ಕಪ್ ಗೆಲ್ಲಿಸಲು ರಾಹುಲ್ ದ್ರಾವಿಡ್ ಹೆಣೆದರು ರಣತಂತ್ರ
ಜಂಟಲ್ಮನ್ ಗೇಮ್ನ ರಿಯಲ್ ಜಂಟಲ್ಮನ್
ವಿವಾದಗಳನ್ನ ತಣ್ಣಗಾಗಿಸಲು ದಿ ವಾಲ್ ಮಾಡಿದ್ದು ಏನು?
ಕ್ರಿಕೆಟ್ನ ಜಂಟಲ್ಮನ್ ಗೇಮ್ ಅನ್ನೋ ನಾವು ಈ ಗೇಮ್ ರಿಯಲ್ ಜಂಟಲ್ ಮೆನ್ ಅನ್ನೋ ದಿ ವಾಲ್ ರಾಹುಲ್ ದ್ರಾವಿಡ್ರನ್ನ. ಕಾಂಟ್ರವರ್ಸಿಗೂ ದ್ರಾವಿಡ್ ಆಗಿ ಬರೋದೆಯಿಲ್ಲ.. ಆಡ್ತಾ ಇದ್ದ ದಿನಗಳಿಂದ ಈವರೆಗೆ ವಿವಾದಗಳಿಂದ ಸದಾ ಅಂತರವನ್ನ ಕಾಯ್ದುಕೊಂಡೆ ದ್ರಾವಿಡ್ ಬಂದಿರೋದು. ಇಂಥ ದ್ರಾವಿಡ್ ಕೋಚ್ ಹುದ್ದೆಗೇರಿದಾಗ ಟೀಮ್ ಇಂಡಿಯಾದಲ್ಲಿ ದೊಡ್ಡ ವಿವಾದವೇ ಸೃಷ್ಟಿಯಾಯ್ತು.. ಆ ವಿವಾದವನ್ನ ದ್ರಾವಿಡ್ ತಣ್ಣಗಾಗಿಸಿದ ಕಥೆಯೇ ರೋಚಕ.
ನವೆಂಬರ್ 17, 2021
ಆಗ ತಾನೇ ರವಿ ಶಾಸ್ತಿ ಮಾರ್ಗದರ್ಶನದಲ್ಲಿ ಟೀಮ್ ಇಂಡಿಯಾ 2021 ಟಿ20 ವಿಶ್ವಕಪ್ನಲ್ಲಿ ಹೀನಾಯ ಸೋಲುಂಡು ಬಂದಿತ್ತು. ಆಗ ದ್ರಾವಿಡ್ ಟೀಮ್ ಇಂಡಿಯಾದ ಹೆಡ್ ಕೋಚ್ ಹುದ್ದೆಗೇರಿದ್ರು. ನವೆಂಬರ್ 17, 2021ರಲ್ಲಿ ನಡೆದ ನ್ಯೂಜಿಲೆಂಡ್ ಸರಣಿಯೊಂದಿಗೆ ಜವಾಬ್ದಾರಿಯನ್ನ ದ್ರಾವಿಡ್ ತೆಗೆದುಕೊಂಡರು. ಅದಾಗಿ ಕೆಲವೇ ದಿನಕ್ಕೆ ದೊಡ್ಡ ಹೈ ಡ್ರಾಮಾ ನಡೆದು ಬಿಡ್ತು. ಕಿಂಗ್ ಕೊಹ್ಲಿ vs ಬಿಸಿಸಿಐ ನಡುವೆ ದೊಡ್ಡ ವಾರ್ ನಡೆದೇ ಬಿಡ್ತು. ಅಂದಿನ ಬಿಸಿಸಿಐ ಬಾಸ್ ಸೌರವ್ ಗಂಗೂಲಿ, ಅಂದಿನ ನಾಯಕ ವಿರಾಟ್ ಕೊಹ್ಲಿ ನಡುವೆ ಬಹಿರಂಗಾವಾಗೇ ಟಾಕ್ ವಾರ್ ನಡೆಯಿತು.
ಜನವರಿ 15, 2022
ಟಿ20 ನಾಯಕತ್ವದಿಂದ ಕೆಳಗಿಳಿದ ವಿರಾಟ್ ಕೊಹ್ಲಿಗೆ ಬಿಸಿಸಿಐ ಬಲವಂತವಾಗಿ ಏಕದಿನ ನಾಯಕತ್ವ ಕೊಕ್ ಕೊಡ್ತು. ಆ ಬಳಿಕ ಬಿಸಿಸಿಐ ಬಾಸ್ಗಳು, ಸೆಲೆಕ್ಷನ್ ಕಮಿಟಿ ಹಾಗೂ ವಿರಾಟ್ ಕೊಹ್ಲಿ ನಡುವೆ ಮಾತಿನ ಸಮರವೇ ನಡೆಯಿತು. ವಾರ್ ದೊಡ್ಡವರ ನಡುವೆ ನಡೆದ್ರೂ ಇದರ ಎಫೆಕ್ಟ್ ಡ್ರೆಸ್ಸಿಂಗ್ ರೂಮ್ಗೂ ತಟ್ಟಿತ್ತು. ಇದ್ರ ನಡುವೆಯೇ ಸೌತ್ ಆಫ್ರಿಕಾ ಪ್ರವಾಸದಲ್ಲಿ ಟೀಮ್ ಇಂಡಿಯಾ ಟೆಸ್ಟ್ ಸರಣಿ ಸೋತೆ ಬಿಡ್ತು. ಇದಕ್ಕಿದ್ದಂತೆ ವಿರಾಟ್ ಟೆಸ್ಟ್ ನಾಯಕತ್ವ ಗುಡ್ ಬೈ ಹೇಳಿದರು.
ರೋಹಿತ್ vs ಕೊಹ್ಲಿ ಕೋಲ್ಡ್ವಾರ್.. ದ್ರಾವಿಡ್ಗೆ ಟೆನ್ಶನ್..!
ಕೊಹ್ಲಿ ರಾಜೀನಾಮೆಯೊಂದಿಗೆ ಕಾಂಟ್ರವರ್ಸಿಗಳಿಗೆ ತೆರೆ ಬಿತ್ತು. ಅದಾಗಲೇ ಡ್ರೆಸ್ಸಿಂಗ್ ರೂಮ್ ಎರಡು ಬಣವಾಗಿ ಬಿಟ್ಟಿತ್ತು. ನಿರ್ಗಮಿತ ನಾಯಕ ಕೊಹ್ಲಿಯದ್ದು ಒಂದು ಬಣವಾದ್ರೆ ನೂತನ ನಾಯಕನ ರೋಹಿತ್ದು ಇನ್ನೊಂದು ಬಣವಾಗಿತ್ತು. ಇದ್ರ ನಡುವೆ ಇಕ್ಕಟ್ಟಿಗೆ ಸಿಲುಕಿದ್ದು ಕೋಚ್ ದ್ರಾವಿಡ್. ಸೀನಿಯರ್ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ನಡುವಿನ EGO ಫೈಟ್ನ ನೇರವಾದ ಪರಿಣಾಮ ಬಿದ್ದಿದ್ದು ಟೀಮ್ ಇಂಡಿಯಾ ಪರ್ಫಾಮೆನ್ಸ್ ಮೇಲೆ.. ಕೊನೆಗೆ ಇವರಿಬ್ಬರ ನಡುವೆ ಪ್ಯಾಚ್ ಅಪ್ ಮಾಡೋ ಜವಾಬ್ದಾರಿ ಹೊತ್ತಿದ್ದು ಕೋಚ್ ರಾಹುಲ್ ದ್ರಾವಿಡ್.!
ಟಿ-20 ವಿಶ್ವಕಪ್-2022
2022ರ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಸೀನಿಯರ್ ಆಟಗಾರ ಜೊತೆ ರಾಹುಲ್ ದ್ರಾವಿಡ್ ಅತಿ ಹೆಚ್ಚು ಸಮಯ ಕಳೆದಿದ್ರು ಅನ್ನೋದು ಬಿಸಿಸಿಐ ಮೂಲಗಳ ಮಾಹಿತಿ. ಕೋಲ್ಡ್ವಾರ್ಗೆ ಬ್ರೇಕ್ ಹಾಕಲು ಸುದೀರ್ಘ ಇಬ್ಬರೊಂದಿಗೆ ಚರ್ಚಿಸಿದ್ದ ದಿ ವಾಲ್, ಕೊನೆಗೂ ಸಂಧಾನ ಮಾಡಿದ್ರು. ಅದಕ್ಕೆ ರಿಸಲ್ಟ್ ಕೂಡ ಸಿಗ್ತು. ಟಿ20 ವಿಶ್ವಕಪ್ನ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಮೋಘ ಇನ್ನಿಂಗ್ಸ್ ಕಟ್ಟಿದ ಕೊಹ್ಲಿಯನ್ನ ರೋಹಿತ್ ಹೊತ್ತು ಮೆರೆಸಿದ್ರು. ಅದು ಕೇವಲ ಸಂಭ್ರಮಾಚರಣೆಯಾಗಿರಲಿಲ್ಲ. ಸಂಧಾನದ ದೊಡ್ಡ ಸಂದೇಶ.
ಏಕದಿನ ವಿಶ್ವಕಪ್-2023
ಈ ವಿಶ್ವಕಪ್ನಲ್ಲಿ ಎಲ್ಲವೂ ಬದಲಾಗಿದೆ. ರೋಹಿತ್-ಕೊಹ್ಲಿ ಹಿಂದೆಂದೂ ಇರದಷ್ಟು ಆತ್ಮೀಯರಾಗಿದ್ದಾರೆ. ಸೋಷಿಯಲ್ ತುಂಬೆಲ್ಲಾ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಬ್ರೊ ಮ್ಯಾನ್ಸ್ನ ಸಾಲು-ಸಾಲು ಪೋಸ್ಟ್ಗಳು ಬರ್ತಿವೆ. ಅಷ್ಟರ ಮಟ್ಟಿಗೆ ಕಿಂಗ್ ಕೊಹ್ಲಿ-ಹಿಟ್ಮ್ಯಾನ್ ರೋಹಿತ್ರ ಬಾಂಧವ್ಯ ಸೆನ್ಸೇಷನ್ ಸೃಷ್ಟಿಸಿದೆ.
ಸಕ್ಸಸ್, ಫೇಲ್ಯೂರ್.. ಎಲ್ಲದರಲ್ಲೂ ನಾವು ಒಂದೇ
ವಿಶ್ವಕಪ್ ಟೂರ್ನಿಯ ಆರಂಭಿಕ ಪಂದ್ಯದಿಂದ ಇವರೆಗೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಒಟ್ಟಾಗಿ ಹೆಜ್ಜೆ ಹಾಕ್ತಿದ್ದಾರೆ. ಸಕ್ಸಸ್ ಹಾಗೂ ಫೇಲ್ಯೂರ್ ಎರಡರಲ್ಲೂ ಜೊತೆಯಾಗಿ ನಿಲ್ತಿದ್ದಾರೆ. ಒಬ್ಬರ ಯಶಸ್ಸನ್ನು ಇನ್ನೊಬ್ಬರು ಸಂಭ್ರಮಿಸ್ತಿದ್ದಾರೆ. ರೋಹಿತ್ ಸೆಂಚುರಿ ಹೊಡೆದ್ರೆ ಕೊಹ್ಲಿ ಖುಷಿ ಪಡ್ತಾರೆ. ಶತಕದ ಅಂಚಿನಲ್ಲಿ ಕೊಹ್ಲಿ ಔಟಾದ್ರೆ ರೋಹಿತ್ ಬೇಸರ ಹೊರ ಹಾಕ್ತಿದ್ದಾರೆ. ಸಂಕಷ್ಟ ಎದುರಾದಾಗ ರೋಹಿತ್, ಕೊಹ್ಲಿಯ ಮೊರೆ ಹೋಗ್ತಿದ್ದಾರೆ. ಕೊಹ್ಲಿ ಕೂಡ ಅಷ್ಟೇ ಉತ್ಸಾಹದಿಂದ ನಾಯಕನ ಬೆನ್ನಿಗೆ ನಿಂತಿದ್ದಾರೆ. ದೇಶಕ್ಕಾಗಿ ಕಪ್ ಗೆಲ್ಲಬೇಕು ಎಂಬ ಹಂಬಲ ಇಬ್ಬರಲ್ಲೂ ಜೋರಾಗಿದೆ.
ಟೀಮ್ ಇಂಡಿಯಾದ ಬಲವೇ ಜೋಡೆತ್ತುಗಳ ಆಟ
ಆಟದ ವಿಚಾರದಲ್ಲೂ ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ಬಲವಾಗಿ ನಿಂತಿದ್ದಾರೆ. ಕನ್ಸಿಸ್ಟೆಂಟ್ ಪರ್ಫಾಮೆನ್ಸ್ ನೀಡ್ತಾ ಇರೋ ಇವರಿಬ್ಬರು ರನ್ ಕೊಳ್ಳೆ ಹೊಡೀತಿದ್ದಾರೆ. ಸಂಕಷ್ಟದ ಸಮಯದಲ್ಲಿ ತಂಡದ ಬೆನ್ನೆಲುಬಾಗಿ ನಿಂತು ಹೋರಾಟ ನಡೆಸ್ತಿದ್ದಾರೆ.
ಟಿ20 ವಿಶ್ವಕಪ್ನಲ್ಲಿ ರೋಹಿತ್-ಕೊಹ್ಲಿ ಒಂದಾದ್ರೂ ವಿಶ್ವಕಪ್ ನಮ್ಮದಾಗಲಿಲ್ಲ. ಈ ಬಾರಿ ವಿಶ್ವಕಪ್ ಗೆದ್ದೆ ಗೆಲ್ಲುವ ಹುಮ್ಮಸ್ಸು ತಂಡದಲ್ಲಿದೆ. ಭಾರತೀಯ ಕನಸನ್ನ ನನಸು ಮಾಡಲು ಕೊಹ್ಲಿ-ರೋಹಿತ್ ಕೂಡ ಕಟ್ಟಿ ನಿಂತಿದ್ದಾರೆ. ಮೈದಾನದಲ್ಲಿ ಜೋಡೆತ್ತುಗಳಂತೆ ಹೋರಾಡುತ್ತಿದ್ದಾರೆ. ಇಂದು ಇವರಿಬ್ಬರ ಹೋರಾಟವನ್ನ ಸಂಭ್ರಮಿಸೋ ನಾವು ಇವರಿಬ್ಬರನ್ನ ನಡುವೆ ಬೆಸುಗೆ ಹಾಕಿದ ದ್ರಾವಿಡ್ಗೆ ಸಲಾಂ ಅನ್ನಲೇಬೇಕಲ್ವೇ?
ವಿಶೇಷ ವರದಿ: ವಸಂತ್ ಮಳವತ್ತಿ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಕಪ್ ಗೆಲ್ಲಿಸಲು ರಾಹುಲ್ ದ್ರಾವಿಡ್ ಹೆಣೆದರು ರಣತಂತ್ರ
ಜಂಟಲ್ಮನ್ ಗೇಮ್ನ ರಿಯಲ್ ಜಂಟಲ್ಮನ್
ವಿವಾದಗಳನ್ನ ತಣ್ಣಗಾಗಿಸಲು ದಿ ವಾಲ್ ಮಾಡಿದ್ದು ಏನು?
ಕ್ರಿಕೆಟ್ನ ಜಂಟಲ್ಮನ್ ಗೇಮ್ ಅನ್ನೋ ನಾವು ಈ ಗೇಮ್ ರಿಯಲ್ ಜಂಟಲ್ ಮೆನ್ ಅನ್ನೋ ದಿ ವಾಲ್ ರಾಹುಲ್ ದ್ರಾವಿಡ್ರನ್ನ. ಕಾಂಟ್ರವರ್ಸಿಗೂ ದ್ರಾವಿಡ್ ಆಗಿ ಬರೋದೆಯಿಲ್ಲ.. ಆಡ್ತಾ ಇದ್ದ ದಿನಗಳಿಂದ ಈವರೆಗೆ ವಿವಾದಗಳಿಂದ ಸದಾ ಅಂತರವನ್ನ ಕಾಯ್ದುಕೊಂಡೆ ದ್ರಾವಿಡ್ ಬಂದಿರೋದು. ಇಂಥ ದ್ರಾವಿಡ್ ಕೋಚ್ ಹುದ್ದೆಗೇರಿದಾಗ ಟೀಮ್ ಇಂಡಿಯಾದಲ್ಲಿ ದೊಡ್ಡ ವಿವಾದವೇ ಸೃಷ್ಟಿಯಾಯ್ತು.. ಆ ವಿವಾದವನ್ನ ದ್ರಾವಿಡ್ ತಣ್ಣಗಾಗಿಸಿದ ಕಥೆಯೇ ರೋಚಕ.
ನವೆಂಬರ್ 17, 2021
ಆಗ ತಾನೇ ರವಿ ಶಾಸ್ತಿ ಮಾರ್ಗದರ್ಶನದಲ್ಲಿ ಟೀಮ್ ಇಂಡಿಯಾ 2021 ಟಿ20 ವಿಶ್ವಕಪ್ನಲ್ಲಿ ಹೀನಾಯ ಸೋಲುಂಡು ಬಂದಿತ್ತು. ಆಗ ದ್ರಾವಿಡ್ ಟೀಮ್ ಇಂಡಿಯಾದ ಹೆಡ್ ಕೋಚ್ ಹುದ್ದೆಗೇರಿದ್ರು. ನವೆಂಬರ್ 17, 2021ರಲ್ಲಿ ನಡೆದ ನ್ಯೂಜಿಲೆಂಡ್ ಸರಣಿಯೊಂದಿಗೆ ಜವಾಬ್ದಾರಿಯನ್ನ ದ್ರಾವಿಡ್ ತೆಗೆದುಕೊಂಡರು. ಅದಾಗಿ ಕೆಲವೇ ದಿನಕ್ಕೆ ದೊಡ್ಡ ಹೈ ಡ್ರಾಮಾ ನಡೆದು ಬಿಡ್ತು. ಕಿಂಗ್ ಕೊಹ್ಲಿ vs ಬಿಸಿಸಿಐ ನಡುವೆ ದೊಡ್ಡ ವಾರ್ ನಡೆದೇ ಬಿಡ್ತು. ಅಂದಿನ ಬಿಸಿಸಿಐ ಬಾಸ್ ಸೌರವ್ ಗಂಗೂಲಿ, ಅಂದಿನ ನಾಯಕ ವಿರಾಟ್ ಕೊಹ್ಲಿ ನಡುವೆ ಬಹಿರಂಗಾವಾಗೇ ಟಾಕ್ ವಾರ್ ನಡೆಯಿತು.
ಜನವರಿ 15, 2022
ಟಿ20 ನಾಯಕತ್ವದಿಂದ ಕೆಳಗಿಳಿದ ವಿರಾಟ್ ಕೊಹ್ಲಿಗೆ ಬಿಸಿಸಿಐ ಬಲವಂತವಾಗಿ ಏಕದಿನ ನಾಯಕತ್ವ ಕೊಕ್ ಕೊಡ್ತು. ಆ ಬಳಿಕ ಬಿಸಿಸಿಐ ಬಾಸ್ಗಳು, ಸೆಲೆಕ್ಷನ್ ಕಮಿಟಿ ಹಾಗೂ ವಿರಾಟ್ ಕೊಹ್ಲಿ ನಡುವೆ ಮಾತಿನ ಸಮರವೇ ನಡೆಯಿತು. ವಾರ್ ದೊಡ್ಡವರ ನಡುವೆ ನಡೆದ್ರೂ ಇದರ ಎಫೆಕ್ಟ್ ಡ್ರೆಸ್ಸಿಂಗ್ ರೂಮ್ಗೂ ತಟ್ಟಿತ್ತು. ಇದ್ರ ನಡುವೆಯೇ ಸೌತ್ ಆಫ್ರಿಕಾ ಪ್ರವಾಸದಲ್ಲಿ ಟೀಮ್ ಇಂಡಿಯಾ ಟೆಸ್ಟ್ ಸರಣಿ ಸೋತೆ ಬಿಡ್ತು. ಇದಕ್ಕಿದ್ದಂತೆ ವಿರಾಟ್ ಟೆಸ್ಟ್ ನಾಯಕತ್ವ ಗುಡ್ ಬೈ ಹೇಳಿದರು.
ರೋಹಿತ್ vs ಕೊಹ್ಲಿ ಕೋಲ್ಡ್ವಾರ್.. ದ್ರಾವಿಡ್ಗೆ ಟೆನ್ಶನ್..!
ಕೊಹ್ಲಿ ರಾಜೀನಾಮೆಯೊಂದಿಗೆ ಕಾಂಟ್ರವರ್ಸಿಗಳಿಗೆ ತೆರೆ ಬಿತ್ತು. ಅದಾಗಲೇ ಡ್ರೆಸ್ಸಿಂಗ್ ರೂಮ್ ಎರಡು ಬಣವಾಗಿ ಬಿಟ್ಟಿತ್ತು. ನಿರ್ಗಮಿತ ನಾಯಕ ಕೊಹ್ಲಿಯದ್ದು ಒಂದು ಬಣವಾದ್ರೆ ನೂತನ ನಾಯಕನ ರೋಹಿತ್ದು ಇನ್ನೊಂದು ಬಣವಾಗಿತ್ತು. ಇದ್ರ ನಡುವೆ ಇಕ್ಕಟ್ಟಿಗೆ ಸಿಲುಕಿದ್ದು ಕೋಚ್ ದ್ರಾವಿಡ್. ಸೀನಿಯರ್ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ನಡುವಿನ EGO ಫೈಟ್ನ ನೇರವಾದ ಪರಿಣಾಮ ಬಿದ್ದಿದ್ದು ಟೀಮ್ ಇಂಡಿಯಾ ಪರ್ಫಾಮೆನ್ಸ್ ಮೇಲೆ.. ಕೊನೆಗೆ ಇವರಿಬ್ಬರ ನಡುವೆ ಪ್ಯಾಚ್ ಅಪ್ ಮಾಡೋ ಜವಾಬ್ದಾರಿ ಹೊತ್ತಿದ್ದು ಕೋಚ್ ರಾಹುಲ್ ದ್ರಾವಿಡ್.!
ಟಿ-20 ವಿಶ್ವಕಪ್-2022
2022ರ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಸೀನಿಯರ್ ಆಟಗಾರ ಜೊತೆ ರಾಹುಲ್ ದ್ರಾವಿಡ್ ಅತಿ ಹೆಚ್ಚು ಸಮಯ ಕಳೆದಿದ್ರು ಅನ್ನೋದು ಬಿಸಿಸಿಐ ಮೂಲಗಳ ಮಾಹಿತಿ. ಕೋಲ್ಡ್ವಾರ್ಗೆ ಬ್ರೇಕ್ ಹಾಕಲು ಸುದೀರ್ಘ ಇಬ್ಬರೊಂದಿಗೆ ಚರ್ಚಿಸಿದ್ದ ದಿ ವಾಲ್, ಕೊನೆಗೂ ಸಂಧಾನ ಮಾಡಿದ್ರು. ಅದಕ್ಕೆ ರಿಸಲ್ಟ್ ಕೂಡ ಸಿಗ್ತು. ಟಿ20 ವಿಶ್ವಕಪ್ನ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಮೋಘ ಇನ್ನಿಂಗ್ಸ್ ಕಟ್ಟಿದ ಕೊಹ್ಲಿಯನ್ನ ರೋಹಿತ್ ಹೊತ್ತು ಮೆರೆಸಿದ್ರು. ಅದು ಕೇವಲ ಸಂಭ್ರಮಾಚರಣೆಯಾಗಿರಲಿಲ್ಲ. ಸಂಧಾನದ ದೊಡ್ಡ ಸಂದೇಶ.
ಏಕದಿನ ವಿಶ್ವಕಪ್-2023
ಈ ವಿಶ್ವಕಪ್ನಲ್ಲಿ ಎಲ್ಲವೂ ಬದಲಾಗಿದೆ. ರೋಹಿತ್-ಕೊಹ್ಲಿ ಹಿಂದೆಂದೂ ಇರದಷ್ಟು ಆತ್ಮೀಯರಾಗಿದ್ದಾರೆ. ಸೋಷಿಯಲ್ ತುಂಬೆಲ್ಲಾ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಬ್ರೊ ಮ್ಯಾನ್ಸ್ನ ಸಾಲು-ಸಾಲು ಪೋಸ್ಟ್ಗಳು ಬರ್ತಿವೆ. ಅಷ್ಟರ ಮಟ್ಟಿಗೆ ಕಿಂಗ್ ಕೊಹ್ಲಿ-ಹಿಟ್ಮ್ಯಾನ್ ರೋಹಿತ್ರ ಬಾಂಧವ್ಯ ಸೆನ್ಸೇಷನ್ ಸೃಷ್ಟಿಸಿದೆ.
ಸಕ್ಸಸ್, ಫೇಲ್ಯೂರ್.. ಎಲ್ಲದರಲ್ಲೂ ನಾವು ಒಂದೇ
ವಿಶ್ವಕಪ್ ಟೂರ್ನಿಯ ಆರಂಭಿಕ ಪಂದ್ಯದಿಂದ ಇವರೆಗೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಒಟ್ಟಾಗಿ ಹೆಜ್ಜೆ ಹಾಕ್ತಿದ್ದಾರೆ. ಸಕ್ಸಸ್ ಹಾಗೂ ಫೇಲ್ಯೂರ್ ಎರಡರಲ್ಲೂ ಜೊತೆಯಾಗಿ ನಿಲ್ತಿದ್ದಾರೆ. ಒಬ್ಬರ ಯಶಸ್ಸನ್ನು ಇನ್ನೊಬ್ಬರು ಸಂಭ್ರಮಿಸ್ತಿದ್ದಾರೆ. ರೋಹಿತ್ ಸೆಂಚುರಿ ಹೊಡೆದ್ರೆ ಕೊಹ್ಲಿ ಖುಷಿ ಪಡ್ತಾರೆ. ಶತಕದ ಅಂಚಿನಲ್ಲಿ ಕೊಹ್ಲಿ ಔಟಾದ್ರೆ ರೋಹಿತ್ ಬೇಸರ ಹೊರ ಹಾಕ್ತಿದ್ದಾರೆ. ಸಂಕಷ್ಟ ಎದುರಾದಾಗ ರೋಹಿತ್, ಕೊಹ್ಲಿಯ ಮೊರೆ ಹೋಗ್ತಿದ್ದಾರೆ. ಕೊಹ್ಲಿ ಕೂಡ ಅಷ್ಟೇ ಉತ್ಸಾಹದಿಂದ ನಾಯಕನ ಬೆನ್ನಿಗೆ ನಿಂತಿದ್ದಾರೆ. ದೇಶಕ್ಕಾಗಿ ಕಪ್ ಗೆಲ್ಲಬೇಕು ಎಂಬ ಹಂಬಲ ಇಬ್ಬರಲ್ಲೂ ಜೋರಾಗಿದೆ.
ಟೀಮ್ ಇಂಡಿಯಾದ ಬಲವೇ ಜೋಡೆತ್ತುಗಳ ಆಟ
ಆಟದ ವಿಚಾರದಲ್ಲೂ ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ಬಲವಾಗಿ ನಿಂತಿದ್ದಾರೆ. ಕನ್ಸಿಸ್ಟೆಂಟ್ ಪರ್ಫಾಮೆನ್ಸ್ ನೀಡ್ತಾ ಇರೋ ಇವರಿಬ್ಬರು ರನ್ ಕೊಳ್ಳೆ ಹೊಡೀತಿದ್ದಾರೆ. ಸಂಕಷ್ಟದ ಸಮಯದಲ್ಲಿ ತಂಡದ ಬೆನ್ನೆಲುಬಾಗಿ ನಿಂತು ಹೋರಾಟ ನಡೆಸ್ತಿದ್ದಾರೆ.
ಟಿ20 ವಿಶ್ವಕಪ್ನಲ್ಲಿ ರೋಹಿತ್-ಕೊಹ್ಲಿ ಒಂದಾದ್ರೂ ವಿಶ್ವಕಪ್ ನಮ್ಮದಾಗಲಿಲ್ಲ. ಈ ಬಾರಿ ವಿಶ್ವಕಪ್ ಗೆದ್ದೆ ಗೆಲ್ಲುವ ಹುಮ್ಮಸ್ಸು ತಂಡದಲ್ಲಿದೆ. ಭಾರತೀಯ ಕನಸನ್ನ ನನಸು ಮಾಡಲು ಕೊಹ್ಲಿ-ರೋಹಿತ್ ಕೂಡ ಕಟ್ಟಿ ನಿಂತಿದ್ದಾರೆ. ಮೈದಾನದಲ್ಲಿ ಜೋಡೆತ್ತುಗಳಂತೆ ಹೋರಾಡುತ್ತಿದ್ದಾರೆ. ಇಂದು ಇವರಿಬ್ಬರ ಹೋರಾಟವನ್ನ ಸಂಭ್ರಮಿಸೋ ನಾವು ಇವರಿಬ್ಬರನ್ನ ನಡುವೆ ಬೆಸುಗೆ ಹಾಕಿದ ದ್ರಾವಿಡ್ಗೆ ಸಲಾಂ ಅನ್ನಲೇಬೇಕಲ್ವೇ?
ವಿಶೇಷ ವರದಿ: ವಸಂತ್ ಮಳವತ್ತಿ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್