ಸೀಟು ಹಂಚಿಕೆ ವೇಳೆ ದೋಸ್ತಿಗಳ ಸೈಲೆಂಟ್ ಮೋಡ್!
ಮೈತ್ರಿ ಮಂಥನಕ್ಕೆ ಮರು ಚಾಲನೆ ಕೊಟ್ಟ ದೇವೇಗೌಡ್ರು
ಪ್ರಧಾನಿ ಮೋದಿಗೆ ಹೆಚ್.ಡಿ. ದೇವೇಗೌಡರಿಂದ ಸಲಹೆ
ಬೆಂಗಳೂರು: ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳಷ್ಟೇ ಬಾಕಿ. ರಾಜ್ಯದಲ್ಲಿ ಮೈತ್ರಿಯುಗ ಆರಂಭಕ್ಕೆ ಕಮಲ-ದಳ ಮುನ್ನುಡಿ ಬರೆಯುತ್ತಿವೆ. ಆದ್ರೆ, ಸೀಟು ಹಂಚಿಕೆಯೆ ಕಗ್ಗಂಟಾಗಿದೆ. ಈ ಕಗ್ಗಂಟು ಬಿಡಿಸಲು ಸ್ವತಃ ಗೌಡರೇ ಅಖಾಡಕ್ಕಿಳಿದು ಮೋದಿಗೆ ಸಲಹೆ ಕೊಟ್ಟಿದ್ದು, ಮೋದಿ ಸಹ ಸಲಹೆ ಸ್ವೀಕರಿಸಿದ್ದಾರೆ. ಹಾಗಾದ್ರೆ ಏನದು ಗೌಡರ ಸಲಹೆ? ಅಷ್ಟಕ್ಕೂ ಬೆಳ್ ಬೆಳಗ್ಗೆ ಕುಮಾರಸ್ವಾಮಿ ನಿವಾಸಕ್ಕೆ ಸಾಹುಕಾರ್ ಆಗಮಿಸಿದ್ದೇಕೆ? ರಾಜ್ಯ ರಾಜಕಾರಣದ ಈ ಇಂಟ್ರಸ್ಟಿಂಗ್ ಇನ್ಸೈಡ್ ಏನು? ಸ್ಟೋರಿ ಓದಿ!
ಡೆಲ್ಲಿಯಲ್ಲಿ ನಡೆದ ಗೌಡರನ್ನ ಸಂಪರ್ಕಿಸಿದ್ದ ಬಿಜೆಪಿ ಎಲೆಕ್ಷನ್ ಮಾಸ್ಟರ್ ಮೈಂಡ್ ಅಮಿತ್ ಶಾ ರಾಜ್ಯ ರಾಜಕಾರಣದಲ್ಲಿ ಮೈತ್ರಿ ಕ್ರಾಂತಿಗೆ ಮುನ್ನುಡಿ ಬರೆದಿದ್ರು. ಆದ್ರೆ, ಸೀಟು ಹಂಚಿಕೆ ವಿಚಾರವಾಗಿ ದೋಸ್ತಿ ಮೀಟಿಂಗ್ ಸೈಲೆಂಟ್ಗೆ ಜಾರಿದೆ. ಮೂರು ಮತ್ತೊಂದು ಸೀಟ್ಗೆ ಕಮಲ ಆಫರ್ ಕೊಟ್ಟಿದೆ. ದಳ ಮಾತ್ರ 5 ರಿಂದ 6 ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ದು, ಬಿಜೆಪಿ ಧಾರಾಳತೆ ಬದಲಿಗೆ ಒತ್ತಡ ತಂತ್ರದ ಮೊರೆ ಹೋಗಿದೆ. ಈ ಮಧ್ಯೆ ಮಾಜಿ ಪ್ರಧಾನಿ ಗೌಡ್ರು, ನೇರವಾಗಿ ಮೋದಿಗೆ ಸಲಹೆಯೊಂದನ್ನ ನೀಡಿದ್ದಾರೆ.
ಸೀಟ್ ಶೇರಿಂಗ್ ಕಗ್ಗಂಟು, ಸದ್ಯಕ್ಕೆ ದೋಸ್ತಿ ಸೈಲೆಂಟು!
ಮೈತ್ರಿ ಮಂಥನಕ್ಕೆ ಮರು ಚಾಲನೆ ಕೊಟ್ಟ ದೇವೇಗೌಡ್ರು!
ಡೆಲ್ಲಿ ಡೈರಿಯಲ್ಲಿನ ಈ ಮೈತ್ರಿ ಮೀಟಿಂಗ್ ಬಗ್ಗೆ ಮೊದಲ ಬಾರಿ ವರದಿ ಮಾಡಿದ್ದ ನ್ಯೂಸ್ಫಸ್ಟ್, ಪೊಲಿಟಿಕಲ್ ಕವರೇಜ್ನ ನಂಬರ್ ಒನ್ ಅಂತ ನಿರೂಪಿಸಿದೆ. ಈಗ ದೋಸ್ತಿಯ ಫಾಲೋವಪ್ ಮಾಡ್ತಿರುವ ನ್ಯೂಸ್ಫಸ್ಟ್, ಮತ್ತೊಂದು ಎಕ್ಸ್ಕ್ಲೂಸಿವ್ ಸುದ್ದಿ ಸಿಕ್ಕಿದೆ. ಮೊನ್ನೆಯಷ್ಟೇ ಡೆಲ್ಲಿಗೆ ತೆರಳಿರುವ ಗೌಡ್ರು, ಲೋಕ ಮೈತ್ರಿಗೆ ಹೊಸ ದಾಳ ಉರುಳಿಸಿದ್ದಾರೆ. ದೇವೇಗೌಡರಿಂದ ಸಲಹೆ ಸ್ವೀಕರಿಸಿದ ಪ್ರಧಾನಿ ಮೋದಿ, ಪಕ್ಷದ ನಾಯಕರಿಗೆ ರವಾನಿಸಿದ್ದಾರೆ.
ಪ್ರಧಾನಿ ಮೋದಿಗೆ ಗೌಡರು ಕೊಟ್ಟ ಸಲಹೆ ಏನು?
ಲೋಕಸಭೆ ಅಖಾಡಕ್ಕೆ ಕಮಲ-ದಳ ನಡುವೆ ಮೈತ್ರಿ ಆಗೋದು ಪಕ್ಕಾ.. ಆದ್ರೆ, ಸೀಟ್ ಹಂಚಿಕೆ ಮಾತ್ರ ಕಗ್ಗಂಟಾಗಿದೆ.. ಈ ಕಗ್ಗಂಟು ಬಿಡಿಸಲು ದಳಪತಿ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ.. ಸೀಟು ಹಂಚಿಕೆಗೂ ಮುನ್ನವೇ ಸರ್ವೇ ನಡೆಸಲು ದೇವೇಗೌಡರ ಸಲಹೆ ನೀಡಿದ್ದಾರೆ..
ಮೈತ್ರಿ ಮಂತ್ರ.. ಸರ್ವೇ ಸೂತ್ರ
ಪ್ರಧಾನಿ ಮೋದಿಗೆ ಸಲಹೆ ನೀಡಿರೋ ಹೆಚ್.ಡಿ ದೇವೇಗೌಡರು, ಜೆಡಿಎಸ್ ಗೆಲ್ಲುವ ಕ್ಷೇತ್ರಗಳಲ್ಲಿ ನಾನು ಸಮೀಕ್ಷೆ ಮಾಡಿಸುತ್ತೇನೆ. ಬಿಜೆಪಿ ಗೆಲ್ಲುವ ಕ್ಷೇತ್ರಗಳಲ್ಲಿ ನೀವು ಸರ್ವೇ ಮಾಡಿಸಿ ಅಂತ ಸಲಹೆ ನೀಡಿದ್ದಾರೆ. ಈ ಸರ್ವೇ ಬಳಿಕ ಸೀಟು ಹಂಚಿಕೆ ಬಗ್ಗೆ ತೀರ್ಮಾನ ಮಾಡೋಣ ಅಂತ ಗೌಡರು ಸಜೆಸ್ಟ್ ಮಾಡಿದ್ದಾರೆ. ಈ ಮಾತಿಗೆ ಒಪ್ಪಿಗೆ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ನಾಯಕರಿಗೆ ಸರ್ವೇ ಮಾಡಿಸಲು ಆರ್ಡರ್ ಮಾಡಿದ್ದಾರೆ. ಇಬ್ಬರೂ ನಾಯಕರ ಸಲಹೆಯಂತೆ ಸರ್ವೇ ವರದಿ ಪಡೆಯಲು ಬಿಜೆಪಿ ಪ್ಲಾನ್ ಮಾಡಿದೆ ಎಂದು ಗೊತ್ತಾಗಿದೆ.
ಕುಮಾರಸ್ವಾಮಿ ಭೇಟಿ ಮಾಡಿದ ರಮೇಶ್ ಜಾರಕಿಹೊಳಿ!
ಇತ್ತ, ಬೆಳ್ಳಂ ಬೆಳಗ್ಗೆ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಮಾಜಿ ಸಿಎಂ ಹೆಚ್ಡಿಕೆ ನಿವಾಸಕ್ಕೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಭೇಟಿಯಾಗಿದ್ದಾರೆ. ನಿವಾಸಕ್ಕೆ ಆಗಮಿಸಿ ಆರೋಗ್ಯ ವಿಚಾರಿಸಿದ ಸಾಹುಕಾರ್, ಗಣೇಶ ಹಬ್ಬದ ಶುಭಾಶಯ ವಿನಿಮಯ ಮಾಡ್ಕೊಂಡಿದ್ದಾರೆ. ಅಲ್ದೇ ಮೈತ್ರಿ ರಾಜಕಾರಣ ಬಗ್ಗೆ ಚರ್ಚೆ ನಡೆಸಿದ್ದಾರೆಂದು ಗೊತ್ತಾಗಿದೆ.
ಕಮಲ – ದಳ ಮೈತ್ರಿ ಬಗ್ಗೆ ಜಾರಕಿಹೊಳಿ ಅಚ್ಚರಿ ಮಾತು!
ಈ ಭೇಟಿ ಬಳಿಕ ರಮೇಶ್ ಜಾರಕಿಹೊಳಿ ಮೈತ್ರಿ ಕುರಿತು ಅಚ್ಚರಿ ಹೇಳಿಕೆ ನೀಡಿದ್ರು. ಲೋಕಸಭೆ ಚುನಾವಣೆಯಲ್ಲಿ ಹೈಕಮಾಂಡ್ ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ಧ. ನನ್ನ ಪ್ರಕಾರ ಕಮಲ-ದಳ ಮೈತ್ರಿಯಾದ್ರೆ ಒಳ್ಳೆಯದು ಅಂತ ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ, ಆಪರೇಷನ್ ಬಗ್ಗೆ ನೀಡಿದ ಹೇಳಿಕೆ ಕುತೂಹಲಕ್ಕೆ ಕಾರಣವಾಗಿದೆ.
ಒಟ್ಟಾರೆ, ಲೋಕಸಭೆ ಎಲೆಕ್ಷನ್ಗೆ 7 ತಿಂಗಳು ಬಾಕಿ ಇದ್ದು, ಚುನಾವಣೆ ಪೂರ್ವ ಮೈತ್ರಿಗೆ ಬಿಜೆಪಿ-ಜೆಡಿಎಸ್ ಅಂಕಿತ ಹಾಕುವ ಸಾಧ್ಯತೆ ಇದೆ. ಈಗಾಗಲೇ ಗೌಡರು ಸರ್ವೇಗೆ ಸಲಹೆ ಕೊಟ್ಟಿದ್ದು, ಮುಂದಿನ ದಿನಗಳಲ್ಲಿ ಸೀಟ್ ಶೇರಿಂಗ್ ಅನುಪಾತ ಹೇಗಿರಲಿದೆ ಅನ್ನೋದಷ್ಟೇ ಕುತೂಹಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಸೀಟು ಹಂಚಿಕೆ ವೇಳೆ ದೋಸ್ತಿಗಳ ಸೈಲೆಂಟ್ ಮೋಡ್!
ಮೈತ್ರಿ ಮಂಥನಕ್ಕೆ ಮರು ಚಾಲನೆ ಕೊಟ್ಟ ದೇವೇಗೌಡ್ರು
ಪ್ರಧಾನಿ ಮೋದಿಗೆ ಹೆಚ್.ಡಿ. ದೇವೇಗೌಡರಿಂದ ಸಲಹೆ
ಬೆಂಗಳೂರು: ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳಷ್ಟೇ ಬಾಕಿ. ರಾಜ್ಯದಲ್ಲಿ ಮೈತ್ರಿಯುಗ ಆರಂಭಕ್ಕೆ ಕಮಲ-ದಳ ಮುನ್ನುಡಿ ಬರೆಯುತ್ತಿವೆ. ಆದ್ರೆ, ಸೀಟು ಹಂಚಿಕೆಯೆ ಕಗ್ಗಂಟಾಗಿದೆ. ಈ ಕಗ್ಗಂಟು ಬಿಡಿಸಲು ಸ್ವತಃ ಗೌಡರೇ ಅಖಾಡಕ್ಕಿಳಿದು ಮೋದಿಗೆ ಸಲಹೆ ಕೊಟ್ಟಿದ್ದು, ಮೋದಿ ಸಹ ಸಲಹೆ ಸ್ವೀಕರಿಸಿದ್ದಾರೆ. ಹಾಗಾದ್ರೆ ಏನದು ಗೌಡರ ಸಲಹೆ? ಅಷ್ಟಕ್ಕೂ ಬೆಳ್ ಬೆಳಗ್ಗೆ ಕುಮಾರಸ್ವಾಮಿ ನಿವಾಸಕ್ಕೆ ಸಾಹುಕಾರ್ ಆಗಮಿಸಿದ್ದೇಕೆ? ರಾಜ್ಯ ರಾಜಕಾರಣದ ಈ ಇಂಟ್ರಸ್ಟಿಂಗ್ ಇನ್ಸೈಡ್ ಏನು? ಸ್ಟೋರಿ ಓದಿ!
ಡೆಲ್ಲಿಯಲ್ಲಿ ನಡೆದ ಗೌಡರನ್ನ ಸಂಪರ್ಕಿಸಿದ್ದ ಬಿಜೆಪಿ ಎಲೆಕ್ಷನ್ ಮಾಸ್ಟರ್ ಮೈಂಡ್ ಅಮಿತ್ ಶಾ ರಾಜ್ಯ ರಾಜಕಾರಣದಲ್ಲಿ ಮೈತ್ರಿ ಕ್ರಾಂತಿಗೆ ಮುನ್ನುಡಿ ಬರೆದಿದ್ರು. ಆದ್ರೆ, ಸೀಟು ಹಂಚಿಕೆ ವಿಚಾರವಾಗಿ ದೋಸ್ತಿ ಮೀಟಿಂಗ್ ಸೈಲೆಂಟ್ಗೆ ಜಾರಿದೆ. ಮೂರು ಮತ್ತೊಂದು ಸೀಟ್ಗೆ ಕಮಲ ಆಫರ್ ಕೊಟ್ಟಿದೆ. ದಳ ಮಾತ್ರ 5 ರಿಂದ 6 ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ದು, ಬಿಜೆಪಿ ಧಾರಾಳತೆ ಬದಲಿಗೆ ಒತ್ತಡ ತಂತ್ರದ ಮೊರೆ ಹೋಗಿದೆ. ಈ ಮಧ್ಯೆ ಮಾಜಿ ಪ್ರಧಾನಿ ಗೌಡ್ರು, ನೇರವಾಗಿ ಮೋದಿಗೆ ಸಲಹೆಯೊಂದನ್ನ ನೀಡಿದ್ದಾರೆ.
ಸೀಟ್ ಶೇರಿಂಗ್ ಕಗ್ಗಂಟು, ಸದ್ಯಕ್ಕೆ ದೋಸ್ತಿ ಸೈಲೆಂಟು!
ಮೈತ್ರಿ ಮಂಥನಕ್ಕೆ ಮರು ಚಾಲನೆ ಕೊಟ್ಟ ದೇವೇಗೌಡ್ರು!
ಡೆಲ್ಲಿ ಡೈರಿಯಲ್ಲಿನ ಈ ಮೈತ್ರಿ ಮೀಟಿಂಗ್ ಬಗ್ಗೆ ಮೊದಲ ಬಾರಿ ವರದಿ ಮಾಡಿದ್ದ ನ್ಯೂಸ್ಫಸ್ಟ್, ಪೊಲಿಟಿಕಲ್ ಕವರೇಜ್ನ ನಂಬರ್ ಒನ್ ಅಂತ ನಿರೂಪಿಸಿದೆ. ಈಗ ದೋಸ್ತಿಯ ಫಾಲೋವಪ್ ಮಾಡ್ತಿರುವ ನ್ಯೂಸ್ಫಸ್ಟ್, ಮತ್ತೊಂದು ಎಕ್ಸ್ಕ್ಲೂಸಿವ್ ಸುದ್ದಿ ಸಿಕ್ಕಿದೆ. ಮೊನ್ನೆಯಷ್ಟೇ ಡೆಲ್ಲಿಗೆ ತೆರಳಿರುವ ಗೌಡ್ರು, ಲೋಕ ಮೈತ್ರಿಗೆ ಹೊಸ ದಾಳ ಉರುಳಿಸಿದ್ದಾರೆ. ದೇವೇಗೌಡರಿಂದ ಸಲಹೆ ಸ್ವೀಕರಿಸಿದ ಪ್ರಧಾನಿ ಮೋದಿ, ಪಕ್ಷದ ನಾಯಕರಿಗೆ ರವಾನಿಸಿದ್ದಾರೆ.
ಪ್ರಧಾನಿ ಮೋದಿಗೆ ಗೌಡರು ಕೊಟ್ಟ ಸಲಹೆ ಏನು?
ಲೋಕಸಭೆ ಅಖಾಡಕ್ಕೆ ಕಮಲ-ದಳ ನಡುವೆ ಮೈತ್ರಿ ಆಗೋದು ಪಕ್ಕಾ.. ಆದ್ರೆ, ಸೀಟ್ ಹಂಚಿಕೆ ಮಾತ್ರ ಕಗ್ಗಂಟಾಗಿದೆ.. ಈ ಕಗ್ಗಂಟು ಬಿಡಿಸಲು ದಳಪತಿ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ.. ಸೀಟು ಹಂಚಿಕೆಗೂ ಮುನ್ನವೇ ಸರ್ವೇ ನಡೆಸಲು ದೇವೇಗೌಡರ ಸಲಹೆ ನೀಡಿದ್ದಾರೆ..
ಮೈತ್ರಿ ಮಂತ್ರ.. ಸರ್ವೇ ಸೂತ್ರ
ಪ್ರಧಾನಿ ಮೋದಿಗೆ ಸಲಹೆ ನೀಡಿರೋ ಹೆಚ್.ಡಿ ದೇವೇಗೌಡರು, ಜೆಡಿಎಸ್ ಗೆಲ್ಲುವ ಕ್ಷೇತ್ರಗಳಲ್ಲಿ ನಾನು ಸಮೀಕ್ಷೆ ಮಾಡಿಸುತ್ತೇನೆ. ಬಿಜೆಪಿ ಗೆಲ್ಲುವ ಕ್ಷೇತ್ರಗಳಲ್ಲಿ ನೀವು ಸರ್ವೇ ಮಾಡಿಸಿ ಅಂತ ಸಲಹೆ ನೀಡಿದ್ದಾರೆ. ಈ ಸರ್ವೇ ಬಳಿಕ ಸೀಟು ಹಂಚಿಕೆ ಬಗ್ಗೆ ತೀರ್ಮಾನ ಮಾಡೋಣ ಅಂತ ಗೌಡರು ಸಜೆಸ್ಟ್ ಮಾಡಿದ್ದಾರೆ. ಈ ಮಾತಿಗೆ ಒಪ್ಪಿಗೆ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ನಾಯಕರಿಗೆ ಸರ್ವೇ ಮಾಡಿಸಲು ಆರ್ಡರ್ ಮಾಡಿದ್ದಾರೆ. ಇಬ್ಬರೂ ನಾಯಕರ ಸಲಹೆಯಂತೆ ಸರ್ವೇ ವರದಿ ಪಡೆಯಲು ಬಿಜೆಪಿ ಪ್ಲಾನ್ ಮಾಡಿದೆ ಎಂದು ಗೊತ್ತಾಗಿದೆ.
ಕುಮಾರಸ್ವಾಮಿ ಭೇಟಿ ಮಾಡಿದ ರಮೇಶ್ ಜಾರಕಿಹೊಳಿ!
ಇತ್ತ, ಬೆಳ್ಳಂ ಬೆಳಗ್ಗೆ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಮಾಜಿ ಸಿಎಂ ಹೆಚ್ಡಿಕೆ ನಿವಾಸಕ್ಕೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಭೇಟಿಯಾಗಿದ್ದಾರೆ. ನಿವಾಸಕ್ಕೆ ಆಗಮಿಸಿ ಆರೋಗ್ಯ ವಿಚಾರಿಸಿದ ಸಾಹುಕಾರ್, ಗಣೇಶ ಹಬ್ಬದ ಶುಭಾಶಯ ವಿನಿಮಯ ಮಾಡ್ಕೊಂಡಿದ್ದಾರೆ. ಅಲ್ದೇ ಮೈತ್ರಿ ರಾಜಕಾರಣ ಬಗ್ಗೆ ಚರ್ಚೆ ನಡೆಸಿದ್ದಾರೆಂದು ಗೊತ್ತಾಗಿದೆ.
ಕಮಲ – ದಳ ಮೈತ್ರಿ ಬಗ್ಗೆ ಜಾರಕಿಹೊಳಿ ಅಚ್ಚರಿ ಮಾತು!
ಈ ಭೇಟಿ ಬಳಿಕ ರಮೇಶ್ ಜಾರಕಿಹೊಳಿ ಮೈತ್ರಿ ಕುರಿತು ಅಚ್ಚರಿ ಹೇಳಿಕೆ ನೀಡಿದ್ರು. ಲೋಕಸಭೆ ಚುನಾವಣೆಯಲ್ಲಿ ಹೈಕಮಾಂಡ್ ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ಧ. ನನ್ನ ಪ್ರಕಾರ ಕಮಲ-ದಳ ಮೈತ್ರಿಯಾದ್ರೆ ಒಳ್ಳೆಯದು ಅಂತ ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ, ಆಪರೇಷನ್ ಬಗ್ಗೆ ನೀಡಿದ ಹೇಳಿಕೆ ಕುತೂಹಲಕ್ಕೆ ಕಾರಣವಾಗಿದೆ.
ಒಟ್ಟಾರೆ, ಲೋಕಸಭೆ ಎಲೆಕ್ಷನ್ಗೆ 7 ತಿಂಗಳು ಬಾಕಿ ಇದ್ದು, ಚುನಾವಣೆ ಪೂರ್ವ ಮೈತ್ರಿಗೆ ಬಿಜೆಪಿ-ಜೆಡಿಎಸ್ ಅಂಕಿತ ಹಾಕುವ ಸಾಧ್ಯತೆ ಇದೆ. ಈಗಾಗಲೇ ಗೌಡರು ಸರ್ವೇಗೆ ಸಲಹೆ ಕೊಟ್ಟಿದ್ದು, ಮುಂದಿನ ದಿನಗಳಲ್ಲಿ ಸೀಟ್ ಶೇರಿಂಗ್ ಅನುಪಾತ ಹೇಗಿರಲಿದೆ ಅನ್ನೋದಷ್ಟೇ ಕುತೂಹಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ