ಸಿಂಗಾಪುರದಲ್ಲಿ ಸಂಚು ಮಾಡಿದ್ದಾರೆಂದು ಡಿಕೆಶಿ ಆರೋಪ
ಡಿಕೆಶಿ ಆರೋಪ ಬೆನ್ನಲ್ಲೇ ಹೆಚ್ಡಿಕೆ ಫೋಟೋ ರಿಲೀಸ್
ಫೋಟೋ ಬಿಟ್ಟು ಡಿಕೆ ಹೇಳಿಕೆಗೆ ಟಕ್ಕರ್ ಕೊಟ್ರಾ ದಳಪತಿ?
ಬೆಂಗಳೂರು: ಇಲ್ಲಿ ಆಪರೇಷನ್ ಮಾಡಿದ್ರೆ ಗೊತ್ತಾಗುತ್ತೆ ಅಂತಾ ಸಿಂಗಾಪುರದಲ್ಲಿ ಕೂತು ಆಪರೇಷನ್ ಮಾಡ್ತಿದ್ದಾರೆ. ಸರ್ಕಾರ ಬೀಳಿಸೋ ತಂತ್ರದ ಬಗ್ಗೆ ನಮಗೂ ಮಾಹಿತಿಯಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆ ನೀಡಿದ್ದರು. ಈ ಮಾತು ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿತ್ತು. ಸಿಎಂ ಸಿದ್ದರಾಮಯ್ಯ ಸರ್ಕಾರದ ಪತನಕ್ಕೆ ವಿದೇಶದಲ್ಲಿ ಸ್ಕೆಚ್ ರೆಡಿ ಆಗ್ತಿದ್ಯಾ ಅನ್ನೋ ಚರ್ಚೆಗಳು ನಡೆದಿತ್ತು. ಡಿ.ಕೆ ಶಿವಕುಮಾರ್ ಅವರು ಸಿಂಗಾಪುರದ ಈ ಬಾಂಬ್ ಸಿಡಿಸಿದ ಮೂರು ದಿನದ ಬಳಿಕ ಫಾರಿನ್ ಪಾಲಿಟಿಕ್ಸ್ಗೆ ಹೊಸ ಟ್ವಿಸ್ಟ್ ಸಿಕ್ಕಿದೆ.
ಡಿಕೆ ಶಿವಕುಮಾರ್ ಸಿಂಗಾಪುರದ ಹೇಳಿಕೆ ನೀಡಿದ ಬೆನ್ನಲ್ಲೇ ವಿದೇಶದಲ್ಲಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಫ್ಯಾಮಿಲಿ ಫೋಟೋ ರಿಲೀಸ್ ಮಾಡಲಾಗಿದೆ. ಯುರೋಪ್ ಸುತ್ತಾಡುತ್ತಿರುವ ಹೆಚ್ಡಿಕೆ ಕುಟುಂಬ ಸದ್ಯ ಫಿನ್ಲ್ಯಾಂಡ್ನಲ್ಲಿದೆ. ದಳಪತಿ ಕುಟುಂಬದ ಸದಸ್ಯರು ಫಿನ್ಲ್ಯಾಂಡ್ನಲ್ಲಿ ಜಾಲಿ ಟ್ರಿಪ್ ಮಾಡುತ್ತಿದ್ದು, ನಾವು ಸಿಂಗಾಪುರದಲ್ಲಿ ಇಲ್ಲ ಅನ್ನೋ ಸಂದೇಶ ಸಾರಲಾಗಿದೆ.
ವಿಧಾನಸಭಾ ಅಧಿವೇಶನದಲ್ಲಿ ಬಿಜೆಪಿ ಹೋರಾಟಕ್ಕೆ ಜೆಡಿಎಸ್ ಬೆಂಬಲ ಸೂಚಿಸಿದ ಬಳಿಕ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಫಾರಿನ್ ಟೂರ್ ಕೈಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಸಿಂಗಾಪುರದಲ್ಲಿ ಸರ್ಕಾರ ಬೀಳಿಸೋ ಸಂಚು ಮಾಡಿದ್ದಾರೆಂದು ಹೇಳಿಕೆ ನೀಡಿದ್ದರು. ಪರೋಕ್ಷವಾಗಿ ಕುಮಾರಸ್ವಾಮಿ ಅವರ ಕುರಿತು ನೀಡಿದ್ದ ಹೇಳಿಕೆಗೆ ಫೋಟೋ ರಿಲೀಸ್ ಮಾಡೋ ಮೂಲಕ ಜೆಡಿಎಸ್ ನಾಯಕರು ಟಕ್ಕರ್ ಕೊಟ್ಟಿದ್ದಾರೆ. ಸದ್ಯ ಯುರೋಪ್ನ ಫಿನ್ಲ್ಯಾಂಡ್ನಲ್ಲಿ ದಳಪತಿ ತುಂಬು ಕುಟುಂಬ ವಾಸ್ತವ್ಯ ಹೂಡಿದೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಸಿಂಗಾಪುರದಲ್ಲಿ ಸಂಚು ಮಾಡಿದ್ದಾರೆಂದು ಡಿಕೆಶಿ ಆರೋಪ
ಡಿಕೆಶಿ ಆರೋಪ ಬೆನ್ನಲ್ಲೇ ಹೆಚ್ಡಿಕೆ ಫೋಟೋ ರಿಲೀಸ್
ಫೋಟೋ ಬಿಟ್ಟು ಡಿಕೆ ಹೇಳಿಕೆಗೆ ಟಕ್ಕರ್ ಕೊಟ್ರಾ ದಳಪತಿ?
ಬೆಂಗಳೂರು: ಇಲ್ಲಿ ಆಪರೇಷನ್ ಮಾಡಿದ್ರೆ ಗೊತ್ತಾಗುತ್ತೆ ಅಂತಾ ಸಿಂಗಾಪುರದಲ್ಲಿ ಕೂತು ಆಪರೇಷನ್ ಮಾಡ್ತಿದ್ದಾರೆ. ಸರ್ಕಾರ ಬೀಳಿಸೋ ತಂತ್ರದ ಬಗ್ಗೆ ನಮಗೂ ಮಾಹಿತಿಯಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆ ನೀಡಿದ್ದರು. ಈ ಮಾತು ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿತ್ತು. ಸಿಎಂ ಸಿದ್ದರಾಮಯ್ಯ ಸರ್ಕಾರದ ಪತನಕ್ಕೆ ವಿದೇಶದಲ್ಲಿ ಸ್ಕೆಚ್ ರೆಡಿ ಆಗ್ತಿದ್ಯಾ ಅನ್ನೋ ಚರ್ಚೆಗಳು ನಡೆದಿತ್ತು. ಡಿ.ಕೆ ಶಿವಕುಮಾರ್ ಅವರು ಸಿಂಗಾಪುರದ ಈ ಬಾಂಬ್ ಸಿಡಿಸಿದ ಮೂರು ದಿನದ ಬಳಿಕ ಫಾರಿನ್ ಪಾಲಿಟಿಕ್ಸ್ಗೆ ಹೊಸ ಟ್ವಿಸ್ಟ್ ಸಿಕ್ಕಿದೆ.
ಡಿಕೆ ಶಿವಕುಮಾರ್ ಸಿಂಗಾಪುರದ ಹೇಳಿಕೆ ನೀಡಿದ ಬೆನ್ನಲ್ಲೇ ವಿದೇಶದಲ್ಲಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಫ್ಯಾಮಿಲಿ ಫೋಟೋ ರಿಲೀಸ್ ಮಾಡಲಾಗಿದೆ. ಯುರೋಪ್ ಸುತ್ತಾಡುತ್ತಿರುವ ಹೆಚ್ಡಿಕೆ ಕುಟುಂಬ ಸದ್ಯ ಫಿನ್ಲ್ಯಾಂಡ್ನಲ್ಲಿದೆ. ದಳಪತಿ ಕುಟುಂಬದ ಸದಸ್ಯರು ಫಿನ್ಲ್ಯಾಂಡ್ನಲ್ಲಿ ಜಾಲಿ ಟ್ರಿಪ್ ಮಾಡುತ್ತಿದ್ದು, ನಾವು ಸಿಂಗಾಪುರದಲ್ಲಿ ಇಲ್ಲ ಅನ್ನೋ ಸಂದೇಶ ಸಾರಲಾಗಿದೆ.
ವಿಧಾನಸಭಾ ಅಧಿವೇಶನದಲ್ಲಿ ಬಿಜೆಪಿ ಹೋರಾಟಕ್ಕೆ ಜೆಡಿಎಸ್ ಬೆಂಬಲ ಸೂಚಿಸಿದ ಬಳಿಕ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಫಾರಿನ್ ಟೂರ್ ಕೈಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಸಿಂಗಾಪುರದಲ್ಲಿ ಸರ್ಕಾರ ಬೀಳಿಸೋ ಸಂಚು ಮಾಡಿದ್ದಾರೆಂದು ಹೇಳಿಕೆ ನೀಡಿದ್ದರು. ಪರೋಕ್ಷವಾಗಿ ಕುಮಾರಸ್ವಾಮಿ ಅವರ ಕುರಿತು ನೀಡಿದ್ದ ಹೇಳಿಕೆಗೆ ಫೋಟೋ ರಿಲೀಸ್ ಮಾಡೋ ಮೂಲಕ ಜೆಡಿಎಸ್ ನಾಯಕರು ಟಕ್ಕರ್ ಕೊಟ್ಟಿದ್ದಾರೆ. ಸದ್ಯ ಯುರೋಪ್ನ ಫಿನ್ಲ್ಯಾಂಡ್ನಲ್ಲಿ ದಳಪತಿ ತುಂಬು ಕುಟುಂಬ ವಾಸ್ತವ್ಯ ಹೂಡಿದೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ