newsfirstkannada.com

ಅತಿಯಾದ ಆತ್ಮವಿಶ್ವಾಸ; ವೆಸ್ಟ್​​ ಇಂಡೀಸ್​ ಸೋಲು; ಟೀಂ ಇಂಡಿಯಾಗೆ ಪಾಠ! ಏನಿದು ಸ್ಟೋರಿ?

Share :

03-07-2023

    ಸತತ ಸೋಲು ವಿಶ್ವಕಪ್​ನಿಂದ ಹೊರಬಿದ್ದ ವೆಸ್ಟ್​ ಇಂಡೀಸ್​

    ನೆದರ್ಲ್ಯಾಂಡ್ಸ್, ಸ್ಕಾಟ್ಲೆಂಡ್​ ವಿರುದ್ಧ ಕೆರಿಬಿಯನ್​ರಿಗೆ ಸೋಲು

    ಅತಿಯಾದ ಆತ್ಮವಿಶ್ವಾಸ ಟೀಮ್​ ಇಂಡಿಯಾಕ್ಕೆ ಒಳ್ಳೆಯದಲ್ಲ

ಈ ಬಾರಿಯ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಚಾಂಪಿಯನ್​ ಪಟ್ಟಕ್ಕೆ ಏರಲು ಟೀಮ್​ ಇಂಡಿಯಾ ತುದಿಗಾಲಲ್ಲಿ ನಿಂತಿದೆ. ಹೋಮ್​ ಅಡ್ವಾಂಟೇಜ್​ ಇದೆ, ಸುಲಭಕ್ಕೆ ಕಪ್​ ಗೆಲ್ತೀವಿ ಅನ್ನೋ ಲೆಕ್ಕಾಚಾರ ತಂಡದಲ್ಲಿದೆ. ಆದ್ರೆ, ಸ್ವಲ್ಪ ಯಾಮಾರಿದ್ರೂ ಮುಖಭಂಗಕ್ಕೆ ಒಳಗಾಗಬೇಕಾಗುತ್ತೆ. ಓವರ್​​ ಕಾನ್ಫಿಡೆನ್ಸ್​​ನಲ್ಲಿ ಕಣಕ್ಕಿಳಿದ್ರೆ ವೆಸ್ಟ್​ ಇಂಡೀಸ್​​ಗೆ ಆದ ಗತಿಯೇ ಆಗಲಿದೆ.

10 ವರ್ಷಗಳ ಬಳಿಕ ಐಸಿಸಿ ಚಾಂಪಿಯನ್​ ಪಟ್ಟ ಅಲಂಕರಿಸಲು ಟೀಮ್​ ಇಂಡಿಯಾಗೆ ಇದೇ ಬೆಸ್ಟ್​​ ಚಾನ್ಸ್​. ತಂಡದಲ್ಲಿ ಮ್ಯಾಚ್​​ ವಿನ್ನರ್​ಗಳ ದಂಡೇ ಇದೆ. ಬ್ಯಾಟಿಂಗ್​, ಬೌಲಿಂಗ್​ & ಫೀಲ್ಡಿಂಗ್​ 3 ವಿಭಾಗಗಳಲ್ಲೂ ಸಾಲಿಡ್​​​ ಪ್ಲೇಯರ್​​ಗಳಿದ್ದಾರೆ. ಇದರ ಜೊತೆಗೆ ಅಸಂಖ್ಯ ಅಭಿಮಾನಿಗಳ ಪ್ರಾರ್ಥನೆ ಶ್ರೀರಕ್ಷೆಯಂತೆ ಕಾಯಲಿದೆ. ಹೋಮ್​ ಅಡ್ವಾಂಟೇಜ್​ ಅನ್ನ ಸಮರ್ಪಕವಾಗಿ ಬಳಸಿಕೊಂಡ್ರೆ, ಕಪ್​ ಗೆಲ್ಲೋದು ಕಷ್ಟವೇ ಅಲ್ಲ. ಹಾಗಂತ ಅತಿಯಾದ ಆತ್ಮವಿಶ್ವಾಸದಲ್ಲಿ ಕಣಕ್ಕಿಳಿದ್ರೆ, ಮಕಾಡೆ ಮಲಗೋದು ಪಕ್ಕಾ.

ಇಂಡೀಸ್​​ ಸೋಲು, ಟೀಮ್​ ಇಂಡಿಯಾಗೆ ಪಾಠ.!

ವೆಸ್ಟ್​​ ಇಂಡೀಸ್​ 70ರಿಂದ 90ರ ದಶಕದವರೆಗೆ ಈ ಹೆಸರನ್ನ ಕೇಳಿದ್ರೆ ವಿಶ್ವ ಕ್ರಿಕೆಟ್​ ಲೋಕ ಬೆಚ್ಚಿ ಬೀಳ್ತಾಯಿತ್ತು. ಎಂತದ್ದೇ ಫೀಲ್ಡಿಂಗ್​ ಸೆಟ್​ ಮಾಡಿಕೊಂಡು ಎಂತಾ ಅದ್ಭುತ ಎಸೆತವನ್ನ ಹಾಕಿದ್ರೂ ಸಲೀಸಾಗಿ ಬೌಂಡರಿ ಗೆರೆ ದಾಟಿಸ್ತಾ ಇದ್ದ ಬ್ಯಾಟ್ಸ್​​ಮನ್​ಗಳ ದಂಡೇ ಇತ್ತು. ಬೌಲರ್​ಗಳಂತೂ 22 ಯಾರ್ಡ್​ನ ಪಿಚ್​​ನಲ್ಲೇ ಎದುರಾಳಿ ಬ್ಯಾಟ್ಸ್​ಮನ್​ಗಳಿಗೆ ನರಕದರ್ಶನ ಮಾಡಿಸ್ತಿದ್ರು. ಆಗ ಅಕ್ಷರಶಃ ಕ್ರಿಕೆಟ್​ ಲೋಕಕ್ಕೆ ಇಂಡೀಸ್​ ಅಧಿಪತಿಯಾಗಿತ್ತು. ಆದ್ರೆ, ಈಗ ವಿಶ್ವಕಪ್​ ಟೂರ್ನಿಯಿಂದಲೇ ಹೊರ ಬಿದ್ದಿದೆ.

ಕ್ಲೈವ್​ಲಾಯ್ಡ್​, ಗ್ಯಾರಿ​​ ಸೋಬರ್ಸ್​, ವಿವಿಯನ್​ ರಿಚರ್ಡ್ಸ್​, ಬ್ರಿಯನ್​ ಲಾರಾ, ಚಂದ್ರಪಾಲ್​, ಕ್ರಿಸ್​ ಗೇಲ್​.. ಒಂದಾ.. ಎರಡಾ..? ಹೇಳ್ತಾ ಹೋದ್ರೆ ಪಟ್ಟಿ ಇಂಡೀಸ್​ ಲೆಜೆಂಡ್​ಗಳ ಪಟ್ಟಿ ದೊಡ್ಡದಿದೆ. ಇಷ್ಟೇಲ್ಲ ದಿಗ್ಗಜರ ಕೊಡುಗೆ ನೀಡಿದ ಮೊದಲ 2 ಆವೃತ್ತಿಯ ವಿಶ್ವಕಪ್​ ಟೂರ್ನಿಯಲ್ಲಿ ಚಾಂಪಿಯನ್​​ ಆದ ವೆಸ್ಟ್​ ಇಂಡೀಸ್​​, ಈಗ ಟೂರ್ನಿಯಿಂದ ಹೊರ ಬಿದ್ದಿದೆ. ಇದಕ್ಕೆಲ್ಲ ಕಾರಣ ಓವರ್​ ಕಾನ್ಪಿಡೆನ್ಸ್​.

ವಿಶ್ವಕಪ್​ ನೇರವಾಗಿ ಕ್ವಾಲಿಫೈ​ ಆಗುವಲ್ಲಿ ಫೇಲ್​ ಆದ ಇಂಡೀಸ್​ ಕ್ವಾಲಿಫೈಯರ್​​ ಸ್ಟೇಜ್​​ನಲ್ಲಿ ಗೆದ್ದು ಬರಬೇಕಿತ್ತು. ಶ್ರೀಲಂಕಾ, ಜಿಂಬಾಬ್ವೆ ಹೊರತಾಗಿ ಉಳಿದೆಲ್ಲ ತಂಡಗಳು ಕ್ರಿಕೆಟ್‌ ಜಗತ್ತಿನಲ್ಲಿ ಕೂಸುಗಳು ಅನಿಸಿಕೊಂಡ ಕಾರಣಕ್ಕೋ ಏನೋ ಸುಲಭಕ್ಕೆ ಗೆಲ್ತೀವಿ ಎಂದು ಇಂಡೀಸ್​ ಕಣಕ್ಕಿಳಿತು. ಆದ್ರೆ, ನೀಡಿದ್ದು ದಯನೀಯ ಪ್ರದರ್ಶನ. ಮೊದಲ 2 ಪಂದ್ಯ ಗೆದ್ದ ಇಂಡೀಸ್​​ 3ನೇ ಪಂದ್ಯದಲ್ಲಿ ಜಿಂಬಾಬ್ವೆ ಎದುರು ಮಕಾಡೆ ಮಲಗಿತು. ಆ ಬಳಿಕ ನೆದರ್ಲೆಂಡ್​​ ವಿರುದ್ಧ ಸೂಪರ್​ ಓವರ್​​ನಲ್ಲಿ ಹೀನಾಯ ಸೋಲು ಕಾಣ್ತು. ಕೊನೆಗೆ ಸ್ಕಾಟ್ಲೆಂಡ್​ ವಿರುದ್ಧ ಮಣ್ಣು ಮುಕ್ಕಿ ಟೂರ್ನಿಯಿಂದ ಹೊರ ಬಿದ್ದಿದೆ.

ಎಚ್ಚರ ಟೀಮ್​ ಇಂಡಿಯಾ ಎಚ್ಚರ..!

ಈ ಬಾರಿ ವಿಶ್ವಕಪ್​ ನಡೀತಾ ಇರೋದು ಭಾರತದಲ್ಲೇ. ಇಲ್ಲಿ ಪ್ರತಿಯೊಂದು ಸ್ಟೇಡಿಯಂಗಳು, ಪಿಚ್​​​ಗಳು, ಪ್ಲೇಯಿಂಗ್​ ಕಂಡೀಷನ್​ ಬಗ್ಗೆ ಟೀಮ್​ ಇಂಡಿಯಾಗೆ ಇಂಚಿಂಚೂ ಮಾಹಿತಿಯಿದೆ. ವಿಶ್ವಕಪ್​ನ ಪ್ಲೇಯಿಂಗ್​ ಇಲೆವೆನ್​ನಲ್ಲಿರಬಹುದಾದ ಫಸ್ಟ್​ ಚಾಯ್ಸ್ ಆಟಗಾರರಿಗೆಲ್ಲಾ ಈ ಮೈದಾನಗಳಲ್ಲಿ ಆಡಿದ ಅನುಭವವಿದೆ. ಇದು ಕಾನ್ಫಿಡೆನ್ಸ್​ ಆಗಿರಬೇಕೆ ಹೊರತು ಓವರ್​ಕಾನ್ಪಿಡೆನ್ಸ್​ ಆಗಬಾರ್ದು.. ಯಾಕಂದ್ರೆ, ಟೀಮ್​ ಇಂಡಿಯಾ ಮುಂದಿರೋದು ಟಫ್​​ ಚಾಲೆಂಜ್​.

ಇದನ್ನು ಓದಿ: ಇಂಗ್ಲೆಂಡ್-ಆಸ್ಟ್ರೇಲಿಯಾ 2ನೇ ಟೆಸ್ಟ್.. ಭಾರೀ ವಿವಾದಕ್ಕೆ ಕಾರಣವಾಗಿರುವ ಬೈರ್​ಸ್ಟೋವ್ ರನೌಟ್​ ವಿಡಿಯೋ..!

ಓವರ್​ ಕಾನ್ಪಿಡೆನ್ಸ್​ನಲ್ಲಿ ಯಾಮಾರಿದ್ರೆ ಮುಖಭಂಗ ಪಕ್ಕಾ.!

ವಿಶ್ವಕಪ್​ನ ಲೀಗ್​ ಸ್ಟೇಜ್​ನಲ್ಲಿ ಟೀಮ್​ ಇಂಡಿಯಾದ ಮುಂದೆ ಕಠಿಣ ಸವಾಲೇ ಇದೆ. ಅದರ ಜೊತೆಗೆ ಅಫ್ಘಾನಿಸ್ತಾನ, ಬಾಂಗ್ಲಾದೇಶ, ಜೊತೆಗೆ ಈಗ ಕ್ವಾಲಿಫೈಯರ್​ ರೌಂಡ್​ನಿಂದ ಬರೋ 2 ತಂಡಗಳ ಜೊತೆಗೆ ಪಂದ್ಯಗಳಿವೆ. ಆನ್​ ಪೇಪರ್​ ಅಷ್ಟೇನು ಬಲಿಷ್ಠ ಅನ್ನಿಸದಂತಹ ಈ ತಂಡಗಳನ್ನ ಸುಲಭಕ್ಕೆ ಪರಿಗಣಿಸುವಂತೇ​ ಇಲ್ಲ. ಓವರ್​ ಕಾನ್ಫಿಡೆನ್ಸ್​ನಲ್ಲಿ ಯಾಮಾರಿದ್ರೆ, ಮುಖಭಂಗ ಅನುಭವಿಸಬೇಕಾಗುತ್ತದೆ.

ಈ ಬಾರಿಯ ವಿಶ್ವಕಪ್​ ಟೂರ್ನಿ ಟೀಮ್​ ಇಂಡಿಯಾ ಪಾಲಿಗೆ ಸಿಕ್ಕಾಪಟ್ಟೆ ಟಫ್​ ಚಾಲೆಂಜ್. ಸಾಲು ಸಾಲು ಸವಾಲುಗಳಿವೆ. ಈ ಎಲ್ಲ ಚಾಲೆಂಜ್​ಗಳನ್ನ ತಂಡ ದಿಟ್ಟತನದಿಂದ ಎದುರಿಸಲಿ. ಟ್ರೋಫಿ ಗೆಲ್ಲಲಿ ಅನ್ನೋದೇ ಅಸಂಖ್ಯ ಅಭಿಮಾನಿಗಳ ಪ್ರಾರ್ಥನೆ ಆಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಅತಿಯಾದ ಆತ್ಮವಿಶ್ವಾಸ; ವೆಸ್ಟ್​​ ಇಂಡೀಸ್​ ಸೋಲು; ಟೀಂ ಇಂಡಿಯಾಗೆ ಪಾಠ! ಏನಿದು ಸ್ಟೋರಿ?

https://newsfirstlive.com/wp-content/uploads/2023/07/ROHIT_SHARMA_INDIA.jpg

    ಸತತ ಸೋಲು ವಿಶ್ವಕಪ್​ನಿಂದ ಹೊರಬಿದ್ದ ವೆಸ್ಟ್​ ಇಂಡೀಸ್​

    ನೆದರ್ಲ್ಯಾಂಡ್ಸ್, ಸ್ಕಾಟ್ಲೆಂಡ್​ ವಿರುದ್ಧ ಕೆರಿಬಿಯನ್​ರಿಗೆ ಸೋಲು

    ಅತಿಯಾದ ಆತ್ಮವಿಶ್ವಾಸ ಟೀಮ್​ ಇಂಡಿಯಾಕ್ಕೆ ಒಳ್ಳೆಯದಲ್ಲ

ಈ ಬಾರಿಯ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಚಾಂಪಿಯನ್​ ಪಟ್ಟಕ್ಕೆ ಏರಲು ಟೀಮ್​ ಇಂಡಿಯಾ ತುದಿಗಾಲಲ್ಲಿ ನಿಂತಿದೆ. ಹೋಮ್​ ಅಡ್ವಾಂಟೇಜ್​ ಇದೆ, ಸುಲಭಕ್ಕೆ ಕಪ್​ ಗೆಲ್ತೀವಿ ಅನ್ನೋ ಲೆಕ್ಕಾಚಾರ ತಂಡದಲ್ಲಿದೆ. ಆದ್ರೆ, ಸ್ವಲ್ಪ ಯಾಮಾರಿದ್ರೂ ಮುಖಭಂಗಕ್ಕೆ ಒಳಗಾಗಬೇಕಾಗುತ್ತೆ. ಓವರ್​​ ಕಾನ್ಫಿಡೆನ್ಸ್​​ನಲ್ಲಿ ಕಣಕ್ಕಿಳಿದ್ರೆ ವೆಸ್ಟ್​ ಇಂಡೀಸ್​​ಗೆ ಆದ ಗತಿಯೇ ಆಗಲಿದೆ.

10 ವರ್ಷಗಳ ಬಳಿಕ ಐಸಿಸಿ ಚಾಂಪಿಯನ್​ ಪಟ್ಟ ಅಲಂಕರಿಸಲು ಟೀಮ್​ ಇಂಡಿಯಾಗೆ ಇದೇ ಬೆಸ್ಟ್​​ ಚಾನ್ಸ್​. ತಂಡದಲ್ಲಿ ಮ್ಯಾಚ್​​ ವಿನ್ನರ್​ಗಳ ದಂಡೇ ಇದೆ. ಬ್ಯಾಟಿಂಗ್​, ಬೌಲಿಂಗ್​ & ಫೀಲ್ಡಿಂಗ್​ 3 ವಿಭಾಗಗಳಲ್ಲೂ ಸಾಲಿಡ್​​​ ಪ್ಲೇಯರ್​​ಗಳಿದ್ದಾರೆ. ಇದರ ಜೊತೆಗೆ ಅಸಂಖ್ಯ ಅಭಿಮಾನಿಗಳ ಪ್ರಾರ್ಥನೆ ಶ್ರೀರಕ್ಷೆಯಂತೆ ಕಾಯಲಿದೆ. ಹೋಮ್​ ಅಡ್ವಾಂಟೇಜ್​ ಅನ್ನ ಸಮರ್ಪಕವಾಗಿ ಬಳಸಿಕೊಂಡ್ರೆ, ಕಪ್​ ಗೆಲ್ಲೋದು ಕಷ್ಟವೇ ಅಲ್ಲ. ಹಾಗಂತ ಅತಿಯಾದ ಆತ್ಮವಿಶ್ವಾಸದಲ್ಲಿ ಕಣಕ್ಕಿಳಿದ್ರೆ, ಮಕಾಡೆ ಮಲಗೋದು ಪಕ್ಕಾ.

ಇಂಡೀಸ್​​ ಸೋಲು, ಟೀಮ್​ ಇಂಡಿಯಾಗೆ ಪಾಠ.!

ವೆಸ್ಟ್​​ ಇಂಡೀಸ್​ 70ರಿಂದ 90ರ ದಶಕದವರೆಗೆ ಈ ಹೆಸರನ್ನ ಕೇಳಿದ್ರೆ ವಿಶ್ವ ಕ್ರಿಕೆಟ್​ ಲೋಕ ಬೆಚ್ಚಿ ಬೀಳ್ತಾಯಿತ್ತು. ಎಂತದ್ದೇ ಫೀಲ್ಡಿಂಗ್​ ಸೆಟ್​ ಮಾಡಿಕೊಂಡು ಎಂತಾ ಅದ್ಭುತ ಎಸೆತವನ್ನ ಹಾಕಿದ್ರೂ ಸಲೀಸಾಗಿ ಬೌಂಡರಿ ಗೆರೆ ದಾಟಿಸ್ತಾ ಇದ್ದ ಬ್ಯಾಟ್ಸ್​​ಮನ್​ಗಳ ದಂಡೇ ಇತ್ತು. ಬೌಲರ್​ಗಳಂತೂ 22 ಯಾರ್ಡ್​ನ ಪಿಚ್​​ನಲ್ಲೇ ಎದುರಾಳಿ ಬ್ಯಾಟ್ಸ್​ಮನ್​ಗಳಿಗೆ ನರಕದರ್ಶನ ಮಾಡಿಸ್ತಿದ್ರು. ಆಗ ಅಕ್ಷರಶಃ ಕ್ರಿಕೆಟ್​ ಲೋಕಕ್ಕೆ ಇಂಡೀಸ್​ ಅಧಿಪತಿಯಾಗಿತ್ತು. ಆದ್ರೆ, ಈಗ ವಿಶ್ವಕಪ್​ ಟೂರ್ನಿಯಿಂದಲೇ ಹೊರ ಬಿದ್ದಿದೆ.

ಕ್ಲೈವ್​ಲಾಯ್ಡ್​, ಗ್ಯಾರಿ​​ ಸೋಬರ್ಸ್​, ವಿವಿಯನ್​ ರಿಚರ್ಡ್ಸ್​, ಬ್ರಿಯನ್​ ಲಾರಾ, ಚಂದ್ರಪಾಲ್​, ಕ್ರಿಸ್​ ಗೇಲ್​.. ಒಂದಾ.. ಎರಡಾ..? ಹೇಳ್ತಾ ಹೋದ್ರೆ ಪಟ್ಟಿ ಇಂಡೀಸ್​ ಲೆಜೆಂಡ್​ಗಳ ಪಟ್ಟಿ ದೊಡ್ಡದಿದೆ. ಇಷ್ಟೇಲ್ಲ ದಿಗ್ಗಜರ ಕೊಡುಗೆ ನೀಡಿದ ಮೊದಲ 2 ಆವೃತ್ತಿಯ ವಿಶ್ವಕಪ್​ ಟೂರ್ನಿಯಲ್ಲಿ ಚಾಂಪಿಯನ್​​ ಆದ ವೆಸ್ಟ್​ ಇಂಡೀಸ್​​, ಈಗ ಟೂರ್ನಿಯಿಂದ ಹೊರ ಬಿದ್ದಿದೆ. ಇದಕ್ಕೆಲ್ಲ ಕಾರಣ ಓವರ್​ ಕಾನ್ಪಿಡೆನ್ಸ್​.

ವಿಶ್ವಕಪ್​ ನೇರವಾಗಿ ಕ್ವಾಲಿಫೈ​ ಆಗುವಲ್ಲಿ ಫೇಲ್​ ಆದ ಇಂಡೀಸ್​ ಕ್ವಾಲಿಫೈಯರ್​​ ಸ್ಟೇಜ್​​ನಲ್ಲಿ ಗೆದ್ದು ಬರಬೇಕಿತ್ತು. ಶ್ರೀಲಂಕಾ, ಜಿಂಬಾಬ್ವೆ ಹೊರತಾಗಿ ಉಳಿದೆಲ್ಲ ತಂಡಗಳು ಕ್ರಿಕೆಟ್‌ ಜಗತ್ತಿನಲ್ಲಿ ಕೂಸುಗಳು ಅನಿಸಿಕೊಂಡ ಕಾರಣಕ್ಕೋ ಏನೋ ಸುಲಭಕ್ಕೆ ಗೆಲ್ತೀವಿ ಎಂದು ಇಂಡೀಸ್​ ಕಣಕ್ಕಿಳಿತು. ಆದ್ರೆ, ನೀಡಿದ್ದು ದಯನೀಯ ಪ್ರದರ್ಶನ. ಮೊದಲ 2 ಪಂದ್ಯ ಗೆದ್ದ ಇಂಡೀಸ್​​ 3ನೇ ಪಂದ್ಯದಲ್ಲಿ ಜಿಂಬಾಬ್ವೆ ಎದುರು ಮಕಾಡೆ ಮಲಗಿತು. ಆ ಬಳಿಕ ನೆದರ್ಲೆಂಡ್​​ ವಿರುದ್ಧ ಸೂಪರ್​ ಓವರ್​​ನಲ್ಲಿ ಹೀನಾಯ ಸೋಲು ಕಾಣ್ತು. ಕೊನೆಗೆ ಸ್ಕಾಟ್ಲೆಂಡ್​ ವಿರುದ್ಧ ಮಣ್ಣು ಮುಕ್ಕಿ ಟೂರ್ನಿಯಿಂದ ಹೊರ ಬಿದ್ದಿದೆ.

ಎಚ್ಚರ ಟೀಮ್​ ಇಂಡಿಯಾ ಎಚ್ಚರ..!

ಈ ಬಾರಿ ವಿಶ್ವಕಪ್​ ನಡೀತಾ ಇರೋದು ಭಾರತದಲ್ಲೇ. ಇಲ್ಲಿ ಪ್ರತಿಯೊಂದು ಸ್ಟೇಡಿಯಂಗಳು, ಪಿಚ್​​​ಗಳು, ಪ್ಲೇಯಿಂಗ್​ ಕಂಡೀಷನ್​ ಬಗ್ಗೆ ಟೀಮ್​ ಇಂಡಿಯಾಗೆ ಇಂಚಿಂಚೂ ಮಾಹಿತಿಯಿದೆ. ವಿಶ್ವಕಪ್​ನ ಪ್ಲೇಯಿಂಗ್​ ಇಲೆವೆನ್​ನಲ್ಲಿರಬಹುದಾದ ಫಸ್ಟ್​ ಚಾಯ್ಸ್ ಆಟಗಾರರಿಗೆಲ್ಲಾ ಈ ಮೈದಾನಗಳಲ್ಲಿ ಆಡಿದ ಅನುಭವವಿದೆ. ಇದು ಕಾನ್ಫಿಡೆನ್ಸ್​ ಆಗಿರಬೇಕೆ ಹೊರತು ಓವರ್​ಕಾನ್ಪಿಡೆನ್ಸ್​ ಆಗಬಾರ್ದು.. ಯಾಕಂದ್ರೆ, ಟೀಮ್​ ಇಂಡಿಯಾ ಮುಂದಿರೋದು ಟಫ್​​ ಚಾಲೆಂಜ್​.

ಇದನ್ನು ಓದಿ: ಇಂಗ್ಲೆಂಡ್-ಆಸ್ಟ್ರೇಲಿಯಾ 2ನೇ ಟೆಸ್ಟ್.. ಭಾರೀ ವಿವಾದಕ್ಕೆ ಕಾರಣವಾಗಿರುವ ಬೈರ್​ಸ್ಟೋವ್ ರನೌಟ್​ ವಿಡಿಯೋ..!

ಓವರ್​ ಕಾನ್ಪಿಡೆನ್ಸ್​ನಲ್ಲಿ ಯಾಮಾರಿದ್ರೆ ಮುಖಭಂಗ ಪಕ್ಕಾ.!

ವಿಶ್ವಕಪ್​ನ ಲೀಗ್​ ಸ್ಟೇಜ್​ನಲ್ಲಿ ಟೀಮ್​ ಇಂಡಿಯಾದ ಮುಂದೆ ಕಠಿಣ ಸವಾಲೇ ಇದೆ. ಅದರ ಜೊತೆಗೆ ಅಫ್ಘಾನಿಸ್ತಾನ, ಬಾಂಗ್ಲಾದೇಶ, ಜೊತೆಗೆ ಈಗ ಕ್ವಾಲಿಫೈಯರ್​ ರೌಂಡ್​ನಿಂದ ಬರೋ 2 ತಂಡಗಳ ಜೊತೆಗೆ ಪಂದ್ಯಗಳಿವೆ. ಆನ್​ ಪೇಪರ್​ ಅಷ್ಟೇನು ಬಲಿಷ್ಠ ಅನ್ನಿಸದಂತಹ ಈ ತಂಡಗಳನ್ನ ಸುಲಭಕ್ಕೆ ಪರಿಗಣಿಸುವಂತೇ​ ಇಲ್ಲ. ಓವರ್​ ಕಾನ್ಫಿಡೆನ್ಸ್​ನಲ್ಲಿ ಯಾಮಾರಿದ್ರೆ, ಮುಖಭಂಗ ಅನುಭವಿಸಬೇಕಾಗುತ್ತದೆ.

ಈ ಬಾರಿಯ ವಿಶ್ವಕಪ್​ ಟೂರ್ನಿ ಟೀಮ್​ ಇಂಡಿಯಾ ಪಾಲಿಗೆ ಸಿಕ್ಕಾಪಟ್ಟೆ ಟಫ್​ ಚಾಲೆಂಜ್. ಸಾಲು ಸಾಲು ಸವಾಲುಗಳಿವೆ. ಈ ಎಲ್ಲ ಚಾಲೆಂಜ್​ಗಳನ್ನ ತಂಡ ದಿಟ್ಟತನದಿಂದ ಎದುರಿಸಲಿ. ಟ್ರೋಫಿ ಗೆಲ್ಲಲಿ ಅನ್ನೋದೇ ಅಸಂಖ್ಯ ಅಭಿಮಾನಿಗಳ ಪ್ರಾರ್ಥನೆ ಆಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Load More