newsfirstkannada.com

ಒರಿಸ್ಸಾದಲ್ಲಿ ಧಾರಾಕಾರ ಮಳೆ; ಸಿಡಿಲು ಬಡಿದು 10 ಮಂದಿ ಸಾವು

Share :

03-09-2023

    ಎರಡು ದಿನದಿಂದ ಸತತವಾಗಿ ಸುರಿಯುತ್ತಿರೋ ಧಾರಾಕಾರ ಮಳೆ

    ಮಳೆಗೆ ಭುವನೇಶ್ವರ ಮತ್ತು ಕಟಕ್ ಜಿಲ್ಲೆಯ ಜನಜೀವನ ಅಸ್ತವ್ಯಸ್ತ

    ಭೀಕರ ಮಳೆಯ ಕುರಿತು ಹವಮಾನ ಇಲಾಖೆ ಕೊಟ್ಟ ಖಡಕ್​​ ಎಚ್ಚರಿಕೆ!

ಭುವನೇಶ್ವರ: ಕಳೆದ ಎರಡು ದಿನದಿಂದ ಸತತವಾಗಿ ಸುರಿಯುತ್ತಿರೋ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಗುಡುಗು ಸಿಡಿಲು ಸಮೇತ ಸುರಿಯುತ್ತಿರುವ ಮಳೆಗೆ ಒರಿಸ್ಸಾದ ಹಲವು ಭಾಗ ತತ್ತರಿಸಿ ಹೋಗಿದೆ. ಸಿಡಿಲು ಬಡಿದು 10 ಮಂದಿ ಸಾವಿಗೀಡಾಗಿದ್ದಾರೆ. ಜೊತೆಗೆ 3 ಮಂದಿಗೆ ಗಂಭೀರ ಗಾಯಗಳಾಗಿವೆ.

ಇನ್ನೂ, ಖುರ್ದಾ ಜಿಲ್ಲೆಯಲ್ಲಿ ಸಿಡಿಲು ಬಡಿದು ನಾಲ್ವರು ಮೃತಪಟ್ಟಿದ್ದಾರೆ. ಬೋಲಂಗಿರ್‌ನಲ್ಲಿ ಇಬ್ಬರು ಸೇರಿದಂತೆ ಅಂಗುಲ್, ಬೌಧ್, ಜಗತ್‌ಸಿಂಗ್‌ಪುರ ಮತ್ತು ಧೆಂಕನಾಲ್‌ ಎಂಬಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ ಎಂದು ವಿಶೇಷ ಪರಿಹಾರ ಆಯುಕ್ತರ ಕಚೇರಿ ಮಾಹಿತಿ ನೀಡಿದ್ದಾರೆ.

ಇನ್ನು, ಭುವನೇಶ್ವರ ಮತ್ತು ಕಟಕ್ ಸೇರಿದಂತೆ 2 ಗಂಟೆಯ ಹೊತ್ತಿಗೆ 90 ನಿಮಿಷಗಳ 126 ಮಿ.ಮೀ ಮತ್ತು 95.8 ಮಿ.ಮೀ ಮಳೆಯಾಗಿದೆ. ಒರಿಸ್ಸಾದ ಕೆಲ ಪ್ರದೇಶದಲ್ಲಿ ನಿನ್ನೆ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆಯಾಗಿದೆ. ಮಳೆಯಾಗುವ ಸಂದರ್ಭದಲ್ಲಿ ಜನರು ಸುಖಾಸುಮ್ಮನೆ ಓಡಾಡುವುದನ್ನು ಕಡಿಮೆ ಮಾಡಬೇಕು. ಮುಂದಿನ ನಾಲ್ಕು ದಿನಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒರಿಸ್ಸಾದಲ್ಲಿ ಧಾರಾಕಾರ ಮಳೆ; ಸಿಡಿಲು ಬಡಿದು 10 ಮಂದಿ ಸಾವು

https://newsfirstlive.com/wp-content/uploads/2023/07/rain-8-1.jpg

    ಎರಡು ದಿನದಿಂದ ಸತತವಾಗಿ ಸುರಿಯುತ್ತಿರೋ ಧಾರಾಕಾರ ಮಳೆ

    ಮಳೆಗೆ ಭುವನೇಶ್ವರ ಮತ್ತು ಕಟಕ್ ಜಿಲ್ಲೆಯ ಜನಜೀವನ ಅಸ್ತವ್ಯಸ್ತ

    ಭೀಕರ ಮಳೆಯ ಕುರಿತು ಹವಮಾನ ಇಲಾಖೆ ಕೊಟ್ಟ ಖಡಕ್​​ ಎಚ್ಚರಿಕೆ!

ಭುವನೇಶ್ವರ: ಕಳೆದ ಎರಡು ದಿನದಿಂದ ಸತತವಾಗಿ ಸುರಿಯುತ್ತಿರೋ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಗುಡುಗು ಸಿಡಿಲು ಸಮೇತ ಸುರಿಯುತ್ತಿರುವ ಮಳೆಗೆ ಒರಿಸ್ಸಾದ ಹಲವು ಭಾಗ ತತ್ತರಿಸಿ ಹೋಗಿದೆ. ಸಿಡಿಲು ಬಡಿದು 10 ಮಂದಿ ಸಾವಿಗೀಡಾಗಿದ್ದಾರೆ. ಜೊತೆಗೆ 3 ಮಂದಿಗೆ ಗಂಭೀರ ಗಾಯಗಳಾಗಿವೆ.

ಇನ್ನೂ, ಖುರ್ದಾ ಜಿಲ್ಲೆಯಲ್ಲಿ ಸಿಡಿಲು ಬಡಿದು ನಾಲ್ವರು ಮೃತಪಟ್ಟಿದ್ದಾರೆ. ಬೋಲಂಗಿರ್‌ನಲ್ಲಿ ಇಬ್ಬರು ಸೇರಿದಂತೆ ಅಂಗುಲ್, ಬೌಧ್, ಜಗತ್‌ಸಿಂಗ್‌ಪುರ ಮತ್ತು ಧೆಂಕನಾಲ್‌ ಎಂಬಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ ಎಂದು ವಿಶೇಷ ಪರಿಹಾರ ಆಯುಕ್ತರ ಕಚೇರಿ ಮಾಹಿತಿ ನೀಡಿದ್ದಾರೆ.

ಇನ್ನು, ಭುವನೇಶ್ವರ ಮತ್ತು ಕಟಕ್ ಸೇರಿದಂತೆ 2 ಗಂಟೆಯ ಹೊತ್ತಿಗೆ 90 ನಿಮಿಷಗಳ 126 ಮಿ.ಮೀ ಮತ್ತು 95.8 ಮಿ.ಮೀ ಮಳೆಯಾಗಿದೆ. ಒರಿಸ್ಸಾದ ಕೆಲ ಪ್ರದೇಶದಲ್ಲಿ ನಿನ್ನೆ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆಯಾಗಿದೆ. ಮಳೆಯಾಗುವ ಸಂದರ್ಭದಲ್ಲಿ ಜನರು ಸುಖಾಸುಮ್ಮನೆ ಓಡಾಡುವುದನ್ನು ಕಡಿಮೆ ಮಾಡಬೇಕು. ಮುಂದಿನ ನಾಲ್ಕು ದಿನಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More