newsfirstkannada.com

ಅರರೇ.. ಏನಿದು ಅಚ್ಚರಿ..!! ಧೋನಿಯನ್ನು ಹಾಡಿ ಹೊಗಳಿದ ಆ್ಯಂಗ್ರಿಮ್ಯಾನ್ ಗಂಭೀರ್​..!

Share :

19-09-2023

    ಧೋನಿ ಹೊಗಳಿದ್ರೆ ಕೋಪಿಸಿಕೊಳ್ತಿದ್ದ ಗಂಭೀರ್!

    ಅಭಿಮಾನಿಗಳನ್ನು ಹುಬ್ಬೇರಿಸುವಂತೆ ಮಾಡಿದ ಗೌತಮ್

    ‘ಧೋನಿ ನಿಸ್ವಾರ್ಥ ಕ್ಯಾಪ್ಟನ್’ ಗಂಭೀರ್ ಬಣ್ಣನೆ

ಭಾರತ ತಂಡದ ಮಾಜಿ ಕ್ಯಾಪ್ಟನ್ ಎಂ.ಎಸ್.ಧೋನಿ ವಿರುದ್ಧ ಹರಿಹಾಯುವ ಮಾಜಿ ಕ್ರಿಕೆಟಿಗ ಗೌತಮ್​ ಗಂಭೀರ್​​​, ಈಗ ಅದೇ ಮಾಹಿಯನ್ನ ಕೊಂಡಾಡಿದ್ದಾರೆ.

ಧೋನಿ ಐಸಿಸಿ ಟ್ರೋಫಿಗಾಗಿ ವೈಯಕ್ತಿಕ ರನ್​ ತ್ಯಾಗ ಮಾಡಿದ್ದಾರೆ. ಮಾಹಿ ನಿಸ್ವಾರ್ಥ ನಾಯಕ. ಸದಾ ಮುಂಚೂಣಿಯಲ್ಲಿದ್ದು ತಂಡವನ್ನು ಮುನ್ನಡೆಸುತ್ತಿದ್ದರು. ಒಂದು ವೇಳೆ ಅವರು 3ನೇ ಕ್ರಮಾಂಕದಲ್ಲಿ ಆಡಿದ್ದರೆ ಹಲವು ದಾಖಲೆಗಳನ್ನು ನಿರ್ಮಾಣ ಮಾಡುತ್ತಿದ್ದರು. ಕ್ಯಾಪ್ಟನ್ ಆದ ಮೇಲೆ ಅವರು 6 ಮತ್ತು 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬರುತ್ತಿದ್ದರು. ಆದರೆ ಅವರು ಹಾಗೇ ಮಾಡಲಿಲ್ಲ, ಟ್ರೋಫಿಗಾಗಿ ವೈಯಕ್ತಿಕ ರನ್​​ ಗಳಿಕೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ನಿಜಕ್ಕೂ ಅವರೊಬ್ಬ ನಿಸ್ವಾರ್ಥಿ ಕ್ಯಾಪ್ಟನ್ ಎಂದು ಗಂಭೀರ್ ಬಣ್ಣಿಸಿದ್ದಾರೆ.

ಜನ ಧೋನಿ ಸಾಧನೆ, ಅವರ ಕ್ಯಾಪ್ಟನ್ಸಿ ಬಗ್ಗೆ ಯಾವಗಾಲೂ ಮಾತನಾಡುತ್ತಿರುತ್ತಾರೆ. ಅದು ನಿಜ ಕೂಡ! ಕ್ಯಾಪ್ಟನ್ಸಿಗಾಗಿ ಅವರು ಕೆಲವು ತ್ಯಾಗಗಳನ್ನೂ ಮಾಡಿದ್ದಾರೆ. ಒಂದು ವೇಳೆ ಈ ತ್ಯಾಗಗಳನ್ನು ಮಾಡಿದ್ದರೆ ನಿರೀಕ್ಷೆಗಳಿಗೂ ಮೀರಿದ ಸಾಧನೆಯನ್ನು ಮಾಡಿರುತ್ತಿದ್ದರು. ಅವರು ಕ್ಯಾಪ್ಟನ್ ಆಗಿ, ತಂಡದ ಸದಸ್ಯರಾಗಿ ನಡೆದುಕೊಂಡ ರೀತಿಯನ್ನು ಯಾರೂ ಮರೆಯುವಂತಿಲ್ಲ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಅರರೇ.. ಏನಿದು ಅಚ್ಚರಿ..!! ಧೋನಿಯನ್ನು ಹಾಡಿ ಹೊಗಳಿದ ಆ್ಯಂಗ್ರಿಮ್ಯಾನ್ ಗಂಭೀರ್​..!

https://newsfirstlive.com/wp-content/uploads/2023/09/MS_DHONI-1.jpg

    ಧೋನಿ ಹೊಗಳಿದ್ರೆ ಕೋಪಿಸಿಕೊಳ್ತಿದ್ದ ಗಂಭೀರ್!

    ಅಭಿಮಾನಿಗಳನ್ನು ಹುಬ್ಬೇರಿಸುವಂತೆ ಮಾಡಿದ ಗೌತಮ್

    ‘ಧೋನಿ ನಿಸ್ವಾರ್ಥ ಕ್ಯಾಪ್ಟನ್’ ಗಂಭೀರ್ ಬಣ್ಣನೆ

ಭಾರತ ತಂಡದ ಮಾಜಿ ಕ್ಯಾಪ್ಟನ್ ಎಂ.ಎಸ್.ಧೋನಿ ವಿರುದ್ಧ ಹರಿಹಾಯುವ ಮಾಜಿ ಕ್ರಿಕೆಟಿಗ ಗೌತಮ್​ ಗಂಭೀರ್​​​, ಈಗ ಅದೇ ಮಾಹಿಯನ್ನ ಕೊಂಡಾಡಿದ್ದಾರೆ.

ಧೋನಿ ಐಸಿಸಿ ಟ್ರೋಫಿಗಾಗಿ ವೈಯಕ್ತಿಕ ರನ್​ ತ್ಯಾಗ ಮಾಡಿದ್ದಾರೆ. ಮಾಹಿ ನಿಸ್ವಾರ್ಥ ನಾಯಕ. ಸದಾ ಮುಂಚೂಣಿಯಲ್ಲಿದ್ದು ತಂಡವನ್ನು ಮುನ್ನಡೆಸುತ್ತಿದ್ದರು. ಒಂದು ವೇಳೆ ಅವರು 3ನೇ ಕ್ರಮಾಂಕದಲ್ಲಿ ಆಡಿದ್ದರೆ ಹಲವು ದಾಖಲೆಗಳನ್ನು ನಿರ್ಮಾಣ ಮಾಡುತ್ತಿದ್ದರು. ಕ್ಯಾಪ್ಟನ್ ಆದ ಮೇಲೆ ಅವರು 6 ಮತ್ತು 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬರುತ್ತಿದ್ದರು. ಆದರೆ ಅವರು ಹಾಗೇ ಮಾಡಲಿಲ್ಲ, ಟ್ರೋಫಿಗಾಗಿ ವೈಯಕ್ತಿಕ ರನ್​​ ಗಳಿಕೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ನಿಜಕ್ಕೂ ಅವರೊಬ್ಬ ನಿಸ್ವಾರ್ಥಿ ಕ್ಯಾಪ್ಟನ್ ಎಂದು ಗಂಭೀರ್ ಬಣ್ಣಿಸಿದ್ದಾರೆ.

ಜನ ಧೋನಿ ಸಾಧನೆ, ಅವರ ಕ್ಯಾಪ್ಟನ್ಸಿ ಬಗ್ಗೆ ಯಾವಗಾಲೂ ಮಾತನಾಡುತ್ತಿರುತ್ತಾರೆ. ಅದು ನಿಜ ಕೂಡ! ಕ್ಯಾಪ್ಟನ್ಸಿಗಾಗಿ ಅವರು ಕೆಲವು ತ್ಯಾಗಗಳನ್ನೂ ಮಾಡಿದ್ದಾರೆ. ಒಂದು ವೇಳೆ ಈ ತ್ಯಾಗಗಳನ್ನು ಮಾಡಿದ್ದರೆ ನಿರೀಕ್ಷೆಗಳಿಗೂ ಮೀರಿದ ಸಾಧನೆಯನ್ನು ಮಾಡಿರುತ್ತಿದ್ದರು. ಅವರು ಕ್ಯಾಪ್ಟನ್ ಆಗಿ, ತಂಡದ ಸದಸ್ಯರಾಗಿ ನಡೆದುಕೊಂಡ ರೀತಿಯನ್ನು ಯಾರೂ ಮರೆಯುವಂತಿಲ್ಲ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Load More