newsfirstkannada.com

ಬೆಳೆದ ಬೆಳೆಗೆ ಬೆಲೆ ಸಿಗದೆ ಕಂಗಾಲು.. ಟ್ರ್ಯಾಕ್ಟರ್​ ತುಂಬಿದ ಮೆಂತೆ ಸೊಪ್ಪನ್ನು ಉಚಿತವಾಗಿ ಹಂಚಿದ ರೈತ

Share :

26-08-2023

    ಸರಿಯಾದ ಬೆಲೆ ಇಲ್ಲದೇ ರೈತನಿಗೆ ನಿರಾಸೆ

    ಎಪಿಎಂಸಿ ಬಳಿ ತಂದು ಫ್ರೀಯಾಗಿ ಮಾರಾಟ

    ಬೆಲೆ ಕಳೆದುಕೊಂಡ ಮೆಂತೆ ಸೊಪ್ಪು, ಕಂಗಲಾದ ರೈತ

ಹುಬ್ಬಳ್ಳಿ: ರೈತನೊಬ್ಬ ಸೂಕ್ತ ಬೆಲೆ ಸಿಗದ ಹಿನ್ನೆಲೆ ಮೆಂತೆ ಸೊಪ್ಪನ್ನು ಉಚಿತವಾಗಿ ಹಂಚಿದ ಘಟನೆ ಎಪಿಎಂಸಿ ಬಳಿ ನಡೆದಿದೆ. ರೈತ ಘಟಪ್ರಭಾದಿಂದ ಹುಬ್ಬಳ್ಳಿ ಎಪಿಎಂಸಿಗೆ ಮೆಂತೆ ಸೊಪ್ಪನ್ನು ಟ್ರ್ಯಾಕ್ಟರ್​ನಲ್ಲಿ ತುಂಬಿ ತಂದಿದ್ದಾನೆ.

ಮೆಂತೆ ಸೊಪ್ಪಿಗೆ ಸರಿಯಾದ ಬೆಲೆ ಇಲ್ಲದೇ ಕಂಗಲಾಗಿದ್ದ ರೈತ ಟ್ರ್ಯಾಕ್ಟರ್​ನಲ್ಲಿ ತುಂಬಿಸಿ ಎಪಿಎಂಸಿ ಬಳಿ ತಂದು ಫ್ರೀಯಾಗಿ ಮಾರಾಟ ಮಾಡಿದ್ದಾನೆ. ಉಳಿದ ಸೊಪ್ಪನ್ನು ದನ ಕರುಗಳಿಗೆ ತಿನ್ನಿಸಿದ್ದಾನೆ.

ಒಂದೆಡೆ ಸರಿಯಾಗಿ ಮಳೆ ಇಲ್ಲದೇ, ಇದ್ದಿದ್ದರಲ್ಲಿ ಬೆಳೆದ ಬೆಳೆಗೆ ಸರಿಯಾದ ಬೆಲೆ ಕೈಗೆ ಸಿಗದೇ ರೈತ ನಿರಾಸೆಗೊಂಡಿದ್ದಾನೆ. ಸಾಲ ಮಾಡಿ ಬೆಳೆದಿದ್ದ ಸೊಪ್ಪಿಗೆ ಸೂಕ್ತ ಬೆಲೆ ಸಿಗದೆ ನೊಂದು ಉಚಿತವಾಗಿ ಮಾರಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಬೆಳೆದ ಬೆಳೆಗೆ ಬೆಲೆ ಸಿಗದೆ ಕಂಗಾಲು.. ಟ್ರ್ಯಾಕ್ಟರ್​ ತುಂಬಿದ ಮೆಂತೆ ಸೊಪ್ಪನ್ನು ಉಚಿತವಾಗಿ ಹಂಚಿದ ರೈತ

https://newsfirstlive.com/wp-content/uploads/2023/08/Menthe-leaves.jpg

    ಸರಿಯಾದ ಬೆಲೆ ಇಲ್ಲದೇ ರೈತನಿಗೆ ನಿರಾಸೆ

    ಎಪಿಎಂಸಿ ಬಳಿ ತಂದು ಫ್ರೀಯಾಗಿ ಮಾರಾಟ

    ಬೆಲೆ ಕಳೆದುಕೊಂಡ ಮೆಂತೆ ಸೊಪ್ಪು, ಕಂಗಲಾದ ರೈತ

ಹುಬ್ಬಳ್ಳಿ: ರೈತನೊಬ್ಬ ಸೂಕ್ತ ಬೆಲೆ ಸಿಗದ ಹಿನ್ನೆಲೆ ಮೆಂತೆ ಸೊಪ್ಪನ್ನು ಉಚಿತವಾಗಿ ಹಂಚಿದ ಘಟನೆ ಎಪಿಎಂಸಿ ಬಳಿ ನಡೆದಿದೆ. ರೈತ ಘಟಪ್ರಭಾದಿಂದ ಹುಬ್ಬಳ್ಳಿ ಎಪಿಎಂಸಿಗೆ ಮೆಂತೆ ಸೊಪ್ಪನ್ನು ಟ್ರ್ಯಾಕ್ಟರ್​ನಲ್ಲಿ ತುಂಬಿ ತಂದಿದ್ದಾನೆ.

ಮೆಂತೆ ಸೊಪ್ಪಿಗೆ ಸರಿಯಾದ ಬೆಲೆ ಇಲ್ಲದೇ ಕಂಗಲಾಗಿದ್ದ ರೈತ ಟ್ರ್ಯಾಕ್ಟರ್​ನಲ್ಲಿ ತುಂಬಿಸಿ ಎಪಿಎಂಸಿ ಬಳಿ ತಂದು ಫ್ರೀಯಾಗಿ ಮಾರಾಟ ಮಾಡಿದ್ದಾನೆ. ಉಳಿದ ಸೊಪ್ಪನ್ನು ದನ ಕರುಗಳಿಗೆ ತಿನ್ನಿಸಿದ್ದಾನೆ.

ಒಂದೆಡೆ ಸರಿಯಾಗಿ ಮಳೆ ಇಲ್ಲದೇ, ಇದ್ದಿದ್ದರಲ್ಲಿ ಬೆಳೆದ ಬೆಳೆಗೆ ಸರಿಯಾದ ಬೆಲೆ ಕೈಗೆ ಸಿಗದೇ ರೈತ ನಿರಾಸೆಗೊಂಡಿದ್ದಾನೆ. ಸಾಲ ಮಾಡಿ ಬೆಳೆದಿದ್ದ ಸೊಪ್ಪಿಗೆ ಸೂಕ್ತ ಬೆಲೆ ಸಿಗದೆ ನೊಂದು ಉಚಿತವಾಗಿ ಮಾರಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Load More