ಸಿದ್ದು ಸರ್ಕಾರದ ವಿರುದ್ಧ ಸಿಡಿದ ಮಾಜಿ ಸಿಎಂ ಹೆಚ್ಡಿಕೆ
ಅಧಿವೇಶನಕ್ಕೂ ಮುನ್ನ ಹೆಚ್ಡಿಕೆ ‘ವರ್ಗಾವಣೆ’ ಬಾಂಬ್
ಯತೀಂದ್ರ ಹೆಸರೇಳದೇ ಹೆಚ್ಡಿಕೆ ಪರೋಕ್ಷ ಆರೋಪ!
ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ 3 ದಿನಗಳ ಹಿಂದೆ ಮಾಜಿ ಸಿಎಂ ಕುಮಾರಸ್ವಾಮಿ ವರ್ಗಾವಣೆ ಬಾಂಬ್ ಸಿಡಿಸಿದ್ದರು. ಈಗ ಮತ್ತೆ ಸಾಲು ಸಾಲು ಆರೋಪಗಳ ಚಾರ್ಜ್ಶೀಟ್ ಸಲ್ಲಿಸಿದ್ದಾರೆ. ಸರ್ಕಾರ ವರ್ಗಾವಣೆ ದಂಧೆಯಲ್ಲಿ ಮುಳುಗಿ ಏಳುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಧಿವೇಶನ ಆರಂಭಕ್ಕೂ ಮುನ್ನವೇ ಆರೋಪಗಳ ಸಿಡಿಗುಂಡು ಹಾರಿಸಿರೋದು ಮಹತ್ವ ಪಡೆದುಕೊಂಡಿದೆ.
ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದು ತಿಂಗಳಾಗಿದೆ. ಇಂದಿನಿಂದ ಬಜೆಟ್ ಅಧಿವೇಶನ ಕೂಡ ಆರಂಭ ಆಗಲಿದೆ. ಈ ವೇಳೆ ಸರ್ಕಾರಕ್ಕೆ ವರ್ಗಾವಣೆಯ ಮಸಿ ಮೆತ್ತಿಕೊಂಡಿದೆ. ಮಾಜಿ ಸಿಎಂ ಹೆಚ್ಡಿಕೆ, ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪಗಳ ಸುರಿಮಳೆ ಸುರಿಸಿದ್ದಾರೆ.
ಸರ್ಕಾರದ ವಿರುದ್ಧ ‘ದಳಪತಿ’ ಸಾಲು ಸಾಲು ಆರೋಪ!
ಸಿದ್ದರಾಮಯ್ಯ ಸರ್ಕಾರದಲ್ಲಿ ಅಧಿಕಾರಿಗಳ ವರ್ಗಾವಣೆ ಬಗ್ಗೆ ದಿನಕ್ಕೊಂದು ಆದೇಶ ಹೊರ ಬೀಳುತ್ತಿದ್ದ, ವಿಪಕ್ಷಗಳ ಕಣ್ಣು ಕೆಂಪಗಾಗಿಸಿದೆ. ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್ಡಿಕೆ ಸಾಲು ಸಾಲು ಆರೋಪ ಮಾಡಿದ್ದಾರೆ.
ಯತೀಂದ್ರ ಹೆಸರೇಳದೇ ಹೆಚ್ಡಿಕೆ ಪರೋಕ್ಷ ಆರೋಪ!
ಮೊನ್ನೆ ಸಿಎಂ ಪುತ್ರ ಡಾ.ಯತೀಂದ್ರ ವಿರುದ್ಧ ಮಾಜಿ ಸಿಎಂ ಹೆಚ್ಡಿಕೆ ವರ್ಗಾವಣೆ ದಂಧೆಯ ಬಾಣ ಬಿಟ್ಟಿದ್ದರು. ಈಗ ಮುಂದುವರಿದು ಮತ್ತೊಂದಷ್ಟು ಆರೋಪಗಳ ಚಾರ್ಜ್ಶೀಟ್ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಜಿಎಸ್ಟಿ ರೀತಿ ವೈಎಸ್ಟಿ ಜಾರಿಯಾಗಿದೆ. ಈ ಸರ್ಕಾರದಲ್ಲಿ ಎಷ್ಟು ಮಂದಿ ಸಿಎಂಗಳಿದ್ದಾರೆ ಅಂತ ನೇರಾನೇರ ಪ್ರಶ್ನೆ ಹಾಕಿದ್ದಾರೆ.
ಹೆಚ್ಡಿಕೆ ಚಾರ್ಜ್ಶೀಟ್ ಹೀಗಿದೆ!
ಇನ್ನು ಇವತ್ತು ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ ಗ್ಯಾರಂಟಿಗಳ ಜಾರಿಯಲ್ಲಿ ಆಗ್ತಿರುವ ಗೊಂದಲಗಳ ಬಗ್ಗೆಯೂ ಕಿಡಿಕಾರಿದ್ದಾರೆ.
ಒಟ್ಟಿನಲ್ಲಿ ಇಂದಿನಿಂದ ಬಜೆಟ್ ಅಧಿವೇಶನ ಆರಂಭ ಆಗಲಿದ್ದು ಸರ್ಕಾರದ ಮುಗಿಬೀಳಲು ವಿಪಕ್ಷಗಳೂ ಸಜ್ಜಾಗಿವೆ. ಹೆಚ್ಡಿಕೆ ಸಿಡಿಸಿರುವ ವರ್ಗಾವಣೆ ಬಾಂಬ್ ಬಗ್ಗೆ ಸದನದಲ್ಲಿ ಗಲಾಟೆ, ಗದ್ದಲಗಳಿಗೆ ಸಾಕ್ಷಿಯಾಗುವ ಸಾಧ್ಯತೆ ಹೆಚ್ಚಾಗಿದೆ. ಇನ್ನು ಕುಮಾರಸ್ವಾಮಿ ಆರೋಪಗಳಿಗೆ ಆಡಳಿತ ಪಕ್ಷದ ನಾಯಕರು ಯಾವ ರೀತಿ ತಿರುಗೇಟು ನೀಡಲಿದ್ದಾರೆ ಅನ್ನೋದನ್ನು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಸಿದ್ದು ಸರ್ಕಾರದ ವಿರುದ್ಧ ಸಿಡಿದ ಮಾಜಿ ಸಿಎಂ ಹೆಚ್ಡಿಕೆ
ಅಧಿವೇಶನಕ್ಕೂ ಮುನ್ನ ಹೆಚ್ಡಿಕೆ ‘ವರ್ಗಾವಣೆ’ ಬಾಂಬ್
ಯತೀಂದ್ರ ಹೆಸರೇಳದೇ ಹೆಚ್ಡಿಕೆ ಪರೋಕ್ಷ ಆರೋಪ!
ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ 3 ದಿನಗಳ ಹಿಂದೆ ಮಾಜಿ ಸಿಎಂ ಕುಮಾರಸ್ವಾಮಿ ವರ್ಗಾವಣೆ ಬಾಂಬ್ ಸಿಡಿಸಿದ್ದರು. ಈಗ ಮತ್ತೆ ಸಾಲು ಸಾಲು ಆರೋಪಗಳ ಚಾರ್ಜ್ಶೀಟ್ ಸಲ್ಲಿಸಿದ್ದಾರೆ. ಸರ್ಕಾರ ವರ್ಗಾವಣೆ ದಂಧೆಯಲ್ಲಿ ಮುಳುಗಿ ಏಳುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಧಿವೇಶನ ಆರಂಭಕ್ಕೂ ಮುನ್ನವೇ ಆರೋಪಗಳ ಸಿಡಿಗುಂಡು ಹಾರಿಸಿರೋದು ಮಹತ್ವ ಪಡೆದುಕೊಂಡಿದೆ.
ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದು ತಿಂಗಳಾಗಿದೆ. ಇಂದಿನಿಂದ ಬಜೆಟ್ ಅಧಿವೇಶನ ಕೂಡ ಆರಂಭ ಆಗಲಿದೆ. ಈ ವೇಳೆ ಸರ್ಕಾರಕ್ಕೆ ವರ್ಗಾವಣೆಯ ಮಸಿ ಮೆತ್ತಿಕೊಂಡಿದೆ. ಮಾಜಿ ಸಿಎಂ ಹೆಚ್ಡಿಕೆ, ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪಗಳ ಸುರಿಮಳೆ ಸುರಿಸಿದ್ದಾರೆ.
ಸರ್ಕಾರದ ವಿರುದ್ಧ ‘ದಳಪತಿ’ ಸಾಲು ಸಾಲು ಆರೋಪ!
ಸಿದ್ದರಾಮಯ್ಯ ಸರ್ಕಾರದಲ್ಲಿ ಅಧಿಕಾರಿಗಳ ವರ್ಗಾವಣೆ ಬಗ್ಗೆ ದಿನಕ್ಕೊಂದು ಆದೇಶ ಹೊರ ಬೀಳುತ್ತಿದ್ದ, ವಿಪಕ್ಷಗಳ ಕಣ್ಣು ಕೆಂಪಗಾಗಿಸಿದೆ. ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್ಡಿಕೆ ಸಾಲು ಸಾಲು ಆರೋಪ ಮಾಡಿದ್ದಾರೆ.
ಯತೀಂದ್ರ ಹೆಸರೇಳದೇ ಹೆಚ್ಡಿಕೆ ಪರೋಕ್ಷ ಆರೋಪ!
ಮೊನ್ನೆ ಸಿಎಂ ಪುತ್ರ ಡಾ.ಯತೀಂದ್ರ ವಿರುದ್ಧ ಮಾಜಿ ಸಿಎಂ ಹೆಚ್ಡಿಕೆ ವರ್ಗಾವಣೆ ದಂಧೆಯ ಬಾಣ ಬಿಟ್ಟಿದ್ದರು. ಈಗ ಮುಂದುವರಿದು ಮತ್ತೊಂದಷ್ಟು ಆರೋಪಗಳ ಚಾರ್ಜ್ಶೀಟ್ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಜಿಎಸ್ಟಿ ರೀತಿ ವೈಎಸ್ಟಿ ಜಾರಿಯಾಗಿದೆ. ಈ ಸರ್ಕಾರದಲ್ಲಿ ಎಷ್ಟು ಮಂದಿ ಸಿಎಂಗಳಿದ್ದಾರೆ ಅಂತ ನೇರಾನೇರ ಪ್ರಶ್ನೆ ಹಾಕಿದ್ದಾರೆ.
ಹೆಚ್ಡಿಕೆ ಚಾರ್ಜ್ಶೀಟ್ ಹೀಗಿದೆ!
ಇನ್ನು ಇವತ್ತು ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ ಗ್ಯಾರಂಟಿಗಳ ಜಾರಿಯಲ್ಲಿ ಆಗ್ತಿರುವ ಗೊಂದಲಗಳ ಬಗ್ಗೆಯೂ ಕಿಡಿಕಾರಿದ್ದಾರೆ.
ಒಟ್ಟಿನಲ್ಲಿ ಇಂದಿನಿಂದ ಬಜೆಟ್ ಅಧಿವೇಶನ ಆರಂಭ ಆಗಲಿದ್ದು ಸರ್ಕಾರದ ಮುಗಿಬೀಳಲು ವಿಪಕ್ಷಗಳೂ ಸಜ್ಜಾಗಿವೆ. ಹೆಚ್ಡಿಕೆ ಸಿಡಿಸಿರುವ ವರ್ಗಾವಣೆ ಬಾಂಬ್ ಬಗ್ಗೆ ಸದನದಲ್ಲಿ ಗಲಾಟೆ, ಗದ್ದಲಗಳಿಗೆ ಸಾಕ್ಷಿಯಾಗುವ ಸಾಧ್ಯತೆ ಹೆಚ್ಚಾಗಿದೆ. ಇನ್ನು ಕುಮಾರಸ್ವಾಮಿ ಆರೋಪಗಳಿಗೆ ಆಡಳಿತ ಪಕ್ಷದ ನಾಯಕರು ಯಾವ ರೀತಿ ತಿರುಗೇಟು ನೀಡಲಿದ್ದಾರೆ ಅನ್ನೋದನ್ನು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ