ವೃತ್ತಿಯಲ್ಲಿ ಗಣನೀಯ ಹಿನ್ನಡೆಯಿಂದ ಆತಂಕ ಆಗಲಿದೆ
ಯಾವುದೇ ಅವಕಾಶಗಳನ್ನು ಬಿಡಬೇಡಿ ಒಳ್ಳೆಯದಾಗಲಿದೆ
ಕೋಪದಿಂದ ಅನರ್ಥಕ್ಕೆ ಅವಕಾಶ ಮಾಡಿಕೊಡಬೇಡಿ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ಆರಿದ್ರಾ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00ರವರೆಗೆ ಇರಲಿದೆ.
ಮೇಷ ರಾಶಿ

- ಮಂಗಳ ಕಾರ್ಯಕ್ಕೆ ಮನೆಯವರಿಂದಲೇ ಅಡ್ಡಿಯಾಗಬಹುದು
- ಮಾನಸಿಕವಾಗಿ ಅಸ್ಥಿರತೆ
- ಕುತಂತ್ರಗಳಿಗೆ ಬೇಸರ ಆಗಬಹುದು
- ವಾಹನದಿಂದ ಸ್ವಲ್ಪ ಎಚ್ಚರಿಕೆವಹಿಸಿ
- ಕೋಪದಿಂದ ಅನರ್ಥಕ್ಕೆ ಅವಕಾಶ ಮಾಡಿಕೊಡಬೇಡಿ
- ತಟಸ್ಥ ನೀತಿಯನ್ನು ಅನುಸರಿಸಿ ಶುಭವಿದೆ
- ಇಷ್ಟ ದೇವತಾರಾಧನೆ ಮಾಡಿ
ವೃಷಭ

- ಬಂಧುಗಳಿಂದ ಅಸಮಾಧಾನದ ಮಾತು
- ಕಾರ್ಯಕ್ಷೇತ್ರದಲ್ಲಿ ಮಾತು ಬಿರುಸಾಗಬಹುದು
- ಉದ್ಯೋಗದ ಬಗ್ಗೆ ತಾತ್ಸಾರದ ಮಾತು
- ಮನೆಯ ವಾತಾವರಣ ಚೆನ್ನಾಗಿದೆ
- ಯಾವುದೇ ಅವಕಾಶಗಳನ್ನು ಬಿಡಬೇಡಿ ಒಳ್ಳೆಯದಾಗಲಿದೆ
- ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ಮಾಡಿ
- ಗಣಪತಿಯನ್ನು ಪ್ರಾರ್ಥನೆ ಮಾಡಿ
ಮಿಥುನ

- ಆರ್ಥಿಕ ಸಂಕಷ್ಟದಿಂದ ಹೊರ ಬರುತ್ತೀರಿ
- ಕುಟುಂಬ ಕಲಹ ದೂರವಾಗಲಿದೆ
- ಇಂದು ಸ್ತ್ರೀಯರಿಗೆ ಅನುಕೂಲವಿದೆ
- ಆರೋಗ್ಯ ವಿಚಾರದಲ್ಲಿ ಎಚ್ಚರಿಕೆವಹಿಸಿ
- ವಿದ್ಯಾರ್ಥಿಗಳಿಗೆ ಸ್ಥಳ ಬದಲಾವಣೆಯ ಚಿಂತೆ
- ಮೋಜು-ಮಸ್ತಿಗಳಿಂದ ತೊಂದರೆಯಾಗಬಹುದು
- ಮಹಾ ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ
ಕಟಕ

- ಬೆಂಕಿ ನೀರಿನಿಂದ ಜಾಗ್ರತೆವಹಿಸಿ
- ಬೇರೆಯವರ ದೃಷ್ಟಿಯಿಂದ ಹಿನ್ನಡೆಯಾಗಬಹುದು
- ಸಂಪ್ರದಾಯ ಮತ್ತು ಪದ್ಧತಿಗಳಿಗೆ ಆದ್ಯತೆ ನೀಡಿ
- ವ್ಯಾವಹಾರಿಕವಾಗಿ ಹೊಸ ತಿರುವನ್ನು ಪಡೆಯುತ್ತೀರಿ
- ಹಳೆಯ ಸ್ನೇಹಿತರು ವಿರೋಧಿಗಳಾಗುತ್ತಾರೆ
- ವೃತ್ತಿಯಲ್ಲಿ ಗಣನೀಯ ಹಿನ್ನಡೆಯಿಂದ ಆತಂಕ ಆಗಲಿದೆ
- ನವಗ್ರಹರ ಪ್ರಾರ್ಥನೆ ಮಾಡಿ ಅದರಲ್ಲೂ ಶನಿಗ್ರಹವನ್ನು ಪ್ರಾರ್ಥನೆ ಮಾಡಿ
ಸಿಂಹ

- ಅಧಿಕವಾದ ಖರ್ಚು ಅರಿವಿರುವುದಿಲ್ಲ
- ಶರೀರಕ್ಕೆ ಮತ್ತು ಮನಸ್ಸಿಗೆ ಹಿತವಾಗಿರುವುದನ್ನು ಮಾಡಿ
- ಬೇರೆಯವರ ಮಾತನ್ನು ಆಲಿಸಿ
- ಬಂಧುಗಳ ಜೊತೆಯಲ್ಲಿ ವಿಶೇಷ ಸಂಪರ್ಕವನ್ನು ಹೊಂದಿ
- ಭವಿಷ್ಯದ ವಿದ್ಯೆಯ ಬಗ್ಗೆ ಚಿಂತನೆ ನಡೆಸಿ
- ನಿಮ್ಮ ನಿರ್ಧಾರಗಳು ಕಠಿಣವಾದರೂ ಉತ್ತಮ ಫಲವಿದೆ
- ಗಣಪತಿಯನ್ನು ಪ್ರಾರ್ಥನೆ ಮಾಡಿ
ಕನ್ಯಾ

- ಮಕ್ಕಳಿಂದ ವಿಶ್ವಾಸಕ್ಕೆ ಪಾತ್ರರಾಗುತ್ತೀರಿ
- ಪ್ರೇಮಿಗಳಿಗೆ ಯಶಸ್ಸು ಸಿಗಲಿದೆ
- ಏಕ ನಕ್ಷತ್ರ ರಾಶಿಯವರಿಗೆ ಸಮಸ್ಯೆಯಾಗಬಹುದು
- ಮಿತ್ರರಿಂದ ಅವಮಾನ ಆಗುವ ಸೂಚನೆ ಇದೆ
- ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ ಸಿಗುವ ಸಾಧ್ಯತೆ ಇದೆ
- ರಾಜಕಾರಣಿಗಳಿಂದ ಅನಗತ್ಯ ವಿಚಾರವು ಮನಸ್ಸಿಗೆ ಹಿಂಸೆಯಾಗಲಿದೆ
- ಶಿವಾರಾಧನೆ ಮಾಡಿ
ತುಲಾ

- ನಿಮ್ಮ ಉದ್ಯೋಗದಲ್ಲಿ ಉತ್ಸಾಹದಿಂದ ಕೆಲಸ ಮಾಡುತ್ತೀರಿ ಲಾಭವೂ ಇದೆ
- ನಿಮ್ಮ ಕರ್ತವ್ಯವನ್ನು ನೀವು ಮಾಡಿ ಫಲವಿದೆ
- ಹಲವರ ಮೆಚ್ಚುಗೆಗೆ ಪಾತ್ರರಾಗುತ್ತೀರಿ
- ಅಸಹಕಾರ ತೋರುವವರ ಬಗ್ಗೆ ಅಸಹ್ಯ ಬರಬಹುದು
- ಬೇರೆಯವರಿಗೆ ಯಾವುದೇ ಸಲಹೆ ಸೂಚನೆಗಳನ್ನು ಕೊಡಬೇಡಿ
- ನಿಮ್ಮ ಅಭಿವೃದ್ಧಿಯತ್ತ ಗಮನ ಹರಿಸಿ
- ಕುಲ ದೇವತಾರಾಧನೆ ಮಾಡಿ
ವೃಶ್ಚಿಕ

- ತಂದೆ ಮಕ್ಕಳ ಮಧ್ಯೆ ಜಗಳದ ಸಾಧ್ಯತೆ ಇದೆ
- ಮನೆಯಲ್ಲಿ ಎಲ್ಲವೂ ಕೂಡ ಸರಿ ಇಲ್ಲ
- ಮಾನಸಿಕ ಕೊರಗಿನಿಂದ ಹೊರಬರಬೇಕು
- ಜೀವನ ಸಾಧನೆಗೆ ಬೇಕಾದ ಮಾಹಿತಿಯನ್ನು ಪಡೆಯಿರಿ
- ಮನೆಯಲ್ಲಿಯೇ ಕುಳಿತು ಬೇಸರ ಪಡಬಹುದು
- ನಿಮ್ಮ ಜೀವನ ನಿಮ್ಮ ಕೈಯಲ್ಲಿದೆ ಸರಿಯಾದ ನಿರ್ಧಾರ ಮಾಡಿ
- ವೆಂಕಟರಮಣನನ್ನು ಪ್ರಾರ್ಥನೆ ಮಾಡಿ
ಧನುಸ್ಸು

- ಮನೆಯಲ್ಲಿ ಚಿಕ್ಕ ಪುಟ್ಟ ವಿಚಾರಗಳಿಗೆ ಬೇಸರ ಆಗಲಿದೆ
- ಹಣವಿದೆ ಆದರೆ ಖರ್ಚು ಮಾಡಲು ಸ್ವಾತಂತ್ರವಿಲ್ಲ
- ಆಲೋಚಿಸದೆ ಯಾವ ಮಾತನ್ನು ಆಡಬೇಡಿ
- ವಾದಗಳು ಬೇಡ ಕುತಂತ್ರಗಳು ಬೇಡ
- ಆಲಸ್ಯ ದೂರ ಮಾಡಿಕೊಳ್ಳಿ ಆರೋಗ್ಯ ಸುಧಾರಿಸಬಹುದು
- ಮನಸ್ಸು ಶುದ್ದವಾಗಿರಲಿ ಯಶಸ್ಸಿದೆ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಮಕರ

- ಮಕ್ಕಳ ವಿಚಾರದಲ್ಲಿ ತುಂಬಾ ಚಿಂತೆ ಪಡುತ್ತೀರಿ
- ದಾಂಪತ್ಯದಲ್ಲಿ ಶೀತಲ ಸಮರ ಅದಕ್ಕೆ ಪರಿಹಾರವೇ ಇಲ್ಲ
- ಇಂದು ಗುಟ್ಟಾಗಿಟ್ಟಿದ ವಿಚಾರಗಳು ಬಹಿರಂಗ ಆಗಲಿದೆ
- ವಿಷ ಜಂತುಗಳಿಂದ ಸ್ವಲ್ಪ ಎಚ್ಚರಿಕೆವಹಿಸಿ
- ವ್ಯಾವಹಾರಿಕವಾಗಿ ಶತ್ರು ಕಾಟ
- ಮನೆಯವರ ವಿರೋಧದಿಂದ ಹಿನ್ನಡೆಯಾಗಬಹುದು
- ಶ್ರೀರಾಮ ಚಂದ್ರನನ್ನು ಪ್ರಾರ್ಥನೆ ಮಾಡಿ
ಕುಂಭ

- ಆರೋಗ್ಯ ಕಾಪಾಡಿಕೊಳ್ಳಿ ಉತ್ಸಾಹದಿಂದಿರಿ
- ಬೇರೆಯವರಂತೆ ಆಗಲು ಪ್ರಯತ್ನ ಮಾಡಿ
- ವಿದ್ಯಾರ್ಥಿಗಳಿಗೆ ಅತಿಯಾದ ಪರಿಶ್ರಮ ಬೇಕು
- ಮೋಸ ಅಥವಾ ವಂಚನೆಗೆ ಒಳಗಾಗುತ್ತೀರಿ ಎಚ್ಚರಿಕೆವಹಿಸಿ
- ಇಂದು ಪದಾರ್ಥ ಕಳುವಾಗುವ ಸಾಧ್ಯತೆ ಇದೆ
- ತಂದೆಯವರಿಗೆ ಧನಾಗಮದಿಂದ ಸಮಾಧಾನ ಆಗಲಿದೆ
- ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ
ಮೀನ

- ಹಲವಾರು ದಿನಗಳಿಂದ ಆಗದಿದ್ದ ಕೆಲಸ ಪೂರ್ಣ ಆಗಲಿದೆ
- ವ್ಯಾವಹಾರಿಕವಾಗಿ ಸಮಾಧಾನವಿಲ್ಲ
- ಸ್ನೇಹಿತರ ಭೇಟಿಯಿಂದ ಸಮಾಧಾನ ಆಗಲಿದೆ
- ಹಣ ಹೂಡಿಕೆಗೆ ಮನಸ್ಸನ್ನು ಮಾಡ್ತೀರಿ ಅನುಕೂಲವಿದೆ
- ಹಳೆಯ ಬಾಕಿ ಬಗ್ಗೆ ಯೋಚನೆ ಮಾಡುತ್ತೀರಿ
- ಸಹೋದರ ವರ್ಗದಿಂದ ಅಸಹಕಾರ ಆಗಲಿದೆ ಕೋಪ ಬರಲಿದೆ
- ಶಕ್ತಿ ದೇವತಾ ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ