Advertisment

ಬಡವರಿಗೆ ಅನಿರೀಕ್ಷಿತ ಆಘಾತ, ರೇಷನ್ ಅಂಗಡಿ ಬಳಿ ಗೋಳಾಟ.. ತುಮಕೂರಲ್ಲಿ 20 ಸಾವಿರ BPL ಕಾರ್ಡ್​ ರದ್ದು..!

author-image
Bheemappa
Updated On
ಅನ್ನಭಾಗ್ಯ & ಗೃಹಲಕ್ಷ್ಮಿ ಸ್ಕೀಮ್​​; ಮಹಿಳೆಯರಿಗೆ ಬಿಗ್​ ಶಾಕ್​ ಕೊಟ್ಟ ಕಾಂಗ್ರೆಸ್​​ ಸರ್ಕಾರ
Advertisment
  • ರಾಮನಗರದಲ್ಲಿ ಅನರ್ಹ ಪಡಿತರದಾರರ ವಿರುದ್ಧ ಅಧಿಕಾರಿಗಳ ಛಾಟಿ
  • ತುಮಕೂರಲ್ಲಿ 20 ಸಾವಿರಕ್ಕೂ ಅಧಿಕ, ವಿಜಯಪುರದಲ್ಲಿ ಕಾರ್ಡ್​ ರದ್ದು
  • ಕಾರ್ಡ್​ ರದ್ದು ಕುರಿತು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿರುವುದು ಏನು?

ಬಿಲೋ ಪಾವರ್ಟಿ ಲೈನ್​​ ಬಡತನ ರೇಖೆಗಿಂತ ಕೆಳಗಿರುವ ಸಮುದಾಯ. ಇದೇ BPL ಕಾರ್ಡ್ ನೆಚ್ಚಿಕೊಂಡಿದ್ದ ಜನ ಸದ್ಯ ಕಂಗಾಲಾಗಿದ್ದಾರೆ. ಬಿಪಿಎಲ್​ದಾರರ ಮೇಲಿನ ಈ ಅನಿರೀಕ್ಷಿತ ಆತಂಕ ರೇಷನ್ ಅಂಗಡಿಗಳ ಬಳಿ ಗೋಳಾಟ ಕಾಣಿಸುತ್ತಿದೆ. ಜನರ ಕಣ್ಣೀರು ರಾಜಕೀಯ ದಾಳವಾಗಿದೆ.

Advertisment

ಬಿಪಿಎಲ್ ಅಂದರೆ ಬಡತನ ರೇಖೆಗಿಂತ ಕೆಳಗಿರುವ ಸಮುದಾಯಕ್ಕೆ ನೀಡುವ ಕಾರ್ಡ್ ಆಗಿದೆ. ಇದೇ BPL ಕಾರ್ಡ್ ನೆಚ್ಚಿಕೊಂಡಿದ್ದ ಜನ ಸದ್ಯ ಕಂಗಾಲಾಗಿದ್ದಾರೆ. ಬಿಪಿಎಲ್​ದಾರರ ಮೇಲಿನ ಈ ಅನಿರೀಕ್ಷಿತ ಆತಂಕ ರೇಷನ್ ಅಂಗಡಿಗಳ ಬಳಿ ಗೋಳಾಟ ಕಾಣಿಸುತ್ತಿದೆ.

ಇದನ್ನೂ ಓದಿ: ಮತ್ತೆರಡು ಫೋಟೋ ರಿಟ್ರೀವ್.. ದರ್ಶನ್​​ಗೆ ಹೆಚ್ಚುವರಿ ಚಾರ್ಜ್​ಶೀಟ್ ಆಘಾತ..!

publive-image

ರಾಮನಗರದಲ್ಲಿ ಅನರ್ಹ ಪಡಿತರರ ವಿರುದ್ಧ ಅಧಿಕಾರಿಗಳ ಛಾಟಿ

ಇತ್ತೀಚಿಗೆ ರಾಜ್ಯ ಸರ್ಕಾರ ಅನರ್ಹ ಫಲಾನುಭವಿಗಳ ಬಿಪಿಎಲ್ ಕಾರ್ಡ್​ಗಳನ್ನ ರದ್ದು ಮಾಡಲು ಮುಂದಾಗಿದೆ. ರಾಮನಗರ ಜಿಲ್ಲೆಯಲ್ಲಿ ಅನರ್ಹ ಪಡಿತರದಾರರ ವಿರುದ್ಧ ಅಧಿಕಾರಿಗಳ ಛಾಟಿ ಮುಂದುವರೆದಿದ್ದು ಜಿಲ್ಲೆಯಲ್ಲಿ ಒಟ್ಟು 11,094 ಮಂದಿ ಬಿಪಿಎಲ್‌ಕಾರ್ಡ್​ಗಳು ರದ್ದಾಗಿವೆ.

Advertisment

ತುಮಕೂರು, ವಿಜಯಪುರಕ್ಕೂ ತಟ್ಟಿದ ಬಿಪಿಎಲ್ ಬಿಸಿ

ತುಮಕೂರಲ್ಲಿ 20 ಸಾವಿರಕ್ಕೂ ಅಧಿಕ ಬಿಪಿಎಲ್ ಕಾರ್ಡ್​ಗಳು ರದ್ದಾಗಿದ್ದು​ ಇತ್ತ ವಿಜಯಪುರ ಜಿಲ್ಲೆಗೂ ಬಿಪಿಎಲ್​ ಬಿಸಿ ಮುಟ್ಟಿ, ಒಟ್ಟು 4 ಸಾವಿರದ 359 ರೇಷನ್ ಕಾರ್ಡ್​ಗಳು ರದ್ದಾಗಿದೆ. ಇದಕ್ಕೆಲ್ಲಾ ನಾನೇ ಹೊಣೆ ಅಂತಾ ಆಹಾರ ಸಚಿವ ಕೆ.ಹೆಚ್​.ಮುನಿಯಪ್ಪ ಕೂಡ ಒಪ್ಪಿಕೊಂಡಿದ್ದಾರೆ. ಅದಾಗಿಯೂ ವಿಪಕ್ಷಗಳ ಟೀಕೆ ಮುಂದುವರೆದಿದೆ.

ಬಿಪಿಎಲ್ ಕಾರ್ಡ್​ ರದ್ದುಪಡಿಸಿರೋದ್ರಲ್ಲಿ ಬಡವರು ಇದ್ರೆ ಮುಖ್ಯಮಂತ್ರಿಗಳು ರಾಜೀನಾಮೆ ಕೊಡ್ತೀರಾ ಎಂದು ಚಿಕ್ಕಮಗಳೂರಿನಲ್ಲಿ ಮಾಜಿ ಸಚಿವ ಸಿ.ಟಿ.ರವಿ ಪ್ರಶ್ನೆ ಮಾಡಿದ್ದಾರೆ.

ಬಡವರಿದ್ದರೇ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುತ್ತೀರಾ?

ಲಕ್ಷ ಗಟ್ಟಲೇ ಬಿಪಿಎಲ್​ ಕಾರ್ಡ್ ರದ್ದು ಮಾಡಿದ್ದಾರೆ ಎಂದು ಮಾಹಿತಿ ಇದೆ. ಇನ್ನು 15, 20 ಲಕ್ಷ ಕಾರ್ಡ್​​ದಾರರಿಗೆ ನೋಟಿಸ್ ಕೊಟ್ಟಿದ್ದಾರೆ ಎಂದು ಸುದ್ದಿ ಇದೆ. ಇದರಲ್ಲಿ ಬಡವರಿದ್ದರೇ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುತ್ತೀರಾ?. ವಿಧವೆ ಸೇರಿ ಒಂದು ಗುಂಟೆನೂ ಜಮೀನು ಇಲ್ಲದಿರುವ ಜನರ ಕಾರ್ಡ್​ ಕೂಡ ರದ್ದು ಪಡಿಸಿದ್ದೀರಿ. ಯಾವ ಅಧಿಕಾರಿ ಮೇಲೆ ಸಿಎಂ ಕ್ರಮ ತೆಗೆದುಕೊಳ್ಳುತ್ತಾರೆ?.

ಸಿ.ಟಿ ರವಿ, ಮಾಜಿ ಸಚಿವ

Advertisment

ಇನ್ನೂ ಬಿಪಿಎಲ್ ಕಾರ್ಡ್​ ರದ್ದು ವಿಚಾರ ಬಗ್ಗೆ ಕಾರವಾರದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ ಮಾತನಾಡಿದ್ದು, ಯಾವುದೇ ಬಿಪಿಎಲ್, ಎಪಿಎಲ್ ಕಾರ್ಡ್​ಗಳನ್ನ ರದ್ದು ಮಾಡಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

publive-image

ಯಾವ ಬಿಪಿಎಲ್​ ಇಲ್ಲ, ಯಾವ ಕಾರ್ಡ್​ ಕೂಡ ರದ್ದು ಮಾಡೋದಿಲ್ಲ. ಯಾವ ಐದು ಗ್ಯಾರಂಟಿನೂ ರದ್ದು ಮಾಡುವ ಮಾತೇ ಇಲ್ಲ. ಇನ್ನು 8ವರೆ ವರ್ಷ ಹೀಗೆ ಮುಂದುವರೆಯಲಿದೆ.

ಡಿ.ಕೆ ಶಿವಕುಮಾರ್​, ಡಿಸಿಎಂ

ಪಡಿತರ ಚೀಟಿ ಪರಿಷ್ಕರಣೆ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ, ರಾಜಕೀಯದಲ್ಲಿ ಟಾಕ್​ ವಾರ್​ ಶುರುವಾಗಿದೆ. ಇತ್ತ ಜನ ಕೂಡ ಬಿಪಿಎಲ್​ ಕಾರ್ಡ್​ನಿಂದ ರೇಷನ್​ ಪಡೀತಿದ್ವಿ. ಆಸ್ಪತ್ರೆಗೆ ತೋರಿಸಿಕ್ಳೊತಿದ್ವಿ. ಈಗ ನಮನೆ ಗತಿ ಏನು ಅಂತಾ ಕಣ್ಣೀರು ಹಾಕಿದ್ದಾರೆ. ಇದೆಕೆಲ್ಲಾ ಸರ್ಕಾರ ಆದಷ್ಟು ಬೇಗ ಫುಲ್​ ಸ್ಟಾಪ್​ ಇಡಬೇಕಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment