newsfirstkannada.com

ಕಂದಾಯ ಇಲಾಖೆ ರಿಜಿಸ್ಟ್ರೇಷನ್‌ನಲ್ಲೂ ಭಾರೀ ಗೋಲ್‌ಮಾಲ್; ಆರ್.ಅಶೋಕ್ ಕಾಲದಲ್ಲಿ ಬಹುದೊಡ್ಡ ಹಗರಣ ಆರೋಪ

Share :

17-06-2023

    51 ಸಬ್​ ರಿಜಿಸ್ಟ್ರಾರ್​ಗಳ ವಿರುದ್ಧ ಕ್ರಿಮಿನಲ್​ ಕೇಸ್​ಗೆ ಕಾಂಗ್ರೆಸ್ ಸರ್ಕಾರ ಚಿಂತನೆ

    ಕಿಕ್​ಬ್ಯಾಕ್​ನಿಂದ ಸರ್ಕಾರದ ಬೊಕ್ಕಸಕ್ಕೆ ನೂರಾರು ಕೋಟಿ ಲಾಸ್ ಮಾಡಿದ್ರಾ?

    ಸುಪ್ರೀಂ​ಕೋರ್ಟ್ ಆದೇಶ ಏನು ಹೇಳುತ್ತೆ? ಸಬ್​ ರಿಜಿಸ್ಟರ್ಸ್​ ಮಾಡಿದ್ದೇನು?​

ಬೆಂಗಳೂರು: ಹಿಂದೆಯಿದ್ದ ಬಿಜೆಪಿ ಸರ್ಕಾರದ ಕಂದಾಯ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಬಹುದೊಡ್ಡ ಹಗರಣ ಬಯಲಾಗಿದೆ. ಕಂದಾಯ ಸಚಿವರಾಗಿದ್ದ ಆರ್.ಅಶೋಕ್​ ಅವರ ಗಮನಕ್ಕೆ ಬಾರದಂತೆ ಕಳೆದ 3 ವರ್ಷದಲ್ಲಿ ರಿಜಿಸ್ಟರ್ ಮಾಡಿದ್ದ ಅಧಿಕಾರಿಗಳಿಗೆ ಬಿಗ್​ ಶಾಕ್ ಕಾದಿದೆ. 2020ರ ನಂತರದ ಕೆಲ ರಿಜಿಸ್ಟ್ರೇಷನ್​​ಗಳು ರದ್ದು ಆಗಲಿವೆ ಎನ್ನುವ ಪ್ರಶ್ನೆ ಎದ್ದಿದೆ. ಸುಪ್ರೀಂಕೋರ್ಟ್​ ಆದೇಶವನ್ನು ಉಲ್ಲಂಘಿಸಿ, ಇಲಾಖೆ ಅಧಿಕಾರಿಗಳು ಹಣ ದಾಹಕ್ಕಾಗಿ ಯಾವುದೇ ದಾಖಲೆಗಳಿಲ್ಲದೆ ರಿಜಿಸ್ಟ್ರೆಷನ್ ಮಾಡಿದ್ದಾರೆ. ಸದ್ಯ ಇದು ನೋಂದಣಿ ಮಾಡಿಕೊಂಡ ಜನರಿಗೆ ಸಂಕಷ್ಟ ತಂದಂತಾಗಿದೆ. ಕೋರ್ಟ್​ ಆದೇಶ ಉಲ್ಲಂಘಿಸಿದ್ದಕ್ಕೆ ರಿಜಿಸ್ಟ್ರೇಷನ್ ಕ್ಯಾನ್ಸಲ್ ಆಗಿ ಪ್ರಾಪರ್ಟಿ ವಾಪಸ್ ಆಗಲಿದೆ ಎಂದು ಹೇಳಲಾಗಿದೆ.

ಎರಡು ಜಿಲ್ಲೆಯ 51 ಸಬ್ ರಿಜಿಸ್ಟ್ರಾರ್​​​ಗಳು ಅಕ್ರಮದಲ್ಲಿ ಭಾಗಿ

ಸರ್ಕಾರದ ಬೊಕ್ಕಸಕ್ಕೆ ಕೋಟಿ ಕೋಟಿ ನಾಮ ಭ್ರಷ್ಟರು ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅಕ್ರಮವೆಸಗಿದ್ದಾರೆ. ಈ 2 ಜಿಲ್ಲೆಯಿಂದ ಒಟ್ಟು 51 ಸಬ್ ರಿಜಿಸ್ಟ್ರಾರ್​​​ಗಳು ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ತನಿಖೆ ಮಾಡಿಸಿದ್ದು ಹಗರಣವನ್ನು ಬಯಲಿಗೆಳೆದಿದ್ದಾರೆ. ಅಷ್ಟೇ ಅಲ್ಲ, ಆರೋಪಿತ ಸಬ್ ರಿಜಿಸ್ಟ್ರಾರ್​​​ಗಳಿಗೆ ಈಗಾಗಲೇ ಸರ್ಕಾರ ನೋಟಿಸ್ ನೀಡಿ ಎಚ್ಚರಿಕೆ ಗಂಟೆ ಕೊಟ್ಟಿದೆ.

ಕಿಕ್ ಬ್ಯಾಕ್ ಪಡೆದುಕೊಂಡಿರುವ ಅಧಿಕಾರಿಗಳು ಸರ್ಕಾರದ ಆದಾಯಕ್ಕೆ ನೂರಾರು ಕೋಟಿ ಕನ್ನ ಹಾಕಿದ್ದಾರೆ. ಹೀಗಾಗಿ ಬೆಂಗಳೂರು ನಗರದ 47 ಸಬ್ ರಿಜಿಸ್ಟ್ರಾರ್​ಗಳು ಮತ್ತು ಬೆಂಗಳೂರು ಗ್ರಾಮಾಂತರದ 4 ಸಬ್ ರಿಜಿಸ್ಟ್ರಾರ್​ಗಳ ವಿರುದ್ಧ ಸರ್ಕಾರ ಕ್ರಿಮಿನಲ್ ಕೇಸ್ ದಾಖಲಿಸಲು ಮುಂದಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ನಾರಾಯಣ ಸ್ವಾಮಿಯವರು ಆರೋಪ ಮಾಡಿದ್ದಾರೆ.

ಸುಪ್ರಿಂ ಕೋರ್ಟ್ ಆದೇಶವೇನು?

ರಾಜ್ಯ ಸರ್ಕಾರ 2009ರಲ್ಲಿ 344 ರಾಜ್ಯಪತ್ರ ಬಿಡಗಡೆ ಮಾಡಿ, ರಿಜಿಸ್ಟ್ರೇಷನ್​ಗೆ ಸೂಕ್ತ ದಾಖಲೆಗಳ ಸಂಗ್ರಹ ಮಾಡಲು ಸೂಚನೆ ನೀಡಿತ್ತು. ಇ ಸ್ವತ್ತು, ಕೃಷಿ, ಅಪಾರ್ಟ್​​ಮೆಂಟ್ ರಿಜಿಸ್ಟ್ರೇಷನ್​ಗೆ ಕೆಲ ನಿಯಮಗಳಿದ್ದವು. ಹೀಗಾಗಿಯೇ ಕೆಲ ಸಬ್ ರಿಜಿಸ್ಟ್ರಾರ್​ಗಳು ಹೈ ಕೋರ್ಟ್​ಗೆ ಹೋಗಿ ಸ್ಟೇ ತಂದಿದ್ದರು. ಇದನ್ನು ಸ್ವತಃ ಐಜಿಆರ್ ಸುಪ್ರಿಂ ಕೊರ್ಟ್​​ಗೆ ಹೋಗಿ ಪ್ರಶ್ನಿಸಿದ್ದರು. ಇದರಿಂದ ಹೈಕೋರ್ಟ್ ಆದೇಶಕ್ಕೆ ಸ್ಟೇ ಮಾಡಿ ಸುಪ್ರಿಂ ಕೋರ್ಟ್ ವಿಚಾರಣೆ ಮಾಡುತ್ತಿದ್ದು ಇದು ಈಗ ಕೊನೆ ಹಂತಕ್ಕೆ ಬಂದು ನಿಂತಿದೆ. ಇದರ ನಡುವೆಯೇ ಸಬ್ ರಿಜಿಸ್ಟ್ರಾರ್​​ಗಳು 3 ವರ್ಷದಲ್ಲಿ ಮತ್ತೆ ಅಕ್ರಮವೆಸಗಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.

ಬೆಂಗಳೂರಿನ ಸಬ್ ರಿಜಿಸ್ಟ್ರಾರ್​ಗಳ ಕಳ್ಳಾಟ..!

  • ದೋಖಾ 1:
    ಪ್ರಾಪರ್ಟಿ ಅಂಡರ್ ವ್ಯಾಲ್ಯೂ ಮಾಡಿ ರಿಜಿಸ್ಟರ್ ಮಾಡಿ ದೋಖಾ
    ₹100 ಕೋಟಿ ಪ್ರಾಪರ್ಟಿಯ ₹1 ಕೋಟಿಗೆ ರಿಜಿಸ್ಟರ್ ಮಾಡಿ ಮೋಸ
  • ದೋಖಾ 2:
    ಸರ್ಕಾರದ ಆಸ್ತಿಯನ್ನು ದಾಖಲೆ ಪರಿಶೀಲನೆ ಮಾಡದೇ ರಿಜಿಸ್ಟರ್
    ಗೋಮಾಳ ಹಾಗೂ ಗುಂಡ್ಲು ಜಾಗಗಳನ್ನ ಅಕ್ರಮವಾಗಿ ರಿಜಿಸ್ಟರ್
  • ದೋಖಾ 3:
    ಕಿಕ್ ಬ್ಯಾಕ್ ಪಡೆದು ಯಾರದ್ದೋ ಪ್ರಾಪರ್ಟಿ ಇನ್ಯಾರಿಗೋ ನೋಂದಣಿ
  • ದೋಖಾ 4:
    ಹಣಕ್ಕಾಗಿ ತಮ್ಮ ವ್ಯಾಪ್ತಿ ಮೀರಿ ನೋಂದಣಿ ಮಾಡಿ ಅಕ್ರಮ
    ಬೆಂಗಳೂರು ಪ್ರಾಪರ್ಟಿಯ ಬೇರೆ ಜಿಲ್ಲೆಯಲ್ಲಿ ರಿಜಿಸ್ಟ್ರೇಷನ್
  • ದೋಖಾ 5:
    ಸೇಲ್ ಡೀಡ್ ಬದಲು ಸೇಲ್ ಸರ್ಟಿಫೀಕೇಟ್ ಎಂದು ಅಕ್ರಮ
    ಸರ್ಕಾರ ಸ್ಟಾಂಪ್ ಡ್ಯೂಟಿಯಲ್ಲಿ ಕೋಟ್ಯಾಂತರ ರೂ. ನಾಮ
    ಸೇಲ್ ಸರ್ಟಿಫಿಕೇಟ್‌ಗೆ ಸರ್ಕಾರದ ಸ್ಟಾಂಪ್ ಡ್ಯೂಟಿ ಇಲ್ಲ..!
  • ದೋಖಾ 6:
    ಪ್ರಾಪರ್ಟಿ 11 ಇ-ಸ್ಕೆಚ್ ಇಲ್ಲದೇ ಅಕ್ರಮವಾಗಿ ರಿಜಿಸ್ಟರ್!
    ಕೃಷಿ ಭೂಮಿಯಲ್ಲಿ ಗಲಾಟೆ ಆಗಬಾರದು ಎಂದು ಇರೋ ಸ್ಕೆಚ್
    ಅದು ಇಲ್ಲದೇ ಇದ್ದರೂ ಅಕ್ರಮವಾಗಿ ರಿಜಿಸ್ಟರ್ ಮಾಡಲಾಗ್ತಿದೆ
    ಪರಿಣಾಮ ವಿನಾಕಾರಣ ವ್ಯಾಜ್ಯಗಳನ್ನ ಸೃಷ್ಟಿಸ್ತಿರೋ ಅಧಿಕಾರಿಗಳು
    ಕಾವೇರಿ ತಂತ್ರಾಂಶಕ್ಕೆ ವಂಚಿಸಿ ರಿಜಿಸ್ಟ್ರೇಷನ್ ಮಾಡಲಾಗಿದೆ
  • ದೋಖಾ 7:
    ಹಣಕ್ಕಾಗಿ ಮೂಲ ದಾಖಲೆಗಳನ್ನ ಬದಲಾವಣೆ & ನಾಶ
    ಕೋಟಿ ಕೋಟಿ ಮೌಲ್ಯದ ಆಸ್ತಿ ದಾಖಲೆಗಳ ಸರ್ವನಾಶ ಆರೋಪ
    ಮೂಲಕ ಮಾಲೀಕ ಕೋರ್ಟ್​​​ಗೆ ಅಲೆದು ಸುಸ್ತಾಗುತ್ತಿದ್ದಾರೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಂದಾಯ ಇಲಾಖೆ ರಿಜಿಸ್ಟ್ರೇಷನ್‌ನಲ್ಲೂ ಭಾರೀ ಗೋಲ್‌ಮಾಲ್; ಆರ್.ಅಶೋಕ್ ಕಾಲದಲ್ಲಿ ಬಹುದೊಡ್ಡ ಹಗರಣ ಆರೋಪ

https://newsfirstlive.com/wp-content/uploads/2023/06/R_ASHOK.jpg

    51 ಸಬ್​ ರಿಜಿಸ್ಟ್ರಾರ್​ಗಳ ವಿರುದ್ಧ ಕ್ರಿಮಿನಲ್​ ಕೇಸ್​ಗೆ ಕಾಂಗ್ರೆಸ್ ಸರ್ಕಾರ ಚಿಂತನೆ

    ಕಿಕ್​ಬ್ಯಾಕ್​ನಿಂದ ಸರ್ಕಾರದ ಬೊಕ್ಕಸಕ್ಕೆ ನೂರಾರು ಕೋಟಿ ಲಾಸ್ ಮಾಡಿದ್ರಾ?

    ಸುಪ್ರೀಂ​ಕೋರ್ಟ್ ಆದೇಶ ಏನು ಹೇಳುತ್ತೆ? ಸಬ್​ ರಿಜಿಸ್ಟರ್ಸ್​ ಮಾಡಿದ್ದೇನು?​

ಬೆಂಗಳೂರು: ಹಿಂದೆಯಿದ್ದ ಬಿಜೆಪಿ ಸರ್ಕಾರದ ಕಂದಾಯ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಬಹುದೊಡ್ಡ ಹಗರಣ ಬಯಲಾಗಿದೆ. ಕಂದಾಯ ಸಚಿವರಾಗಿದ್ದ ಆರ್.ಅಶೋಕ್​ ಅವರ ಗಮನಕ್ಕೆ ಬಾರದಂತೆ ಕಳೆದ 3 ವರ್ಷದಲ್ಲಿ ರಿಜಿಸ್ಟರ್ ಮಾಡಿದ್ದ ಅಧಿಕಾರಿಗಳಿಗೆ ಬಿಗ್​ ಶಾಕ್ ಕಾದಿದೆ. 2020ರ ನಂತರದ ಕೆಲ ರಿಜಿಸ್ಟ್ರೇಷನ್​​ಗಳು ರದ್ದು ಆಗಲಿವೆ ಎನ್ನುವ ಪ್ರಶ್ನೆ ಎದ್ದಿದೆ. ಸುಪ್ರೀಂಕೋರ್ಟ್​ ಆದೇಶವನ್ನು ಉಲ್ಲಂಘಿಸಿ, ಇಲಾಖೆ ಅಧಿಕಾರಿಗಳು ಹಣ ದಾಹಕ್ಕಾಗಿ ಯಾವುದೇ ದಾಖಲೆಗಳಿಲ್ಲದೆ ರಿಜಿಸ್ಟ್ರೆಷನ್ ಮಾಡಿದ್ದಾರೆ. ಸದ್ಯ ಇದು ನೋಂದಣಿ ಮಾಡಿಕೊಂಡ ಜನರಿಗೆ ಸಂಕಷ್ಟ ತಂದಂತಾಗಿದೆ. ಕೋರ್ಟ್​ ಆದೇಶ ಉಲ್ಲಂಘಿಸಿದ್ದಕ್ಕೆ ರಿಜಿಸ್ಟ್ರೇಷನ್ ಕ್ಯಾನ್ಸಲ್ ಆಗಿ ಪ್ರಾಪರ್ಟಿ ವಾಪಸ್ ಆಗಲಿದೆ ಎಂದು ಹೇಳಲಾಗಿದೆ.

ಎರಡು ಜಿಲ್ಲೆಯ 51 ಸಬ್ ರಿಜಿಸ್ಟ್ರಾರ್​​​ಗಳು ಅಕ್ರಮದಲ್ಲಿ ಭಾಗಿ

ಸರ್ಕಾರದ ಬೊಕ್ಕಸಕ್ಕೆ ಕೋಟಿ ಕೋಟಿ ನಾಮ ಭ್ರಷ್ಟರು ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅಕ್ರಮವೆಸಗಿದ್ದಾರೆ. ಈ 2 ಜಿಲ್ಲೆಯಿಂದ ಒಟ್ಟು 51 ಸಬ್ ರಿಜಿಸ್ಟ್ರಾರ್​​​ಗಳು ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ತನಿಖೆ ಮಾಡಿಸಿದ್ದು ಹಗರಣವನ್ನು ಬಯಲಿಗೆಳೆದಿದ್ದಾರೆ. ಅಷ್ಟೇ ಅಲ್ಲ, ಆರೋಪಿತ ಸಬ್ ರಿಜಿಸ್ಟ್ರಾರ್​​​ಗಳಿಗೆ ಈಗಾಗಲೇ ಸರ್ಕಾರ ನೋಟಿಸ್ ನೀಡಿ ಎಚ್ಚರಿಕೆ ಗಂಟೆ ಕೊಟ್ಟಿದೆ.

ಕಿಕ್ ಬ್ಯಾಕ್ ಪಡೆದುಕೊಂಡಿರುವ ಅಧಿಕಾರಿಗಳು ಸರ್ಕಾರದ ಆದಾಯಕ್ಕೆ ನೂರಾರು ಕೋಟಿ ಕನ್ನ ಹಾಕಿದ್ದಾರೆ. ಹೀಗಾಗಿ ಬೆಂಗಳೂರು ನಗರದ 47 ಸಬ್ ರಿಜಿಸ್ಟ್ರಾರ್​ಗಳು ಮತ್ತು ಬೆಂಗಳೂರು ಗ್ರಾಮಾಂತರದ 4 ಸಬ್ ರಿಜಿಸ್ಟ್ರಾರ್​ಗಳ ವಿರುದ್ಧ ಸರ್ಕಾರ ಕ್ರಿಮಿನಲ್ ಕೇಸ್ ದಾಖಲಿಸಲು ಮುಂದಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ನಾರಾಯಣ ಸ್ವಾಮಿಯವರು ಆರೋಪ ಮಾಡಿದ್ದಾರೆ.

ಸುಪ್ರಿಂ ಕೋರ್ಟ್ ಆದೇಶವೇನು?

ರಾಜ್ಯ ಸರ್ಕಾರ 2009ರಲ್ಲಿ 344 ರಾಜ್ಯಪತ್ರ ಬಿಡಗಡೆ ಮಾಡಿ, ರಿಜಿಸ್ಟ್ರೇಷನ್​ಗೆ ಸೂಕ್ತ ದಾಖಲೆಗಳ ಸಂಗ್ರಹ ಮಾಡಲು ಸೂಚನೆ ನೀಡಿತ್ತು. ಇ ಸ್ವತ್ತು, ಕೃಷಿ, ಅಪಾರ್ಟ್​​ಮೆಂಟ್ ರಿಜಿಸ್ಟ್ರೇಷನ್​ಗೆ ಕೆಲ ನಿಯಮಗಳಿದ್ದವು. ಹೀಗಾಗಿಯೇ ಕೆಲ ಸಬ್ ರಿಜಿಸ್ಟ್ರಾರ್​ಗಳು ಹೈ ಕೋರ್ಟ್​ಗೆ ಹೋಗಿ ಸ್ಟೇ ತಂದಿದ್ದರು. ಇದನ್ನು ಸ್ವತಃ ಐಜಿಆರ್ ಸುಪ್ರಿಂ ಕೊರ್ಟ್​​ಗೆ ಹೋಗಿ ಪ್ರಶ್ನಿಸಿದ್ದರು. ಇದರಿಂದ ಹೈಕೋರ್ಟ್ ಆದೇಶಕ್ಕೆ ಸ್ಟೇ ಮಾಡಿ ಸುಪ್ರಿಂ ಕೋರ್ಟ್ ವಿಚಾರಣೆ ಮಾಡುತ್ತಿದ್ದು ಇದು ಈಗ ಕೊನೆ ಹಂತಕ್ಕೆ ಬಂದು ನಿಂತಿದೆ. ಇದರ ನಡುವೆಯೇ ಸಬ್ ರಿಜಿಸ್ಟ್ರಾರ್​​ಗಳು 3 ವರ್ಷದಲ್ಲಿ ಮತ್ತೆ ಅಕ್ರಮವೆಸಗಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.

ಬೆಂಗಳೂರಿನ ಸಬ್ ರಿಜಿಸ್ಟ್ರಾರ್​ಗಳ ಕಳ್ಳಾಟ..!

  • ದೋಖಾ 1:
    ಪ್ರಾಪರ್ಟಿ ಅಂಡರ್ ವ್ಯಾಲ್ಯೂ ಮಾಡಿ ರಿಜಿಸ್ಟರ್ ಮಾಡಿ ದೋಖಾ
    ₹100 ಕೋಟಿ ಪ್ರಾಪರ್ಟಿಯ ₹1 ಕೋಟಿಗೆ ರಿಜಿಸ್ಟರ್ ಮಾಡಿ ಮೋಸ
  • ದೋಖಾ 2:
    ಸರ್ಕಾರದ ಆಸ್ತಿಯನ್ನು ದಾಖಲೆ ಪರಿಶೀಲನೆ ಮಾಡದೇ ರಿಜಿಸ್ಟರ್
    ಗೋಮಾಳ ಹಾಗೂ ಗುಂಡ್ಲು ಜಾಗಗಳನ್ನ ಅಕ್ರಮವಾಗಿ ರಿಜಿಸ್ಟರ್
  • ದೋಖಾ 3:
    ಕಿಕ್ ಬ್ಯಾಕ್ ಪಡೆದು ಯಾರದ್ದೋ ಪ್ರಾಪರ್ಟಿ ಇನ್ಯಾರಿಗೋ ನೋಂದಣಿ
  • ದೋಖಾ 4:
    ಹಣಕ್ಕಾಗಿ ತಮ್ಮ ವ್ಯಾಪ್ತಿ ಮೀರಿ ನೋಂದಣಿ ಮಾಡಿ ಅಕ್ರಮ
    ಬೆಂಗಳೂರು ಪ್ರಾಪರ್ಟಿಯ ಬೇರೆ ಜಿಲ್ಲೆಯಲ್ಲಿ ರಿಜಿಸ್ಟ್ರೇಷನ್
  • ದೋಖಾ 5:
    ಸೇಲ್ ಡೀಡ್ ಬದಲು ಸೇಲ್ ಸರ್ಟಿಫೀಕೇಟ್ ಎಂದು ಅಕ್ರಮ
    ಸರ್ಕಾರ ಸ್ಟಾಂಪ್ ಡ್ಯೂಟಿಯಲ್ಲಿ ಕೋಟ್ಯಾಂತರ ರೂ. ನಾಮ
    ಸೇಲ್ ಸರ್ಟಿಫಿಕೇಟ್‌ಗೆ ಸರ್ಕಾರದ ಸ್ಟಾಂಪ್ ಡ್ಯೂಟಿ ಇಲ್ಲ..!
  • ದೋಖಾ 6:
    ಪ್ರಾಪರ್ಟಿ 11 ಇ-ಸ್ಕೆಚ್ ಇಲ್ಲದೇ ಅಕ್ರಮವಾಗಿ ರಿಜಿಸ್ಟರ್!
    ಕೃಷಿ ಭೂಮಿಯಲ್ಲಿ ಗಲಾಟೆ ಆಗಬಾರದು ಎಂದು ಇರೋ ಸ್ಕೆಚ್
    ಅದು ಇಲ್ಲದೇ ಇದ್ದರೂ ಅಕ್ರಮವಾಗಿ ರಿಜಿಸ್ಟರ್ ಮಾಡಲಾಗ್ತಿದೆ
    ಪರಿಣಾಮ ವಿನಾಕಾರಣ ವ್ಯಾಜ್ಯಗಳನ್ನ ಸೃಷ್ಟಿಸ್ತಿರೋ ಅಧಿಕಾರಿಗಳು
    ಕಾವೇರಿ ತಂತ್ರಾಂಶಕ್ಕೆ ವಂಚಿಸಿ ರಿಜಿಸ್ಟ್ರೇಷನ್ ಮಾಡಲಾಗಿದೆ
  • ದೋಖಾ 7:
    ಹಣಕ್ಕಾಗಿ ಮೂಲ ದಾಖಲೆಗಳನ್ನ ಬದಲಾವಣೆ & ನಾಶ
    ಕೋಟಿ ಕೋಟಿ ಮೌಲ್ಯದ ಆಸ್ತಿ ದಾಖಲೆಗಳ ಸರ್ವನಾಶ ಆರೋಪ
    ಮೂಲಕ ಮಾಲೀಕ ಕೋರ್ಟ್​​​ಗೆ ಅಲೆದು ಸುಸ್ತಾಗುತ್ತಿದ್ದಾರೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More