newsfirstkannada.com

ಈ ತಿಂಗಳಿನಿಂದ ಯಾರಿಗೆ ಕರೆಂಟ್​ ಫ್ರೀ? ನೀವು ಬಿಲ್​​ ಕಟ್ಟಬೇಕಾ ಬೇಡವಾ..?

Share :

02-07-2023

    ಕರುನಾಡನ್ನ ಬೆಳಗಿದ ಕಾಂಗ್ರೆಸ್​ ‘ಗೃಹಜ್ಯೋತಿ’ ಬೆಳಕು

    200 ಯೂನಿಟ್​ ಲಕ್ಷ್ಮಣ ರೇಖೆ, ಫಲಾನುಭವಿಗಳಿಗೆ ಫ್ರೀ!

    ಗೃಹಜ್ಯೋತಿಯ ಭಾಗ್ಯ ಈ ತಿಂಗಳಿಂದಲೇ ಒಲಿಯುತ್ತಾ?

ಬೆಂಗಳೂರು: ಕಾಂಗ್ರೆಸ್​ ಗ್ಯಾರಂಟಿಗಳ ಪೈಕಿ ಒಂದಾದ ‘ಗೃಹಜ್ಯೋತಿ‘ ಕರುನಾಡನ್ನ ಬೆಳಗಲು ಶುರುಮಾಡಿದೆ. ಆದ್ರೆ ಈ ತಿಂಗಳು ಗೃಹಜ್ಯೋತಿಯ ಕೃಪಾಕಟಾಕ್ಷಕ್ಕೆ ಯಾಱರ ಮನೆಯ ಮೀಟರ್​ಗಳು ಒಳಪಡುತ್ತೆ ಅನ್ನೋ ಗೊಂದಲ ಜನರನ್ನ ಕಾಡ್ತಿದೆ. ಹಾಗಿದ್ರೆ ಅರ್ಜಿ ಹಾಕದವರಿಗೆ ಗೃಹಜ್ಯೋತಿಯ ವರ ಸಿಗುತ್ತಾ ಇಲ್ವಾ? ಸಿಗಬೇಕು ಅಂದ್ರೆ ಏನ್​ ಮಾಡ್ಬೇಕು ಅನ್ನೋ ಡಿಟೈಲ್ಸ್​ ಇಲ್ಲಿದೆ ನೋಡಿ.

ನಿನ್ನೆಯಿಂದ ಕರುನಾಡಲ್ಲಿ ಗೃಹಜ್ಯೋತಿಯ ಬೆಳಕು ಚೆಲ್ಲಿದೆ. ಗ್ಯಾರಂಟಿ ಗುದ್ದಾಟದಲ್ಲಿ ಗೆದ್ದ ಕೈ ಫಲಾನುಭವಿಗಳ ಮನೆಯ ಮೀಟರ್​ಗೆ 200 ಯೂನಿಟ್​ನ ಲಕ್ಷ್ಮಣ ರೇಖೆ ಎಳೆದು, ಮೈನ್​ ಸ್ವಿಚ್​ನ್ನ ಆನ್​ ಮಾಡಿದೆ. ಈ ಮಧ್ಯೆ ಯಾರ್ಯಾರ ಮನೆಗಳ ವೈರ್​ನಲ್ಲಿ ಗೃಹಜ್ಯೋತಿ ಕರೆಂಟ್ ಪಾಸ್​ ಆಗುತ್ತೆ, ಯಾರ್ಯಾರ ಮನೆಗಳಲ್ಲಿ ಮತ್ತದೇ ಹಳೆಯ ಪವರ್​ ಸಪ್ಲೆಯೇ ಮುಂದುವರೆಯುತ್ತೇ ಅನ್ನೋ ತವಕ ಜನರನ್ನ ಕಾಡತೊಡಗಿದೆ. ಗೃಹಜ್ಯೋತಿಯ ಭಾಗ್ಯ ಈ ತಿಂಗಳಿನಿಂದಲೇ ಒಳಿಯುತ್ತೋ ಅಥವಾ, ಮುಂದಿನ ತಿಂಗಳೋ ಅನ್ನೊ ಗೊಂದಲವೂ ಜನರಲ್ಲಿ ಮೂಡಿದೆ.

ಜುಲೈ 25ರೊಳಗೆ ಅರ್ಜಿ ಸಲ್ಲಿಸಿದವರಿಗಷ್ಟೇ ಗೃಹಜ್ಯೋತಿ ಬೆಳಕು!

ಗೃಹಜ್ಯೋತಿ ಅರ್ಜಿ ಸಲ್ಲಿಸದೇ ಇನ್ನೂ ಟೈಂ ಇದೆ ಅಂತ ಕಾದಿದ್ದ ಜನರಿಗೆ ಕಾಂಗ್ರೆಸ್​ ಸರ್ಕಾರ ಗಡಿಯೊಂದರ ಕಡೆ ಬೊಟ್ಟುಮಾಡಿ ಅಲರ್ಟ್​ ಆಗುವ ಸೂಚನೆ ನೀಡಿದೆ. ಈ ತಿಂಗಳ 25ರೊಳಗೆ ಗೃಹಜ್ಯೋತಿಗೆ ಅರ್ಜಿ ಸಲ್ಲಿಸಿದ್ರೆ ಮಾತ್ರ ಮುಂದಿನ ತಿಂಗಳು, ಅಂದ್ರೆ ಆಗಸ್ಟ್​ನಲ್ಲಿ ಬರುವ ಜುಲೈ ತಿಂಗಳ ಕರೆಂಟ್​ ಬಿಲ್​ ಗೃಹಜ್ಯೋತಿ ಕೃಪೆಗೆ ಪಾತ್ರವಾಗಿರುತ್ತೆ. ಒಂದು ವೇಳೆ ಜುಲೈ 25ರೊಳಗೆ ನೀವು ಅರ್ಜಿಸಲ್ಲದೇ ಇದ್ದರೆ ನೀವು ಈ ಹಿಂದಿನಂತೆ ಕರೆಂಟ್​ ಬಿಲ್​ ಹಿಡಿದು ಕೆಇಬಿ ಕಚೇರಿಯಲ್ಲಿ ಕ್ಯೂ ನಿಲ್ಲಲೇ ಬೇಕಾಗುತ್ತೆ. ಈ ತಿಂಗಳು ಗೃಹಜ್ಯೋತಿ ನಿಮ್ಮ ಮನೆ ಬೆಳಗಬೇಕು ಅಂದ್ರೆ 25ರ ಒಳಗೆ ಅರ್ಜಿಸಲ್ಲಿಸಲೇ ಬೇಕಾಗುತ್ತೆ.

ಜುಲೈ 25ರ ಬಳಿಕ ಸಲ್ಲಿಸಿದ ಅರ್ಜಿ ಆಗಸ್ಟ್​ ಲೆಕ್ಕಕ್ಕೆ!

ಒಂದು ವೇಳೆ ಪಲಾನುಭವಿಗಳು ಜುಲೈ 25ರ ಬಳಿಕ ಅರ್ಜಿ ಸಲ್ಲಿಸಿದ್ರೆ ಆ ಅರ್ಜಿಯ ಕಥೆ ಏನು ಅಂತ ನೀವು ಯೋಚನೆ ಮಾಡ್ತಿರಬಹುದು. ಸರ್ಕಾರ ಅದಕ್ಕೂ ಒಂದು ಸಲ್ಯೂಷನ್ ನೀಡಿದೆ. ಜುಲೈ 25ರ ಬಳಿಕ ಸಲ್ಲಿಕೆಯಾದ ಅರ್ಜಿ ಆಗಸ್ಟ್​ ತಿಂಗಳಿನ ಗೃಹಜ್ಯೋತಿ ಸೌಲಭ್ಯ ಪಡೆಯಲು ಅರ್ಹವಾಗಿರುತ್ತೆ. ಅಂದ್ರೆ ಮುಂದೆ ಸೆಪ್ಟೆಂಬರ್​​ನಲ್ಲಿ ಬರುವ ಆಗಸ್ಟ್​ ತಿಂಗಳಿನ ಕರೆಂಟ್​ ಬಿಲ್​ ಗೃಹಜ್ಯೋತಿ ಕೃಪಾಕಟಾಕ್ಷಕ್ಕೆ ಒಳಗಾಗಿರುತ್ತೆ. ಆಗಸ್ಟ್​ ತಿಂಗಳಿನಲ್ಲಿ ನೀವು ಬಳಿಸಿದ 200 ಯೂನಿಟ್​ ಒಳಗಿನ ಕರೆಂಟ್​ಗೆ ಫುಲ್​ ಫ್ರೀಯಾಗಿರುತ್ತೆ. ಈ ಬಗ್ಗೆ ಇಂಧನ ಸಚಿವ ಕೆ.ಜೆ ಜಾರ್ಜ್​ ಸಹ ಟ್ವೀಟ್​ ಮಾಡಿ ಮಾಹಿತಿ ನೀಡಿದ್ದಾರೆ.

ಗೃಹಜ್ಯೋತಿಗೆ ಕವಿದ ನಕಲಿ ಆ್ಯಪ್​ಗಳ ಗ್ರಹಣ!

ಒಂದ್ಕಡೆ ಜನ ಗೃಹಜ್ಯೋತಿಗೆ ಅರ್ಜಿಸಲ್ಲಿಸಲು ಮುಗಿಬೀಳ್ತಿದ್ರೆ ಮತ್ತೊಂದ್ಕಡೆ ಸೈಬರ್​ ಖದೀಮರು ಇದನ್ನೇ ಬಂಡವಾಳ ಮಾಡಿಕೊಳ್ಳು ಪ್ಲಾನ್​ ಮಾಡಿದ್ದಾರೆ.. ಫೇಕ್ ಲಿಂಕ್, ಫೇಕ್ ವೆಬ್​ಸೈಟ್ ಮೂಲಕ ಜನರಿಗೆ ವಂಚನೆ ಮಾಡಲು ಖದೀಮರು ಮೋಸದ ಬಲೆ ಹೆಣೆದಿದ್ದಾರೆ. ಮೊಬೈಲ್ ಮೂಲಕ ಅರ್ಜಿ ಸಲ್ಲಿಸುವವರನ್ನೇ ಸೈಬರ್​ ಖದೀಮರು ಟಾರ್ಗೆಟ್ ಮಾಡುತ್ತಿದ್ದಾರೆ. ಈ ಬಗ್ಗೆ ಆರೋಪ ಕೇಳಿ ಬಂದ ಹಿನ್ನೆಲೆ ಸಿಸಿಬಿ ಟೆಕ್ನಿಕಲ್ ಸ್ಕ್ವಾಡ್ ವೆಬ್​ಸೈಟ್, ಲಿಂಕ್​ಗಳನ್ನ ಪರಿಶೀಲಿಸುತ್ತಿದ್ದು ಹದ್ದಿನ ಕಣ್ಣಿಟ್ಟಿದೆ. ಸಿಸಿಬಿ ಜಂಟಿ ಆಯುಕ್ತ ಶರಣಪ್ಪ, ಈ ಬಗ್ಗೆ ದೂರು ನೀಡುವಂತೆ ಬೆಸ್ಕಾಂ ಎಂ.ಡಿಗೆ ಮನವಿ ಮಾಡಿದ್ದಾರೆ. ಹಾಗೂ ಸುಮೋಟೋ ಕೇಸ್ ಕೂಡ​ ದಾಖಲಿಸಲು ಚಿಂತನೆ ನಡೆಸಿದ್ದಾರೆ.

‘ದೂರು ಕೊಟ್ರೆ ಕ್ರಮ ’

ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ವೆಬ್ ಸೈಟ್​ಗಳ ಬಗ್ಗೆ ಗಮನಕ್ಕೆ ಬಂದಿದೆ. ಗೃಹಜ್ಯೋತಿಗೆ ದಿನೇ ದಿನೆ ಅರ್ಜಿದಾರರ ಸಂಖ್ಯೆ ಹೆಚ್ಚಾಗ್ತಿದೆ. ಮೊಬೈಲ್‌ನಲ್ಲಿ ಅರ್ಜಿ ಹಾಕ್ತಿರೋರನ್ನ ಸೈಬರ್ ವಂಚಕರು ಟಾರ್ಗೆಟ್ ಮಾಡ್ತಿದ್ದಾರೆ. ಫೇಕ್‌ವೆಬ್ ಸೈಟ್​ಗಳ ಹಾವಳಿ ಬಗ್ಗೆ ಬೆಸ್ಕಾಂ ಎಂಡಿಯವರಿಗೆ ಮನವಿ ಮಾಡಿದ್ದೇವೆ. ದೂರು ಕೊಟ್ರೆ ಕ್ರಮ ಕೈಗೋಳ್ತಿವಿ. ಇಲ್ಲವಾದಲ್ಲಿ ನಾವೇ ಸ್ವಯಂಪ್ರೇರಿತ ದೂರು ದಾಖಲಿಸಿ ವೆಬ್ ಸೈಟ್‌ಗಳ ಬಗ್ಗೆ ತನಿಖೆ ಕೈಗೊಳ್ತೀವಿ.

ಒಟ್ನಲ್ಲಿ ಗೃಹಜ್ಯೋತಿಯ ಬೆಳಕಿನ ಮಧ್ಯೆ ಸೈಬರ್​ ವಂಚಕರ ಛಾಯೆ ಮೂಡಿರೋದು ಸಿಸಿಬಿ ಪೊಲೀಸರ ನಿದ್ದೆಗೆಡಿಸಿದೆ. ಮೊಬೈಲ್​ನಲ್ಲಿ ಆರಾಮಾಗಿ ಅಪ್ಲಿಕೇಷನ್ ಹಾಕ್ತಿನಿ ಅಂತ ಸಿಕ್ಕಸಿಕ್ಕ ಲಿಂಕ್​ ಅನ್ನ ಕ್ಲಿಕ್​ ಮಾಡಿದ್ರೆ ಖದೀಮರು ನಿಮ್ಮ ಜೇಬಿಗೂ ಕತ್ತರಿ ಹಾಕೋದು ಖಾತರಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

ಈ ತಿಂಗಳಿನಿಂದ ಯಾರಿಗೆ ಕರೆಂಟ್​ ಫ್ರೀ? ನೀವು ಬಿಲ್​​ ಕಟ್ಟಬೇಕಾ ಬೇಡವಾ..?

https://newsfirstlive.com/wp-content/uploads/2023/07/Current-Bill_1.jpg

    ಕರುನಾಡನ್ನ ಬೆಳಗಿದ ಕಾಂಗ್ರೆಸ್​ ‘ಗೃಹಜ್ಯೋತಿ’ ಬೆಳಕು

    200 ಯೂನಿಟ್​ ಲಕ್ಷ್ಮಣ ರೇಖೆ, ಫಲಾನುಭವಿಗಳಿಗೆ ಫ್ರೀ!

    ಗೃಹಜ್ಯೋತಿಯ ಭಾಗ್ಯ ಈ ತಿಂಗಳಿಂದಲೇ ಒಲಿಯುತ್ತಾ?

ಬೆಂಗಳೂರು: ಕಾಂಗ್ರೆಸ್​ ಗ್ಯಾರಂಟಿಗಳ ಪೈಕಿ ಒಂದಾದ ‘ಗೃಹಜ್ಯೋತಿ‘ ಕರುನಾಡನ್ನ ಬೆಳಗಲು ಶುರುಮಾಡಿದೆ. ಆದ್ರೆ ಈ ತಿಂಗಳು ಗೃಹಜ್ಯೋತಿಯ ಕೃಪಾಕಟಾಕ್ಷಕ್ಕೆ ಯಾಱರ ಮನೆಯ ಮೀಟರ್​ಗಳು ಒಳಪಡುತ್ತೆ ಅನ್ನೋ ಗೊಂದಲ ಜನರನ್ನ ಕಾಡ್ತಿದೆ. ಹಾಗಿದ್ರೆ ಅರ್ಜಿ ಹಾಕದವರಿಗೆ ಗೃಹಜ್ಯೋತಿಯ ವರ ಸಿಗುತ್ತಾ ಇಲ್ವಾ? ಸಿಗಬೇಕು ಅಂದ್ರೆ ಏನ್​ ಮಾಡ್ಬೇಕು ಅನ್ನೋ ಡಿಟೈಲ್ಸ್​ ಇಲ್ಲಿದೆ ನೋಡಿ.

ನಿನ್ನೆಯಿಂದ ಕರುನಾಡಲ್ಲಿ ಗೃಹಜ್ಯೋತಿಯ ಬೆಳಕು ಚೆಲ್ಲಿದೆ. ಗ್ಯಾರಂಟಿ ಗುದ್ದಾಟದಲ್ಲಿ ಗೆದ್ದ ಕೈ ಫಲಾನುಭವಿಗಳ ಮನೆಯ ಮೀಟರ್​ಗೆ 200 ಯೂನಿಟ್​ನ ಲಕ್ಷ್ಮಣ ರೇಖೆ ಎಳೆದು, ಮೈನ್​ ಸ್ವಿಚ್​ನ್ನ ಆನ್​ ಮಾಡಿದೆ. ಈ ಮಧ್ಯೆ ಯಾರ್ಯಾರ ಮನೆಗಳ ವೈರ್​ನಲ್ಲಿ ಗೃಹಜ್ಯೋತಿ ಕರೆಂಟ್ ಪಾಸ್​ ಆಗುತ್ತೆ, ಯಾರ್ಯಾರ ಮನೆಗಳಲ್ಲಿ ಮತ್ತದೇ ಹಳೆಯ ಪವರ್​ ಸಪ್ಲೆಯೇ ಮುಂದುವರೆಯುತ್ತೇ ಅನ್ನೋ ತವಕ ಜನರನ್ನ ಕಾಡತೊಡಗಿದೆ. ಗೃಹಜ್ಯೋತಿಯ ಭಾಗ್ಯ ಈ ತಿಂಗಳಿನಿಂದಲೇ ಒಳಿಯುತ್ತೋ ಅಥವಾ, ಮುಂದಿನ ತಿಂಗಳೋ ಅನ್ನೊ ಗೊಂದಲವೂ ಜನರಲ್ಲಿ ಮೂಡಿದೆ.

ಜುಲೈ 25ರೊಳಗೆ ಅರ್ಜಿ ಸಲ್ಲಿಸಿದವರಿಗಷ್ಟೇ ಗೃಹಜ್ಯೋತಿ ಬೆಳಕು!

ಗೃಹಜ್ಯೋತಿ ಅರ್ಜಿ ಸಲ್ಲಿಸದೇ ಇನ್ನೂ ಟೈಂ ಇದೆ ಅಂತ ಕಾದಿದ್ದ ಜನರಿಗೆ ಕಾಂಗ್ರೆಸ್​ ಸರ್ಕಾರ ಗಡಿಯೊಂದರ ಕಡೆ ಬೊಟ್ಟುಮಾಡಿ ಅಲರ್ಟ್​ ಆಗುವ ಸೂಚನೆ ನೀಡಿದೆ. ಈ ತಿಂಗಳ 25ರೊಳಗೆ ಗೃಹಜ್ಯೋತಿಗೆ ಅರ್ಜಿ ಸಲ್ಲಿಸಿದ್ರೆ ಮಾತ್ರ ಮುಂದಿನ ತಿಂಗಳು, ಅಂದ್ರೆ ಆಗಸ್ಟ್​ನಲ್ಲಿ ಬರುವ ಜುಲೈ ತಿಂಗಳ ಕರೆಂಟ್​ ಬಿಲ್​ ಗೃಹಜ್ಯೋತಿ ಕೃಪೆಗೆ ಪಾತ್ರವಾಗಿರುತ್ತೆ. ಒಂದು ವೇಳೆ ಜುಲೈ 25ರೊಳಗೆ ನೀವು ಅರ್ಜಿಸಲ್ಲದೇ ಇದ್ದರೆ ನೀವು ಈ ಹಿಂದಿನಂತೆ ಕರೆಂಟ್​ ಬಿಲ್​ ಹಿಡಿದು ಕೆಇಬಿ ಕಚೇರಿಯಲ್ಲಿ ಕ್ಯೂ ನಿಲ್ಲಲೇ ಬೇಕಾಗುತ್ತೆ. ಈ ತಿಂಗಳು ಗೃಹಜ್ಯೋತಿ ನಿಮ್ಮ ಮನೆ ಬೆಳಗಬೇಕು ಅಂದ್ರೆ 25ರ ಒಳಗೆ ಅರ್ಜಿಸಲ್ಲಿಸಲೇ ಬೇಕಾಗುತ್ತೆ.

ಜುಲೈ 25ರ ಬಳಿಕ ಸಲ್ಲಿಸಿದ ಅರ್ಜಿ ಆಗಸ್ಟ್​ ಲೆಕ್ಕಕ್ಕೆ!

ಒಂದು ವೇಳೆ ಪಲಾನುಭವಿಗಳು ಜುಲೈ 25ರ ಬಳಿಕ ಅರ್ಜಿ ಸಲ್ಲಿಸಿದ್ರೆ ಆ ಅರ್ಜಿಯ ಕಥೆ ಏನು ಅಂತ ನೀವು ಯೋಚನೆ ಮಾಡ್ತಿರಬಹುದು. ಸರ್ಕಾರ ಅದಕ್ಕೂ ಒಂದು ಸಲ್ಯೂಷನ್ ನೀಡಿದೆ. ಜುಲೈ 25ರ ಬಳಿಕ ಸಲ್ಲಿಕೆಯಾದ ಅರ್ಜಿ ಆಗಸ್ಟ್​ ತಿಂಗಳಿನ ಗೃಹಜ್ಯೋತಿ ಸೌಲಭ್ಯ ಪಡೆಯಲು ಅರ್ಹವಾಗಿರುತ್ತೆ. ಅಂದ್ರೆ ಮುಂದೆ ಸೆಪ್ಟೆಂಬರ್​​ನಲ್ಲಿ ಬರುವ ಆಗಸ್ಟ್​ ತಿಂಗಳಿನ ಕರೆಂಟ್​ ಬಿಲ್​ ಗೃಹಜ್ಯೋತಿ ಕೃಪಾಕಟಾಕ್ಷಕ್ಕೆ ಒಳಗಾಗಿರುತ್ತೆ. ಆಗಸ್ಟ್​ ತಿಂಗಳಿನಲ್ಲಿ ನೀವು ಬಳಿಸಿದ 200 ಯೂನಿಟ್​ ಒಳಗಿನ ಕರೆಂಟ್​ಗೆ ಫುಲ್​ ಫ್ರೀಯಾಗಿರುತ್ತೆ. ಈ ಬಗ್ಗೆ ಇಂಧನ ಸಚಿವ ಕೆ.ಜೆ ಜಾರ್ಜ್​ ಸಹ ಟ್ವೀಟ್​ ಮಾಡಿ ಮಾಹಿತಿ ನೀಡಿದ್ದಾರೆ.

ಗೃಹಜ್ಯೋತಿಗೆ ಕವಿದ ನಕಲಿ ಆ್ಯಪ್​ಗಳ ಗ್ರಹಣ!

ಒಂದ್ಕಡೆ ಜನ ಗೃಹಜ್ಯೋತಿಗೆ ಅರ್ಜಿಸಲ್ಲಿಸಲು ಮುಗಿಬೀಳ್ತಿದ್ರೆ ಮತ್ತೊಂದ್ಕಡೆ ಸೈಬರ್​ ಖದೀಮರು ಇದನ್ನೇ ಬಂಡವಾಳ ಮಾಡಿಕೊಳ್ಳು ಪ್ಲಾನ್​ ಮಾಡಿದ್ದಾರೆ.. ಫೇಕ್ ಲಿಂಕ್, ಫೇಕ್ ವೆಬ್​ಸೈಟ್ ಮೂಲಕ ಜನರಿಗೆ ವಂಚನೆ ಮಾಡಲು ಖದೀಮರು ಮೋಸದ ಬಲೆ ಹೆಣೆದಿದ್ದಾರೆ. ಮೊಬೈಲ್ ಮೂಲಕ ಅರ್ಜಿ ಸಲ್ಲಿಸುವವರನ್ನೇ ಸೈಬರ್​ ಖದೀಮರು ಟಾರ್ಗೆಟ್ ಮಾಡುತ್ತಿದ್ದಾರೆ. ಈ ಬಗ್ಗೆ ಆರೋಪ ಕೇಳಿ ಬಂದ ಹಿನ್ನೆಲೆ ಸಿಸಿಬಿ ಟೆಕ್ನಿಕಲ್ ಸ್ಕ್ವಾಡ್ ವೆಬ್​ಸೈಟ್, ಲಿಂಕ್​ಗಳನ್ನ ಪರಿಶೀಲಿಸುತ್ತಿದ್ದು ಹದ್ದಿನ ಕಣ್ಣಿಟ್ಟಿದೆ. ಸಿಸಿಬಿ ಜಂಟಿ ಆಯುಕ್ತ ಶರಣಪ್ಪ, ಈ ಬಗ್ಗೆ ದೂರು ನೀಡುವಂತೆ ಬೆಸ್ಕಾಂ ಎಂ.ಡಿಗೆ ಮನವಿ ಮಾಡಿದ್ದಾರೆ. ಹಾಗೂ ಸುಮೋಟೋ ಕೇಸ್ ಕೂಡ​ ದಾಖಲಿಸಲು ಚಿಂತನೆ ನಡೆಸಿದ್ದಾರೆ.

‘ದೂರು ಕೊಟ್ರೆ ಕ್ರಮ ’

ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ವೆಬ್ ಸೈಟ್​ಗಳ ಬಗ್ಗೆ ಗಮನಕ್ಕೆ ಬಂದಿದೆ. ಗೃಹಜ್ಯೋತಿಗೆ ದಿನೇ ದಿನೆ ಅರ್ಜಿದಾರರ ಸಂಖ್ಯೆ ಹೆಚ್ಚಾಗ್ತಿದೆ. ಮೊಬೈಲ್‌ನಲ್ಲಿ ಅರ್ಜಿ ಹಾಕ್ತಿರೋರನ್ನ ಸೈಬರ್ ವಂಚಕರು ಟಾರ್ಗೆಟ್ ಮಾಡ್ತಿದ್ದಾರೆ. ಫೇಕ್‌ವೆಬ್ ಸೈಟ್​ಗಳ ಹಾವಳಿ ಬಗ್ಗೆ ಬೆಸ್ಕಾಂ ಎಂಡಿಯವರಿಗೆ ಮನವಿ ಮಾಡಿದ್ದೇವೆ. ದೂರು ಕೊಟ್ರೆ ಕ್ರಮ ಕೈಗೋಳ್ತಿವಿ. ಇಲ್ಲವಾದಲ್ಲಿ ನಾವೇ ಸ್ವಯಂಪ್ರೇರಿತ ದೂರು ದಾಖಲಿಸಿ ವೆಬ್ ಸೈಟ್‌ಗಳ ಬಗ್ಗೆ ತನಿಖೆ ಕೈಗೊಳ್ತೀವಿ.

ಒಟ್ನಲ್ಲಿ ಗೃಹಜ್ಯೋತಿಯ ಬೆಳಕಿನ ಮಧ್ಯೆ ಸೈಬರ್​ ವಂಚಕರ ಛಾಯೆ ಮೂಡಿರೋದು ಸಿಸಿಬಿ ಪೊಲೀಸರ ನಿದ್ದೆಗೆಡಿಸಿದೆ. ಮೊಬೈಲ್​ನಲ್ಲಿ ಆರಾಮಾಗಿ ಅಪ್ಲಿಕೇಷನ್ ಹಾಕ್ತಿನಿ ಅಂತ ಸಿಕ್ಕಸಿಕ್ಕ ಲಿಂಕ್​ ಅನ್ನ ಕ್ಲಿಕ್​ ಮಾಡಿದ್ರೆ ಖದೀಮರು ನಿಮ್ಮ ಜೇಬಿಗೂ ಕತ್ತರಿ ಹಾಕೋದು ಖಾತರಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

Load More