newsfirstkannada.com

ಇವನು ಗೆಳೆಯನಲ್ಲ.. ಚೂರಿಯಿಂದ ಚುಚ್ಚಿ ಸ್ನೇಹಿತನನ್ನೇ ಕೊಲೆ ಮಾಡಿದ ಗೆಳತಿ

Share :

07-09-2023

    ಕೇರಳ ಮೂಲದ ಸ್ನೇಹಿತನನ್ನು ಕೈಯಾರೆ ಕೊಂದ ಗೆಳತಿ

    ಒಂದೇ ಏರಿಯಾದಲ್ಲಿದ್ದ ಇಬ್ಬರ ನಡುವೆ ಸ್ನೇಹ ಬೆಳೆದಿತ್ತು

    ಕೊಲೆಯ ಮೂರು ದಿನದ ಹಿಂದೆ ಇಬ್ಬರು ಭೇಟಿ ಮಾಡಿದ್ದರು

ಗೆಳತಿಯೇ ತನ್ನ ಗೆಳೆಯನನ್ನ ಹತ್ಯೆ ಮಾಡಿದ ಘಟನೆ ಹುಳಿಮಾವುನಗರದ ಅಪಾರ್ಟ್​​ಮೆಂಟ್​​ನಲ್ಲಿ ನಡೆದಿದೆ. ಕೇರಳ ಮೂಲದ 24 ವರ್ಷದ ಜಾವೀದ್ ಕೊಲೆಯಾದ ಯುವಕ.

ಜಾವೀದ್​​ ಮೊಬೈಲ್ ಸರ್ವಿಸ್ ಸೆಂಟರ್​​ನಲ್ಲಿ ಕೆಲಸ ಮಾಡುತ್ತಿದ್ದ. ಈ ವೇಳೆ ಮಡಿವಾಳದ ಒಂದೇ ಏರಿಯಾದಲ್ಲಿ ವಾಸವಾಗಿದ್ದ ರೇಣುಕಾ ಎಂಬಾಕೆಯ ಪರಿಚಯವಾಗಿತ್ತು. ಮೂರು ವರ್ಷದಿಂದ ಇಬ್ಬರ ನಡುವೆ ಪರಿಚಯವಾಗಿ ಸಲುಗೆ ಬೆಳೆದಿತ್ತು. ಹೀಗಾಗಿ ಇಬ್ಬರು ಆಗಾಗ ಭೇಟಿ ಮಾಡುತ್ತಿದ್ದರು.

ಹಣಕಾಸಿನ ವ್ಯವಹಾರ

ರೇಣುಕಾ ಮತ್ತು ಜಾವೀದ್​ ಸರ್ವಿಸ್ ಅಪಾರ್ಟ್​​ಮೆಂಟ್​​ನಲ್ಲಿ ಉಳಿದುಕೊಳ್ಳುತಿದ್ದರು. ಈ ವೇಳೆ ಇಬ್ಬರ ನಡುವೆ ಹಣಕಾಸಿನ ವ್ಯವಹಾರ ಸಹ ನಡೆದಿತ್ತು ಎನ್ನಲಾಗಿದೆ.

ಎದೆಗೆ ಚುಚ್ಚಿಬಿಟ್ಟಲು

ಕೊಲೆಯ ಮೂರು ದಿನದ ಹಿಂದೆ ಕೂಡ ಇಬ್ಬರು ಭೇಟಿಯಾಗಿದ್ದು, ಹುಳಿಮಾವಿನ ಅಕ್ಷಯಾನಗರದ ಅಪಾರ್ಟ್​​ಮೆಂಟ್​​ಗೆ ಬಂದಿದ್ದರು. ಕಳೆದ ಮಂಗಳವಾರ ಇಬ್ಬರ ನಡುವೆ ಜಗಳ ನಡೆದಿತ್ತು ಎನ್ನಲಾಗಿದೆ. ಜಗಳದ ನಡುವೆ ರೇಣುಕಾ ಯುವಕನಿಗೆ ಚಾಕುನಿಂದ ಎದೆಗೆ ಇರಿದಿದ್ದಾಳೆ.

ಸದ್ಯ ಆರೋಪಿ ರೇಣುಕಾಳನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ. ಕೇಸ್ ಸಂಬಂಧ ಪೊಲೀಸರಿಂದ ತನಿಖೆ ಮುಂದುವರಿದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇವನು ಗೆಳೆಯನಲ್ಲ.. ಚೂರಿಯಿಂದ ಚುಚ್ಚಿ ಸ್ನೇಹಿತನನ್ನೇ ಕೊಲೆ ಮಾಡಿದ ಗೆಳತಿ

https://newsfirstlive.com/wp-content/uploads/2023/09/Renuka-1.jpg

    ಕೇರಳ ಮೂಲದ ಸ್ನೇಹಿತನನ್ನು ಕೈಯಾರೆ ಕೊಂದ ಗೆಳತಿ

    ಒಂದೇ ಏರಿಯಾದಲ್ಲಿದ್ದ ಇಬ್ಬರ ನಡುವೆ ಸ್ನೇಹ ಬೆಳೆದಿತ್ತು

    ಕೊಲೆಯ ಮೂರು ದಿನದ ಹಿಂದೆ ಇಬ್ಬರು ಭೇಟಿ ಮಾಡಿದ್ದರು

ಗೆಳತಿಯೇ ತನ್ನ ಗೆಳೆಯನನ್ನ ಹತ್ಯೆ ಮಾಡಿದ ಘಟನೆ ಹುಳಿಮಾವುನಗರದ ಅಪಾರ್ಟ್​​ಮೆಂಟ್​​ನಲ್ಲಿ ನಡೆದಿದೆ. ಕೇರಳ ಮೂಲದ 24 ವರ್ಷದ ಜಾವೀದ್ ಕೊಲೆಯಾದ ಯುವಕ.

ಜಾವೀದ್​​ ಮೊಬೈಲ್ ಸರ್ವಿಸ್ ಸೆಂಟರ್​​ನಲ್ಲಿ ಕೆಲಸ ಮಾಡುತ್ತಿದ್ದ. ಈ ವೇಳೆ ಮಡಿವಾಳದ ಒಂದೇ ಏರಿಯಾದಲ್ಲಿ ವಾಸವಾಗಿದ್ದ ರೇಣುಕಾ ಎಂಬಾಕೆಯ ಪರಿಚಯವಾಗಿತ್ತು. ಮೂರು ವರ್ಷದಿಂದ ಇಬ್ಬರ ನಡುವೆ ಪರಿಚಯವಾಗಿ ಸಲುಗೆ ಬೆಳೆದಿತ್ತು. ಹೀಗಾಗಿ ಇಬ್ಬರು ಆಗಾಗ ಭೇಟಿ ಮಾಡುತ್ತಿದ್ದರು.

ಹಣಕಾಸಿನ ವ್ಯವಹಾರ

ರೇಣುಕಾ ಮತ್ತು ಜಾವೀದ್​ ಸರ್ವಿಸ್ ಅಪಾರ್ಟ್​​ಮೆಂಟ್​​ನಲ್ಲಿ ಉಳಿದುಕೊಳ್ಳುತಿದ್ದರು. ಈ ವೇಳೆ ಇಬ್ಬರ ನಡುವೆ ಹಣಕಾಸಿನ ವ್ಯವಹಾರ ಸಹ ನಡೆದಿತ್ತು ಎನ್ನಲಾಗಿದೆ.

ಎದೆಗೆ ಚುಚ್ಚಿಬಿಟ್ಟಲು

ಕೊಲೆಯ ಮೂರು ದಿನದ ಹಿಂದೆ ಕೂಡ ಇಬ್ಬರು ಭೇಟಿಯಾಗಿದ್ದು, ಹುಳಿಮಾವಿನ ಅಕ್ಷಯಾನಗರದ ಅಪಾರ್ಟ್​​ಮೆಂಟ್​​ಗೆ ಬಂದಿದ್ದರು. ಕಳೆದ ಮಂಗಳವಾರ ಇಬ್ಬರ ನಡುವೆ ಜಗಳ ನಡೆದಿತ್ತು ಎನ್ನಲಾಗಿದೆ. ಜಗಳದ ನಡುವೆ ರೇಣುಕಾ ಯುವಕನಿಗೆ ಚಾಕುನಿಂದ ಎದೆಗೆ ಇರಿದಿದ್ದಾಳೆ.

ಸದ್ಯ ಆರೋಪಿ ರೇಣುಕಾಳನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ. ಕೇಸ್ ಸಂಬಂಧ ಪೊಲೀಸರಿಂದ ತನಿಖೆ ಮುಂದುವರಿದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More