newsfirstkannada.com

ಮಾಹಿ ತಂಡದೆದುರು ಮಂಡಿಯೂರಿದ ಪಾಂಡ್ಯ ಪ್ಲೇಯರ್ಸ್​; ಗುರುವಿನ ಚಕ್ರವ್ಯೂಹಕ್ಕೆ ಲಾಕ್ ಆಗಿದ್ದೇಗೆ ಶಿಷ್ಯ..?

Share :

24-05-2023

    ಧೋನಿ ಮುಂದೆ ನಡೆಯದ ‘ಪ್ರಿನ್ಸ್​’ ಆಟ

    ಜಡ್ಡು ಸ್ಟ್ರೋಕ್​ಗೆ ಕಿಲ್ಲರ್ ಆಗಲಿಲ್ಲ ಮಿಲ್ಲರ್

    ತವರಿನ ಅಂಗಳದಲ್ಲಿ ವಿಜಯ ನೀಡಲಿಲ್ಲ ಶಂಕರ್

ಚೆನ್ನೈ ಎದುರು ಹ್ಯಾಟ್ರಿಕ್ ಗೆಲುವು ಸಾಧಿಸಿದ್ದ ಗುಜರಾತ್​​, ನಾಲ್ಕನೇ ಬಾರಿಯೂ ಗೆಲ್ಲೋ ಉತ್ಸಾಹದಲ್ಲಿತ್ತು. ಆದ್ರೆ, ಗುಜರಾತ್​​​​​ ಕನಸಿಗೆ ಮಾಸ್ಟರ್​ ಸ್ಟ್ರೋಕ್​ ನೀಡಿದ್ದು ಮಹೇಂದ್ರ ಸಿಂಗ್ ಧೋನಿ. ಅದರಲ್ಲೂ ಧೋನಿಯ ಟ್ರ್ಯಾಪ್​ಗೆ ಸಿಲುಕಿದ ಚೇಸಿಂಗ್​ ಮಾಸ್ಟರ್​ ಗುಜರಾತ್​, ಸೋಲಿನ ಮುಖಭಂಗ ಅನುಭವಿಸಿತ್ತು.

173 ರನ್​​ಗಳ ಟಾರ್ಗೆಟ್​ ಚೇಸಿಂಗ್ ಮಾಸ್ಟರ್ ಗುಜರಾತ್ ಮುಂದಿತ್ತು. ನಾಲ್ಕನೇ ಬಾರಿ ಚೆನ್ನೈಗೆ ಚಮಕ್ ನೀಡೋ ಕನಸಿನಲ್ಲೇ ಪಾಂಡ್ಯ ಪಡೆ ಕಣಕ್ಕಿಳಿದಿತ್ತು. ಆದ್ರೆ, ಟ್ರಿಕ್ಕಿ ಪಿಚ್​​ನಲ್ಲಿ ಮಾಸ್ಟರ್ ಧೋನಿಯ ಟ್ರ್ಯಾಪ್​​ಗೆ ಸಿಲುಕಿ ವಿಲವಿಲ ಒದ್ದಾಡಿತು. ಧೋನಿ ಚಾಣಾಕ್ಷತನದ ನಾಯಕತ್ವಕ್ಕೆ ಗುಜರಾತ್ ಟೈಟನ್ಸ್​ನ ಘಟಾನುಘಟಿ ಬ್ಯಾಟ್ಸ್​ಮನ್​​ಗಳೇ ಪಲ್ಟಿ ಹೊಡೆದು ಸೋಲೋಪ್ಪಿಕೊಳ್ತು.

ಧೋನಿ ಮುಂದೆ ನಡೆಯದ ‘ಪ್ರಿನ್ಸ್​’ ಆಟ..!
ಬ್ಯಾಕ್ ಟು ಬ್ಯಾಕ್ ಸೆಂಚೂರಿ ಸಿಡಿಸಿದ್ದ ಶುಭಮನ್​​ ಗಿಲ್, ಚೆನ್ನೈ ಚಮಕ್ ನೀಡೋ ಎಕ್ಸ್​ಪೆಕ್ಟೇಷನ್ ಹುಟ್ಟಿಹಾಕಿದ್ದರು. ಆದ್ರೆ, ನಿಧಾನಗತಿಯ ಆಟವಾಡಿದ ಯುವರಾಜನ ಆಟ 42 ರನ್​ಗೆ ಅಂತ್ಯವಾಯ್ತು.

ಗುರುವಿನ ಚಕ್ರವ್ಯೂಹಕ್ಕೆ ಶಿಷ್ಯ ಲಾಕ್..!
ಮಹತ್ವದ ಪಂದ್ಯದಲ್ಲಿ ಬೌಂಡರಿಯೊಂದಿಗೆ ಇನ್ನಿಂಗ್ಸ್ ಆರಂಭಿಸಿದ ಹಾರ್ದಿಕ್ ಪಾಂಡ್ಯ, ಚೆನ್ನೈಗೆ ಪಂಚ್ ನೀಡೋ ಲೆಕ್ಕಚಾರದಲ್ಲಿದ್ದರು. ಆದ್ರೆ, ಗುರುವಿನ ರಣವ್ಯೂಹದ ಮುಂದೆ 8 ರನ್​ಗೆ ವಿಕೆಟ್ ಒಪ್ಪಿಸಿ ಹೊರ ನಡೆದರು.

ಚೆನ್ನೈಗೆ ಶಕುನ ಆಗಲಿಲ್ಲ ಶನಕ..!
ಮ್ಯಾಚ್ ವಿನ್ನಿಂಗ್​ ಇನ್ನಿಂಗ್ಸ್​ ಕಟ್ಟೋದರಲ್ಲಿ ಲಂಕಾ ಕ್ಯಾಪ್ಟನ್ ಶನಕ ನಿಸ್ಸೀಮಾ.. ಆದ್ರೆ, ಧೋನಿ ಬಲಗೈ ಬಂಟ ಜಡ್ಡು ಜಾದೂ ಮುಂದೆ ಮಂಡಿಯೂರಿದ ಶನಕ, 17 ರನ್​ಗೆ ಆಟ ಮುಗಿಸಿದರು.

ಜಡ್ಡು ಸ್ಟ್ರೋಕ್​ಗೆ ಕಿಲ್ಲರ್ ಆಗಲಿಲ್ಲ ಮಿಲ್ಲರ್..!
ಸಂಕಷ್ಟಗಳಲ್ಲಿ ಗುಜರಾತ್​ಗೆ ಆಧಾರವಾಗೋದೆ ಕಿಲ್ಲರ್ ಖ್ಯಾತಿಯ ಮಿಲ್ಲರ್. ಆದ್ರೆ, ಟ್ರಿಕ್ಕಿ ಪಿಚ್​ನಲ್ಲಿ ತಡಬಡಾಯಿಸಿದ ಮಿಲ್ಲರ್​​​, ಜಡ್ಡು ಎಸೆತಕ್ಕೆ ಸ್ಟನ್ ಆಗಿ ಪೆವಿಲಿಯನ್​ಗೆ ಹೆಜ್ಜೆಹಾಕಿದ್ರು.

ತವರಿನ ಅಂಗಳದಲ್ಲಿ ವಿಜಯ ನೀಡಲಿಲ್ಲ ಶಂಕರ್..!
ಬೆಂಗಳೂರಿನ ಎದುರು ಮ್ಯಾಚ್ ವಿನ್ನಿಂಗ್ ಪರ್ಪಾಮೆನ್ಸ್​ ನೀಡಿದ್ದ ವಿಜಯ್ ಶಂಕರ್, ತವರಿನ ಅಂಗಳದಲ್ಲಿ ಗುಜರಾತ್​ಗೆ ಗೆಲುವಿನ ಉಡುಗೊರೆ ನೀಡೋ ಲೆಕ್ಕಚಾರದಲ್ಲಿದ್ದರು. ಆದ್ರೆ, ವಿಜಯ್ ಶಂಕರ್ ಆಟ 14ಕ್ಕೆ ಅಂತ್ಯವಾಯ್ತು.

ವ್ಯರ್ಥವಾಯ್ತು ರಶೀದ್ ಸ್ನೇಕ್ ಶಾಟ್ಸ್​
ಕೊನೆಯಲ್ಲಿ ಸ್ಪೋಟಕ ಆಟವಾಡಿದ ರಶೀದ್, 16 ಎಸೆತಗಳಲ್ಲಿ 2 ಸಿಕ್ಸರ್, 3 ಬೌಂಡರಿ ಒಳಗೊಂಡ 30 ರನ್ ಸಿಡಿಸಿ ಗೆಲುವಿನ ಆಸೆ ಚಿಗುರಿಸಿದ್ದರು. ಆದ್ರೆ, ಫೀಲ್ಡಿಂಗ್​ನಲ್ಲಿ ಬದಲಾವಣೆ ತಂದ ಧೋನಿ, ರಶೀದ್ ಓಟಕ್ಕೆ ಬ್ರೇಕ್ ಹಾಕಿದರು. ಆ ಮೂಲಕ ಗುಜರಾತ್​​​​​​​​​​​​​​​​​ ಕನಸು ಭಗ್ನಗೊಳಿಸಿದರು.

ಬಲಿಷ್ಠ ಗುಜರಾತ್​ಗೆ ಸ್ಪರ್ಧಾತ್ಮಕ ಮೊತ್ತವನಷ್ಟೇ ನೀಡಿದ್ದರೂ, ಕ್ಯಾಪ್ಟನ್ ಕೂಲ್ ಮಾಸ್ಟರ್​ ಮೂವ್​​ಗಳ ಮುಂದೆ​​​​​​​ ಟೈಟನ್ಸ್​ ಮಂಕಾಗಿದ್ದು ಸುಳ್ಳಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಮಾಹಿ ತಂಡದೆದುರು ಮಂಡಿಯೂರಿದ ಪಾಂಡ್ಯ ಪ್ಲೇಯರ್ಸ್​; ಗುರುವಿನ ಚಕ್ರವ್ಯೂಹಕ್ಕೆ ಲಾಕ್ ಆಗಿದ್ದೇಗೆ ಶಿಷ್ಯ..?

https://newsfirstlive.com/wp-content/uploads/2023/05/MS-Dhoni.jpg

    ಧೋನಿ ಮುಂದೆ ನಡೆಯದ ‘ಪ್ರಿನ್ಸ್​’ ಆಟ

    ಜಡ್ಡು ಸ್ಟ್ರೋಕ್​ಗೆ ಕಿಲ್ಲರ್ ಆಗಲಿಲ್ಲ ಮಿಲ್ಲರ್

    ತವರಿನ ಅಂಗಳದಲ್ಲಿ ವಿಜಯ ನೀಡಲಿಲ್ಲ ಶಂಕರ್

ಚೆನ್ನೈ ಎದುರು ಹ್ಯಾಟ್ರಿಕ್ ಗೆಲುವು ಸಾಧಿಸಿದ್ದ ಗುಜರಾತ್​​, ನಾಲ್ಕನೇ ಬಾರಿಯೂ ಗೆಲ್ಲೋ ಉತ್ಸಾಹದಲ್ಲಿತ್ತು. ಆದ್ರೆ, ಗುಜರಾತ್​​​​​ ಕನಸಿಗೆ ಮಾಸ್ಟರ್​ ಸ್ಟ್ರೋಕ್​ ನೀಡಿದ್ದು ಮಹೇಂದ್ರ ಸಿಂಗ್ ಧೋನಿ. ಅದರಲ್ಲೂ ಧೋನಿಯ ಟ್ರ್ಯಾಪ್​ಗೆ ಸಿಲುಕಿದ ಚೇಸಿಂಗ್​ ಮಾಸ್ಟರ್​ ಗುಜರಾತ್​, ಸೋಲಿನ ಮುಖಭಂಗ ಅನುಭವಿಸಿತ್ತು.

173 ರನ್​​ಗಳ ಟಾರ್ಗೆಟ್​ ಚೇಸಿಂಗ್ ಮಾಸ್ಟರ್ ಗುಜರಾತ್ ಮುಂದಿತ್ತು. ನಾಲ್ಕನೇ ಬಾರಿ ಚೆನ್ನೈಗೆ ಚಮಕ್ ನೀಡೋ ಕನಸಿನಲ್ಲೇ ಪಾಂಡ್ಯ ಪಡೆ ಕಣಕ್ಕಿಳಿದಿತ್ತು. ಆದ್ರೆ, ಟ್ರಿಕ್ಕಿ ಪಿಚ್​​ನಲ್ಲಿ ಮಾಸ್ಟರ್ ಧೋನಿಯ ಟ್ರ್ಯಾಪ್​​ಗೆ ಸಿಲುಕಿ ವಿಲವಿಲ ಒದ್ದಾಡಿತು. ಧೋನಿ ಚಾಣಾಕ್ಷತನದ ನಾಯಕತ್ವಕ್ಕೆ ಗುಜರಾತ್ ಟೈಟನ್ಸ್​ನ ಘಟಾನುಘಟಿ ಬ್ಯಾಟ್ಸ್​ಮನ್​​ಗಳೇ ಪಲ್ಟಿ ಹೊಡೆದು ಸೋಲೋಪ್ಪಿಕೊಳ್ತು.

ಧೋನಿ ಮುಂದೆ ನಡೆಯದ ‘ಪ್ರಿನ್ಸ್​’ ಆಟ..!
ಬ್ಯಾಕ್ ಟು ಬ್ಯಾಕ್ ಸೆಂಚೂರಿ ಸಿಡಿಸಿದ್ದ ಶುಭಮನ್​​ ಗಿಲ್, ಚೆನ್ನೈ ಚಮಕ್ ನೀಡೋ ಎಕ್ಸ್​ಪೆಕ್ಟೇಷನ್ ಹುಟ್ಟಿಹಾಕಿದ್ದರು. ಆದ್ರೆ, ನಿಧಾನಗತಿಯ ಆಟವಾಡಿದ ಯುವರಾಜನ ಆಟ 42 ರನ್​ಗೆ ಅಂತ್ಯವಾಯ್ತು.

ಗುರುವಿನ ಚಕ್ರವ್ಯೂಹಕ್ಕೆ ಶಿಷ್ಯ ಲಾಕ್..!
ಮಹತ್ವದ ಪಂದ್ಯದಲ್ಲಿ ಬೌಂಡರಿಯೊಂದಿಗೆ ಇನ್ನಿಂಗ್ಸ್ ಆರಂಭಿಸಿದ ಹಾರ್ದಿಕ್ ಪಾಂಡ್ಯ, ಚೆನ್ನೈಗೆ ಪಂಚ್ ನೀಡೋ ಲೆಕ್ಕಚಾರದಲ್ಲಿದ್ದರು. ಆದ್ರೆ, ಗುರುವಿನ ರಣವ್ಯೂಹದ ಮುಂದೆ 8 ರನ್​ಗೆ ವಿಕೆಟ್ ಒಪ್ಪಿಸಿ ಹೊರ ನಡೆದರು.

ಚೆನ್ನೈಗೆ ಶಕುನ ಆಗಲಿಲ್ಲ ಶನಕ..!
ಮ್ಯಾಚ್ ವಿನ್ನಿಂಗ್​ ಇನ್ನಿಂಗ್ಸ್​ ಕಟ್ಟೋದರಲ್ಲಿ ಲಂಕಾ ಕ್ಯಾಪ್ಟನ್ ಶನಕ ನಿಸ್ಸೀಮಾ.. ಆದ್ರೆ, ಧೋನಿ ಬಲಗೈ ಬಂಟ ಜಡ್ಡು ಜಾದೂ ಮುಂದೆ ಮಂಡಿಯೂರಿದ ಶನಕ, 17 ರನ್​ಗೆ ಆಟ ಮುಗಿಸಿದರು.

ಜಡ್ಡು ಸ್ಟ್ರೋಕ್​ಗೆ ಕಿಲ್ಲರ್ ಆಗಲಿಲ್ಲ ಮಿಲ್ಲರ್..!
ಸಂಕಷ್ಟಗಳಲ್ಲಿ ಗುಜರಾತ್​ಗೆ ಆಧಾರವಾಗೋದೆ ಕಿಲ್ಲರ್ ಖ್ಯಾತಿಯ ಮಿಲ್ಲರ್. ಆದ್ರೆ, ಟ್ರಿಕ್ಕಿ ಪಿಚ್​ನಲ್ಲಿ ತಡಬಡಾಯಿಸಿದ ಮಿಲ್ಲರ್​​​, ಜಡ್ಡು ಎಸೆತಕ್ಕೆ ಸ್ಟನ್ ಆಗಿ ಪೆವಿಲಿಯನ್​ಗೆ ಹೆಜ್ಜೆಹಾಕಿದ್ರು.

ತವರಿನ ಅಂಗಳದಲ್ಲಿ ವಿಜಯ ನೀಡಲಿಲ್ಲ ಶಂಕರ್..!
ಬೆಂಗಳೂರಿನ ಎದುರು ಮ್ಯಾಚ್ ವಿನ್ನಿಂಗ್ ಪರ್ಪಾಮೆನ್ಸ್​ ನೀಡಿದ್ದ ವಿಜಯ್ ಶಂಕರ್, ತವರಿನ ಅಂಗಳದಲ್ಲಿ ಗುಜರಾತ್​ಗೆ ಗೆಲುವಿನ ಉಡುಗೊರೆ ನೀಡೋ ಲೆಕ್ಕಚಾರದಲ್ಲಿದ್ದರು. ಆದ್ರೆ, ವಿಜಯ್ ಶಂಕರ್ ಆಟ 14ಕ್ಕೆ ಅಂತ್ಯವಾಯ್ತು.

ವ್ಯರ್ಥವಾಯ್ತು ರಶೀದ್ ಸ್ನೇಕ್ ಶಾಟ್ಸ್​
ಕೊನೆಯಲ್ಲಿ ಸ್ಪೋಟಕ ಆಟವಾಡಿದ ರಶೀದ್, 16 ಎಸೆತಗಳಲ್ಲಿ 2 ಸಿಕ್ಸರ್, 3 ಬೌಂಡರಿ ಒಳಗೊಂಡ 30 ರನ್ ಸಿಡಿಸಿ ಗೆಲುವಿನ ಆಸೆ ಚಿಗುರಿಸಿದ್ದರು. ಆದ್ರೆ, ಫೀಲ್ಡಿಂಗ್​ನಲ್ಲಿ ಬದಲಾವಣೆ ತಂದ ಧೋನಿ, ರಶೀದ್ ಓಟಕ್ಕೆ ಬ್ರೇಕ್ ಹಾಕಿದರು. ಆ ಮೂಲಕ ಗುಜರಾತ್​​​​​​​​​​​​​​​​​ ಕನಸು ಭಗ್ನಗೊಳಿಸಿದರು.

ಬಲಿಷ್ಠ ಗುಜರಾತ್​ಗೆ ಸ್ಪರ್ಧಾತ್ಮಕ ಮೊತ್ತವನಷ್ಟೇ ನೀಡಿದ್ದರೂ, ಕ್ಯಾಪ್ಟನ್ ಕೂಲ್ ಮಾಸ್ಟರ್​ ಮೂವ್​​ಗಳ ಮುಂದೆ​​​​​​​ ಟೈಟನ್ಸ್​ ಮಂಕಾಗಿದ್ದು ಸುಳ್ಳಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Load More