newsfirstkannada.com

ವಿಧಾನಸಭೆ ಕಲಾಪದ ವೇಳೆ ನಿನ್ನೆ ನಡೆದ ಹೈಡ್ರಾಮಕ್ಕೆ ಕಾರಣ ಯಾರು ಎಂದು ತಿಳಿಸಿದ ಕುಮಾರಸ್ವಾಮಿ

Share :

20-07-2023

    ವಿಧಾನಸಭೆಯಲ್ಲಿ ಉಪಸಭಾಧ್ಯಕ್ಷರ ಮೇಲೆ ಪೇಪರ್ ಎಸೆದು ಆಕ್ರೋಶ

    ಬಿಜೆಪಿ ಶಾಸಕರನ್ನು ಅಮಾನತು ಮಾಡಿರುವ ಸ್ಪೀಕರ್ ಯು.ಟಿ.ಖಾದರ್

    ಡೆಪ್ಯೂಟಿ ಸ್ಪೀಕರ್ ‘ದಲಿತ’ ಎಂಬ ವಿವಾದಕ್ಕೂ ಪ್ರತಿಕ್ರಿಯಿಸಿದ HDK

ಬೆಂಗಳೂರು: ವಿಧಾನಸೌಧದಲ್ಲಿ ನಿನ್ನೆ ನಡೆದ ಹೈಡ್ರಾಮದ ಬಗ್ಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿ.. ನಿನ್ನೆ ದಿನ ವಿಧಾನಸಭೆಯಲ್ಲಿ ನಡೆದಿರುವ ಬೆಳವಣಿಗೆ ಎನಿದೆ? ಈ ಬೆಳವಣಿಗೆ ಕಾಂಗ್ರೆಸ್ ಪಕ್ಷವೇ ಕಾರಣ ಎಂದು ವಾಗ್ದಾಳಿ ನಡೆಸಿದ್ದಾರೆ.

ದೇಶದ ಹಲವಾರು ರಾಷ್ಟ್ರೀಯ ಪಕ್ಷಗಳು, ಮಹಾಘಬಂಧನ್ ಸಭೆ ಮಾಡಿದ್ದರು. ಆ ಸಭೆಗೆ ರಾಜ್ಯದ ಹಿರಿಯ ಅಧಿಕಾರಿಗಳನ್ನು ಸ್ವಾಗತ ಕೊರಲು ಬಳಕೆ ಮಾಡಿಕೊಂಡಿದ್ದಾರೆ. ಇದು ಅಧಿಕಾರಿಗಳ ದುರ್ಬಳಕೆ ಅಲ್ಲದೇ ಮತ್ತಿನ್ನೇನು? ಸ್ವೀಕರ್ ಕಚೇರಿಯಲ್ಲಿ ಸಂಧಾನ ಸಭೆ ನಡೆಸಿದ ವೇಳೆ ಕಾಂಗ್ರೆಸ್ ನಾಯಕರು ನಾವು ಏನೂ ತಪ್ಪು ಮಾಡಿಲ್ಲವೆಂದು ಪ್ರತಿಷ್ಠೆ ತೋರಿದ್ರು. ಆ ಪ್ರಕರಣವನ್ನು ಎರಡು ನಿಮಿಷಗಳಲ್ಲಿ ಬಗೆಹರಿಸಬಹುದಿತ್ತು. ಮುಂದೆ ಈ ರೀತಿ ಆಗಲ್ಲ ಎಂದು ಹೇಳಬಹುದಿತ್ತು. ಇದಕ್ಕೆ ವಿಷಾದ ಸಹ ವ್ಯಕ್ತಪಡಿಸುವ ಅವಶ್ಯಕತೆ ಇರಲಿಲ್ಲ ಎಂದರು.

ಊಟಕ್ಕೆ ಬಿಡದೆ ಸಿಎಂ ಹೇಳಿದ್ರು ಅಂತ ಕಲಾಪ ನಡೆಸಿದರು. ಹಿಂದೆ ಕಾಂಗ್ರೆಸ್ ಈ ರೀತಿ ಮಾಡಿಲ್ಲ. ಈಗ ದಲಿತ ಉಪ ಅಧ್ಯಕ್ಷರು ಮೇಲೆ ಅನುಕಂಪ ಬಂದಿದೆ ಅವರಿಗೆ. ಈಗ ಅವರಿಗೆ ದಲಿತ ಅಂತ ನೆನಪು ಬಂತಾ? ಪುಟ್ಟರಂಗ ಶೆಟ್ಟಿ ಬೇಡ ಅಂದಿದ್ದಕ್ಕೆ ಗುರುತಿಸಿದ್ದೀರಾ? ನಾನು ಪ್ರಿಯಾಂಕ್ ಖರ್ಗೆಗೆ ಕೇಳ್ತೀನಿ, ನೀವೇ ಸ್ವೀಕರ್ ಆಗಿ ಅವರನ್ನ ಮಂತ್ರಿ ಮಾಡಬಹುದಿತ್ತಲ್ವಾ? ನಾನು ಸಿಎಂ ಆಗಿದ್ದ ವೇಳೆ ಅಧಿಕಾರಿಗಳನ್ನ ದುರುಪಯೋಗ ಮಾಡಿಕೊಂಡಿಲ್ವ ಎಂದು ನನಗೆ ಸವಾಲು ಹಾಕಿದ್ದೀರಿ. ನಾನು ಮಾಡಲ್ಲ, ನಾನು ಪ್ರಮಾಣವಚನ ಸ್ವೀಕಾರ ಮಾಡಿದ ಮೇಲೆ ಅಧಿಕಾರಿಗಳ ದುರ್ಬಳಕೆ ಮಾಡಿಕೊಂಡಿಲ್ಲ. ನಿಮಗೆ ದಾಖಲೆ ಇದ್ದರೆ ಬಿಡುಗಡೆ ಮಾಡಿ ಎಂದು ಸವಾಲ್ ಹಾಕಿದರು.

ನಿನ್ನೆ ವಿಧಾನಸಭೆಯಲ್ಲಿ ಏನಾಗಿತ್ತು..?

ಕಾಂಗ್ರೆಸ್ ‘ಮಹಾಘಟಬಂಧನ್’ ಸಭೆಗೆ IAS ಅಧಿಕಾರಿಗಳ ಬಳಕೆಗೆ ವಿರೋಧಿಸಿ ವಿಧಾನಸಭೆಯಲ್ಲಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸುತ್ತಿದ್ದವು. ಗದ್ದಲ, ಗಲಾಟೆಯ ಕಲಾಪದ ಮಧ್ಯೆ ಊಟದ ಸಮಯವಾಗಿತ್ತು. ಡೆಪ್ಯೂಟಿ ಸ್ಪೀಕರ್ ಊಟಕ್ಕೆ ಬಿಡದ ಹಿನ್ನೆಲೆ ಬಿಜೆಪಿ ಸದಸ್ಯರು ಪೇಪರ್ ಹರಿದು ಎಸೆದು ಆಕ್ರೋಶ ವ್ಯಕ್ತಪಡಿಸಿದ್ದರು. ತಮ್ಮ ಮುಖದ ಮೇಲೆ ಪೇಪರ್ ಎಸೆದಿದ್ದಕ್ಕೆ ಡೆಪ್ಯೂಟಿ ಸ್ಪೀಕರ್ ರುದ್ರಪ್ಪ ಲಮಾಣಿ ಪ್ರತಿಕ್ರಿಯಿಸಿ.. ನಾನೊಬ್ಬ ದಲಿತ. ನನ್ನ ಮೇಲೆ ಈ ರೀತಿ ಮಾಡೋದು ಸರಿಯಲ್ಲ ಎಂದ ಉಪಸಭಾಧ್ಯಕ್ಷರು ಹೇಳಿದರು. ಈ ಗಲಾಟೆಯ ಮಧ್ಯೆ ಬಿಜೆಪಿ ಸದಸ್ಯರ ವಿರುದ್ಧ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರತಿಪಕ್ಷ ನಾಯಕರು ಪೇಪರ್ ಹರಿದು ಎಸೆದ ಸಂದರ್ಭದಲ್ಲಿ ಮಾರ್ಷಲ್‌ಗಳು ರಕ್ಷಣೆಗೆ ಬಂದಿಲ್ಲ. ಇದರಿಂದ ಇನ್ನಷ್ಟು ಆಕ್ರೋಶಗೊಂಡ ಸಚಿವ ಭೈರತಿ ಸುರೇಶ್, ಮಾರ್ಷಲ್‌ಗಳನ್ನ ಸಸ್ಪೆಂಡ್ ಮಾಡಿ ಎಂದು ಒತ್ತಾಯಿಸಿದ್ದರು.

ಗಲಾಟೆ ತೀವ್ರಗೊಳ್ಳುತ್ತಿದ್ದಂತೆಯೇ ಸ್ಪೀಕರ್ ಖಾದರ್, ಬಿಜೆಪಿ ನಾಯಕರಾದ ಆರ್.ಅಶೋಕ್, ವೇದವ್ಯಾಸ್ ಕಾಮತ್, ಕೋಟ್ಯಾನ್, ಭರತ್ ಶೆಟ್ಟಿ, ಸುನಿಲ್ ಕುಮಾರ್, ಆರಗ ಜ್ಞಾನೇಂದ್ರ, ಅರವಿಂದ ಬೆಲ್ಲದ್, ದೀರಜ್ ಮುನಿರಾಜ್, ಅಶ್ವತ್ಥ ನಾರಾಯಣ್, ಯಶ್‌ಪಾಲ್ ಅವರನ್ನು ಅಮಾನತು ಮಾಡಿ ಆದೇಶಿಸಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಧಾನಸಭೆ ಕಲಾಪದ ವೇಳೆ ನಿನ್ನೆ ನಡೆದ ಹೈಡ್ರಾಮಕ್ಕೆ ಕಾರಣ ಯಾರು ಎಂದು ತಿಳಿಸಿದ ಕುಮಾರಸ್ವಾಮಿ

https://newsfirstlive.com/wp-content/uploads/2023/07/HD_KUMARASWAMYA.jpg

    ವಿಧಾನಸಭೆಯಲ್ಲಿ ಉಪಸಭಾಧ್ಯಕ್ಷರ ಮೇಲೆ ಪೇಪರ್ ಎಸೆದು ಆಕ್ರೋಶ

    ಬಿಜೆಪಿ ಶಾಸಕರನ್ನು ಅಮಾನತು ಮಾಡಿರುವ ಸ್ಪೀಕರ್ ಯು.ಟಿ.ಖಾದರ್

    ಡೆಪ್ಯೂಟಿ ಸ್ಪೀಕರ್ ‘ದಲಿತ’ ಎಂಬ ವಿವಾದಕ್ಕೂ ಪ್ರತಿಕ್ರಿಯಿಸಿದ HDK

ಬೆಂಗಳೂರು: ವಿಧಾನಸೌಧದಲ್ಲಿ ನಿನ್ನೆ ನಡೆದ ಹೈಡ್ರಾಮದ ಬಗ್ಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿ.. ನಿನ್ನೆ ದಿನ ವಿಧಾನಸಭೆಯಲ್ಲಿ ನಡೆದಿರುವ ಬೆಳವಣಿಗೆ ಎನಿದೆ? ಈ ಬೆಳವಣಿಗೆ ಕಾಂಗ್ರೆಸ್ ಪಕ್ಷವೇ ಕಾರಣ ಎಂದು ವಾಗ್ದಾಳಿ ನಡೆಸಿದ್ದಾರೆ.

ದೇಶದ ಹಲವಾರು ರಾಷ್ಟ್ರೀಯ ಪಕ್ಷಗಳು, ಮಹಾಘಬಂಧನ್ ಸಭೆ ಮಾಡಿದ್ದರು. ಆ ಸಭೆಗೆ ರಾಜ್ಯದ ಹಿರಿಯ ಅಧಿಕಾರಿಗಳನ್ನು ಸ್ವಾಗತ ಕೊರಲು ಬಳಕೆ ಮಾಡಿಕೊಂಡಿದ್ದಾರೆ. ಇದು ಅಧಿಕಾರಿಗಳ ದುರ್ಬಳಕೆ ಅಲ್ಲದೇ ಮತ್ತಿನ್ನೇನು? ಸ್ವೀಕರ್ ಕಚೇರಿಯಲ್ಲಿ ಸಂಧಾನ ಸಭೆ ನಡೆಸಿದ ವೇಳೆ ಕಾಂಗ್ರೆಸ್ ನಾಯಕರು ನಾವು ಏನೂ ತಪ್ಪು ಮಾಡಿಲ್ಲವೆಂದು ಪ್ರತಿಷ್ಠೆ ತೋರಿದ್ರು. ಆ ಪ್ರಕರಣವನ್ನು ಎರಡು ನಿಮಿಷಗಳಲ್ಲಿ ಬಗೆಹರಿಸಬಹುದಿತ್ತು. ಮುಂದೆ ಈ ರೀತಿ ಆಗಲ್ಲ ಎಂದು ಹೇಳಬಹುದಿತ್ತು. ಇದಕ್ಕೆ ವಿಷಾದ ಸಹ ವ್ಯಕ್ತಪಡಿಸುವ ಅವಶ್ಯಕತೆ ಇರಲಿಲ್ಲ ಎಂದರು.

ಊಟಕ್ಕೆ ಬಿಡದೆ ಸಿಎಂ ಹೇಳಿದ್ರು ಅಂತ ಕಲಾಪ ನಡೆಸಿದರು. ಹಿಂದೆ ಕಾಂಗ್ರೆಸ್ ಈ ರೀತಿ ಮಾಡಿಲ್ಲ. ಈಗ ದಲಿತ ಉಪ ಅಧ್ಯಕ್ಷರು ಮೇಲೆ ಅನುಕಂಪ ಬಂದಿದೆ ಅವರಿಗೆ. ಈಗ ಅವರಿಗೆ ದಲಿತ ಅಂತ ನೆನಪು ಬಂತಾ? ಪುಟ್ಟರಂಗ ಶೆಟ್ಟಿ ಬೇಡ ಅಂದಿದ್ದಕ್ಕೆ ಗುರುತಿಸಿದ್ದೀರಾ? ನಾನು ಪ್ರಿಯಾಂಕ್ ಖರ್ಗೆಗೆ ಕೇಳ್ತೀನಿ, ನೀವೇ ಸ್ವೀಕರ್ ಆಗಿ ಅವರನ್ನ ಮಂತ್ರಿ ಮಾಡಬಹುದಿತ್ತಲ್ವಾ? ನಾನು ಸಿಎಂ ಆಗಿದ್ದ ವೇಳೆ ಅಧಿಕಾರಿಗಳನ್ನ ದುರುಪಯೋಗ ಮಾಡಿಕೊಂಡಿಲ್ವ ಎಂದು ನನಗೆ ಸವಾಲು ಹಾಕಿದ್ದೀರಿ. ನಾನು ಮಾಡಲ್ಲ, ನಾನು ಪ್ರಮಾಣವಚನ ಸ್ವೀಕಾರ ಮಾಡಿದ ಮೇಲೆ ಅಧಿಕಾರಿಗಳ ದುರ್ಬಳಕೆ ಮಾಡಿಕೊಂಡಿಲ್ಲ. ನಿಮಗೆ ದಾಖಲೆ ಇದ್ದರೆ ಬಿಡುಗಡೆ ಮಾಡಿ ಎಂದು ಸವಾಲ್ ಹಾಕಿದರು.

ನಿನ್ನೆ ವಿಧಾನಸಭೆಯಲ್ಲಿ ಏನಾಗಿತ್ತು..?

ಕಾಂಗ್ರೆಸ್ ‘ಮಹಾಘಟಬಂಧನ್’ ಸಭೆಗೆ IAS ಅಧಿಕಾರಿಗಳ ಬಳಕೆಗೆ ವಿರೋಧಿಸಿ ವಿಧಾನಸಭೆಯಲ್ಲಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸುತ್ತಿದ್ದವು. ಗದ್ದಲ, ಗಲಾಟೆಯ ಕಲಾಪದ ಮಧ್ಯೆ ಊಟದ ಸಮಯವಾಗಿತ್ತು. ಡೆಪ್ಯೂಟಿ ಸ್ಪೀಕರ್ ಊಟಕ್ಕೆ ಬಿಡದ ಹಿನ್ನೆಲೆ ಬಿಜೆಪಿ ಸದಸ್ಯರು ಪೇಪರ್ ಹರಿದು ಎಸೆದು ಆಕ್ರೋಶ ವ್ಯಕ್ತಪಡಿಸಿದ್ದರು. ತಮ್ಮ ಮುಖದ ಮೇಲೆ ಪೇಪರ್ ಎಸೆದಿದ್ದಕ್ಕೆ ಡೆಪ್ಯೂಟಿ ಸ್ಪೀಕರ್ ರುದ್ರಪ್ಪ ಲಮಾಣಿ ಪ್ರತಿಕ್ರಿಯಿಸಿ.. ನಾನೊಬ್ಬ ದಲಿತ. ನನ್ನ ಮೇಲೆ ಈ ರೀತಿ ಮಾಡೋದು ಸರಿಯಲ್ಲ ಎಂದ ಉಪಸಭಾಧ್ಯಕ್ಷರು ಹೇಳಿದರು. ಈ ಗಲಾಟೆಯ ಮಧ್ಯೆ ಬಿಜೆಪಿ ಸದಸ್ಯರ ವಿರುದ್ಧ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರತಿಪಕ್ಷ ನಾಯಕರು ಪೇಪರ್ ಹರಿದು ಎಸೆದ ಸಂದರ್ಭದಲ್ಲಿ ಮಾರ್ಷಲ್‌ಗಳು ರಕ್ಷಣೆಗೆ ಬಂದಿಲ್ಲ. ಇದರಿಂದ ಇನ್ನಷ್ಟು ಆಕ್ರೋಶಗೊಂಡ ಸಚಿವ ಭೈರತಿ ಸುರೇಶ್, ಮಾರ್ಷಲ್‌ಗಳನ್ನ ಸಸ್ಪೆಂಡ್ ಮಾಡಿ ಎಂದು ಒತ್ತಾಯಿಸಿದ್ದರು.

ಗಲಾಟೆ ತೀವ್ರಗೊಳ್ಳುತ್ತಿದ್ದಂತೆಯೇ ಸ್ಪೀಕರ್ ಖಾದರ್, ಬಿಜೆಪಿ ನಾಯಕರಾದ ಆರ್.ಅಶೋಕ್, ವೇದವ್ಯಾಸ್ ಕಾಮತ್, ಕೋಟ್ಯಾನ್, ಭರತ್ ಶೆಟ್ಟಿ, ಸುನಿಲ್ ಕುಮಾರ್, ಆರಗ ಜ್ಞಾನೇಂದ್ರ, ಅರವಿಂದ ಬೆಲ್ಲದ್, ದೀರಜ್ ಮುನಿರಾಜ್, ಅಶ್ವತ್ಥ ನಾರಾಯಣ್, ಯಶ್‌ಪಾಲ್ ಅವರನ್ನು ಅಮಾನತು ಮಾಡಿ ಆದೇಶಿಸಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More