ಪಾಕಿಸ್ಥಾನದ ಪರಿಸ್ಥಿತಿ ಬಗ್ಗೆ ಮಾಜಿ ಪ್ರಧಾನಿ ನವಾಜ್ ಷರೀಫ್ ಪ್ರಶ್ನೆ!
ಚಂದ್ರಯಾನ 3, ಜಿ-20 ಶೃಂಗಸಭೆ ಬಗ್ಗೆ ಹಾಡಿ ಹೊಗಳಿದ ಮಾಜಿ ಪ್ರಧಾನಿ
ಪಾಕ್ ಹೀಗೆ ಪರಿ ಪರಿಯಾಗಿ ಭಿಕ್ಷೆ ಬೇಡಲು ಮುಖ್ಯ ಕಾರಣ ಇವರೇ? ಎಂದ್ರು
ನವದೆಹಲಿ: ಇತ್ತ ಭಾರತ ಚಂದ್ರನ ಅಂಗಳದಲ್ಲಿ ವಿಕ್ರಮ್ ಲ್ಯಾಂಡರ್ ಸೇಫ್ ಆಗಿ ಇಳಿಸಿ ಭಾರತ ಇತಿಹಾಸ ನಿರ್ಮಿಸಿದೆ. ಈ ಮೂಲಕ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಸಿದ ಪ್ರಥಮ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಜತೆಗೆ ಜಿ20 ಶೃಂಗಸಭೆ ಆಯೋಜಿಸಿ ಅಂತರಾಷ್ಟ್ರೀಯ ವಿಚಾರಗಳನ್ನು ಚರ್ಚಿಸುತ್ತಿದೆ. ಇನ್ನೊಂದೆಡೆ ಭಾರತ ಕಟ್ಟರ್ ಎನಿಮಿ ರಾಷ್ಟ್ರ ಎಂದೇ ಖ್ಯಾತಿ ಹೊಂದಿರೋ ಪಾಕ್ನಲ್ಲಿ ಮಾತ್ರ ಆರ್ಥಿಕ ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ. ಹೀಗಾಗಿ ಒಂದೊಂದು ರೂಪಾಯಿಗೂ ಪಾಕ್ ಜಗತ್ತಿನ ಮುಂದೆ ಬಿಕ್ಷೆ ಬೇಡುವ ಸ್ಥಿತಿಗೆ ತಲುಪಿದೆ. ಈ ಮಧ್ಯೆ ಪಾಕ್ ಆರ್ಥಿಕ ಅಧಃಪತನಕ್ಕೆ ಮಾಜಿ ಸೇನಾಧಿಕಾರಿಗಳು ಮತ್ತು ನ್ಯಾಯಧೀಶರೇ ಕಾರಣ ಎಂದು ಮಾಜಿ ಪ್ರಧಾನಿ ನವಾಜ್ ಷರೀಫ್ ಆಕ್ರೋಶ ಹೊರಹಾಕಿದ್ದಾರೆ.
ಯೆಸ್, ಹೀಗೆ ಹೇಳಿದ್ದು ಬೇಱರು ಅಲ್ಲ. ಬದಲಿಗೆ ಪಾಕ್ ಮಾಜಿ ಪ್ರಧಾನಿ ಎಂಬುದೇ ಆಶ್ಚರ್ಯಕರ ವಿಷಯ. ಇಂದು ತನ್ನ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತಾಡಿದ ಷರೀಫ್, ನಮ್ಮ ದೇಶದ ಪ್ರಧಾನಿ ಚೀನಾ, ಅರಬ್ ಹೀಗೆ ನೆರೆ ರಾಷ್ಟ್ರಗಳಿಗೆ ಹಣಕ್ಕಾಗಿ ಬಿಕ್ಷೆ ಬೇಡುತ್ತಿದ್ದಾರೆ. ಇನ್ನೊಂದೆಡೆ ಭಾರತ ಮಾತ್ರ ಚಂದ್ರನ ಅಂಗಳಕ್ಕೆ ತಲುಪಿದೆ, ಜಿ20 ಶೃಂಗಸಭೆಯನ್ನು ಮಾಡಿದೆ. ಭಾರತದ ಈ ಸಾಧನೆಯನ್ನು ಪಾಕ್ ಮಾಡಲು ಏಕೆ ಸಾಧ್ಯವಿಲ್ಲ? ಇದಕ್ಕೆ ಹೊಣೆ ಯಾರು? ಎಂದು ಪ್ರಶ್ನಿಸಿದ್ದಾರೆ.
Today India has reached the Moon, the G20 meeting was held in India, and Pakistan is begging countries around the world for a billion dollars- Former PM of Pakistan Nawaz Sharif pic.twitter.com/nGNOwt7wys
— Megh Updates 🚨™ (@MeghUpdates) September 19, 2023
ನಾವು ಇಂದು ಒಂದೊಂದು ಡಾಲರ್ಗೂ ಬೇರೆ ರಾಷ್ಟ್ರಗಳ ಬಳಿ ಕೇಳಲು ಕಾರಣವೇ ಈ ಜನ. ನಿವೃತ್ತ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ, ಮಾಜಿ ಐಎಸ್ಐ ಚೀಫ್ ಫೈಜ್ ಹಮೀದ್, ನಿವೃತ್ತ ನ್ಯಾ. ಮಿಯಾನ್ ಸಾಕೀಬ್ ನಿಸಾರ್ ಎಂಬುವರು ದೇಶದ ಈ ಸ್ಥಿತಿಗೆ ಮುಖ್ಯ ಕಾರಣ ಎಂದು ಕೆಂಡಕಾರಿದ್ದಾರೆ. ಷರೀಫ್ ಈ ಹೇಳಿಗೆ ಸುತ್ತ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಪಾಕಿಸ್ಥಾನದ ಪರಿಸ್ಥಿತಿ ಬಗ್ಗೆ ಮಾಜಿ ಪ್ರಧಾನಿ ನವಾಜ್ ಷರೀಫ್ ಪ್ರಶ್ನೆ!
ಚಂದ್ರಯಾನ 3, ಜಿ-20 ಶೃಂಗಸಭೆ ಬಗ್ಗೆ ಹಾಡಿ ಹೊಗಳಿದ ಮಾಜಿ ಪ್ರಧಾನಿ
ಪಾಕ್ ಹೀಗೆ ಪರಿ ಪರಿಯಾಗಿ ಭಿಕ್ಷೆ ಬೇಡಲು ಮುಖ್ಯ ಕಾರಣ ಇವರೇ? ಎಂದ್ರು
ನವದೆಹಲಿ: ಇತ್ತ ಭಾರತ ಚಂದ್ರನ ಅಂಗಳದಲ್ಲಿ ವಿಕ್ರಮ್ ಲ್ಯಾಂಡರ್ ಸೇಫ್ ಆಗಿ ಇಳಿಸಿ ಭಾರತ ಇತಿಹಾಸ ನಿರ್ಮಿಸಿದೆ. ಈ ಮೂಲಕ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಸಿದ ಪ್ರಥಮ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಜತೆಗೆ ಜಿ20 ಶೃಂಗಸಭೆ ಆಯೋಜಿಸಿ ಅಂತರಾಷ್ಟ್ರೀಯ ವಿಚಾರಗಳನ್ನು ಚರ್ಚಿಸುತ್ತಿದೆ. ಇನ್ನೊಂದೆಡೆ ಭಾರತ ಕಟ್ಟರ್ ಎನಿಮಿ ರಾಷ್ಟ್ರ ಎಂದೇ ಖ್ಯಾತಿ ಹೊಂದಿರೋ ಪಾಕ್ನಲ್ಲಿ ಮಾತ್ರ ಆರ್ಥಿಕ ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ. ಹೀಗಾಗಿ ಒಂದೊಂದು ರೂಪಾಯಿಗೂ ಪಾಕ್ ಜಗತ್ತಿನ ಮುಂದೆ ಬಿಕ್ಷೆ ಬೇಡುವ ಸ್ಥಿತಿಗೆ ತಲುಪಿದೆ. ಈ ಮಧ್ಯೆ ಪಾಕ್ ಆರ್ಥಿಕ ಅಧಃಪತನಕ್ಕೆ ಮಾಜಿ ಸೇನಾಧಿಕಾರಿಗಳು ಮತ್ತು ನ್ಯಾಯಧೀಶರೇ ಕಾರಣ ಎಂದು ಮಾಜಿ ಪ್ರಧಾನಿ ನವಾಜ್ ಷರೀಫ್ ಆಕ್ರೋಶ ಹೊರಹಾಕಿದ್ದಾರೆ.
ಯೆಸ್, ಹೀಗೆ ಹೇಳಿದ್ದು ಬೇಱರು ಅಲ್ಲ. ಬದಲಿಗೆ ಪಾಕ್ ಮಾಜಿ ಪ್ರಧಾನಿ ಎಂಬುದೇ ಆಶ್ಚರ್ಯಕರ ವಿಷಯ. ಇಂದು ತನ್ನ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತಾಡಿದ ಷರೀಫ್, ನಮ್ಮ ದೇಶದ ಪ್ರಧಾನಿ ಚೀನಾ, ಅರಬ್ ಹೀಗೆ ನೆರೆ ರಾಷ್ಟ್ರಗಳಿಗೆ ಹಣಕ್ಕಾಗಿ ಬಿಕ್ಷೆ ಬೇಡುತ್ತಿದ್ದಾರೆ. ಇನ್ನೊಂದೆಡೆ ಭಾರತ ಮಾತ್ರ ಚಂದ್ರನ ಅಂಗಳಕ್ಕೆ ತಲುಪಿದೆ, ಜಿ20 ಶೃಂಗಸಭೆಯನ್ನು ಮಾಡಿದೆ. ಭಾರತದ ಈ ಸಾಧನೆಯನ್ನು ಪಾಕ್ ಮಾಡಲು ಏಕೆ ಸಾಧ್ಯವಿಲ್ಲ? ಇದಕ್ಕೆ ಹೊಣೆ ಯಾರು? ಎಂದು ಪ್ರಶ್ನಿಸಿದ್ದಾರೆ.
Today India has reached the Moon, the G20 meeting was held in India, and Pakistan is begging countries around the world for a billion dollars- Former PM of Pakistan Nawaz Sharif pic.twitter.com/nGNOwt7wys
— Megh Updates 🚨™ (@MeghUpdates) September 19, 2023
ನಾವು ಇಂದು ಒಂದೊಂದು ಡಾಲರ್ಗೂ ಬೇರೆ ರಾಷ್ಟ್ರಗಳ ಬಳಿ ಕೇಳಲು ಕಾರಣವೇ ಈ ಜನ. ನಿವೃತ್ತ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ, ಮಾಜಿ ಐಎಸ್ಐ ಚೀಫ್ ಫೈಜ್ ಹಮೀದ್, ನಿವೃತ್ತ ನ್ಯಾ. ಮಿಯಾನ್ ಸಾಕೀಬ್ ನಿಸಾರ್ ಎಂಬುವರು ದೇಶದ ಈ ಸ್ಥಿತಿಗೆ ಮುಖ್ಯ ಕಾರಣ ಎಂದು ಕೆಂಡಕಾರಿದ್ದಾರೆ. ಷರೀಫ್ ಈ ಹೇಳಿಗೆ ಸುತ್ತ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ