newsfirstkannada.com

ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಹೆಚ್​​ಡಿಕೆ ಸಿಡಿಸಿದ ಬಾಂಬ್​ಗೆ ಕಾಂಗ್ರೆಸ್​ ಶಾಕ್​​​; ಅಂಥದ್ದೇನಾಯ್ತು?

Share :

07-07-2023

    ಹೆಚ್​ಡಿಕೆ ಸಿಡಿಸಿದ ಬಾಂಬ್​ಗೆ ಹಸ್ತ ಪಡೆ ಕಂಗಾಲು

    ಸದನದಲ್ಲಿ ಸದ್ದು ಮಾಡಿದ ‘ಪೆನ್​ಡ್ರೈವ್​’ ಪಾಲಿಟಿಕ್ಸ್​

    ಕಾಂಗ್ರೆಸ್ಸಿಗರ ಕಣ್ಣು ಕೆಂಪಾಗಿಸಿದ ಹೆಚ್​ಡಿಕೆ ಪೆನ್​ಡ್ರೈವ್​

ಬೆಂಗಳೂರು: ವರ್ಗಾವಣೆ ದಂಧೆ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ-ಕಲ್ಲೋಲವನ್ನೇ ಸೃಷ್ಟಿಸಿದೆ. ಪೆನ್​ಡ್ರೈವ್​ ತೋರಿಸಿ ಟೀಸರ್​ ಬಿಟ್ಟಿರುವ ಮಾಜಿ ಸಿಎಂ ಹೆಚ್​ಡಿಕೆ ಪಿಕ್ಚರ್​ ಬಿಡಲು ತಯಾರಿ ನಡೆಸಿದ್ದಾರೆ. ಆದ್ರೆ ಅದಕ್ಕೂ ಮುನ್ನವೇ ಸಿಎಂ ಹಾಗೂ ಮಾಜಿ ಸಿಎಂಗಳ ನಡುವೆ ಮಾತಿನ ಮಲ್ಲಯುದ್ಧ ನಡೆದುಹೋಗಿದೆ. ಈ ವಾಗ್ಯುದ್ಧ ಅವರವರ ಪುತ್ರರವರೆಗೂ ಹೋಗಿದೆ.

ವರ್ಗಾವಣೆ ದಂಧೆ.. ನೂತನ ಕಾಂಗ್ರೆಸ್​ ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಸಿಡಿಸಿರುವ ಮಿಸೈಲ್​ ಬಾಂಬ್. ಸದ್ಯ ಈ ಬಾಂಬ್​ಗೆ ಹಸ್ತ ಪಡೆ ಕಂಗಾಲಾಗಿದೆ. ಸಿಎಂ ಆದಿಯಾಗಿ ಸಚಿವರ ಪಡೆ ಸದನದ ಒಳಗೆ ಹಾಗೂ ಹೊರಗೆ ನಿರುತ್ತರವಾಗಿದ್ದಾರೆ. ಯಕಶ್ಚಿತ್ ಪೆನ್​ಡ್ರೈವ್ ಚಿಪ್​ವೊಂದು ಸಿಎಂ ಸಿದ್ದರಾಮಯ್ಯ ಸರ್ಕಾರದ ಬೆವರಿಳಿಸುವಂತೆ ಮಾಡಿದೆ. ಈ ಪೆನ್​ಡ್ರೈವ್ ಆರೋಪ ಮಾಡಿದ ಹೆಚ್​ಡಿಕೆ ವಿರುದ್ಧ ಸಿಎಂ ಸಿದ್ದರಾಮಯ್ಯ ಹೊಸ ಬಾಂಬ್ ಸಿಡಿಸಿದ್ದಾರೆ.

‘ಕುಮಾರಸ್ವಾಮಿ ಅವರದ್ದು ಬರೀ ಹಿಟ್‌ ಅಂಡ್‌ ರನ್‌’

ಆಡಳಿತದಲ್ಲಿ ಟ್ರಾನ್ಸಫರ್​ಗಳು ಸ್ವಾಭಾವಿಕ ಅಂತ ಕುಮಾರಸ್ವಾಮಿ ವಿರುದ್ಧ ಸಿದ್ದರಾಮಯ್ಯ ಗುಡುಗಿದ್ದಾರೆ. ಅವರದ್ದು ಬರೀ ಹಿಟ್ ಆ್ಯಂಡ್ ರನ್ ಆರೋಪಗಳೇ. ಕುಮಾರಸ್ವಾಮಿ ಹತಾಶರಾಗಿ ಮಾತನಾಡುತ್ತಿದ್ದಾರೆ ಅಂತ ಹೇಳಿದ್ದಾರೆ.

ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್​​ಡಿಕೆ ವಾಗ್ದಾಳಿ

ಇನ್ನು ಹಾಲಿ ಸಿಎಂ ಸಿದ್ದರಾಮಯ್ಯ ವರ್ಸಸ್​​ ಮಾಜಿ ಸಿಎಂ ಕುಮಾರಸ್ವಾಮಿ ನಡುವೆ ಪೆನ್​ಡ್ರೈವ್ ಸಮರ ಜೋರಾಗಿದೆ. ಪೆನ್​ಡ್ರೈವ್ ಹಿಡಿದು ಹೆಚ್​ಡಿಕೆ ಕಾಂಗ್ರೆಸ್​ಗೆ ರಣವೀಳ್ಯ ಕೊಟ್ಟಿದ್ದಾರೆ. ಎಲ್ಲಾ ವರ್ಗಾವಣೆ ದಂಧೆ ಸಿಎಂ ನೇತೃತ್ವದಲ್ಲೇ ನಡೆಯುತ್ತಿದೆ ಅನ್ನೋ ಹೊಸ ಬಾಂಬ್​ ಸಿಡಿಸಿದ್ದಾರೆ. ಅಲ್ಲದೇ ನಂಗೆ ಹಿಟ್ ಆ್ಯಂಡ್ ರನ್ ಅಂತಾರೆ, ಏನಾದರೂ ಹೇಳಿಕೊಳ್ಳಲಿ. ಆತುರ ಇಲ್ಲ, ಸೂಕ್ತ ಸಮಯದಲ್ಲಿ ಸರಿಯಾಗಿ ಪೆನ್​ಡ್ರೈವ್ ಬಿಡುಗಡೆ ಮಾಡ್ತೀನಿ ಅಂತ ಗುಡುಗಿದ್ದಾರೆ.

ಮಗನ ಮೇಲಿನ ಆರೋಪಕ್ಕೆ ಕುಮಾರಸ್ವಾಮಿ ಸವಾಲು

ಇನ್ನು ಸದನಕ್ಕೂ ಮೊದಲು ಮಾತನಾಡಿದ ಕುಮಾರಸ್ವಾಮಿ, ನಾನು ಪೆನ್​ಡ್ರೈವ್​ ರಿಲೀಸ್ ಮಾಡಿದ್ರೆ ದಂಧೆ ನಿಲ್ಲಿಸುವ ತಾಕತ್ತು ಸಿಎಂಗೆ ಇದೆಯಾ ಅಂತ ಪ್ರಶ್ನಿಸಿದ್ರು. ಅಲ್ಲದೇ ನನ್ನ ಮಗ ಯಾವುದಾದ್ರೂ ವರ್ಗಾವಣೆ ಮಾಡಿದ್ರೆ ಫ್ರೂವ್​ ಮಾಡಲಿ. ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ತೇನೆ ಅಂತ ಸಿಎಂಗೆ ಸವಾಲು ಹಾಕಿದ್ದಾರೆ.

ಇನ್ನು ಯತೀಂದ್ರ ಅವರನ್ನು ಬಿಜೆಪಿ ಶಾಡೋ ಸಿಎಂ ಅಂತ ಹೇಳಿ ಟ್ವೀಟ್​ ಮಾಡಿ ಕಾಲೆಳೆದಿದೆ. ಒಟ್ಟಾರೆ ವರ್ಗಾವಣೆ ದಂಧೆ ಎಂಬ ಬಾಂಬ್​ ಸಿಡಿಸಿ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಸಂಚಲನ ಸೃಷ್ಟಿಸಿದ್ದಾರೆ. ಸದನದ ಹೊರಗೂ ಒಳಗೂ ಗದ್ದಲವೇಳುವಂತೆ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಹೆಚ್​​ಡಿಕೆ ಸಿಡಿಸಿದ ಬಾಂಬ್​ಗೆ ಕಾಂಗ್ರೆಸ್​ ಶಾಕ್​​​; ಅಂಥದ್ದೇನಾಯ್ತು?

https://newsfirstlive.com/wp-content/uploads/2023/07/Siddu_DKS.jpg

    ಹೆಚ್​ಡಿಕೆ ಸಿಡಿಸಿದ ಬಾಂಬ್​ಗೆ ಹಸ್ತ ಪಡೆ ಕಂಗಾಲು

    ಸದನದಲ್ಲಿ ಸದ್ದು ಮಾಡಿದ ‘ಪೆನ್​ಡ್ರೈವ್​’ ಪಾಲಿಟಿಕ್ಸ್​

    ಕಾಂಗ್ರೆಸ್ಸಿಗರ ಕಣ್ಣು ಕೆಂಪಾಗಿಸಿದ ಹೆಚ್​ಡಿಕೆ ಪೆನ್​ಡ್ರೈವ್​

ಬೆಂಗಳೂರು: ವರ್ಗಾವಣೆ ದಂಧೆ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ-ಕಲ್ಲೋಲವನ್ನೇ ಸೃಷ್ಟಿಸಿದೆ. ಪೆನ್​ಡ್ರೈವ್​ ತೋರಿಸಿ ಟೀಸರ್​ ಬಿಟ್ಟಿರುವ ಮಾಜಿ ಸಿಎಂ ಹೆಚ್​ಡಿಕೆ ಪಿಕ್ಚರ್​ ಬಿಡಲು ತಯಾರಿ ನಡೆಸಿದ್ದಾರೆ. ಆದ್ರೆ ಅದಕ್ಕೂ ಮುನ್ನವೇ ಸಿಎಂ ಹಾಗೂ ಮಾಜಿ ಸಿಎಂಗಳ ನಡುವೆ ಮಾತಿನ ಮಲ್ಲಯುದ್ಧ ನಡೆದುಹೋಗಿದೆ. ಈ ವಾಗ್ಯುದ್ಧ ಅವರವರ ಪುತ್ರರವರೆಗೂ ಹೋಗಿದೆ.

ವರ್ಗಾವಣೆ ದಂಧೆ.. ನೂತನ ಕಾಂಗ್ರೆಸ್​ ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಸಿಡಿಸಿರುವ ಮಿಸೈಲ್​ ಬಾಂಬ್. ಸದ್ಯ ಈ ಬಾಂಬ್​ಗೆ ಹಸ್ತ ಪಡೆ ಕಂಗಾಲಾಗಿದೆ. ಸಿಎಂ ಆದಿಯಾಗಿ ಸಚಿವರ ಪಡೆ ಸದನದ ಒಳಗೆ ಹಾಗೂ ಹೊರಗೆ ನಿರುತ್ತರವಾಗಿದ್ದಾರೆ. ಯಕಶ್ಚಿತ್ ಪೆನ್​ಡ್ರೈವ್ ಚಿಪ್​ವೊಂದು ಸಿಎಂ ಸಿದ್ದರಾಮಯ್ಯ ಸರ್ಕಾರದ ಬೆವರಿಳಿಸುವಂತೆ ಮಾಡಿದೆ. ಈ ಪೆನ್​ಡ್ರೈವ್ ಆರೋಪ ಮಾಡಿದ ಹೆಚ್​ಡಿಕೆ ವಿರುದ್ಧ ಸಿಎಂ ಸಿದ್ದರಾಮಯ್ಯ ಹೊಸ ಬಾಂಬ್ ಸಿಡಿಸಿದ್ದಾರೆ.

‘ಕುಮಾರಸ್ವಾಮಿ ಅವರದ್ದು ಬರೀ ಹಿಟ್‌ ಅಂಡ್‌ ರನ್‌’

ಆಡಳಿತದಲ್ಲಿ ಟ್ರಾನ್ಸಫರ್​ಗಳು ಸ್ವಾಭಾವಿಕ ಅಂತ ಕುಮಾರಸ್ವಾಮಿ ವಿರುದ್ಧ ಸಿದ್ದರಾಮಯ್ಯ ಗುಡುಗಿದ್ದಾರೆ. ಅವರದ್ದು ಬರೀ ಹಿಟ್ ಆ್ಯಂಡ್ ರನ್ ಆರೋಪಗಳೇ. ಕುಮಾರಸ್ವಾಮಿ ಹತಾಶರಾಗಿ ಮಾತನಾಡುತ್ತಿದ್ದಾರೆ ಅಂತ ಹೇಳಿದ್ದಾರೆ.

ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್​​ಡಿಕೆ ವಾಗ್ದಾಳಿ

ಇನ್ನು ಹಾಲಿ ಸಿಎಂ ಸಿದ್ದರಾಮಯ್ಯ ವರ್ಸಸ್​​ ಮಾಜಿ ಸಿಎಂ ಕುಮಾರಸ್ವಾಮಿ ನಡುವೆ ಪೆನ್​ಡ್ರೈವ್ ಸಮರ ಜೋರಾಗಿದೆ. ಪೆನ್​ಡ್ರೈವ್ ಹಿಡಿದು ಹೆಚ್​ಡಿಕೆ ಕಾಂಗ್ರೆಸ್​ಗೆ ರಣವೀಳ್ಯ ಕೊಟ್ಟಿದ್ದಾರೆ. ಎಲ್ಲಾ ವರ್ಗಾವಣೆ ದಂಧೆ ಸಿಎಂ ನೇತೃತ್ವದಲ್ಲೇ ನಡೆಯುತ್ತಿದೆ ಅನ್ನೋ ಹೊಸ ಬಾಂಬ್​ ಸಿಡಿಸಿದ್ದಾರೆ. ಅಲ್ಲದೇ ನಂಗೆ ಹಿಟ್ ಆ್ಯಂಡ್ ರನ್ ಅಂತಾರೆ, ಏನಾದರೂ ಹೇಳಿಕೊಳ್ಳಲಿ. ಆತುರ ಇಲ್ಲ, ಸೂಕ್ತ ಸಮಯದಲ್ಲಿ ಸರಿಯಾಗಿ ಪೆನ್​ಡ್ರೈವ್ ಬಿಡುಗಡೆ ಮಾಡ್ತೀನಿ ಅಂತ ಗುಡುಗಿದ್ದಾರೆ.

ಮಗನ ಮೇಲಿನ ಆರೋಪಕ್ಕೆ ಕುಮಾರಸ್ವಾಮಿ ಸವಾಲು

ಇನ್ನು ಸದನಕ್ಕೂ ಮೊದಲು ಮಾತನಾಡಿದ ಕುಮಾರಸ್ವಾಮಿ, ನಾನು ಪೆನ್​ಡ್ರೈವ್​ ರಿಲೀಸ್ ಮಾಡಿದ್ರೆ ದಂಧೆ ನಿಲ್ಲಿಸುವ ತಾಕತ್ತು ಸಿಎಂಗೆ ಇದೆಯಾ ಅಂತ ಪ್ರಶ್ನಿಸಿದ್ರು. ಅಲ್ಲದೇ ನನ್ನ ಮಗ ಯಾವುದಾದ್ರೂ ವರ್ಗಾವಣೆ ಮಾಡಿದ್ರೆ ಫ್ರೂವ್​ ಮಾಡಲಿ. ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ತೇನೆ ಅಂತ ಸಿಎಂಗೆ ಸವಾಲು ಹಾಕಿದ್ದಾರೆ.

ಇನ್ನು ಯತೀಂದ್ರ ಅವರನ್ನು ಬಿಜೆಪಿ ಶಾಡೋ ಸಿಎಂ ಅಂತ ಹೇಳಿ ಟ್ವೀಟ್​ ಮಾಡಿ ಕಾಲೆಳೆದಿದೆ. ಒಟ್ಟಾರೆ ವರ್ಗಾವಣೆ ದಂಧೆ ಎಂಬ ಬಾಂಬ್​ ಸಿಡಿಸಿ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಸಂಚಲನ ಸೃಷ್ಟಿಸಿದ್ದಾರೆ. ಸದನದ ಹೊರಗೂ ಒಳಗೂ ಗದ್ದಲವೇಳುವಂತೆ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More