ದೇಶಾದ್ಯಂತ ಸುದ್ದಿಯಾಗಿದ್ದ ಗಗನಸಖಿ ಗೀತಿಕಾ ಶರ್ಮಾ ಪ್ರಕರಣ
ಆರೋಪಿ ಗೋಪಾಲ್ ಕಾಂಡ ರಾಜಕೀಯ ಹಿನ್ನೆಲೆ ಏನು..?
ನಿರ್ದೋಷಿ ಆದ ಗೋಪಾಲ್ ವಿರುದ್ಧ ಎಷ್ಟು ಕೇಸ್ಗಳಿವೆ
ಗಗನಸಖಿ ಗೀತಿಕಾ ಶರ್ಮಾ ಆತ್ಮಹತ್ಯೆ ಪ್ರಕರಣದಲ್ಲಿ ಹರಿಯಾಣದ ಮಾಜಿ ಸಚಿವ ಗೋಪಾಲ್ ಕಾಂಡ ನಿರ್ದೋಷಿ ಎಂದು ದೆಹಲಿ ಕೋರ್ಟ್ ತೀರ್ಪು ನೀಡಿದೆ.
ಗೋಪಾಲ ಕಾಂಡ ಹಾಗೂ ಅವರ ಸಹಾಯಕ ಅರುಣ್ ಚಂದಾ ಮೇಲೆ ದಾಖಲಾಗಿದ್ದ ಆತ್ಮಹತ್ಯೆಗೆ ಪ್ರಚೋದನೆ, ಅಪರಾಧಕ್ಕೆ ಪಿತೂರಿ, ಸಾಕ್ಷ್ಯಗಳ ನಾಶ ಪ್ರಕರಣವನ್ನು ವಜಾ ಮಾಡಿರುವ ವಿಶೇಷ ಕೋರ್ಟ್ನ ನ್ಯಾಯಾಧೀಶ ವಿಕಾಶ್ ಧುಲ್ಲ್, ‘ತಪ್ಪಿತಸ್ಥರಲ್ಲ’ ಎಂದು ಆದೇಶ ಹೊರಡಿಸಿದ್ದಾರೆ.
ಯಾರು ಈ ಗಗನಸಖಿ..?
ಗೀತಿಕಾ ಶರ್ಮಾ, ಗೋಪಾಲ್ ಕಂದಾ ಒಡೆತನದ MLDR ಏರ್ಲೈನ್ಸ್ನ ಮಾಜಿ ಗಗನಸಖಿ ಆಗಿದ್ದರು. ನಂತರ ಇವರನ್ನು ಕಂದಾಗೆ ಸೇರಿದ ಸಂಸ್ಥೆಯ ಡೈರೆಕ್ಟರ್ ಆಗಿ ನಿಯುಕ್ತಿಗೊಳಿಸಲಾಗಿತ್ತು. ಆಗಸ್ಟ್ 5, 2012ರಂದು ದೆಹಲಿಯ ಅಶೋಕ್ ವಿಹಾರ್ನಲ್ಲಿರುವ ನಿವಾಸದಲ್ಲಿ ಗೀತಿಕಾ ಮೃತದೇಹ ಪತ್ತೆಯಾಗಿತ್ತು.
ಡೆತ್ನೋಟ್ ಬರೆದಿಟ್ಟು ಆಗಸ್ಟ್ 4 ರಂದು ಗೀತಿಕಾ ಆತ್ಮಹತ್ಯೆಗೆ ಶರಣಾಗಿದ್ದರು. ನನ್ನ ಸಾವಿಗೆ ಗೋಪಾಲ್ ಕಂಡಾ ಮತ್ತು ಅರುಣ್ ಚಂದಾ ಅವರೇ ಕಾರಣ ಎಂದು ಡೆತ್ನೋಟ್ನಲ್ಲಿ ಉಲ್ಲೇಖ ಮಾಡಿದ್ದರು. ಮಗಳು ಆತ್ಮಹತ್ಯೆ ಮಾಡಿಕೊಂಡ 6 ತಿಂಗಳಲ್ಲೇ ಗೀತಿಕಾ ಶರ್ಮಾ ಅವರ ತಾಯಿ ಕೂಡ ಆತ್ಮಹತ್ಯೆಗೆ ಶರಣಾಗಿದ್ದರು. ಇಷ್ಟಕ್ಕೆಲ್ಲ ಕಾರಣ, ಪೊಲೀಸ್ ಅಧಿಕಾರಿಗಳ ಕಿರುಕುಳ ಎಂದು ಕುಟುಂಬಸ್ಥರು ಆರೋಪಿಸಿದ್ದರು.
ಯಾರು ಈ ಗೋಪಾಲ್ ಕಂಡಾ..?
ಗೋಪಾಲ್ ಕಾಂಡ (46) ಪ್ರಭಾವಶಾಲಿ ರಾಜಕಾರಣಿ ಮತ್ತು ಉದ್ಯಮಿಯಾಗಿದ್ದಾರೆ. ಹರಿಯಾಣದ ಭುಪಿಂದರ್ ಸಿಂಗ್ ಹೂಡಾ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಮಂತ್ರಿಯಾಗಿದ್ದರು. ಅಂದು ಸಚಿವರಾಗಿದ್ದ ಸಂದರ್ಭದಲ್ಲಿ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಒತ್ತಾಯಪೂರ್ವಕವಾಗಿ ರಾಜೀನಾಮೆ ನಿಡಬೇಕಾಗಿ ಬಂತು.
ಸದ್ಯ ಇವರು, ‘ಹರಿಯಾಣ ಲೋಕಹಿತ್ ಪಕ್ಷ’ದ (Haryana Lokhit Party) ನಾಯಕರಾಗಿದ್ದು ಸಿರ್ಜಾ ವಿಧಾನಸಭೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. 2019ರಲ್ಲಿ ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಬೇಷರತ್ತು ಬೆಂಬಲ ಸೂಚಿಸಿದ್ದರು. ಇತ್ತೀಚೆಗೆ ಎನ್ಡಿಎ ಒಕ್ಕೂಟಗಳು ಸಭೆ ನಡೆಸಿದ್ದವು. ಇವರನ್ನೂ ಕೂಡ ಸಭೆಗೆ ಆಹ್ವಾನ ಮಾಡಲಾಗಿತ್ತು.
ಗೋಪಾಲ್ ವಿರುದ್ಧ ಯಾವೆಲ್ಲ ಕೇಸ್ಗಳು?
ಗೋಪಾಲ್ ಕಾಂಡ ಹಲವು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಐಪಿಸಿ (Indian Penal Code) ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ), 506 (ಅಪರಾಧ ಮಾಡುವ ಬೆದರಿಕೆ), 201 (ಸಾಕ್ಷ್ಯ ನಾಶ), 120B (ಕ್ರಿಮಿನಲ್ ಪಿತೂರಿ) ಮತ್ತು 466 (ಪೋರ್ಜರಿ) ಕೇಸ್ಗಳು ದಾಖಲಾಗಿವೆ. ಮಾತ್ರವಲ್ಲ, ಅತ್ಯಾಚಾರ (ಐಪಿಸಿ 376) ಮತ್ತು ಅನ್ನ್ಯಾಚುರಲ್ ಸೆಕ್ಸ್ (ಐಪಿಸಿ 377) ಕೇಸ್ಗಳು ಕೋರ್ಟ್ನಲ್ಲಿ ವಿಚಾರಣೆ ಹಂತದಲ್ಲಿವೆ.
ತೀರ್ಪು ಪ್ರಕಟ ಆಗ್ತಿದ್ದಂತೆಯೇ ಖಾಸಗಿ ಮಾಧ್ಯಮವೊಂದಕ್ಕೆ ಮಾತನಾಡಿರುವ ಗೋಪಾಲ್ ಕಾಂಡ, ನನ್ನ ವಿರುದ್ಧ ದಾಖಲಾಗಿದ್ದ ಪ್ರಕರಣಗಳು ರಾಜಕೀಯ ಪ್ರೇರಿತ ಮತ್ತು ಪಿತೂರಿ ಆಗಿತ್ತು. ನನ್ನ ಮೇಲಿನ ಆರೋಪಕ್ಕೆ ಯಾವುದೇ ದಾಖಲೆಗಳು ಕೂಡ ಇಲ್ಲ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ದೇಶಾದ್ಯಂತ ಸುದ್ದಿಯಾಗಿದ್ದ ಗಗನಸಖಿ ಗೀತಿಕಾ ಶರ್ಮಾ ಪ್ರಕರಣ
ಆರೋಪಿ ಗೋಪಾಲ್ ಕಾಂಡ ರಾಜಕೀಯ ಹಿನ್ನೆಲೆ ಏನು..?
ನಿರ್ದೋಷಿ ಆದ ಗೋಪಾಲ್ ವಿರುದ್ಧ ಎಷ್ಟು ಕೇಸ್ಗಳಿವೆ
ಗಗನಸಖಿ ಗೀತಿಕಾ ಶರ್ಮಾ ಆತ್ಮಹತ್ಯೆ ಪ್ರಕರಣದಲ್ಲಿ ಹರಿಯಾಣದ ಮಾಜಿ ಸಚಿವ ಗೋಪಾಲ್ ಕಾಂಡ ನಿರ್ದೋಷಿ ಎಂದು ದೆಹಲಿ ಕೋರ್ಟ್ ತೀರ್ಪು ನೀಡಿದೆ.
ಗೋಪಾಲ ಕಾಂಡ ಹಾಗೂ ಅವರ ಸಹಾಯಕ ಅರುಣ್ ಚಂದಾ ಮೇಲೆ ದಾಖಲಾಗಿದ್ದ ಆತ್ಮಹತ್ಯೆಗೆ ಪ್ರಚೋದನೆ, ಅಪರಾಧಕ್ಕೆ ಪಿತೂರಿ, ಸಾಕ್ಷ್ಯಗಳ ನಾಶ ಪ್ರಕರಣವನ್ನು ವಜಾ ಮಾಡಿರುವ ವಿಶೇಷ ಕೋರ್ಟ್ನ ನ್ಯಾಯಾಧೀಶ ವಿಕಾಶ್ ಧುಲ್ಲ್, ‘ತಪ್ಪಿತಸ್ಥರಲ್ಲ’ ಎಂದು ಆದೇಶ ಹೊರಡಿಸಿದ್ದಾರೆ.
ಯಾರು ಈ ಗಗನಸಖಿ..?
ಗೀತಿಕಾ ಶರ್ಮಾ, ಗೋಪಾಲ್ ಕಂದಾ ಒಡೆತನದ MLDR ಏರ್ಲೈನ್ಸ್ನ ಮಾಜಿ ಗಗನಸಖಿ ಆಗಿದ್ದರು. ನಂತರ ಇವರನ್ನು ಕಂದಾಗೆ ಸೇರಿದ ಸಂಸ್ಥೆಯ ಡೈರೆಕ್ಟರ್ ಆಗಿ ನಿಯುಕ್ತಿಗೊಳಿಸಲಾಗಿತ್ತು. ಆಗಸ್ಟ್ 5, 2012ರಂದು ದೆಹಲಿಯ ಅಶೋಕ್ ವಿಹಾರ್ನಲ್ಲಿರುವ ನಿವಾಸದಲ್ಲಿ ಗೀತಿಕಾ ಮೃತದೇಹ ಪತ್ತೆಯಾಗಿತ್ತು.
ಡೆತ್ನೋಟ್ ಬರೆದಿಟ್ಟು ಆಗಸ್ಟ್ 4 ರಂದು ಗೀತಿಕಾ ಆತ್ಮಹತ್ಯೆಗೆ ಶರಣಾಗಿದ್ದರು. ನನ್ನ ಸಾವಿಗೆ ಗೋಪಾಲ್ ಕಂಡಾ ಮತ್ತು ಅರುಣ್ ಚಂದಾ ಅವರೇ ಕಾರಣ ಎಂದು ಡೆತ್ನೋಟ್ನಲ್ಲಿ ಉಲ್ಲೇಖ ಮಾಡಿದ್ದರು. ಮಗಳು ಆತ್ಮಹತ್ಯೆ ಮಾಡಿಕೊಂಡ 6 ತಿಂಗಳಲ್ಲೇ ಗೀತಿಕಾ ಶರ್ಮಾ ಅವರ ತಾಯಿ ಕೂಡ ಆತ್ಮಹತ್ಯೆಗೆ ಶರಣಾಗಿದ್ದರು. ಇಷ್ಟಕ್ಕೆಲ್ಲ ಕಾರಣ, ಪೊಲೀಸ್ ಅಧಿಕಾರಿಗಳ ಕಿರುಕುಳ ಎಂದು ಕುಟುಂಬಸ್ಥರು ಆರೋಪಿಸಿದ್ದರು.
ಯಾರು ಈ ಗೋಪಾಲ್ ಕಂಡಾ..?
ಗೋಪಾಲ್ ಕಾಂಡ (46) ಪ್ರಭಾವಶಾಲಿ ರಾಜಕಾರಣಿ ಮತ್ತು ಉದ್ಯಮಿಯಾಗಿದ್ದಾರೆ. ಹರಿಯಾಣದ ಭುಪಿಂದರ್ ಸಿಂಗ್ ಹೂಡಾ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಮಂತ್ರಿಯಾಗಿದ್ದರು. ಅಂದು ಸಚಿವರಾಗಿದ್ದ ಸಂದರ್ಭದಲ್ಲಿ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಒತ್ತಾಯಪೂರ್ವಕವಾಗಿ ರಾಜೀನಾಮೆ ನಿಡಬೇಕಾಗಿ ಬಂತು.
ಸದ್ಯ ಇವರು, ‘ಹರಿಯಾಣ ಲೋಕಹಿತ್ ಪಕ್ಷ’ದ (Haryana Lokhit Party) ನಾಯಕರಾಗಿದ್ದು ಸಿರ್ಜಾ ವಿಧಾನಸಭೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. 2019ರಲ್ಲಿ ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಬೇಷರತ್ತು ಬೆಂಬಲ ಸೂಚಿಸಿದ್ದರು. ಇತ್ತೀಚೆಗೆ ಎನ್ಡಿಎ ಒಕ್ಕೂಟಗಳು ಸಭೆ ನಡೆಸಿದ್ದವು. ಇವರನ್ನೂ ಕೂಡ ಸಭೆಗೆ ಆಹ್ವಾನ ಮಾಡಲಾಗಿತ್ತು.
ಗೋಪಾಲ್ ವಿರುದ್ಧ ಯಾವೆಲ್ಲ ಕೇಸ್ಗಳು?
ಗೋಪಾಲ್ ಕಾಂಡ ಹಲವು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಐಪಿಸಿ (Indian Penal Code) ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ), 506 (ಅಪರಾಧ ಮಾಡುವ ಬೆದರಿಕೆ), 201 (ಸಾಕ್ಷ್ಯ ನಾಶ), 120B (ಕ್ರಿಮಿನಲ್ ಪಿತೂರಿ) ಮತ್ತು 466 (ಪೋರ್ಜರಿ) ಕೇಸ್ಗಳು ದಾಖಲಾಗಿವೆ. ಮಾತ್ರವಲ್ಲ, ಅತ್ಯಾಚಾರ (ಐಪಿಸಿ 376) ಮತ್ತು ಅನ್ನ್ಯಾಚುರಲ್ ಸೆಕ್ಸ್ (ಐಪಿಸಿ 377) ಕೇಸ್ಗಳು ಕೋರ್ಟ್ನಲ್ಲಿ ವಿಚಾರಣೆ ಹಂತದಲ್ಲಿವೆ.
ತೀರ್ಪು ಪ್ರಕಟ ಆಗ್ತಿದ್ದಂತೆಯೇ ಖಾಸಗಿ ಮಾಧ್ಯಮವೊಂದಕ್ಕೆ ಮಾತನಾಡಿರುವ ಗೋಪಾಲ್ ಕಾಂಡ, ನನ್ನ ವಿರುದ್ಧ ದಾಖಲಾಗಿದ್ದ ಪ್ರಕರಣಗಳು ರಾಜಕೀಯ ಪ್ರೇರಿತ ಮತ್ತು ಪಿತೂರಿ ಆಗಿತ್ತು. ನನ್ನ ಮೇಲಿನ ಆರೋಪಕ್ಕೆ ಯಾವುದೇ ದಾಖಲೆಗಳು ಕೂಡ ಇಲ್ಲ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ