ಅಪರಿಚಿತ ವ್ಯಕ್ತಿಗೆ ಮೇಕಪ್ ಮಾಡಿಸಿ ವಿಶ್ವನಾಥ್ಜೀ ಎಂದ್ರಾ?
ಕಬಾಬ್ ಮಾರುವ ವ್ಯಕ್ತಿಗೆ ವಿಶ್ವನಾಥ್ ಜೀ ವೇಷಭೂಷಣವಂತೆ
ವಿಶ್ವನಾಥ್ ಕ್ಯಾರೆಕ್ಟರ್ಗಾಗಿ ಕಡೂರಲ್ಲಿ ಹೇರ್ ಸ್ಟೈಲ್ ಚೇಂಜ್!
ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಅವರು ಉದ್ಯಮಿಗೆ 5 ಕೋಟಿ ರೂಪಾಯಿ ವಂಚಿಸಿದ ಆರೋಪಕ್ಕೆ ಗುರಿಯಾಗಿದ್ದಾರೆ. ಚುನಾವಣೆಯಲ್ಲಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಉದ್ಯಮಿ ಗೋವಿಂದ ಪೂಜಾರಿ ಅವರಿಂದ ಚೈತ್ರಾ ಗ್ಯಾಂಗ್ 5 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ದೂರು ದಾಖಲಾಗಿದೆ. ಈ ದೂರಿನ ಮೇಲೆ ಭರ್ಜರಿ ಕಾರ್ಯಾಚರಣೆಗಿಳಿದ ಸಿಸಿಬಿ ಅಧಿಕಾರಿಗಳು ಚೈತ್ರಾ ಕುಂದಾಪುರ ಅವರ ಗ್ಯಾಂಗ್ ಅನ್ನು ಅರೆಸ್ಟ್ ಮಾಡಿದ್ದೇ ರೋಚಕವಾಗಿದೆ.
ಇದನ್ನೂ ಓದಿ: ಚೈತ್ರಾ ಕುಂದಾಪುರ ಮೇಲೆ ಸಾಲು ಸಾಲು ಆರೋಪ! ಹಣಕ್ಕಾಗಿ ಇಷ್ಟೆಲ್ಲಾ ಬೇಡಿಕೆ ಇಟ್ಟಿದ್ರಾ ಹಿಂದೂ ಕಾರ್ಯಕರ್ತೆ?
ಚೈತ್ರಾ ಕುಂದಾಪುರ ಅವರ ವಂಚನೆ ಕೇಸ್ನಲ್ಲಿ ಸಿಸಿಬಿ ಪೊಲೀಸರು ಒಟ್ಟು 3 ತಂಡಗಳಲ್ಲಿ ಕಾರ್ಯಾಚರಣೆಗೆ ಇಳಿದಿತ್ತು. ಒಟ್ಟೊಟ್ಟಿಗೆ ಮೂರು ಜಿಲ್ಲೆಗಳಲ್ಲಿ ಆರೋಪಿಗಳು ಖಾಕಿ ಪಡೆಗೆ ಲಾಕ್ ಆಗಿದೆ. ಚಿಕ್ಕಮಗಳೂರಲ್ಲಿ ಗಗನ್, ರಮೇಶ್, ಧನರಾಜ್ ಬಂಧನವಾಗಿದ್ರೆ, ಉಡುಪಿಯಲ್ಲಿ ಚೈತ್ರಾ, ಶ್ರೀಕಾಂತ್, ಪ್ರಜ್ವಲ್ರನ್ನು ವಶಕ್ಕೆ ಪಡೆಯಲಾಗಿದೆ. ಚೈತ್ರಾ ಕುಂದಾಪುರ ವಂಚನೆ ಕೇಸ್ನಲ್ಲಿ 6 ಮಂದಿಯನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮಾಹಿತಿ ನೀಡಿದ್ದಾರೆ.
ವಿಶ್ವನಾಥ್ ಕ್ಯಾರೆಕ್ಟರ್ಗಾಗಿ ಹೇರ್ ಸ್ಟೈಲ್ ಚೇಂಜ್!
ಚುನಾವಣೆಯಲ್ಲಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಗೋವಿಂದ ಪೂಜಾರಿ ಅವರನ್ನು ಚೈತ್ರಾ ಕುಂದಾಪುರ ಅವರ ತಂಡ ನಂಬಿಸಿತ್ತು. ಕಬಾಬ್ ಮಾರುವ ವ್ಯಕ್ತಿಗೆ ವಿಶ್ವನಾಥ್ ಜೀ ಅನ್ನೋ ಪ್ರಚಾರಕನ ವೇಷ ತೊಡಿಸಿದ್ದರು. ಅಪರಿಚಿತ ವ್ಯಕ್ತಿಗೆ ಮೇಕಪ್ ಮಾಡಿಸಿ ವಿಶ್ವನಾಥ್ಜೀ ಎಂದು ಪರಿಚಯಿಸಿದ್ದ ಚೈತ್ರಾ ಎನ್ನಲಾಗಿದೆ. ಅಸಲಿಗೆ ವಿಶ್ವನಾಥ್ ಜೀ ಅನ್ನೋರೇ ಆರ್ಎಸ್ಎಸ್ನಲ್ಲಿ ಯಾರೂ ಇಲ್ಲ. ಹೀಗಾಗಿ ಕೆ.ಆರ್. ಪುರಂನಲ್ಲಿ ಕಬಾಬ್ ಮಾರುವ ರಮೇಶ್ ಅನ್ನೋ ವ್ಯಕ್ತಿಗೆ ಪ್ರಚಾರಕನ ವೇಷ ತೊಡಿಸಿದ್ದರು ಎನ್ನಲಾಗಿದೆ.
ವಿಶ್ವನಾಥ್ ಹೆಸರಲ್ಲಿ ಕಬಾಬ್ ಮಾರುವ ರಮೇಶ್ ಅನ್ನೋ ವ್ಯಕ್ತಿಯ ಲುಕ್ ಬದಲಿಸಿದ್ದರು. ವಿಶ್ವನಾಥ್ ಕ್ಯಾರೆಕ್ಟರ್ಗಾಗಿ ಕಡೂರಿನ ಕಟಿಂಗ್ ಶಾಪ್ಗೆ ಹೋಗಿ ಹೇರ್ ಸ್ಟೈಲ್ ಚೇಂಜ್ ಮಾಡಲಾಗಿತ್ತು. ಧನರಾಜ್, ರಮೇಶ್ ಕಟಿಂಗ್ ಶಾಪ್ಗೆ ಹೋಗಿ ಬೇರೆಯವರ ಫೋಟೋ ತೋರಿಸಿ ಹೀಗೆ ಕಟಿಂಗ್ ಮಾಡುವಂತೆ ತಾಕೀತು ಮಾಡಿದ್ದಾರೆ. ಅವರು ಹೇಳಿದ್ದಂತೆ ರಮೇಶ್ ಹೇರ್ ಸ್ಟೈಲ್ ಮಾಡಿದ್ದಾಗಿ ಕಟಿಂಗ್ ಶಾಪ್ ಸಿಬ್ಬಂದಿ ರಾಮು ಹೇಳಿದ್ದಾರೆ ಎನ್ನಲಾಗಿದೆ. ಚಿಕ್ಕಮಗಳೂರಿನ ಬನಶಂಕರಿ ಬೀದಿಯಲ್ಲಿನ ಮಿಸ್ಟರ್ ಹೇರ್ ಕಟ್ ಸಲೂನ್ ಶಾಪ್ನಲ್ಲಿ ರಮೇಶ್ ಅನ್ನೋ ವ್ಯಕ್ತಿ ವಿಶ್ವನಾಥ್ ಜೀ ಆಗಿ ಬದಲಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಅಪರಿಚಿತ ವ್ಯಕ್ತಿಗೆ ಮೇಕಪ್ ಮಾಡಿಸಿ ವಿಶ್ವನಾಥ್ಜೀ ಎಂದ್ರಾ?
ಕಬಾಬ್ ಮಾರುವ ವ್ಯಕ್ತಿಗೆ ವಿಶ್ವನಾಥ್ ಜೀ ವೇಷಭೂಷಣವಂತೆ
ವಿಶ್ವನಾಥ್ ಕ್ಯಾರೆಕ್ಟರ್ಗಾಗಿ ಕಡೂರಲ್ಲಿ ಹೇರ್ ಸ್ಟೈಲ್ ಚೇಂಜ್!
ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಅವರು ಉದ್ಯಮಿಗೆ 5 ಕೋಟಿ ರೂಪಾಯಿ ವಂಚಿಸಿದ ಆರೋಪಕ್ಕೆ ಗುರಿಯಾಗಿದ್ದಾರೆ. ಚುನಾವಣೆಯಲ್ಲಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಉದ್ಯಮಿ ಗೋವಿಂದ ಪೂಜಾರಿ ಅವರಿಂದ ಚೈತ್ರಾ ಗ್ಯಾಂಗ್ 5 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ದೂರು ದಾಖಲಾಗಿದೆ. ಈ ದೂರಿನ ಮೇಲೆ ಭರ್ಜರಿ ಕಾರ್ಯಾಚರಣೆಗಿಳಿದ ಸಿಸಿಬಿ ಅಧಿಕಾರಿಗಳು ಚೈತ್ರಾ ಕುಂದಾಪುರ ಅವರ ಗ್ಯಾಂಗ್ ಅನ್ನು ಅರೆಸ್ಟ್ ಮಾಡಿದ್ದೇ ರೋಚಕವಾಗಿದೆ.
ಇದನ್ನೂ ಓದಿ: ಚೈತ್ರಾ ಕುಂದಾಪುರ ಮೇಲೆ ಸಾಲು ಸಾಲು ಆರೋಪ! ಹಣಕ್ಕಾಗಿ ಇಷ್ಟೆಲ್ಲಾ ಬೇಡಿಕೆ ಇಟ್ಟಿದ್ರಾ ಹಿಂದೂ ಕಾರ್ಯಕರ್ತೆ?
ಚೈತ್ರಾ ಕುಂದಾಪುರ ಅವರ ವಂಚನೆ ಕೇಸ್ನಲ್ಲಿ ಸಿಸಿಬಿ ಪೊಲೀಸರು ಒಟ್ಟು 3 ತಂಡಗಳಲ್ಲಿ ಕಾರ್ಯಾಚರಣೆಗೆ ಇಳಿದಿತ್ತು. ಒಟ್ಟೊಟ್ಟಿಗೆ ಮೂರು ಜಿಲ್ಲೆಗಳಲ್ಲಿ ಆರೋಪಿಗಳು ಖಾಕಿ ಪಡೆಗೆ ಲಾಕ್ ಆಗಿದೆ. ಚಿಕ್ಕಮಗಳೂರಲ್ಲಿ ಗಗನ್, ರಮೇಶ್, ಧನರಾಜ್ ಬಂಧನವಾಗಿದ್ರೆ, ಉಡುಪಿಯಲ್ಲಿ ಚೈತ್ರಾ, ಶ್ರೀಕಾಂತ್, ಪ್ರಜ್ವಲ್ರನ್ನು ವಶಕ್ಕೆ ಪಡೆಯಲಾಗಿದೆ. ಚೈತ್ರಾ ಕುಂದಾಪುರ ವಂಚನೆ ಕೇಸ್ನಲ್ಲಿ 6 ಮಂದಿಯನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮಾಹಿತಿ ನೀಡಿದ್ದಾರೆ.
ವಿಶ್ವನಾಥ್ ಕ್ಯಾರೆಕ್ಟರ್ಗಾಗಿ ಹೇರ್ ಸ್ಟೈಲ್ ಚೇಂಜ್!
ಚುನಾವಣೆಯಲ್ಲಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಗೋವಿಂದ ಪೂಜಾರಿ ಅವರನ್ನು ಚೈತ್ರಾ ಕುಂದಾಪುರ ಅವರ ತಂಡ ನಂಬಿಸಿತ್ತು. ಕಬಾಬ್ ಮಾರುವ ವ್ಯಕ್ತಿಗೆ ವಿಶ್ವನಾಥ್ ಜೀ ಅನ್ನೋ ಪ್ರಚಾರಕನ ವೇಷ ತೊಡಿಸಿದ್ದರು. ಅಪರಿಚಿತ ವ್ಯಕ್ತಿಗೆ ಮೇಕಪ್ ಮಾಡಿಸಿ ವಿಶ್ವನಾಥ್ಜೀ ಎಂದು ಪರಿಚಯಿಸಿದ್ದ ಚೈತ್ರಾ ಎನ್ನಲಾಗಿದೆ. ಅಸಲಿಗೆ ವಿಶ್ವನಾಥ್ ಜೀ ಅನ್ನೋರೇ ಆರ್ಎಸ್ಎಸ್ನಲ್ಲಿ ಯಾರೂ ಇಲ್ಲ. ಹೀಗಾಗಿ ಕೆ.ಆರ್. ಪುರಂನಲ್ಲಿ ಕಬಾಬ್ ಮಾರುವ ರಮೇಶ್ ಅನ್ನೋ ವ್ಯಕ್ತಿಗೆ ಪ್ರಚಾರಕನ ವೇಷ ತೊಡಿಸಿದ್ದರು ಎನ್ನಲಾಗಿದೆ.
ವಿಶ್ವನಾಥ್ ಹೆಸರಲ್ಲಿ ಕಬಾಬ್ ಮಾರುವ ರಮೇಶ್ ಅನ್ನೋ ವ್ಯಕ್ತಿಯ ಲುಕ್ ಬದಲಿಸಿದ್ದರು. ವಿಶ್ವನಾಥ್ ಕ್ಯಾರೆಕ್ಟರ್ಗಾಗಿ ಕಡೂರಿನ ಕಟಿಂಗ್ ಶಾಪ್ಗೆ ಹೋಗಿ ಹೇರ್ ಸ್ಟೈಲ್ ಚೇಂಜ್ ಮಾಡಲಾಗಿತ್ತು. ಧನರಾಜ್, ರಮೇಶ್ ಕಟಿಂಗ್ ಶಾಪ್ಗೆ ಹೋಗಿ ಬೇರೆಯವರ ಫೋಟೋ ತೋರಿಸಿ ಹೀಗೆ ಕಟಿಂಗ್ ಮಾಡುವಂತೆ ತಾಕೀತು ಮಾಡಿದ್ದಾರೆ. ಅವರು ಹೇಳಿದ್ದಂತೆ ರಮೇಶ್ ಹೇರ್ ಸ್ಟೈಲ್ ಮಾಡಿದ್ದಾಗಿ ಕಟಿಂಗ್ ಶಾಪ್ ಸಿಬ್ಬಂದಿ ರಾಮು ಹೇಳಿದ್ದಾರೆ ಎನ್ನಲಾಗಿದೆ. ಚಿಕ್ಕಮಗಳೂರಿನ ಬನಶಂಕರಿ ಬೀದಿಯಲ್ಲಿನ ಮಿಸ್ಟರ್ ಹೇರ್ ಕಟ್ ಸಲೂನ್ ಶಾಪ್ನಲ್ಲಿ ರಮೇಶ್ ಅನ್ನೋ ವ್ಯಕ್ತಿ ವಿಶ್ವನಾಥ್ ಜೀ ಆಗಿ ಬದಲಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ