/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಅನೂರಾಧ ನಕ್ಷತ್ರ ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.
ಮೇಷ ರಾಶಿ
/newsfirstlive-kannada/media/post_attachments/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ಮಾನಸಿಕವಾದ ಸಮಾಧಾನ ಕಡಿಮೆ ಪ್ರಮಾಣದಲ್ಲಿರುತ್ತದೆ
- ತಾವು ಮಾಡಿದ ಕೆಲಸಗಳೆಲ್ಲವೂ ಹಾಳಾಗುವಂತಹುದು
- ಮಾನಸಿಕವಾಗಿ ಸ್ಥೈರ್ಯ ಹೊಂದಿ ಕೆಲಸಗಳಲ್ಲಿ ಪ್ರವೃತ್ತರಾಗಬೇಕು
- ಪ್ರೇಮಿಗಳಲ್ಲಿ ಪರಸ್ಪರ ಕಾದಾಟ ಸಾಧ್ಯತೆ
- ಈ ದಿನ ಪ್ರಯಾಣ ಮಾಡಬೇಡಿ
- ಬೇಜವಾಬ್ದಾರಿ ಕೆಲಸಗಳು ಹಿನ್ನಡೆಯಾಗುವ ಸಾಧ್ಯತೆ
- ಆಹಾರದ ಬಗ್ಗೆ ಎಚ್ಚರ ವಹಿಸಿ, ಹೊಸ ರುಚಿಯಿಂದ ತೊಂದರೆ ಸಾಧ್ಯತೆ
- ಅಪಶಕುನದಿಂದ ತೊಂದರೆಯಾಗುವ ಸಾಧ್ಯತೆಯಿದೆ
- ಇಂದು ಕುಲದೇವರಿಗೆ ತುಪ್ಪದ ದೀಪ ಹಚ್ಚಿ
ವೃಷಭ
/newsfirstlive-kannada/media/post_attachments/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ಕೆಂಪು ವಸ್ತ್ರ ಧರಿಸಿ ವಾಹನ ಚಾಲನೆ ಮಾಡುವವರಿಗೆ ತೊಂದರೆ ಸಾಧ್ಯತೆ
- ಆದಾಯದ ಹಿಂದೆ ಹೋಗಿ ಮರ್ಯಾದೆ ಕಳೆದುಕೊಳ್ಳುವ ಸಾಧ್ಯತೆಯಿದೆ ಜಾಗ್ರತೆವಹಿಸಿ
- ದೈಹಿಕ, ಮಾನಸಿಕ ಒತ್ತಡಗಳಿಂದ ಶಾರೀರಿಕ ಆರಾಮವಿರುವುದಿಲ್ಲ
- ಹೊಸ ಸಾಧನೆ ಮಾಡಲು ಪ್ಲಾನ್​ ಮಾಡುತ್ತೀರ, ಆದರೆ ಕೈಗೂಡುವ ಸಾಧ್ಯತೆ ಕಡಿಮೆ
- ಮಕ್ಕಳ ಯಶಸ್ಸಿನ ಬಗ್ಗೆ ಯೋಚಿಸುವಿರಿ
- ಮೃತ್ಯುಂಜಯನನ್ನು ಬಿಲ್ವ ಪತ್ರೆ, ತುಂಬೆ ಹೂವಿನಿಂದ ಅರ್ಚಿಸಿ
ಮಿಥುನ
/newsfirstlive-kannada/media/post_attachments/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ತಂದೆ-ಮಕ್ಕಳ ಸಂಬಂಧ ಚೆನ್ನಾಗಿರುವಂತೆ ಸಮಯವನ್ನ ಪ್ರಯತ್ನ ಪೂರಕವಾಗಿ ತಮ್ಮದಾಗಿಸಿಕೊಳ್ಳಿ
- ಮನೆಯಲ್ಲಿ ಆಕಸ್ಮಿಕ ಅವಘಡಗಳು ಸಂಭವಿಸುವ ಸಾಧ್ಯತೆ
- ಮಕ್ಕಳ ಸಲಹೆ ಮನೆಯವರಿಗೂ, ಹಿರಿಯರ ಸಲಹೆ ಮಕ್ಕಳಿಗೂ ಅನುಕೂಲವಾಗಲಿದೆ
- ವಿದ್ಯೆ, ವಿವಾಹ ವಿಚಾರಕ್ಕೆ ಇದ್ದ ಸಮಸ್ಯೆ ದೂರಾಗಬಹುದು
- ಮನೆಯಲ್ಲಿ ಹೊಸ ವ್ಯವಹಾರ ಕುರಿತು ಚರ್ಚೆಯಾಗುತ್ತದೆ, ಆದರೆ ನೀವು ಸಹಕರಿಸುವುದಿಲ್ಲ
- ಮನಸ್ಸನ್ನು ಶುದ್ಧ ಮಾಡಿಕೊಳ್ಳಿ, ಗೊಂದಲ ಮುಕ್ತರಾಗಿರಿ
ಕಟಕ
/newsfirstlive-kannada/media/post_attachments/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ಔಷಧಿ ವ್ಯಾಪಾರಿಗಳು ಸಮಸ್ಯೆಗೆ ಸಿಲುಕಬಹುದಾದ ದಿವಸ
- ನಿಮ್ಮ ತಪ್ಪು ಮಾಹಿತಿಗಳಿಂದ ಅನರ್ಥವಾಗಿ ತೊಂದರೆಯಾಗುವ ಸಾಧ್ಯತೆ
- ನಿಮ್ಮ ಮೇಲಿನವರ ಸಹಕಾರವಿದ್ದರು ತೊಂದರೆಯಾಗಬಹುದು
- ಇಂದು ಪ್ರೇಮಿಗಳಿಗೆ ಶುಭ ದಿನ
- ವೈದ್ಯಕೀಯ ವಿದ್ಯಾರ್ಥಿಗಳಿಗೆ ಹಿನ್ನಡೆ ಸಾಧ್ಯತೆ
- ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ಮನೆಯಲ್ಲಿ ಹೇಳಿಕೊಳ್ಳಬೇಕು
- ಅಶ್ವಿನಿ ದೇವತೆಗಳನ್ನು ಪ್ರಾರ್ಥಿಸಿ
ಸಿಂಹ
/newsfirstlive-kannada/media/post_attachments/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ಈ ದಿನ ಋಣಾತ್ಮಕ ಚಿಂತನೆಗಳು ನಿಮ್ಮನ್ನು ಹೆಚ್ಚಾಗಿ ಕಾಡಬಹುದು
- ಹಿಂದೆ ಮಾಡಿದ ತಪ್ಪುಗಳಿಗೆ ಇಂದು ವಿಷಾದ ವ್ಯಕ್ತ ಪಡಿಸುತ್ತೀರಿ
- ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ
- ಮಧ್ಯಾಹ್ನದ ಹೊತ್ತಿಗೆ ಪ್ರಯಾಣ ಮಾಡಬಹುದು
- ಅನಗತ್ಯ ವಿಚಾರದಲ್ಲಿ ಚರ್ಚೆ ಮಾಡಿ ಕಾಲಹರಣ ಸಾಧ್ಯತೆ
- ವೈದ್ಯಕೀಯ ರಂಗದವರಿಗೆ ಗೊಂದಲದ ಸವಾಲುಗಳು ಕಾಡಬಹುದು
ಕನ್ಯಾ
/newsfirstlive-kannada/media/post_attachments/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಆಲೋಚನೆ, ನೀವಿರುವ ವಾತಾವರಣ ಆತ್ಮವಿಶ್ವಾಸ ಹೆಚ್ಚಿಸಬಹುದು
- ಪ್ರಜ್ಞಾವಂತರು ನಿಮ್ಮ ಸುತ್ತ ಮುತ್ತ ಇದ್ದರು ಅವರನ್ನು ಉಪಯೋಗಿಸಿಕೊಳ್ಳದೆ ಕೆಲಸದಲ್ಲಿ ಹಿನ್ನಡೆ ಸಾಧ್ಯತೆ
- ಅವಿವಾಹಿತರ ಕಷ್ಟಗಳನ್ನು ಕೇಳುವವರಿಲ್ಲದೆ ಬೇರೆ ಬೇರೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ
- ಸಮಯಕ್ಕೆ ಮಹತ್ವ ನೀಡಿ
- ನಿಮ್ಮ ದೃಢ ನಿರ್ಧಾರಗಳು ಸ್ವಲ್ಪ ಸಡಿಲವಾಗಬೇಕು
- ಆರ್ಥಿಕ ಲಾಭವಿದ್ದರು ಖರ್ಚಿನಿಂದ ನಷ್ಟ ಸಾಧ್ಯ
- ಗುರು ಪ್ರಾರ್ಥನೆ ಮಾಡಿ
ತುಲಾ
/newsfirstlive-kannada/media/post_attachments/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ಟೀಮ್​ ವರ್ಕ್​ ಮಾಡುವವರಿಗೆ ಶುಭಫಲವಿದೆ
- ಸ್ನೇಹಿತರ ನಿಧನದ ವಾರ್ತೆ ಮನಸ್ಸಿನ ಮೇಲೆ ತುಂಬಾ ಪರಿಣಾಮ ಬೀರಬಹುದು
- ನಿಮ್ಮ ನಿರೀಕ್ಷೆಗಳು ತುಂಬಾ ಇರುತ್ತವೆ, ಆದರೆ ಯಾವುದು ಕೈಗೂಡುವುದಿಲ್ಲ
- ರಿಯಲ್​ ಎಸ್ಟೇಟ್​ ಮಾಡುವವರ ಸ್ಥಿತಿ ತುಂಬಾ ಗಂಭೀರವಾಗಿರುತ್ತದೆ
- ಅನೇಕರು ತಮ್ಮ ನೌಕರಿಯನ್ನು ದೂಷಿಸುತ್ತ ರಾಜೀನಾಮೆ ಕೊಡುವ ಸಾಧ್ಯತೆಗಳಿವೆ
- ಮಹಾವಿಷ್ಣುವಿನ ಸ್ಮರಣೆ ಮಾಡಿ
ವೃಶ್ಚಿಕ
/newsfirstlive-kannada/media/post_attachments/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ತಂದೆ ಮಕ್ಕಳ ಮಧ್ಯೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮಧ್ಯೆ ಮುನಿಸು ಬರಬಹುದು
- ಮಕ್ಕಳು ಅಗತ್ಯವಾಗಿ ಪೋಷಕರ ಮಾತನ್ನು ಕೇಳಬೇಕಾಗುತ್ತದೆ
- ಭವಿಷ್ಯವನ್ನು ರೂಪಿಸಿಕೊಳ್ಳಲು ಹಿರಿಯರ ಮಾರ್ಗದರ್ಶನ ಅತ್ಯಗತ್ಯ
- ಸುಳ್ಳು ಹೇಳುವವರಿಗೆ ಮತ್ತು ವಿದ್ಯಾರ್ಥಿಗಳಿಗೆ ಈ ದಿನ ತುಂಬಾ ಹಿನ್ನಡೆಯಾಗಬಹುದು
- ಬುದ್ಧಿವಂತಿಕೆಯಿರಲಿ ಅತಿಯಾದ ಬುದ್ಧಿವಂತಿಕೆ ತೋರಿಸಿದರೆ ಹಿನ್ನಡೆಯಾಗುವ ಸಾಧ್ಯತೆ
- ಬಟ್ಟೆ ವ್ಯಾಪಾರಿಗಳಿಗೆ ಬೆಂಕಿ ಅವಘಡದಿಂದ ತೊಂದರೆಯಾಗುವ ಸಂಭವವಿದೆ ಜಾಗ್ರತೆ
- ವಿಷ್ಣು ಸಹಸ್ರನಾಮ ಪಠಿಸಿ ಅಥವಾ ಶ್ರವಣ ಮಾಡಿ
ಧನುಸ್ಸು
/newsfirstlive-kannada/media/post_attachments/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ತೀರ್ಮಾನಿಸಿದ ಕೆಲಸಗಳಲ್ಲಿ ತಕ್ಷಣ ಬದಲಾವಣೆಯಾಗುವ ಸಾಧ್ಯತೆ
- ನಿಮಗಿಂತ ಬಲವಾಗಿರುವವರೊಂದಿಗೆ ಸ್ಪರ್ಧಿಸಲು ಮುಂದಾಗುತ್ತೀರಿ
- ನಿಮ್ಮ ಸಮಸ್ಯೆ ದೌರ್ಬಲ್ಯಗಳ ಅರಿವು ಇರಬೇಕು
- ಅದನ್ನ ಹೊರತಾಗಿ ಯಾವುದೇ ಕೆಲಸಕ್ಕೂ ಕೈ ಹಾಕಿದರು ಸೋಲಾಗಬಹುದು
- ಆತುರದ ನಿರ್ಧಾರಗಳು ಒಳ್ಳೆಯದಲ್ಲ
- ಸಮಾಧಾನವಾಗಿ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದು
- ಮನೆಯಲ್ಲಿ ಚಿನ್ನಾಭರಣಗಳ ಬಗ್ಗೆ ಎಚ್ಚರವಿರಲಿ
- ಮನೆಯಲ್ಲಿ ಅಶುಭ ಗೊಂದಲ ವಾತಾವರಣ ಉಂಟಾಗಬಹುದು ಜಾಗ್ರತೆ
- ದೂರದ ಸಂಬಂಧಿಕರ ಜೊತೆಯಲ್ಲಿ ಕಲಹ ಉಂಟಾಗಬಹುದು
- ಗಣಪತಿಯನ್ನು ಪ್ರಾರ್ಥಿಸಿ
ಮಕರ
/newsfirstlive-kannada/media/post_attachments/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ಅದೃಷ್ಟ ನಿಮ್ಮದಾಗಿರಬೇಕಿದ್ದರೆ ಅನಗತ್ಯ ವಿಚಾರದಲ್ಲಿ ತಲೆ ಹಾಕಿ ಪ್ರಭುತ್ವ ಸಾಧಿಸಲು ಪ್ರಯತ್ನಿಸುತ್ತೀರಿ
- ಬೇರೆಯವರಿಗೆ ಸಲಹೆ ಸೂಚನೆ ಕೊಡುವಂತಹ ಸಮಯ ಇದಾಗಿದೆ
- ಸಂಗೀತ ಮನೋರಂಜನೆಯಲ್ಲಿ ಕಾಲ ಕಳೆಯುತ್ತೀರಿ
- ಉತ್ತಮ ಭೋಜನ, ಲೌಕಿಕವಾದ ಆನಂದ ನಿಮ್ಮದಾಗುತ್ತದೆ
- ನೀವು ನಿರೀಕ್ಷೆ ಮಾಡದ ಲಾಭ ಅಥವಾ ಹಣ ನಿಮ್ಮ ಕೈ ಸೇರುವುದಿಲ್ಲ
- ಮಾನಸಿಕವಾಗಿ ಬೇಸರ ಆಗುತ್ತದೆ
- ಅನುಭವಿಸಿದ ಸಂತೋಷವೇ ಭಾಗ್ಯ
ಕುಂಭ
/newsfirstlive-kannada/media/post_attachments/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಕಾರ್ಯಕ್ಷೇತ್ರದಲ್ಲಿ ಪ್ರಗತಿಗಾಗಿ ಕೆಲವು ಮಾರ್ಗಗಳನ್ನು ಅನುಸರಿಸುತ್ತಿರುತ್ತೀರಿ
- ಲೇಖಕರಿಗೆ ಸಂಶೋಧಕರಿಗೆ ಹಿನ್ನಡೆಯಾಗುವ ದಿನವಾಗಿರುತ್ತದೆ
- ಈ ದಿನ ಗೊಂದಲ ಸೃಷ್ಠಿಯಾಗುವ ಸಾಧ್ಯತೆ ಹೆಚ್ಚಾಗಿವೆ
- ಹೆಂಗಸರ ದ್ರವ್ಯ, ಹಣ, ಆಭರಣಗಳಿಗೆ ಕುತ್ತು ಬರಬಹುದಾದ ಸಾಧ್ಯತೆ ಇದೆ
- ಮಕ್ಕಳಲ್ಲಿ ಸಿಟ್ಟು ವೈರತ್ವ ಮೂಡಿ ಮನೆಗೆ ಕಂಟಕವಾಗಬಹುದು
- ಮಕ್ಕಳನ್ನು ಸ್ವತಂತ್ರವಾಗಿರಲು ಬಿಡಿ
- ಹೆಚ್ಚು ನಿಯಮ ಹಾಕಬೇಡಿ ಆಗ ದಾರಿ ತಪ್ಪಬಹುದು
- ಸತ್ಯ ಶೋಧನೆ ಮಾಡಿ
ಮೀನ
/newsfirstlive-kannada/media/post_attachments/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ಕುಟುಂಬದ ಸದಸ್ಯರು ನಿಮ್ಮ ಯೋಜನೆಗಳಲ್ಲಿ ಮಾರ್ಗದರ್ಶನ ಮಾಡಬಹುದು
- ನಿಮ್ಮ ಮನಸ್ಸಿನ ಸ್ಥಿರ ನಿರ್ಧಾರಗಳನ್ನು ಬದಲಿಸಿ ಅನುಕೂಲವಿದೆ
- ಮೊಂಡುತನ ಹಟ ಸ್ವಭಾವವನ್ನು ದೂರಮಾಡಿಕೊಂಡರೆ ಒಳ್ಳೆಯದು
- ಇಲ್ಲದಿದ್ದರೆ ನಿಮಗೆ ಹಿನ್ನಡೆ ಉಂಟಾಗಬಹುದು
- ವೈಯಕ್ತಿಕ ಪ್ರತಿಷ್ಠೆಯಿಂದ ಹಣ, ಸ್ಥಾನ, ಗೌರವ ಕಳೆದುಕೊಳ್ಳಬಹುದು
- ಇಂಜಿನಿಯರ್ಸ್​ ಮತ್ತು ಇಂಜಿನಿಯರ್​ ವಿದ್ಯಾರ್ಥಿಗಳಿಗೆ ಸೂಕ್ತವಾದ ಸಲಹೆಗಳು ದೊರೆಯುತ್ತದೆ
- ಇದರಿಂದ ಭವಿಷ್ಯ ಉಜ್ವಲವಾಗುವಂತದ್ದು
- ಬೇರೆಯವರ ಮಾತನ್ನ ಗೌರವಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us