newsfirstkannada.com

ವಿಮಾನದಲ್ಲಿ ಗಗನಸಖಿ ಮೈ ಮೇಲೆ ಕೈ ಹಾಕಿದ ಭೂಪ; ಮುಂದೇನಾಯ್ತು?

Share :

21-08-2023

    ವಿಮಾನದಲ್ಲಿ ಗಗನಸಖಿಗೆ ನಿನ್ನ ರೇಟ್ ಎಷ್ಟು ಎಂದು ಕೇಳಿದ ಆರೋಪ

    ನೂರು ಡಾಲರ್ ಕೊಟ್ರೆ ಸಾಕಾ? ಇನ್ನು ಬೇಕಾ? ಎಂದ ಭೂಪನಿಗೆ ಏನಾಯ್ತು?

    ಸೀಟ್ ಬಳಿ ಗಗನಸಖಿ ನಡೆದು ಹೋಗುವಾಗ ಮೈಮೇಲೆ ಕೈ ಹಾಕಿದ ಕಿಲಾಡಿ

ಬೆಂಗಳೂರು: ವಿಮಾನದಲ್ಲಿ ಗಗನಸಖಿಗೆ ಲೈಂಗಿಕ ಕಿರುಕುಳ ಕೊಟ್ಟ ಪ್ರಕರಣ ದೇವನಹಳ್ಳಿ ಇಂಟರ್‌ ನ್ಯಾಷನಲ್‌ ಏರ್‌ಪೋರ್ಟ್‌ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಮಾಲ್ಡೀವ್ಸ್‌ನಿಂದ ಬೆಂಗಳೂರಿಗೆ ಬರ್ತಿದ್ದ ವಿಮಾನದಲ್ಲಿ ಈ ಘಟನೆ ನಡೆದಿದ್ದು, ಗಗನಸಖಿಗೆ ಲೈಂಗಿಕ ಕಿರುಕುಳ ನೀಡಿದ್ದ ವಿದೇಶಿ ಪ್ರಜೆಯನ್ನು ಅರೆಸ್ಟ್ ಮಾಡಲಾಗಿದೆ.

ಬ್ಯುಸಿನೆಸ್ ವೀಸಾದಲ್ಲಿ ಭಾರತಕ್ಕೆ ಪ್ರಯಾಣ ಮಾಡುತ್ತಿದ್ದ ಆರೋಪಿ ದುರ್ವರ್ತನೆ ತೋರಿದ್ದಾನೆ. ಹಾರುವ ವಿಮಾನದಲ್ಲಿ ಗಗನಸಖಿಗೆ ನಿನ್ನ ರೇಟ್ ಎಷ್ಟು? ಎಷ್ಟು ಡಾಲರ್ ಕೊಟ್ರೆ ನೀನು ಬರ್ತಿಯಾ ಎಂದು ಕೇಳಿದ್ದಾನೆ. ನೂರು ಡಾಲರ್ ಕೊಟ್ರೆ ಸಾಕಾ ಇನ್ನು ಬೇಕಾ ಎಂದೆಲ್ಲಾ ಕೇಳಿದ್ದಾನೆ ಎಂದು ಆರೋಪಿಸಲಾಗಿದೆ. ಅಕ್ರಂ ಅಹ್ಮದ್ ಎಂಬ ಆರೋಪಿಯನ್ನ ದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: Video: ಕದ್ದ ಜೆಸಿಬಿಯಲ್ಲೇ ATM ಎಗರಿಸಲು ಪ್ಲಾನ್​.. ಹೊರ ರಾಜ್ಯದ ನಾಲ್ವರು ಕಳ್ಳರು ಅರೆಸ್ಟ್​

ಮಾಲ್ಡೀವ್ಸ್‌ನಿಂದ ಬೆಂಗಳೂರಿಗೆ ಬರ್ತಿದ್ದ ಈ ವ್ಯಕ್ತಿ ವಿಮಾನದಲ್ಲಿ ಅನುಚಿತವಾಗಿ ವರ್ತಿಸಿದ್ದಾನೆ. ಕುಳಿತಿದ್ದ ಸೀಟ್ ಬಳಿ ಗಗನಸಖಿ ನಡೆದು ಹೋಗುವಾಗ ಮೈಮೇಲೆ ಕೈ ಹಾಕಿದ ಎಂದು ಆರೋಪಿಸಲಾಗಿದೆ. ಗಗನಸಖಿ ದೂರಿನ ಅನ್ವಯ ದೇವನಹಳ್ಳಿ ಇಂಟರ್‌ ನ್ಯಾಷನಲ್‌ ಏರ್‌ಪೋರ್ಟ್‌ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ವಿಮಾನದಲ್ಲಿ ಗಗನಸಖಿ ಮೈ ಮೇಲೆ ಕೈ ಹಾಕಿದ ಭೂಪ; ಮುಂದೇನಾಯ್ತು?

https://newsfirstlive.com/wp-content/uploads/2023/08/Bangalore-Airport-Arrest.jpg

    ವಿಮಾನದಲ್ಲಿ ಗಗನಸಖಿಗೆ ನಿನ್ನ ರೇಟ್ ಎಷ್ಟು ಎಂದು ಕೇಳಿದ ಆರೋಪ

    ನೂರು ಡಾಲರ್ ಕೊಟ್ರೆ ಸಾಕಾ? ಇನ್ನು ಬೇಕಾ? ಎಂದ ಭೂಪನಿಗೆ ಏನಾಯ್ತು?

    ಸೀಟ್ ಬಳಿ ಗಗನಸಖಿ ನಡೆದು ಹೋಗುವಾಗ ಮೈಮೇಲೆ ಕೈ ಹಾಕಿದ ಕಿಲಾಡಿ

ಬೆಂಗಳೂರು: ವಿಮಾನದಲ್ಲಿ ಗಗನಸಖಿಗೆ ಲೈಂಗಿಕ ಕಿರುಕುಳ ಕೊಟ್ಟ ಪ್ರಕರಣ ದೇವನಹಳ್ಳಿ ಇಂಟರ್‌ ನ್ಯಾಷನಲ್‌ ಏರ್‌ಪೋರ್ಟ್‌ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಮಾಲ್ಡೀವ್ಸ್‌ನಿಂದ ಬೆಂಗಳೂರಿಗೆ ಬರ್ತಿದ್ದ ವಿಮಾನದಲ್ಲಿ ಈ ಘಟನೆ ನಡೆದಿದ್ದು, ಗಗನಸಖಿಗೆ ಲೈಂಗಿಕ ಕಿರುಕುಳ ನೀಡಿದ್ದ ವಿದೇಶಿ ಪ್ರಜೆಯನ್ನು ಅರೆಸ್ಟ್ ಮಾಡಲಾಗಿದೆ.

ಬ್ಯುಸಿನೆಸ್ ವೀಸಾದಲ್ಲಿ ಭಾರತಕ್ಕೆ ಪ್ರಯಾಣ ಮಾಡುತ್ತಿದ್ದ ಆರೋಪಿ ದುರ್ವರ್ತನೆ ತೋರಿದ್ದಾನೆ. ಹಾರುವ ವಿಮಾನದಲ್ಲಿ ಗಗನಸಖಿಗೆ ನಿನ್ನ ರೇಟ್ ಎಷ್ಟು? ಎಷ್ಟು ಡಾಲರ್ ಕೊಟ್ರೆ ನೀನು ಬರ್ತಿಯಾ ಎಂದು ಕೇಳಿದ್ದಾನೆ. ನೂರು ಡಾಲರ್ ಕೊಟ್ರೆ ಸಾಕಾ ಇನ್ನು ಬೇಕಾ ಎಂದೆಲ್ಲಾ ಕೇಳಿದ್ದಾನೆ ಎಂದು ಆರೋಪಿಸಲಾಗಿದೆ. ಅಕ್ರಂ ಅಹ್ಮದ್ ಎಂಬ ಆರೋಪಿಯನ್ನ ದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: Video: ಕದ್ದ ಜೆಸಿಬಿಯಲ್ಲೇ ATM ಎಗರಿಸಲು ಪ್ಲಾನ್​.. ಹೊರ ರಾಜ್ಯದ ನಾಲ್ವರು ಕಳ್ಳರು ಅರೆಸ್ಟ್​

ಮಾಲ್ಡೀವ್ಸ್‌ನಿಂದ ಬೆಂಗಳೂರಿಗೆ ಬರ್ತಿದ್ದ ಈ ವ್ಯಕ್ತಿ ವಿಮಾನದಲ್ಲಿ ಅನುಚಿತವಾಗಿ ವರ್ತಿಸಿದ್ದಾನೆ. ಕುಳಿತಿದ್ದ ಸೀಟ್ ಬಳಿ ಗಗನಸಖಿ ನಡೆದು ಹೋಗುವಾಗ ಮೈಮೇಲೆ ಕೈ ಹಾಕಿದ ಎಂದು ಆರೋಪಿಸಲಾಗಿದೆ. ಗಗನಸಖಿ ದೂರಿನ ಅನ್ವಯ ದೇವನಹಳ್ಳಿ ಇಂಟರ್‌ ನ್ಯಾಷನಲ್‌ ಏರ್‌ಪೋರ್ಟ್‌ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Load More