newsfirstkannada.com

ಸಿದ್ದು ಸರ್ಕಾರದ ವಿರುದ್ಧ ಹೋರಾಟಕ್ಕೆ ಕುಮಾರಸ್ವಾಮಿ ಸಿದ್ಧತೆ; ದಾಖಲೆಗಳಿಗಾಗಿ ಅಧಿಕಾರಿಗಳ ಮೊರೆ ಹೋದ ಮಾಜಿ CM

Share :

23-06-2023

    ‘ಗ್ಯಾರಂಟಿ’ ಯೋಜನೆ ಜಾರಿ ವಿಳಂಬಕ್ಕೆ ಹೆಚ್​ಡಿಕೆ ಗರಂ

    ಸದನದಲ್ಲಿ ರಾಜಕೀಯವಾಗಿ ಬಳಸಿಕೊಳ್ಳಲು ದಳಪತಿ ಪ್ಲಾನ್

    ಜುಲೈ 3 ರಿಂದ 10 ದಿನಗಳ ಕಾಲ ವಿಧಾನಸಭೆ ಅಧಿವೇಶನ

ಬೆಂಗಳೂರು: ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರ, ಚುನಾವಣೆ ಸಂದರ್ಭದಲ್ಲಿ ತಾವು ಘೋಷಿಸಿದ್ದ ‘ಗ್ಯಾರಂಟಿ ಯೋಜನೆ’ಗಳ ಜಾರಿಗೊಳಿಸುವ ವಿಚಾರದಲ್ಲಿ ಬ್ಯುಸಿಯಾಗಿದೆ. ಸರ್ಕಾರ ರಚನೆಯಾದ ಕ್ಷಣದಿಂದ ಯೋಜನೆಗಳನ್ನು ಜಾರಿ ಮಾಡ್ತೀವಿ ಅಂದಿದ್ದ ಕಾಂಗ್ರೆಸ್​, ಇಕ್ಕಟ್ಟಿಗೆ ಸಿಲುಕಿದೆ.

ಗ್ಯಾರಂಟಿ ಯೋಜನೆಗಳ ಜಾರಿ ವಿಳಂಬ ಆಗುತ್ತಿರೋದನ್ನು ರಾಜಕೀಯವಾಗಿ ಸರಿಯಾಗಿ ಬಳಸಿಕೊಳ್ಳಲು ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರ್​ಸ್ವಾಮಿ ಸಿದ್ಧತೆ ನಡೆಸುತ್ತಿದ್ದಾರೆ. ಸದನದಲ್ಲಿ ರಾಜ್ಯ ಸರ್ಕಾರವನ್ನು ಕಟ್ಟಿಹಾಲು ತಯಾರಿ ನಡೆಸುತ್ತಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಅದರ ಮುಂದುವರಿದ ಭಾಗವಾಗಿ ಎಕ್ಸ್​ಪರ್ಟ್​ಗಳಿಂದ ಸಾಧಕ-ಬಾಧಕಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ. ಕೇವಲ ಸದನದ ಒಳಗಡೆ ಮಾತ್ರವಲ್ಲ, ಹೊರಗಡೆಯೂ ಹೋರಾಟಕ್ಕೆ ಸಜ್ಜಾಗಿದ್ದಾರೆ ಎನ್ನಲಾಗಿದೆ.

‘ಗ್ಯಾರಂಟಿ’ ಸಿಡಿಯಲಿದ್ದಾರೆ ಹೆಚ್​ಡಿಕೆ

  • ಸದ್ಯ ದಾಖಲೆ ಸಂಗ್ರಹಿಸ್ತಿರುವ ಮಾಜಿ ಸಿಎಂ H.D ಕುಮಾರಸ್ವಾಮಿ
  • ಸರ್ಕಾರ ಗ್ಯಾರಂಟಿ ಘೋಷಣೆ ಮಾಡಿ ಜನ ಇಕ್ಕಟ್ಟಿಗೆ ಸಿಲುಕಿಸಿದೆ
  • ಉದ್ದೇಶಪೂರ್ವಕ ವಿಳಂಬ ಮಾಡಲಾಗ್ತಿದೆ ಎಂದು ಹೆಚ್​ಡಿಕೆ ಧ್ವನಿ
  • ಗೃಹಜ್ಯೋತಿ, ಶಕ್ತಿ ರಾಜ್ಯಕ್ಕೆ ನಷ್ಟ ಎಂಬ ಸಂದೇಶ ರವಾನೆ ತಯಾರಿ
  • ಎಕ್ಸ್​ಪರ್ಟ್​ಗಳಿಂದ ಸಾಧಕ ಬಾಧಕಗಳ ಬಗ್ಗೆ ಮಾಹಿತಿ ಸಂಗ್ರಹ
  • ದಾಖಲೆ ಸಮೇತ ಸದನದ ಒಳಗೆ, ಹೊರಗೆ ಹೋರಾಟಕ್ಕೆ ಪ್ಲಾನ್

ಅಂದಹಾಗೆ ಜುಲೈ 3 ರಿಂದ ವಿಧಾನಸಭೆ ಅಧಿವೇಶನ ನಡೆಯಲಿದೆ. 10 ದಿನಗಳ ಕಾಲ ನಡೆಯುವ ಅಧಿವೇಶನದಲ್ಲಿ ಜುಲೈ 7 ರಂದು ಸಿದ್ದರಾಮಯ್ಯ ಸರ್ಕಾರ ಬಜೆಟ್ ಮಂಡನೆ ಮಾಡಲಿದೆ. ಇನ್ನು ಜೂನ್ 26 ರಿಂದ ಮೂರು ದಿನಗಳ ಕಾಲ ನೂತನ ಶಾಸಕರಿಗೆ ವಿಧಾನಸಭೆಯಲ್ಲಿ ತರಬೇತಿ ನಡೆಯಲಿದೆ. ನೂತನವಾಗಿ ಆಯ್ಕೆ ಆಗಿರುವ ಒಟ್ಟು 70 ಶಾಸಕರಿಗೆ ಆರೋಗ್ಯ ಸುಸ್ಥಿರತೆ, ಜ್ಞಾನಾಭಿವೃದ್ಧಿಗೆ ಸಂಬಂಧಿಸಿದಂತೆ ತರಭೇತಿ ನೀಡಲಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿದ್ದು ಸರ್ಕಾರದ ವಿರುದ್ಧ ಹೋರಾಟಕ್ಕೆ ಕುಮಾರಸ್ವಾಮಿ ಸಿದ್ಧತೆ; ದಾಖಲೆಗಳಿಗಾಗಿ ಅಧಿಕಾರಿಗಳ ಮೊರೆ ಹೋದ ಮಾಜಿ CM

https://newsfirstlive.com/wp-content/uploads/2023/06/HDK-2.jpg

    ‘ಗ್ಯಾರಂಟಿ’ ಯೋಜನೆ ಜಾರಿ ವಿಳಂಬಕ್ಕೆ ಹೆಚ್​ಡಿಕೆ ಗರಂ

    ಸದನದಲ್ಲಿ ರಾಜಕೀಯವಾಗಿ ಬಳಸಿಕೊಳ್ಳಲು ದಳಪತಿ ಪ್ಲಾನ್

    ಜುಲೈ 3 ರಿಂದ 10 ದಿನಗಳ ಕಾಲ ವಿಧಾನಸಭೆ ಅಧಿವೇಶನ

ಬೆಂಗಳೂರು: ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರ, ಚುನಾವಣೆ ಸಂದರ್ಭದಲ್ಲಿ ತಾವು ಘೋಷಿಸಿದ್ದ ‘ಗ್ಯಾರಂಟಿ ಯೋಜನೆ’ಗಳ ಜಾರಿಗೊಳಿಸುವ ವಿಚಾರದಲ್ಲಿ ಬ್ಯುಸಿಯಾಗಿದೆ. ಸರ್ಕಾರ ರಚನೆಯಾದ ಕ್ಷಣದಿಂದ ಯೋಜನೆಗಳನ್ನು ಜಾರಿ ಮಾಡ್ತೀವಿ ಅಂದಿದ್ದ ಕಾಂಗ್ರೆಸ್​, ಇಕ್ಕಟ್ಟಿಗೆ ಸಿಲುಕಿದೆ.

ಗ್ಯಾರಂಟಿ ಯೋಜನೆಗಳ ಜಾರಿ ವಿಳಂಬ ಆಗುತ್ತಿರೋದನ್ನು ರಾಜಕೀಯವಾಗಿ ಸರಿಯಾಗಿ ಬಳಸಿಕೊಳ್ಳಲು ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರ್​ಸ್ವಾಮಿ ಸಿದ್ಧತೆ ನಡೆಸುತ್ತಿದ್ದಾರೆ. ಸದನದಲ್ಲಿ ರಾಜ್ಯ ಸರ್ಕಾರವನ್ನು ಕಟ್ಟಿಹಾಲು ತಯಾರಿ ನಡೆಸುತ್ತಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಅದರ ಮುಂದುವರಿದ ಭಾಗವಾಗಿ ಎಕ್ಸ್​ಪರ್ಟ್​ಗಳಿಂದ ಸಾಧಕ-ಬಾಧಕಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ. ಕೇವಲ ಸದನದ ಒಳಗಡೆ ಮಾತ್ರವಲ್ಲ, ಹೊರಗಡೆಯೂ ಹೋರಾಟಕ್ಕೆ ಸಜ್ಜಾಗಿದ್ದಾರೆ ಎನ್ನಲಾಗಿದೆ.

‘ಗ್ಯಾರಂಟಿ’ ಸಿಡಿಯಲಿದ್ದಾರೆ ಹೆಚ್​ಡಿಕೆ

  • ಸದ್ಯ ದಾಖಲೆ ಸಂಗ್ರಹಿಸ್ತಿರುವ ಮಾಜಿ ಸಿಎಂ H.D ಕುಮಾರಸ್ವಾಮಿ
  • ಸರ್ಕಾರ ಗ್ಯಾರಂಟಿ ಘೋಷಣೆ ಮಾಡಿ ಜನ ಇಕ್ಕಟ್ಟಿಗೆ ಸಿಲುಕಿಸಿದೆ
  • ಉದ್ದೇಶಪೂರ್ವಕ ವಿಳಂಬ ಮಾಡಲಾಗ್ತಿದೆ ಎಂದು ಹೆಚ್​ಡಿಕೆ ಧ್ವನಿ
  • ಗೃಹಜ್ಯೋತಿ, ಶಕ್ತಿ ರಾಜ್ಯಕ್ಕೆ ನಷ್ಟ ಎಂಬ ಸಂದೇಶ ರವಾನೆ ತಯಾರಿ
  • ಎಕ್ಸ್​ಪರ್ಟ್​ಗಳಿಂದ ಸಾಧಕ ಬಾಧಕಗಳ ಬಗ್ಗೆ ಮಾಹಿತಿ ಸಂಗ್ರಹ
  • ದಾಖಲೆ ಸಮೇತ ಸದನದ ಒಳಗೆ, ಹೊರಗೆ ಹೋರಾಟಕ್ಕೆ ಪ್ಲಾನ್

ಅಂದಹಾಗೆ ಜುಲೈ 3 ರಿಂದ ವಿಧಾನಸಭೆ ಅಧಿವೇಶನ ನಡೆಯಲಿದೆ. 10 ದಿನಗಳ ಕಾಲ ನಡೆಯುವ ಅಧಿವೇಶನದಲ್ಲಿ ಜುಲೈ 7 ರಂದು ಸಿದ್ದರಾಮಯ್ಯ ಸರ್ಕಾರ ಬಜೆಟ್ ಮಂಡನೆ ಮಾಡಲಿದೆ. ಇನ್ನು ಜೂನ್ 26 ರಿಂದ ಮೂರು ದಿನಗಳ ಕಾಲ ನೂತನ ಶಾಸಕರಿಗೆ ವಿಧಾನಸಭೆಯಲ್ಲಿ ತರಬೇತಿ ನಡೆಯಲಿದೆ. ನೂತನವಾಗಿ ಆಯ್ಕೆ ಆಗಿರುವ ಒಟ್ಟು 70 ಶಾಸಕರಿಗೆ ಆರೋಗ್ಯ ಸುಸ್ಥಿರತೆ, ಜ್ಞಾನಾಭಿವೃದ್ಧಿಗೆ ಸಂಬಂಧಿಸಿದಂತೆ ತರಭೇತಿ ನೀಡಲಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More