newsfirstkannada.com

Breaking News: ಪ್ರವಾಸಕ್ಕೆ ಹೊರಟಿದ್ದ ಕಾರು ಭೀಕರ ಅಪಘಾತ; ನಾಲ್ವರು ಸ್ಥಳದಲ್ಲೇ ಸಾವು, ಮೂವರು ಗಂಭೀರ

Share :

13-08-2023

    ಚಿತ್ರದುರ್ಗದ ಮಲ್ಲಾಪುರ ಬ್ರಿಡ್ಜ್ ಬಳಿ ದುರ್ಘಟನೆ

    ಗಾಯಗೊಂಡವರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ

    ಅಪಘಾತದ ಹೊಡೆತಕ್ಕೆ ಕಾರು ನುಜ್ಜು-ಗುಜ್ಜು

ಚಿತ್ರದುರ್ಗ: ಲಾರಿ ಹಾಗೂ ಕಾರು ಮಧ್ಯೆ ಭೀಕರ ಅಪಘಾತ ಸಂಭವಿಸಿ ನಾಲ್ವರು ಸಾವನ್ನಪ್ಪಿ, ಮೂವರು ಗಾಯಗೊಂಡಿರುವ ಘಟನೆ ತಾಲೂಕಿನ ಮಲ್ಲಾಪುರ ಬ್ರಿಡ್ಜ್ ಬಳಿ ನಡೆದಿದೆ.

ಭೀಮಾಶಂಕರ್​(26), ಸಂಗನಾ ಬಸಪ್ಪ (36), ರೇಖಾ (29), ಅಗಸ್ತ್ಯ (8) ಮೃತ ದುರ್ದೈವಿಗಳು. ಅನ್ವಿತಾ(6), ಆದರ್ಶ(4) ಸೇರಿ ಮತ್ತೊಬ್ಬರು ದುರ್ಘಟನೆಯಲ್ಲಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿ 50-ಎ ನಲ್ಲಿ ಅಪಘಾತ ಸಂಭವಿಸಿದೆ. ಟ್ರಕ್ ಹೊಸಪೇಟೆಯಿಂದ ಬೆಂಗಳೂರು ಕಡೆಗೆ ಚಲಿಸುತ್ತಿತ್ತು. ವೇಗವಾಗಿಬಂದ ಕಾರು ಟ್ರಕ್​​ನ ಹಿಂಬದಿಗೆ ಗುದ್ದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸಂಗನಾ ಬಸಪ್ಪ ಹಾಗೂ ಈರಣ್ಣಾ ಎಂಬವವರ ಕುಟುಂಬ ಚಿಕ್ಕಮಗಳೂರು ಟ್ರಿಪ್​​ಗೆ ಹೊರಟಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking News: ಪ್ರವಾಸಕ್ಕೆ ಹೊರಟಿದ್ದ ಕಾರು ಭೀಕರ ಅಪಘಾತ; ನಾಲ್ವರು ಸ್ಥಳದಲ್ಲೇ ಸಾವು, ಮೂವರು ಗಂಭೀರ

https://newsfirstlive.com/wp-content/uploads/2023/08/CTR_ACCIDENT.jpg

    ಚಿತ್ರದುರ್ಗದ ಮಲ್ಲಾಪುರ ಬ್ರಿಡ್ಜ್ ಬಳಿ ದುರ್ಘಟನೆ

    ಗಾಯಗೊಂಡವರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ

    ಅಪಘಾತದ ಹೊಡೆತಕ್ಕೆ ಕಾರು ನುಜ್ಜು-ಗುಜ್ಜು

ಚಿತ್ರದುರ್ಗ: ಲಾರಿ ಹಾಗೂ ಕಾರು ಮಧ್ಯೆ ಭೀಕರ ಅಪಘಾತ ಸಂಭವಿಸಿ ನಾಲ್ವರು ಸಾವನ್ನಪ್ಪಿ, ಮೂವರು ಗಾಯಗೊಂಡಿರುವ ಘಟನೆ ತಾಲೂಕಿನ ಮಲ್ಲಾಪುರ ಬ್ರಿಡ್ಜ್ ಬಳಿ ನಡೆದಿದೆ.

ಭೀಮಾಶಂಕರ್​(26), ಸಂಗನಾ ಬಸಪ್ಪ (36), ರೇಖಾ (29), ಅಗಸ್ತ್ಯ (8) ಮೃತ ದುರ್ದೈವಿಗಳು. ಅನ್ವಿತಾ(6), ಆದರ್ಶ(4) ಸೇರಿ ಮತ್ತೊಬ್ಬರು ದುರ್ಘಟನೆಯಲ್ಲಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿ 50-ಎ ನಲ್ಲಿ ಅಪಘಾತ ಸಂಭವಿಸಿದೆ. ಟ್ರಕ್ ಹೊಸಪೇಟೆಯಿಂದ ಬೆಂಗಳೂರು ಕಡೆಗೆ ಚಲಿಸುತ್ತಿತ್ತು. ವೇಗವಾಗಿಬಂದ ಕಾರು ಟ್ರಕ್​​ನ ಹಿಂಬದಿಗೆ ಗುದ್ದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸಂಗನಾ ಬಸಪ್ಪ ಹಾಗೂ ಈರಣ್ಣಾ ಎಂಬವವರ ಕುಟುಂಬ ಚಿಕ್ಕಮಗಳೂರು ಟ್ರಿಪ್​​ಗೆ ಹೊರಟಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More