ಫಾಲೋ ಆನ್ ಭೀತಿಯಲ್ಲಿ ಆಸರೆಯಾದ ಹೀರೋಸ್
ಟೀಮ್ ಇಂಡಿಯಾದ ರೂಟ್ ಬದಲಿಸಿದ ರಹಾನೆ
ಜಡ್ಡು ಮ್ಯಾಜಿಕಲ್ ಇನ್ನಿಂಗ್ಸ್ನಿಂದ ಆಪತ್ತು ಪಾರು
WTC ಫೈನಲ್ನಲ್ಲಿ ಟೀಮ್ ಇಂಡಿಯಾದ ಖೇಲ್ ಖತಂ ಆಯ್ತು ಅಂತಾನೇ ಎಲ್ಲರೂ ಊಹಿಸಿದ್ದರು. ಇನ್ನೇನಿದ್ದರೂ ಫಾಲೋ ಆನ್ಗೆ ಸಿಲುಕಿ ಆಸಿಸ್ ಬಲೆಯಲ್ಲಿ ಒದ್ದಾಡಬೇಕು ಅಂತಾನೇ ಪಂಡಿತರು ವಿಶ್ಲೇಷಿಸಿದರು. ಆದ್ರೆ ಟೀಮ್ ಇಂಡಿಯಾದ ಈ ಮೂವರು ಆಟಗಾರರು, ಕ್ರಿಕೆಟ್ ವಿಶ್ಲೇಷಕರ ಭವಿಷ್ಯವನ್ನಷ್ಟೇ ಅಲ್ಲ. ಕಾಂಗರೂಗಳ ಲೆಕ್ಕಚಾರವನ್ನೂ ಉಲ್ಟಾ ಮಾಡಿ ಅಪದ್ಭಾಂದವರದರು.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಮದಗಜಗಳ ಹೋರಾಟ ನಡೆಯುತ್ತಿದೆ. ಏಟಿಗೆ ಏಟು ಎಂಬಂತೆ ತಿರುಗೇಟು, ತಂತ್ರಗಳಿಗೆ ಪ್ರತಿತಂತ್ರಗಳನ್ನ ಹೆಣೆಯುತ್ತ ನಾಲ್ಕನೇ ದಿನದಾಟಕ್ಕೆ ಹೆಜ್ಜೆ ಇಟ್ಟಿದೆ. ಆದ್ರೆ ಎಲ್ಲವೂ ಆಸ್ಟ್ರೇಲಿಯನ್ನರ ಲೆಕ್ಕಚಾರದಂತೆಯೇ ನಡೆದಿದ್ರೆ ಟೀಮ್ ಇಂಡಿಯಾ ಫಾಲೋ ಆನ್ಗೆ ಸಿಲುಕಿ ಇಂದೇ ಸೋಲಿನ ಮುಖಭಂಗ ಅನುಭವಿಸಬೇಕಿತ್ತು.
ಇದೆಲ್ಲವನ್ನೂ ದೂರ ಮಾಡಿದ್ದು ಈ ತ್ರಿಮೂರ್ತಿ ಅಪದ್ಬಾಂದವರು. ಅಂದ್ಹಾಗೆ ಆ ಅಪದ್ಭಾಂದವರು ಬೇಱರು ಅಲ್ಲ. ತಾಳ್ಮೆಯ ಸಾಕಾರಮೂರ್ತಿ ಅಜಿಂಕ್ಯಾ ರಹಾನೆ. ಆಲ್ರೌಂಡರ್ ಜಡೇಜಾ. ಲಾರ್ಡ್ ಶಾರ್ದೂಲ್. ಮೊದಲ ಇನ್ನಿಂಗ್ಸ್ನಲ್ಲಿ ಸ್ಮಿತ್-ಹೆಡ್ರ ಹೆಡ್ಡೇಕ್ ಬ್ಯಾಟಿಂಗ್ ಪರಿಣಾಮ ಆಸ್ಟ್ರೇಲಿಯಾ, 469 ರನ್ಗಳ ಬೃಹತ್ ಮೊತ್ತ ಪೇರಿಸಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿದ್ದ ಟೀಮ್ ಇಂಡಿಯಾ, ಅಗ್ರಗಣ್ಯ ಆಟಗಾರರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಕೇವಲ 71 ರನ್ಗೆ ರೋಹಿತ್, ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಟೀಮ್ ಇಂಡಿಯಾಗೆ ಆಕ್ಷರಶಃ ಬೆನ್ನಲುವಾಗಿ ನಿಂತಿದ್ದೇ ಈ ತ್ರಿಮೂರ್ತಿಗಳು.
ಟೀಮ್ ಇಂಡಿಯಾ ರೂಟ್ ಬದಲಿಸಿದ ರಹಾನೆ
ನಿಜಕ್ಕೂ ಫಾಲೋ ಆನ್ಗೆ ಸಿಲುಕಬೇಕಿದ್ದ ಟೀಮ್ ಇಂಡಿಯಾದ ರೂಟ್ ಬದಲಿಸಿದ್ದು ಕಮ್ಬ್ಯಾಕ್ ಸ್ಟಾರ್ ರಹಾನೆ, ಬರೋಬ್ಬರಿ 18 ತಿಂಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ನ ಅಂಗಳಕ್ಕಿಳಿದ ಈ ಮುಂಬೈಕರ್, ತಾಳ್ಮೆಯ ಆಟವಾಡಿದರು. ಅದರಲ್ಲೂ ಪ್ರತಿ ಎಸೆತವನ್ನ ಎಳೆದು ತೂಗಿ ಎದುರಿಸಿದ ಅಜಿಂಕ್ಯಾ, 5ನೇ ವಿಕೆಟ್ಗೆ ಜಡೇಜಾ ಜೊತೆ ಸೇರಿ 71 ರನ್ಗಳ ಜೊತೆಯಾಟವಾಡಿದ್ದರು.
ಜಡೇಜಾ ವಿಕೆಟ್ ಪತನದ ಬಳಿಕವೂ ಆಸ್ಟ್ರೇಲಿಯನ್ನರ ದಾಳಿಗೆ ಬಗ್ಗದ ರಹಾನೆ, 7ನೇ ವಿಕೆಟ್ಗೆ ಶಾರ್ದೂಲ್ ಜೊತೆ ಸೇರಿ 109 ರನ್ಗಳ ಅಮೋಘ ಇನ್ನಿಂಗ್ಸ್ ಕಟ್ಟಿದರು. ಇದು ನಿಜಕ್ಕೂ ಟೀಮ್ ಇಂಡಿಯಾದ ಹಣೆಬರಹವನ್ನೇ ಬದಲಿಸಿದ ಜೊತೆಯಾಟವಾಗಿತ್ತು. ಬರೋಬ್ಬರಿ 254 ನಿಮಿಷಗಳ ಕಾಲ ಕ್ರೀಸ್ನಲ್ಲಿ ನೆಲೆಯೂರಿದ್ದ ರಹಾನೆ, 129 ಎಸೆತಗಳಲ್ಲಿ 11 ಬೌಂಡರಿ, 1 ಸಿಕ್ಸರ್ ಒಳಗೊಂಡ 89 ರನ್ ಗಳಿಸಿ ಶತಕದ ಹೊಸ್ತಿಲಲ್ಲಿ ಔಟಾದರೂ, ಇದರೊಂದಿಗೆ ಟೆಸ್ಟ್ನಲ್ಲಿ 5 ಸಾವಿರ ರನ್ ಪೂರೈಸಿದ ರಹಾನೆ, ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ನಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿದ ಮೊದಲಿಗರೆಂಬ ಹೆಗ್ಗಳಿಕೆ ಪಾತ್ರರಾದರು.
ಆಪತ್ತಿನಿಂದ ಪಾರು ಮಾಡ್ತು ಜಡ್ಡು ಮ್ಯಾಜಿಕಲ್ ಇನ್ನಿಂಗ್ಸ್..!
71 ರನ್ಗೆ ಟಾಪ್ 4 ಬ್ಯಾಟರ್ಗಳನ್ನು ಕಳೆದುಕೊಂಡಿದ್ದ ಟೀಮ್ ಇಂಡಿಯಾಗೆ ಆಕ್ಷರಶಃ ತಂಡಕ್ಕೆ ಬೂಸ್ಟ್ ನೀಡಿದ್ದೇ ಜಡೇಜಾರ ಮ್ಯಾಜಿಕಲ್ ಇನ್ನಿಂಗ್ಸ್. ಜಡೇಜಾ ಸಿಡಿಸಿದ್ದು ಜಸ್ಟ್ 48 ರನ್ಗಳೇ ಆಗಿದ್ದರೂ ಏಕದಿನ ಶೈಲಿಯಲ್ಲಿ ಬ್ಯಾಟ್ ಬೀಸಿದ ಪರಿ ಎದುರಾಳಿ ಆಸ್ಟ್ರೇಲಿಯಾದ ನಿದ್ದೆ ಗೆಡಿಸಿದ್ದು ಸುಳ್ಳಲ್ಲ.
ಸಂಕಷ್ಟದಲ್ಲಿದ್ದ ಭಾರತಕ್ಕೆ ದೇವರಾದ ಶಾರ್ದೂಲ್
ಜಡೇಜಾ ವಿಕೆಟ್ ಪತನದ ಬಳಿಕ ಭರತ್, ಆಸರೆಯಾಗೋ ನಿರೀಕ್ಷೆ ಹುಸಿಯಾಗಿತ್ತು. ಅಷ್ಟೇ ಅಲ್ಲ, ಟೀಮ್ ಇಂಡಿಯಾ ಫಾಲೋ ಆನ್ ಸುಳಿಗೆ ಸಿಲುಕುವ ಆತಂಕದಲ್ಲಿತ್ತು. ಆದ್ರೆ ಈ ವೇಳೆ ರಹಾನೆ ಜೊತೆಗೂಡಿ ಸಂಕಷ್ಟದಿಂದ ಪಾರು ಮಾಡಿದ್ದೇ ಶಾರ್ದೂಲ್ ಠಾಕೂರ್. 156 ನಿಮಿಷಗಳ ಕಾಲ ಕ್ರೀಸ್ನಲ್ಲಿ ನೆಲನಿಂತ ಶಾರ್ದೂಲ್ ಠಾಕೂರ್, ಎದುರಿಸಿದ 109 ಎಸೆತಗಳಿಂದ 51 ರನ್ಗಳಿಸಿ ತಂಡಕ್ಕೆ ಚೇತರಿಕೆ ನೀಡಿದರು. ಅಕಸ್ಮಾತ್ ಮಹತ್ವದ ಘಟ್ಟದಲ್ಲಿ ಶಾರ್ದೂಲ್ ಆಸರೆಯಾಗಿರದಿದ್ರೆ, ಟೀಮ್ ಇಂಡಿಯಾ ಫಾಲೋ ಆನ್ ಸುಳಿಗೆ ಸಿಲುಕಿ ಸೋಲಿನ ಅಂಚಿನಲ್ಲಿ ನರಳಾಡುತ್ತಿದ್ದಂತು ಸತ್ಯ.
ಒಟ್ನಲ್ಲಿ, ಆಸಿಸ್ನ ಬೆಂಕಿ ದಾಳಿಯ ಎದುರು ನೆಲೆಕಚ್ಚಿ ಆಡಿದ ಈ ಮೂವರು, ಫಸ್ಟ್ ಇನ್ನಿಂಗ್ಸ್ನಲ್ಲಿ ಟೀಮ್ ಇಂಡಿಯಾ ಪಾಲಿಗೆ ಆಪದ್ಭಾಂದವರಾಗಿದ್ದಂತೂ ಸತ್ಯ. ಆದ್ರೀಗ ಗೆಲುವು, ಸೋಲಿನ ಭವಿಷ್ಯ ಟೀಮ್ ಇಂಡಿಯಾ ಕೈಯಲ್ಲೇ ಇದ್ದು, ಗೆಲುವಿನ ಎಡೆಗೆ ಕರೆದೊಯ್ಯುತ್ತಾರಾ ಇಲ್ವಾ ಕಾದುನೋಡಬೇಕಷ್ಟೇ.
ವಿಶೇಷ ಸೂಚನೆ: ಕ್ರಿಕೆಟ್ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ‘ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಫಾಲೋ ಆನ್ ಭೀತಿಯಲ್ಲಿ ಆಸರೆಯಾದ ಹೀರೋಸ್
ಟೀಮ್ ಇಂಡಿಯಾದ ರೂಟ್ ಬದಲಿಸಿದ ರಹಾನೆ
ಜಡ್ಡು ಮ್ಯಾಜಿಕಲ್ ಇನ್ನಿಂಗ್ಸ್ನಿಂದ ಆಪತ್ತು ಪಾರು
WTC ಫೈನಲ್ನಲ್ಲಿ ಟೀಮ್ ಇಂಡಿಯಾದ ಖೇಲ್ ಖತಂ ಆಯ್ತು ಅಂತಾನೇ ಎಲ್ಲರೂ ಊಹಿಸಿದ್ದರು. ಇನ್ನೇನಿದ್ದರೂ ಫಾಲೋ ಆನ್ಗೆ ಸಿಲುಕಿ ಆಸಿಸ್ ಬಲೆಯಲ್ಲಿ ಒದ್ದಾಡಬೇಕು ಅಂತಾನೇ ಪಂಡಿತರು ವಿಶ್ಲೇಷಿಸಿದರು. ಆದ್ರೆ ಟೀಮ್ ಇಂಡಿಯಾದ ಈ ಮೂವರು ಆಟಗಾರರು, ಕ್ರಿಕೆಟ್ ವಿಶ್ಲೇಷಕರ ಭವಿಷ್ಯವನ್ನಷ್ಟೇ ಅಲ್ಲ. ಕಾಂಗರೂಗಳ ಲೆಕ್ಕಚಾರವನ್ನೂ ಉಲ್ಟಾ ಮಾಡಿ ಅಪದ್ಭಾಂದವರದರು.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಮದಗಜಗಳ ಹೋರಾಟ ನಡೆಯುತ್ತಿದೆ. ಏಟಿಗೆ ಏಟು ಎಂಬಂತೆ ತಿರುಗೇಟು, ತಂತ್ರಗಳಿಗೆ ಪ್ರತಿತಂತ್ರಗಳನ್ನ ಹೆಣೆಯುತ್ತ ನಾಲ್ಕನೇ ದಿನದಾಟಕ್ಕೆ ಹೆಜ್ಜೆ ಇಟ್ಟಿದೆ. ಆದ್ರೆ ಎಲ್ಲವೂ ಆಸ್ಟ್ರೇಲಿಯನ್ನರ ಲೆಕ್ಕಚಾರದಂತೆಯೇ ನಡೆದಿದ್ರೆ ಟೀಮ್ ಇಂಡಿಯಾ ಫಾಲೋ ಆನ್ಗೆ ಸಿಲುಕಿ ಇಂದೇ ಸೋಲಿನ ಮುಖಭಂಗ ಅನುಭವಿಸಬೇಕಿತ್ತು.
ಇದೆಲ್ಲವನ್ನೂ ದೂರ ಮಾಡಿದ್ದು ಈ ತ್ರಿಮೂರ್ತಿ ಅಪದ್ಬಾಂದವರು. ಅಂದ್ಹಾಗೆ ಆ ಅಪದ್ಭಾಂದವರು ಬೇಱರು ಅಲ್ಲ. ತಾಳ್ಮೆಯ ಸಾಕಾರಮೂರ್ತಿ ಅಜಿಂಕ್ಯಾ ರಹಾನೆ. ಆಲ್ರೌಂಡರ್ ಜಡೇಜಾ. ಲಾರ್ಡ್ ಶಾರ್ದೂಲ್. ಮೊದಲ ಇನ್ನಿಂಗ್ಸ್ನಲ್ಲಿ ಸ್ಮಿತ್-ಹೆಡ್ರ ಹೆಡ್ಡೇಕ್ ಬ್ಯಾಟಿಂಗ್ ಪರಿಣಾಮ ಆಸ್ಟ್ರೇಲಿಯಾ, 469 ರನ್ಗಳ ಬೃಹತ್ ಮೊತ್ತ ಪೇರಿಸಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿದ್ದ ಟೀಮ್ ಇಂಡಿಯಾ, ಅಗ್ರಗಣ್ಯ ಆಟಗಾರರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಕೇವಲ 71 ರನ್ಗೆ ರೋಹಿತ್, ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಟೀಮ್ ಇಂಡಿಯಾಗೆ ಆಕ್ಷರಶಃ ಬೆನ್ನಲುವಾಗಿ ನಿಂತಿದ್ದೇ ಈ ತ್ರಿಮೂರ್ತಿಗಳು.
ಟೀಮ್ ಇಂಡಿಯಾ ರೂಟ್ ಬದಲಿಸಿದ ರಹಾನೆ
ನಿಜಕ್ಕೂ ಫಾಲೋ ಆನ್ಗೆ ಸಿಲುಕಬೇಕಿದ್ದ ಟೀಮ್ ಇಂಡಿಯಾದ ರೂಟ್ ಬದಲಿಸಿದ್ದು ಕಮ್ಬ್ಯಾಕ್ ಸ್ಟಾರ್ ರಹಾನೆ, ಬರೋಬ್ಬರಿ 18 ತಿಂಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ನ ಅಂಗಳಕ್ಕಿಳಿದ ಈ ಮುಂಬೈಕರ್, ತಾಳ್ಮೆಯ ಆಟವಾಡಿದರು. ಅದರಲ್ಲೂ ಪ್ರತಿ ಎಸೆತವನ್ನ ಎಳೆದು ತೂಗಿ ಎದುರಿಸಿದ ಅಜಿಂಕ್ಯಾ, 5ನೇ ವಿಕೆಟ್ಗೆ ಜಡೇಜಾ ಜೊತೆ ಸೇರಿ 71 ರನ್ಗಳ ಜೊತೆಯಾಟವಾಡಿದ್ದರು.
ಜಡೇಜಾ ವಿಕೆಟ್ ಪತನದ ಬಳಿಕವೂ ಆಸ್ಟ್ರೇಲಿಯನ್ನರ ದಾಳಿಗೆ ಬಗ್ಗದ ರಹಾನೆ, 7ನೇ ವಿಕೆಟ್ಗೆ ಶಾರ್ದೂಲ್ ಜೊತೆ ಸೇರಿ 109 ರನ್ಗಳ ಅಮೋಘ ಇನ್ನಿಂಗ್ಸ್ ಕಟ್ಟಿದರು. ಇದು ನಿಜಕ್ಕೂ ಟೀಮ್ ಇಂಡಿಯಾದ ಹಣೆಬರಹವನ್ನೇ ಬದಲಿಸಿದ ಜೊತೆಯಾಟವಾಗಿತ್ತು. ಬರೋಬ್ಬರಿ 254 ನಿಮಿಷಗಳ ಕಾಲ ಕ್ರೀಸ್ನಲ್ಲಿ ನೆಲೆಯೂರಿದ್ದ ರಹಾನೆ, 129 ಎಸೆತಗಳಲ್ಲಿ 11 ಬೌಂಡರಿ, 1 ಸಿಕ್ಸರ್ ಒಳಗೊಂಡ 89 ರನ್ ಗಳಿಸಿ ಶತಕದ ಹೊಸ್ತಿಲಲ್ಲಿ ಔಟಾದರೂ, ಇದರೊಂದಿಗೆ ಟೆಸ್ಟ್ನಲ್ಲಿ 5 ಸಾವಿರ ರನ್ ಪೂರೈಸಿದ ರಹಾನೆ, ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ನಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿದ ಮೊದಲಿಗರೆಂಬ ಹೆಗ್ಗಳಿಕೆ ಪಾತ್ರರಾದರು.
ಆಪತ್ತಿನಿಂದ ಪಾರು ಮಾಡ್ತು ಜಡ್ಡು ಮ್ಯಾಜಿಕಲ್ ಇನ್ನಿಂಗ್ಸ್..!
71 ರನ್ಗೆ ಟಾಪ್ 4 ಬ್ಯಾಟರ್ಗಳನ್ನು ಕಳೆದುಕೊಂಡಿದ್ದ ಟೀಮ್ ಇಂಡಿಯಾಗೆ ಆಕ್ಷರಶಃ ತಂಡಕ್ಕೆ ಬೂಸ್ಟ್ ನೀಡಿದ್ದೇ ಜಡೇಜಾರ ಮ್ಯಾಜಿಕಲ್ ಇನ್ನಿಂಗ್ಸ್. ಜಡೇಜಾ ಸಿಡಿಸಿದ್ದು ಜಸ್ಟ್ 48 ರನ್ಗಳೇ ಆಗಿದ್ದರೂ ಏಕದಿನ ಶೈಲಿಯಲ್ಲಿ ಬ್ಯಾಟ್ ಬೀಸಿದ ಪರಿ ಎದುರಾಳಿ ಆಸ್ಟ್ರೇಲಿಯಾದ ನಿದ್ದೆ ಗೆಡಿಸಿದ್ದು ಸುಳ್ಳಲ್ಲ.
ಸಂಕಷ್ಟದಲ್ಲಿದ್ದ ಭಾರತಕ್ಕೆ ದೇವರಾದ ಶಾರ್ದೂಲ್
ಜಡೇಜಾ ವಿಕೆಟ್ ಪತನದ ಬಳಿಕ ಭರತ್, ಆಸರೆಯಾಗೋ ನಿರೀಕ್ಷೆ ಹುಸಿಯಾಗಿತ್ತು. ಅಷ್ಟೇ ಅಲ್ಲ, ಟೀಮ್ ಇಂಡಿಯಾ ಫಾಲೋ ಆನ್ ಸುಳಿಗೆ ಸಿಲುಕುವ ಆತಂಕದಲ್ಲಿತ್ತು. ಆದ್ರೆ ಈ ವೇಳೆ ರಹಾನೆ ಜೊತೆಗೂಡಿ ಸಂಕಷ್ಟದಿಂದ ಪಾರು ಮಾಡಿದ್ದೇ ಶಾರ್ದೂಲ್ ಠಾಕೂರ್. 156 ನಿಮಿಷಗಳ ಕಾಲ ಕ್ರೀಸ್ನಲ್ಲಿ ನೆಲನಿಂತ ಶಾರ್ದೂಲ್ ಠಾಕೂರ್, ಎದುರಿಸಿದ 109 ಎಸೆತಗಳಿಂದ 51 ರನ್ಗಳಿಸಿ ತಂಡಕ್ಕೆ ಚೇತರಿಕೆ ನೀಡಿದರು. ಅಕಸ್ಮಾತ್ ಮಹತ್ವದ ಘಟ್ಟದಲ್ಲಿ ಶಾರ್ದೂಲ್ ಆಸರೆಯಾಗಿರದಿದ್ರೆ, ಟೀಮ್ ಇಂಡಿಯಾ ಫಾಲೋ ಆನ್ ಸುಳಿಗೆ ಸಿಲುಕಿ ಸೋಲಿನ ಅಂಚಿನಲ್ಲಿ ನರಳಾಡುತ್ತಿದ್ದಂತು ಸತ್ಯ.
ಒಟ್ನಲ್ಲಿ, ಆಸಿಸ್ನ ಬೆಂಕಿ ದಾಳಿಯ ಎದುರು ನೆಲೆಕಚ್ಚಿ ಆಡಿದ ಈ ಮೂವರು, ಫಸ್ಟ್ ಇನ್ನಿಂಗ್ಸ್ನಲ್ಲಿ ಟೀಮ್ ಇಂಡಿಯಾ ಪಾಲಿಗೆ ಆಪದ್ಭಾಂದವರಾಗಿದ್ದಂತೂ ಸತ್ಯ. ಆದ್ರೀಗ ಗೆಲುವು, ಸೋಲಿನ ಭವಿಷ್ಯ ಟೀಮ್ ಇಂಡಿಯಾ ಕೈಯಲ್ಲೇ ಇದ್ದು, ಗೆಲುವಿನ ಎಡೆಗೆ ಕರೆದೊಯ್ಯುತ್ತಾರಾ ಇಲ್ವಾ ಕಾದುನೋಡಬೇಕಷ್ಟೇ.
ವಿಶೇಷ ಸೂಚನೆ: ಕ್ರಿಕೆಟ್ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ‘ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್