newsfirstkannada.com

ಮೋಸ ಮಾಡಲೆಂದು ನೀನು ಬಂದೆಯಾ.. ಪ್ರೀತಿ ಹೆಸರ ಹೇಳಿ ದೋಖಾ ಮಾಡಿದ ಯುವಕ; ಯುವತಿ ಆತ್ಮಹತ್ಯೆಗೆ ಯತ್ನ

Share :

15-07-2023

    ಪಕ್ಕದ ಮನೆ ಹುಡುಗನಿಂದಲೇ ಯುವತಿಗೆ ಮಹಾ ಮೋಸ ಆರೋಪ

    ಮದುವೆಯಾಗು ಎಂದಿದ್ದಕ್ಕೆ ರಾತ್ರೋರಾತ್ರಿ ಪರಾರಿಯಾದ ಪ್ರಿಯತಮ

    ಹುಡುಗಿ ಜೊತೆ ಚೆಲ್ಲಾಟವಾಡಿ ಈಗ ಮದುವೆ ಬೇಡ ಅಂದ್ರೆ ಹೇಗೆ?

ರಾಯಚೂರು: ಮದುವೆ ಆಗುತ್ತೇನೆ ಎಂದು ಯುವತಿಗೆ ನಂಬಿಸಿ ಯುವಕ ಎಸ್ಕೇಪ್​ ಆಗಿರೋ ಆರೋಪ ಸಿರವಾರ ತಾಲೂಕಿನ ತೊಪ್ಪಲದೊಡ್ಡಿ ಗ್ರಾಮದಲ್ಲಿ ನಡೆದಿದೆ. ಪಕ್ಕದ ಮನೆಯ ಹುಡುಗ ಮಲ್ಲೇಶ್ ಎಂಬಾತ ಮೋನಮ್ಮ (20) ಎಂಬಾಕೆಯನ್ನು ಪ್ರೀತಿಸುತ್ತಿದ್ದರು. ಪ್ರಿಯಕರ ಮಲ್ಲೇಶ್,​ ಯುವತಿಯ ಜೊತೆಗೆ ಪ್ರೀತಿಯ ಹೆಸರಿನಲ್ಲಿ ಮೋಸ ಮಾಡಿದ್ದಾನೆ ಎನ್ನಲಾಗಿದೆ. ಆಕೆಯನ್ನ ಮದುವೆಯಾಗುವುದಾಗಿ ನಂಬಿಸಿ ಬಳಿಕ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಈ ವಿಚಾರವನ್ನು ಯುವತಿಯು ಕುಟುಂಬಸ್ಥರಿಗೆ ತಿಳಿಸಿದ್ದಾಳೆ. ಈ ವಿಚಾರ ಕೇಳಿದ ಮನೆಯವರು ಕೊನೆಗೆ ಇಬ್ಬರಿಗೂ ಮದುವೆ ಮಾಡಲು ದಿನಾಂಕವನ್ನು​ ಫಿಕ್ಸ್​​​ ಮಾಡಲು ಮುಂದಾಗಿದ್ದರು.

ಆದರೆ ಮದುವೆ ವಿಚಾರ ತಿಳಿಯುತ್ತಿದ್ದಂತೆ ಯುವಕ ರಾತ್ರೋರಾತ್ರಿ ಪರಾರಿಯಾಗಿದ್ದಾನೆ. ಪ್ರಿಯಕರ ಮಲ್ಲೇಶ್​​​ ಪರಾರಿಯಾಗಿರೋ ಸುದ್ದಿ ಕೇಳುತ್ತಿದ್ದಂತೆ ಯುವತಿ ಮನನೊಂದು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಸದ್ಯ ಮನನೊಂದ ಯುವತಿಯು ನ್ಯಾಯಕ್ಕಾಗಿ ಪೊಲೀಸ್​ ಠಾಣೆಯಲ್ಲಿ ದೂರ ದಾಖಲು ಮಾಡಿದ್ದಾಳೆ. ಎಫ್​ಐಆರ್ ದಾಖಲಿಸಿಕೊಂಡಿರೋ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಯುವತಿ ಆರೋಪಿಸಿದ್ದಾಳೆ. ಯುವತಿಗೆ ನ್ಯಾಯ ಸಿಗುತ್ತಾ ಎಂದು ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

 

ಮೋಸ ಮಾಡಲೆಂದು ನೀನು ಬಂದೆಯಾ.. ಪ್ರೀತಿ ಹೆಸರ ಹೇಳಿ ದೋಖಾ ಮಾಡಿದ ಯುವಕ; ಯುವತಿ ಆತ್ಮಹತ್ಯೆಗೆ ಯತ್ನ

https://newsfirstlive.com/wp-content/uploads/2023/07/fake-love.jpg

    ಪಕ್ಕದ ಮನೆ ಹುಡುಗನಿಂದಲೇ ಯುವತಿಗೆ ಮಹಾ ಮೋಸ ಆರೋಪ

    ಮದುವೆಯಾಗು ಎಂದಿದ್ದಕ್ಕೆ ರಾತ್ರೋರಾತ್ರಿ ಪರಾರಿಯಾದ ಪ್ರಿಯತಮ

    ಹುಡುಗಿ ಜೊತೆ ಚೆಲ್ಲಾಟವಾಡಿ ಈಗ ಮದುವೆ ಬೇಡ ಅಂದ್ರೆ ಹೇಗೆ?

ರಾಯಚೂರು: ಮದುವೆ ಆಗುತ್ತೇನೆ ಎಂದು ಯುವತಿಗೆ ನಂಬಿಸಿ ಯುವಕ ಎಸ್ಕೇಪ್​ ಆಗಿರೋ ಆರೋಪ ಸಿರವಾರ ತಾಲೂಕಿನ ತೊಪ್ಪಲದೊಡ್ಡಿ ಗ್ರಾಮದಲ್ಲಿ ನಡೆದಿದೆ. ಪಕ್ಕದ ಮನೆಯ ಹುಡುಗ ಮಲ್ಲೇಶ್ ಎಂಬಾತ ಮೋನಮ್ಮ (20) ಎಂಬಾಕೆಯನ್ನು ಪ್ರೀತಿಸುತ್ತಿದ್ದರು. ಪ್ರಿಯಕರ ಮಲ್ಲೇಶ್,​ ಯುವತಿಯ ಜೊತೆಗೆ ಪ್ರೀತಿಯ ಹೆಸರಿನಲ್ಲಿ ಮೋಸ ಮಾಡಿದ್ದಾನೆ ಎನ್ನಲಾಗಿದೆ. ಆಕೆಯನ್ನ ಮದುವೆಯಾಗುವುದಾಗಿ ನಂಬಿಸಿ ಬಳಿಕ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಈ ವಿಚಾರವನ್ನು ಯುವತಿಯು ಕುಟುಂಬಸ್ಥರಿಗೆ ತಿಳಿಸಿದ್ದಾಳೆ. ಈ ವಿಚಾರ ಕೇಳಿದ ಮನೆಯವರು ಕೊನೆಗೆ ಇಬ್ಬರಿಗೂ ಮದುವೆ ಮಾಡಲು ದಿನಾಂಕವನ್ನು​ ಫಿಕ್ಸ್​​​ ಮಾಡಲು ಮುಂದಾಗಿದ್ದರು.

ಆದರೆ ಮದುವೆ ವಿಚಾರ ತಿಳಿಯುತ್ತಿದ್ದಂತೆ ಯುವಕ ರಾತ್ರೋರಾತ್ರಿ ಪರಾರಿಯಾಗಿದ್ದಾನೆ. ಪ್ರಿಯಕರ ಮಲ್ಲೇಶ್​​​ ಪರಾರಿಯಾಗಿರೋ ಸುದ್ದಿ ಕೇಳುತ್ತಿದ್ದಂತೆ ಯುವತಿ ಮನನೊಂದು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಸದ್ಯ ಮನನೊಂದ ಯುವತಿಯು ನ್ಯಾಯಕ್ಕಾಗಿ ಪೊಲೀಸ್​ ಠಾಣೆಯಲ್ಲಿ ದೂರ ದಾಖಲು ಮಾಡಿದ್ದಾಳೆ. ಎಫ್​ಐಆರ್ ದಾಖಲಿಸಿಕೊಂಡಿರೋ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಯುವತಿ ಆರೋಪಿಸಿದ್ದಾಳೆ. ಯುವತಿಗೆ ನ್ಯಾಯ ಸಿಗುತ್ತಾ ಎಂದು ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

 

Load More