಯೋಜನೆ ಜಾರಿಗೆ ಬರೋವರೆಗೆ ವಿದ್ಯುತ್ ಬಿಲ್ ಕಟ್ಟಿ
ಹೀಗೆ ಮಾಡಿದ್ರೆ ಲೈಸನ್ಸ್ ಕೂಡ ರದ್ದು ಮಾಡಲು ಮುಂದಾದ ಇಲಾಖೆ
ಕಟ್ಟಲ್ಲಾ..ಕಟ್ಟಲ್ಲಾ..ಕರೆಟ್ ಬಿಲ್ ಕಟ್ಟಲ್ಲಾ ಎಂದವರಿಗೆ ಇಂಧನ ಇಲಾಖೆಯಿಂದ ಬಿಗ್ ಶಾಕ್ ನೀಡಿದೆ. ವಿದ್ಯುತ್ ಬಿಲ್ ಪಾವತಿಸದಿದ್ರೆ ಮುಲಾಜಿಲ್ಲದೇ ಪವರ್ ಕಟ್ ಮಾಡಲು ನಿರ್ಧರಿಸಿದೆ.
ರಾಜ್ಯದ ಎಸ್ಕಾಂಗಳಿಗೆ ಇಂಧನ ಇಲಾಖೆಯಿಂದ ಸೂಚನೆ ಹೊರಡಿಸಿದೆ. ಬಿಲ್ ಕಟ್ಟಲ್ಲ ಎಂದು ವಾಗ್ವಾದಕ್ಕಿಳಿದವರಿಗೆ ಪವರ್ ಕಟ್ ಮಾಡಿ ಎಂದು ಹೇಳಿದೆ.
ಗೃಹಜ್ಯೋತಿ ಯೋಜನೆ ಜಾರಿಗೆ ಬಂದಿಲ್ಲ
ಸಿದ್ದರಾಮಯ್ಯ ಸರ್ಕಾರ ಚುನಾವಣೆಗೂ ಮುನ್ನ ಗ್ಯಾರಂಟಿ ಯೋಜನೆಯನ್ನು ಜಾರಿಗೊಳಿಸುವುದಾಗಿ ಪ್ರಚಾರ ಮಾಡಿತ್ತು. ಅದರಲ್ಲಿ 200 ಯುನಿಟ್ ವಿದ್ಯುತ್ ಉಚಿತ ಎಂಬುದನ್ನು ಸಾರಿ ಸಾರಿ ಹೇಳಿತ್ತು. ಹೀಗಾಗಿ ಸಿದ್ದರಾಮಯ್ಯ ಸರ್ಕಾರ ಆಡಳಿತಕ್ಕೆ ಬಂದಂತೆ ಜನರು ವಿದ್ಯುತ್ ಬಿಲ್ ಕಟ್ಟಲು ಹಿಂದೇಟು ಹಾಕಿದ್ದಾರೆ. ಲೈನ್ ಮ್ಯಾನ್ಗಳು ಬಿಲ್ ಕಟ್ಟಿ ಎಂದು ಹೇಳಿದರೆ ಗ್ರಾಹಕರು ಅವರ ಮೇಲೆಯೇ ದರ್ಪ ತೋರುತ್ತಿದ್ದಾರೆ. ಹೀಗಾಗಿ ವಿದ್ಯುತ್ ಇಲಾಖೆಗೆ ಇದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ಇಂಧನ ಇಲಾಖೆ ಸೂಕ್ತ ನಿರ್ಧಾರ ತೆಗೆದುಕೊಂಡು ವಿದ್ಯುತ್ ಬಿಲ್ ಕಟ್ಟಲ್ಲ ಎಂದವರಿಗೆ ಪವರ್ ಕಟ್ ಪ್ರಯೋಗಿಸಲು ಮುಂದಾಗಿದೆ.
ಎಚ್ಚರ! ಲೈಸೆನ್ಸ್ ರದ್ದಾಗುತ್ತೆ
ಅಧಿಕೃತ ಆದೇಶ ಹೊರಬೀಳುವರೆಗೂ ಬಿಲ್ ಕಟ್ಟಲೇಬೇಕು ಎಂದು ಇಂಧನ ಇಲಾಖೆ ಹೇಳಿದೆ. ಬಿಲ್ ಕಟ್ಟದಿದ್ರೆ, ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಸೂಚನೆ ನೀಡಿದೆ. ಎರಡು ತಿಂಗಳು ಬಾಕಿ ಇರುವ ಮನೆಗಳಲ್ಲಿ ಪವರ್ ಕಟ್. 3 ತಿಂಗಳು ಬಿಲ್ ಬಾಕಿ ಇದ್ರೆ ಲೈಸೆನ್ಸ್ ರದ್ದು ಮಾಡಲು ಮುಂದಾಗಿದೆ. ಇದರ ನಡುವೆ ರಾಜ್ಯದ ಜನತೆ 200 ಯೂನಿಟ್ ಉಚಿತ ವಿದ್ಯುತ್ ಆದೇಶಕ್ಕಾಗಿ ಕಾಯುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ