newsfirstkannada.com

ಮುಖ್ಯಮಂತ್ರಿ ಸಿದ್ದರಾಮಯ್ಯ ಕಚೇರಿ ಕೃಷ್ಣಾದಲ್ಲಿ 30 ಲಕ್ಷ ರೂ. ಕೊಟ್ಟರೆ ಕೆಲಸ ಆಗ್ತದೆ ಎನ್ನುತ್ತಾರೆ -ಕುಮಾರಸ್ವಾಮಿ ಗಂಭೀರ ಆರೋಪ

Share :

03-07-2023

    ಶಾಸಕರು ಬಂದು ಲೆಟರ್ ಕೊಟ್ಟ ಕಥೆ ಹೇಳಿದ HDK

    ಮುಖ್ಯಮಂತ್ರಿ ಕಚೇರಿಯಲ್ಲಿ ಇದೆಲ್ಲ ನಡೆಯುತ್ತಾ..?

    ಕುಮಾರಸ್ವಾಮಿ ಸ್ಫೋಟಕ ಹೇಳಿಕೆ ವಿಡಿಯೋ ಇಲ್ಲಿದೆ

ಕಾಂಗ್ರೆಸ್​ನವರು ಕಳೆದ ಒಂದೆರಡು ವರ್ಷಗಳಲ್ಲಿ ಜಾಗಟೆ ಹೊಡೆದ್ರು. ಪೆಸಿಎಂ ಎಂದು ಬೆಂಗಳೂರಲ್ಲಿ ಪೋಸ್ಟರ್​ಗಳನ್ನು ಅಂಟಿಸಿದ್ರು. 40 ಪರ್ಸೆಂಟ್ ಎಂದು ಆರೋಪ ಮಾಡಿದರು. ಯಾವುದಾದರೂ ದಾಖಲೆ ಇಟ್ಟಿದ್ದಾರಾ? ಅದನ್ನೇ ಈಗ ಮಧ್ಯ ಪ್ರದೇಶದಲ್ಲಿ ಮಾಡಲು ಮುಂದಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿ ಕಚೇರಿ ಎಲ್ಲಿಗೆ ಬಂದು ನಿಂತಿದೆ ಅಂದರೆ, ಮೊನ್ನೆ ಶಾಸಕರೊಬ್ಬರು ಪತ್ರ ಕೊಟ್ಟರೆ, ಮುಖ್ಯಮಂತ್ರಿ ಹಿಂದೆ ಓಡಾಡುವವರಲ್ಲಿ ಒಬ್ಬರು ಬರೀ ಪತ್ರ ತಂದರೆ ಆಗಲ್ಲ, 30 ಲಕ್ಷ ದುಡ್ಡು ಕೊಟ್ಟರೆ ಕೆಲಸ ಆಗುತ್ತದೆ ಎಂದು ಹೇಳ್ತಾನೆ. ಇದು ಮುಖ್ಯಮಂತ್ರಿ ಕಚೇರಿ ಕೃಷ್ಣಾದಲ್ಲಿ ನಡೆದಿರೋದು. ಇದನ್ನು ನಾನು ಹೇಳಬೇಕಾ? ಶಾಸಕರು ಯಾರೋ ಲೆಟರ್ ಕೊಟ್ಟಾಗ ಹೇಳಿದ ಮಾತು. ಇದು ನಿಜವಾಗಿಯೂ ನಡೆಯುತ್ತಿರೋದು. ಕಾಂಗ್ರೆಸ್​ ನಾಯಕರಿಗೆ ಇದು ಗೊತ್ತಿಲ್ವಾ? ನಾನು ಇರೋದನ್ನು ಹೇಳುತ್ತಿದ್ದೇನೆ ಎಂದರು.

ಬಂಧಿತ ತಹಶೀಲ್ದಾರ್ ಒಬ್ಬರು ಸುದ್ದಿಯಾಗ್ತಿದ್ದಾರೆ. ಐನೂರು ಕೋಟಿ, ಸಾವಿರಾರು ಕೋಟಿ ಎಂದು ಮಾಧ್ಯಮಗಳಲ್ಲಿ ಸುದ್ದಿ ಆಗುತ್ತಿದೆ. ಅವನು ಹಿಂದಿನ ಸರ್ಕಾರದ ಅವಧಿಯಲ್ಲಿ ಮೂರು ಕೋಟಿ ರೂಪಾಯಿ ನೀಡಿ ಬಂದವನು. ಇದು ನಿರಂತರವಾಗಿ ನಡೆದುಕೊಂಡು ಬಂದಿವೆ. ಎರಡೂ ರಾಜಕೀಯ ಪಕ್ಷಗಳು ಈಸ್ಟ್ ಇಂಡಿಯಾ ಕಂಪನಿ​ ಇದ್ದ ಹಾಗೆ. ನಮ್ಮ ರಾಜ್ಯ ಸಂಪತ್​​ ಭರಿತ ರಾಜ್ಯ. ಜನ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಕಿಡಿಕಾರಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಕಚೇರಿ ಕೃಷ್ಣಾದಲ್ಲಿ 30 ಲಕ್ಷ ರೂ. ಕೊಟ್ಟರೆ ಕೆಲಸ ಆಗ್ತದೆ ಎನ್ನುತ್ತಾರೆ -ಕುಮಾರಸ್ವಾಮಿ ಗಂಭೀರ ಆರೋಪ

https://newsfirstlive.com/wp-content/uploads/2023/07/SIDDU.jpg

    ಶಾಸಕರು ಬಂದು ಲೆಟರ್ ಕೊಟ್ಟ ಕಥೆ ಹೇಳಿದ HDK

    ಮುಖ್ಯಮಂತ್ರಿ ಕಚೇರಿಯಲ್ಲಿ ಇದೆಲ್ಲ ನಡೆಯುತ್ತಾ..?

    ಕುಮಾರಸ್ವಾಮಿ ಸ್ಫೋಟಕ ಹೇಳಿಕೆ ವಿಡಿಯೋ ಇಲ್ಲಿದೆ

ಕಾಂಗ್ರೆಸ್​ನವರು ಕಳೆದ ಒಂದೆರಡು ವರ್ಷಗಳಲ್ಲಿ ಜಾಗಟೆ ಹೊಡೆದ್ರು. ಪೆಸಿಎಂ ಎಂದು ಬೆಂಗಳೂರಲ್ಲಿ ಪೋಸ್ಟರ್​ಗಳನ್ನು ಅಂಟಿಸಿದ್ರು. 40 ಪರ್ಸೆಂಟ್ ಎಂದು ಆರೋಪ ಮಾಡಿದರು. ಯಾವುದಾದರೂ ದಾಖಲೆ ಇಟ್ಟಿದ್ದಾರಾ? ಅದನ್ನೇ ಈಗ ಮಧ್ಯ ಪ್ರದೇಶದಲ್ಲಿ ಮಾಡಲು ಮುಂದಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿ ಕಚೇರಿ ಎಲ್ಲಿಗೆ ಬಂದು ನಿಂತಿದೆ ಅಂದರೆ, ಮೊನ್ನೆ ಶಾಸಕರೊಬ್ಬರು ಪತ್ರ ಕೊಟ್ಟರೆ, ಮುಖ್ಯಮಂತ್ರಿ ಹಿಂದೆ ಓಡಾಡುವವರಲ್ಲಿ ಒಬ್ಬರು ಬರೀ ಪತ್ರ ತಂದರೆ ಆಗಲ್ಲ, 30 ಲಕ್ಷ ದುಡ್ಡು ಕೊಟ್ಟರೆ ಕೆಲಸ ಆಗುತ್ತದೆ ಎಂದು ಹೇಳ್ತಾನೆ. ಇದು ಮುಖ್ಯಮಂತ್ರಿ ಕಚೇರಿ ಕೃಷ್ಣಾದಲ್ಲಿ ನಡೆದಿರೋದು. ಇದನ್ನು ನಾನು ಹೇಳಬೇಕಾ? ಶಾಸಕರು ಯಾರೋ ಲೆಟರ್ ಕೊಟ್ಟಾಗ ಹೇಳಿದ ಮಾತು. ಇದು ನಿಜವಾಗಿಯೂ ನಡೆಯುತ್ತಿರೋದು. ಕಾಂಗ್ರೆಸ್​ ನಾಯಕರಿಗೆ ಇದು ಗೊತ್ತಿಲ್ವಾ? ನಾನು ಇರೋದನ್ನು ಹೇಳುತ್ತಿದ್ದೇನೆ ಎಂದರು.

ಬಂಧಿತ ತಹಶೀಲ್ದಾರ್ ಒಬ್ಬರು ಸುದ್ದಿಯಾಗ್ತಿದ್ದಾರೆ. ಐನೂರು ಕೋಟಿ, ಸಾವಿರಾರು ಕೋಟಿ ಎಂದು ಮಾಧ್ಯಮಗಳಲ್ಲಿ ಸುದ್ದಿ ಆಗುತ್ತಿದೆ. ಅವನು ಹಿಂದಿನ ಸರ್ಕಾರದ ಅವಧಿಯಲ್ಲಿ ಮೂರು ಕೋಟಿ ರೂಪಾಯಿ ನೀಡಿ ಬಂದವನು. ಇದು ನಿರಂತರವಾಗಿ ನಡೆದುಕೊಂಡು ಬಂದಿವೆ. ಎರಡೂ ರಾಜಕೀಯ ಪಕ್ಷಗಳು ಈಸ್ಟ್ ಇಂಡಿಯಾ ಕಂಪನಿ​ ಇದ್ದ ಹಾಗೆ. ನಮ್ಮ ರಾಜ್ಯ ಸಂಪತ್​​ ಭರಿತ ರಾಜ್ಯ. ಜನ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಕಿಡಿಕಾರಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More