newsfirstkannada.com

ಸರ್ಕಾರದಿಂದ ಗುಡ್​ನ್ಯೂಸ್​​.. ನಿಮ್ಮ ಮನೆ ಬಾಗಿಲಿಗೆ ಬರ್ತಾರೆ ವೈದ್ಯರು; ಏನಿದು ಸ್ಟೋರಿ?

Share :

07-09-2023

    ಬಿಪಿ, ಶುಗರ್, ಕ್ಯಾನ್ಸರ್‌ ನಿರ್ಲಕ್ಷ್ಯ ಮಾಡೋರ ಸಂಖ್ಯೆ ಜಾಸ್ತಿ

    ಹಾಗಾಗಿ ಶೀಘ್ರದಲ್ಲಿ ಗೃಹ ಆರೋಗ್ಯ ಯೋಜನೆ ಜಾರಿಗೆ ಚಿಂತನೆ

    ನಿಮ್ಮ ಮನೆ ಬಾಗಿಲಿಗೆ ಬರಲಿದ್ದಾರಂತೆ ವೈದ್ಯರು, ಸ್ಟೋರಿ ಓದಿ..!

ಗೃಹ ಲಕ್ಷ್ಮಿ.. ಗೃಹ ಜ್ಯೋತಿ.. ಗ್ಯಾರಂಟಿ ಮೇಲೆ ಗ್ಯಾರಂಟಿ ಕೊಟ್ಟು ಉಚಿತ ಯೋಜನೆಗಳ ಜಾರಿ ಮಾಡಿ ಕಾಂಗ್ರೆಸ್ ಸರ್ಕಾರ ಜನ್ರ ಮನಸ್ಸಲ್ಲಿ ಅಚ್ಚೊತ್ತಿಕೊಳ್ತಿದೆ. ಅದ್ರ ಜೊತೆಗೆ ಇದೀಗ ಗ್ಯಾರಂಟಿ ಮಾದರಿಯಲ್ಲೇ ಗೃಹ ಆರೋಗ್ಯ ಯೋಜನೆ ಜಾರಿಗೆ ರಾಜ್ಯ ಸರ್ಕಾರ ಮುಂದಾಗಿದೆ.

ಆರೋಗ್ಯವೇ ಭಾಗ್ಯ ಅಂತ ಎಷ್ಟೇ ಹೇಳಿದ್ರು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಜನ ಹಿಂದೇಟು ಹಾಕ್ತಾನೆ ಇರ್ತಾರೆ. ಬಿಪಿ, ಶುಗರ್, ಕ್ಯಾನ್ಸರ್‌ನ ನಿರ್ಲಕ್ಷ್ಯ ಮಾಡುವವರ ಸಂಖ್ಯೆ ಹೆಚ್ಚಳ ಆಗಿದೆ. ಈ ಕಾರಣಕ್ಕಾಗಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಗೃಹ ಆರೋಗ್ಯ ಯೋಜನೆ ಜಾರಿ ತರಲು ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ.

ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಕೂಡ ಸಲ್ಲಿಕೆ ಮಾಡಲಾಗಿದ್ದು, ಕ್ಯಾಬಿನೆಟ್‌ನಲ್ಲಿ ಗ್ರೀನ್ ಸಿಗ್ನಲ್ ಸಿಕ್ರೆ ಗೃಹ ಆರೋಗ್ಯ ಯೋಜನೆ ಫಲಾನುಭವಿ ನೀವು ಆಗಬಹುದು. ಇನ್ನೂ ಈ ಗೃಹ ಆರೋಗ್ಯ ಯೋಜನೆ ಸೇವೆಯನ್ನು ಪ್ರಾಯೋಗಿಕವಾಗಿ 8 ಜಿಲ್ಲೆಗಳಲ್ಲಿ ಈ ಆರಂಭ ಮಾಡಲು ಚಿಂತನೆ ನಡೆಸಲಾಗಿದೆ. ಮನೆ ಬಾಗಿಲಿಗೆ ವೈದ್ಯರು ಬರಲಿದ್ದಾರೆ.

ಒಟ್ಟಿನಲ್ಲಿ ಚಿಕ್ಕ ಚಿಕ್ಕ ಕಾಯಿಲೆ ಅಂತ ನಿರ್ಲಕ್ಷ್ಯ ಮಾಡುವವರಿಗೆ ಈ ಯೋಜನೆ ಮೂಲಕ ದೊಡ್ಡ ಲಾಭವೇ ಆಗಲಿದೆ. ಕ್ಯಾಬಿನೆಟ್‌ನಲ್ಲಿ ಗ್ರೀನ್ ಸಿಗ್ನಲ್ ಸಿಕ್ರೆ ಇದೇ ಅಕ್ಟೋಬರ್‌ಗೆ ಕಾಂಗ್ರೆಸ್ ಸರ್ಕಾರದ ಮೂಲಕ ಗೃಹ ಆರೋಗ್ಯ ಯೋಜನೆ ಜಾರಿ ಆಗೋದ್ರಲ್ಲಿ ಅನುಮಾನ ಇಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸರ್ಕಾರದಿಂದ ಗುಡ್​ನ್ಯೂಸ್​​.. ನಿಮ್ಮ ಮನೆ ಬಾಗಿಲಿಗೆ ಬರ್ತಾರೆ ವೈದ್ಯರು; ಏನಿದು ಸ್ಟೋರಿ?

https://newsfirstlive.com/wp-content/uploads/2023/09/Doctor.jpg

    ಬಿಪಿ, ಶುಗರ್, ಕ್ಯಾನ್ಸರ್‌ ನಿರ್ಲಕ್ಷ್ಯ ಮಾಡೋರ ಸಂಖ್ಯೆ ಜಾಸ್ತಿ

    ಹಾಗಾಗಿ ಶೀಘ್ರದಲ್ಲಿ ಗೃಹ ಆರೋಗ್ಯ ಯೋಜನೆ ಜಾರಿಗೆ ಚಿಂತನೆ

    ನಿಮ್ಮ ಮನೆ ಬಾಗಿಲಿಗೆ ಬರಲಿದ್ದಾರಂತೆ ವೈದ್ಯರು, ಸ್ಟೋರಿ ಓದಿ..!

ಗೃಹ ಲಕ್ಷ್ಮಿ.. ಗೃಹ ಜ್ಯೋತಿ.. ಗ್ಯಾರಂಟಿ ಮೇಲೆ ಗ್ಯಾರಂಟಿ ಕೊಟ್ಟು ಉಚಿತ ಯೋಜನೆಗಳ ಜಾರಿ ಮಾಡಿ ಕಾಂಗ್ರೆಸ್ ಸರ್ಕಾರ ಜನ್ರ ಮನಸ್ಸಲ್ಲಿ ಅಚ್ಚೊತ್ತಿಕೊಳ್ತಿದೆ. ಅದ್ರ ಜೊತೆಗೆ ಇದೀಗ ಗ್ಯಾರಂಟಿ ಮಾದರಿಯಲ್ಲೇ ಗೃಹ ಆರೋಗ್ಯ ಯೋಜನೆ ಜಾರಿಗೆ ರಾಜ್ಯ ಸರ್ಕಾರ ಮುಂದಾಗಿದೆ.

ಆರೋಗ್ಯವೇ ಭಾಗ್ಯ ಅಂತ ಎಷ್ಟೇ ಹೇಳಿದ್ರು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಜನ ಹಿಂದೇಟು ಹಾಕ್ತಾನೆ ಇರ್ತಾರೆ. ಬಿಪಿ, ಶುಗರ್, ಕ್ಯಾನ್ಸರ್‌ನ ನಿರ್ಲಕ್ಷ್ಯ ಮಾಡುವವರ ಸಂಖ್ಯೆ ಹೆಚ್ಚಳ ಆಗಿದೆ. ಈ ಕಾರಣಕ್ಕಾಗಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಗೃಹ ಆರೋಗ್ಯ ಯೋಜನೆ ಜಾರಿ ತರಲು ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ.

ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಕೂಡ ಸಲ್ಲಿಕೆ ಮಾಡಲಾಗಿದ್ದು, ಕ್ಯಾಬಿನೆಟ್‌ನಲ್ಲಿ ಗ್ರೀನ್ ಸಿಗ್ನಲ್ ಸಿಕ್ರೆ ಗೃಹ ಆರೋಗ್ಯ ಯೋಜನೆ ಫಲಾನುಭವಿ ನೀವು ಆಗಬಹುದು. ಇನ್ನೂ ಈ ಗೃಹ ಆರೋಗ್ಯ ಯೋಜನೆ ಸೇವೆಯನ್ನು ಪ್ರಾಯೋಗಿಕವಾಗಿ 8 ಜಿಲ್ಲೆಗಳಲ್ಲಿ ಈ ಆರಂಭ ಮಾಡಲು ಚಿಂತನೆ ನಡೆಸಲಾಗಿದೆ. ಮನೆ ಬಾಗಿಲಿಗೆ ವೈದ್ಯರು ಬರಲಿದ್ದಾರೆ.

ಒಟ್ಟಿನಲ್ಲಿ ಚಿಕ್ಕ ಚಿಕ್ಕ ಕಾಯಿಲೆ ಅಂತ ನಿರ್ಲಕ್ಷ್ಯ ಮಾಡುವವರಿಗೆ ಈ ಯೋಜನೆ ಮೂಲಕ ದೊಡ್ಡ ಲಾಭವೇ ಆಗಲಿದೆ. ಕ್ಯಾಬಿನೆಟ್‌ನಲ್ಲಿ ಗ್ರೀನ್ ಸಿಗ್ನಲ್ ಸಿಕ್ರೆ ಇದೇ ಅಕ್ಟೋಬರ್‌ಗೆ ಕಾಂಗ್ರೆಸ್ ಸರ್ಕಾರದ ಮೂಲಕ ಗೃಹ ಆರೋಗ್ಯ ಯೋಜನೆ ಜಾರಿ ಆಗೋದ್ರಲ್ಲಿ ಅನುಮಾನ ಇಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More