newsfirstkannada.com

ಬೆಂಗಳೂರಿನಲ್ಲಿ ಗಾಂಜಾ ಚಾಕೊಲೇಟ್ ಮಾರಾಟ ಜಾಲ ಪತ್ತೆ.. ಓರ್ವ ಬಂಧನ, ಮೂವರು ಪರಾರಿ

Share :

24-08-2023

    ಗಾಂಜಾ ಚಾಕೊಲೇಟ್ ಮಾರಾಟ ಜಾಲ ಪತ್ತೆ

    ಉತ್ತರ ಪ್ರದೇಶದಿಂದ ತಂದು ಬೆಂಗಳೂರಿನಲ್ಲಿ ಮಾರಾಟ

    50 ರೂಪಾಯಿಗೆ ಮೂರು ಚಾಕೊಲೇಟ್ ಮಾರಾಟ

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ಗಾಂಜಾ ಚಾಕೊಲೇಟ್ ಮಾರಾಟಕ್ಕೆ ಯತ್ನಿಸುತ್ತಿದ್ದ ಜಾಲ ಪತ್ತೆಯಾಗಿದ್ದು, ಪೊಲೀಸರು ಶಮೀಮ್ ಅಕ್ತರ್ ಎಂಬಾತನನ್ನು ಬಂಧಿಸಿದ್ದಾರೆ. ಬಂಧಿತರಿಂದ 6 ಲಕ್ಷ ಮೌಲ್ಯದ ಚಾಕೊಲೇಟ್​​​ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮುನಾಕ್ಕಾ, ಮಹಾಕಾಲ, ಆನಂದ, ಚಾರ್ ಮಿನಾರ್ ಗೊಲ್ಕ್ ಹೆಸರಿನ‌ ಚಾಕೊಲೇಟ್​ ಅನ್ನು ಆರೋಪಿಗಳು ಮಾರಾಟ ಮಾಡಲು ಯತ್ನಿಸುತ್ತಿದ್ದರು. ಉತ್ತರ ಪ್ರದೇಶದಿಂದ ತಂದು ಬೆಂಗಳೂರಿನಲ್ಲಿ ಮಾರಾಟಕ್ಕೆ ಯತ್ನಿಸುತ್ತಿದ್ದರು. ಟ್ರೈನ್ ಮೂಲಕ ಸಾಗಾಟ ಮಾಡಿ ಬೆಂಗಳೂರಿಗೆ ತರುತ್ತಿದ್ದರು.

50 ರೂಪಾಯಿಗೆ ಮೂರು ಚಾಕೊಲೇಟ್

ಗ್ಯಾಂಗ್​ 50 ರೂಪಾಯಿಗೆ ಮೂರು ಚಾಕೊಲೇಟ್ ಮಾರಾಟ ಮಾಡ್ತಾ ಇದ್ದರು. ಈ ವಿಚಾರ ತಿಳಿದಂತೆ ಪೊಲೀಸರ ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆ ಕೆಲವು ಆರೋಪಿಗಳು ಪರಾರಿಯಾಗಿದ್ದರು.

ಮೂವರು ನಾಪತ್ತೆ

ಇನ್ನು ಶಮೀಮ್ ನಿಂದ ಚಾಕೊಲೇಟ್ ಪಡೆಯುತ್ತಿದ್ದ ಮೂವರು ನಾಪತ್ತೆಯಾಗಿದ್ದರು. ಸಂಜಯ್, ಗೋವಿಂದ ಮತ್ತು ವಿನೋದ್ ಎಂಬವರು ಪೊಲೀಸರ ಸುಳಿವು ಸಿಕ್ಕಂತೆ ಓಡಿ ಹೋಗುತ್ತಿದ್ದರು. ಆದರೀಗ ನಾಪತ್ತೆಯಾದ ಆರೋಪಿಗಳಿಗೆ ಆರ್.ಎಂ.ಸಿ. ಯಾರ್ಡ್ ಪೊಲೀಸರು ಹುಡುಕಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಿನಲ್ಲಿ ಗಾಂಜಾ ಚಾಕೊಲೇಟ್ ಮಾರಾಟ ಜಾಲ ಪತ್ತೆ.. ಓರ್ವ ಬಂಧನ, ಮೂವರು ಪರಾರಿ

https://newsfirstlive.com/wp-content/uploads/2023/08/Ganja-Chocolate.jpg

    ಗಾಂಜಾ ಚಾಕೊಲೇಟ್ ಮಾರಾಟ ಜಾಲ ಪತ್ತೆ

    ಉತ್ತರ ಪ್ರದೇಶದಿಂದ ತಂದು ಬೆಂಗಳೂರಿನಲ್ಲಿ ಮಾರಾಟ

    50 ರೂಪಾಯಿಗೆ ಮೂರು ಚಾಕೊಲೇಟ್ ಮಾರಾಟ

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ಗಾಂಜಾ ಚಾಕೊಲೇಟ್ ಮಾರಾಟಕ್ಕೆ ಯತ್ನಿಸುತ್ತಿದ್ದ ಜಾಲ ಪತ್ತೆಯಾಗಿದ್ದು, ಪೊಲೀಸರು ಶಮೀಮ್ ಅಕ್ತರ್ ಎಂಬಾತನನ್ನು ಬಂಧಿಸಿದ್ದಾರೆ. ಬಂಧಿತರಿಂದ 6 ಲಕ್ಷ ಮೌಲ್ಯದ ಚಾಕೊಲೇಟ್​​​ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮುನಾಕ್ಕಾ, ಮಹಾಕಾಲ, ಆನಂದ, ಚಾರ್ ಮಿನಾರ್ ಗೊಲ್ಕ್ ಹೆಸರಿನ‌ ಚಾಕೊಲೇಟ್​ ಅನ್ನು ಆರೋಪಿಗಳು ಮಾರಾಟ ಮಾಡಲು ಯತ್ನಿಸುತ್ತಿದ್ದರು. ಉತ್ತರ ಪ್ರದೇಶದಿಂದ ತಂದು ಬೆಂಗಳೂರಿನಲ್ಲಿ ಮಾರಾಟಕ್ಕೆ ಯತ್ನಿಸುತ್ತಿದ್ದರು. ಟ್ರೈನ್ ಮೂಲಕ ಸಾಗಾಟ ಮಾಡಿ ಬೆಂಗಳೂರಿಗೆ ತರುತ್ತಿದ್ದರು.

50 ರೂಪಾಯಿಗೆ ಮೂರು ಚಾಕೊಲೇಟ್

ಗ್ಯಾಂಗ್​ 50 ರೂಪಾಯಿಗೆ ಮೂರು ಚಾಕೊಲೇಟ್ ಮಾರಾಟ ಮಾಡ್ತಾ ಇದ್ದರು. ಈ ವಿಚಾರ ತಿಳಿದಂತೆ ಪೊಲೀಸರ ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆ ಕೆಲವು ಆರೋಪಿಗಳು ಪರಾರಿಯಾಗಿದ್ದರು.

ಮೂವರು ನಾಪತ್ತೆ

ಇನ್ನು ಶಮೀಮ್ ನಿಂದ ಚಾಕೊಲೇಟ್ ಪಡೆಯುತ್ತಿದ್ದ ಮೂವರು ನಾಪತ್ತೆಯಾಗಿದ್ದರು. ಸಂಜಯ್, ಗೋವಿಂದ ಮತ್ತು ವಿನೋದ್ ಎಂಬವರು ಪೊಲೀಸರ ಸುಳಿವು ಸಿಕ್ಕಂತೆ ಓಡಿ ಹೋಗುತ್ತಿದ್ದರು. ಆದರೀಗ ನಾಪತ್ತೆಯಾದ ಆರೋಪಿಗಳಿಗೆ ಆರ್.ಎಂ.ಸಿ. ಯಾರ್ಡ್ ಪೊಲೀಸರು ಹುಡುಕಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More