ವೈಯಕ್ತಿಕ ಕಾರ್ಯಗಳಿಗೆ ಹಲವು ವಿಘ್ನಗಳನ್ನ ಎದುರಿಸಬಹುದು
ಯಾರದ್ದೋ ಮಾತಿನಿಂದ ನಿಮಗೆ ಅವಮಾನವಾಗಬಹುದು
ಆರೋಗ್ಯ ಸಂಬಂಧಿ ಖರ್ಚು ಹೆಚ್ಚು, ಮನೆಯಲ್ಲಿ ಕೋಪ, ಜಗಳ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ಆರಿದ್ರಾ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.
ಮೇಷ ರಾಶಿ

- ವ್ಯವಹಾರಿಕ ಲಾಭವಿರುವ ದಿನ
- ಇಂದು ಮನೆಯಲ್ಲಿ ಹೊಂದಾಣಿಕೆ ತುಂಬಾ ಮುಖ್ಯ
- ಇಂದು ಮಕ್ಕಳ ಜೊತೆ ಸಂಘರ್ಷವಾಗಬಹುದು
- ಸಮಾಜಕ್ಕೆ ಪೂರಕವಾದ ಕೆಲಸವನ್ನ ಮಾಡಿ
- ಇಂದು ಹಿರಿಯರ ಆಶೀರ್ವಾದ ಪಡೆಯಿರಿ
- ಶಿಸ್ತುಬದ್ಧವಾದ ಜೀವನದಿಂದ ಆದರ್ಶವ್ಯಕ್ತಿಯಾಗಬಹುದು
- ಮಹಾಗಣಪತಿಯನ್ನ ಪ್ರಾರ್ಥನೆ ಮಾಡಿ
ವೃಷಭ

- ಮಾನಸಿಕವಾದ ಒತ್ತಡ ಹೆಚ್ಚಾಗಬಹುದು
- ಮನೆಯಲ್ಲಿ ಸ್ವಲ್ಪ ಅಸಮಾಧಾನವಿರುವ ದಿನ
- ಬಂಧುಗಳ ವಿಚಾರದಲ್ಲಿ ಬೇಸರವಾಗಬಹುದು
- ಯಾರಿಗೂ ಯಾವ ಸಲಹೆಯನ್ನು ನೀಡಬೇಡಿ
- ನಿಮ್ಮ ಕರ್ತವ್ಯದ ಬಗ್ಗೆ ಹೆಚ್ಚು ಗಮನವಿರಲಿ
- ಆರ್ಥಿಕವಾದ ಭದ್ರತೆಯನ್ನು ನೋಡಿಕೊಳ್ಳಿ
- ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಮಿಥುನ

- ವೈಯಕ್ತಿಕ ಕಾರ್ಯಗಳಿಗೆ ಹಲವು ವಿಘ್ನಗಳನ್ನ ಎದುರಿಸಬಹುದು
- ಇಂದು ಪ್ರಯಾಣದಿಂದ ಅರ್ಧಕ್ಕೆ ಹಿಂದಿರುಗಬಹುದು
- ಶತ್ರು ಕಾಟದಿಂದ ಬೇಸರ ಉಂಟಾಗಬಹುದು
- ಹಣ ಖರ್ಚಾಗುತ್ತದೆ ಆದರೆ ನೆಮ್ಮದಿಯಿರುವುದಿಲ್ಲ
- ಇಂದು ಯಾವ ಕೆಲಸಗಳೂ ಕೈಗೂಡುವುದಿಲ್ಲ
- ನಿಮ್ಮ ಪ್ರಯತ್ನ ವ್ಯರ್ಥ ಎಂಬ ಭಾವನೆ ಬರಬಹುದು
- ಈಶ್ವರ ಆರಾಧನೆ ಮಾಡಿ
ಕಟಕ

- ಕಾರ್ಯಕ್ಷೇತ್ರದಲ್ಲಿ ಯಶಸ್ಸಿಗಾಗಿ ಒದ್ದಾಡಬೇಕಾಗಬಹುದು
- ಯಾರದ್ದೋ ಮಾತಿನಿಂದ ನಿಮಗೆ ಅವಮಾನವಾಗಬಹುದು
- ಇಂದು ಯಾವುದೇ ರೀತಿಯ ಮಾನಸಿಕ ಗೊಂದಲ ಬೇಡ
- ಕೋರ್ಟ್ ಕೆಲಸಗಳಲ್ಲಿ ಅಪಜಯವಾಗಬಹುದು
- ಅಂದುಕೊಂಡ ಕೆಲಸಕ್ಕೆ ಮನೆಯವರ ಅಸಹಕಾರ
- ತಾಯಿಯವರಿಗೆ ಆರೋಗ್ಯ ಸಮಸ್ಯೆ ಕಾಡಬಹುದು
- ನರಸಿಂಹ ಸ್ವಾಮಿಯನ್ನ ಪ್ರಾರ್ಥನೆ ಮಾಡಿ
ಸಿಂಹ

- ವ್ಯಾವಹಾರಿಕವಾಗಿ ಅನುಕೂಲಕರ ದಿನ
- ಜಮೀನು ಅಥವಾ ಭೂಮಿ ಮಾರಾಟಕ್ಕೆ ಸಮಸ್ಯೆಗಳು ಎದುರಾಗಬಹುದು
- ಸಹೋದರ ವರ್ಗದಿಂದ ಕಿರುಕುಳ ಉಂಟಾಗಬಹುದು
- ಇಂದು ಮಾನಸಿಕವಾಗಿ ನೆಮ್ಮದಿಯಿಲ್ಲ
- ವ್ಯವಹಾರಕ್ಕಾಗಿ ಹೆಚ್ಚಿನ ಸಾಲ ಮಾಡಬಹುದು
- ಯಾವುದೂ ಬೇಡ ಎನ್ನುವ ವೈರಾಗ್ಯದ ಮಾತುಗಳನ್ನಾಡಬಹುದು
- ದುರ್ಗಾರಾಧನೆ ಮಾಡಿ
ಕನ್ಯಾ

- ಇಂದು ಯಾವ ಕೆಲಸದಲ್ಲೂ ಕೂಡ ಆಸಕ್ತಿ ಇರುವುದಿಲ್ಲ
- ಮನೆಯಲ್ಲಿ ಕೋಪ, ಜಗಳ ಉಂಟಾಗಬಹುದು
- ಪ್ರತಿಭೆಯಿದ್ದರೂ ಉಪಯೋಗಕ್ಕೆ ಬರುವುದಿಲ್ಲ
- ಆರೋಗ್ಯ ಸಂಬಂಧಿ ಖರ್ಚು ಹೆಚ್ಚಾಗಬಹುದು
- ಮನೆಯ ಸದಸ್ಯರಲ್ಲಿ ದೊಡ್ಡ ಮಟ್ಟದ ಭಿನ್ನಾಭಿಪ್ರಾಯ
- ಸಮಾಜದಲ್ಲಿ ಗೌರವದ ಬಗ್ಗೆ ಗಮನಹರಿಸಿ
- ಸಾಯಿಬಾಬಾರನ್ನು ಪ್ರಾರ್ಥನೆ ಮಾಡಿ
ತುಲಾ

- ಉದ್ಯೋಗದಲ್ಲಿ ಹಲವು ಬದಲಾವಣೆಗಳಾಗುತ್ತವೆ ಆದರೆ ಶುಭವಿದೆ
- ನಿಮ್ಮವರೇ ನಿಮಗೆ ಶತ್ರುಗಳಾಗಬಹುದು
- ಮನೆಯಲ್ಲಿ ಉತ್ತಮ ವಾತಾವರಣವಿರುತ್ತದೆ
- ಮನೆಗೆ ಬಂಧುಗಳ ಆಗಮನ ಅದರಿಂದ ಸಂತಸ ಉಂಟಾಗಬಹುದು
- ಅಂದುಕೊಂಡ ಕೆಲಸಗಳು ಪೂರ್ಣವಾಗುತ್ತವೆ
- ಅಧಿಕವಾದ ಖರ್ಚು ಆದರೆ ಸಮಾಧಾನವಿರುತ್ತದೆ
- ಲಲಿತಾ ಪರಮೇಶ್ವರಿಯನ್ನ ಪ್ರಾರ್ಥನೆ ಮಾಡಿ
ವೃಶ್ಚಿಕ

- ಇಂದು ಯಾವುದೇ ರೀತಿಯ ಆತುರದ ಕೆಲಸಗಳು ಬೇಡ
- ರಕ್ತ ಸಂಬಂಧಿ ಆರೋಗ್ಯ ಸಮಸ್ಯೆ ಕಾಡಬಹುದು
- ಹಣವಿದೆ ಆದರೆ ನೆಮ್ಮದಿಯಿಲ್ಲ
- ತಂದೆ, ತಾಯಿಯ ಅಸಹಕಾರ ನಿಮಗೆ ಬೇಸರ ತರಬಹುದು
- ಇಂದು ಮಂಗಳ ಕಾರ್ಯಕ್ಕೆ ಅಡ್ಡಿ ಉಂಟಾಗಬಹುದು
- ಸಹೋದರ ವರ್ಗದಿಂದ ಅಸಹಕಾರವಿರುತ್ತದೆ
- ಆಂಜನೇಯನನ್ನು ಪ್ರಾರ್ಥನೆ ಮಾಡಿ
ಧನುಸ್ಸು

- ಅತಿಯಾದ ಯೋಚನೆಗಳು ಈ ದಿನ ಬೇಡ
- ಧೈರ್ಯದಿಂದ ತೀರ್ಮಾನಗಳನ್ನ ಮಾಡಿ
- ನಿಮ್ಮ ಭವಿಷ್ಯದ ಬಗ್ಗೆ ಉತ್ಸಾಹವಿರಲಿ
- ಮನೆಯಲ್ಲಿ ಶೀತಲ ಸಮರವಿರುತ್ತದೆ
- ಅವಕಾಶಗಳು ಕೈತಪ್ಪುವ ಸಾಧ್ಯತೆಗಳು ಹೆಚ್ಚಾಗಿವೆ
- ಮಕ್ಕಳಿಂದ ಎಲ್ಲಾ ರೀತಿಯ ಸಹಕಾರ ಸಿಗಬಹುದು
- ನವಗ್ರಹದ ಆರಾಧನೆ ಮಾಡಿ
ಮಕರ

- ಬುದ್ಧಿವಂತಿಕೆಯಿರಲಿ ಆದರೆ ವಾದ ಬೇಡ
- ಇಂದು ಗೊತ್ತಿದ್ದು ಮೋಸ ಹೋಗುವ ಅವಕಾಶವಿದೆ
- ಮಾನಸಿಕ ಸ್ಥಿಮಿತತೆ ಇರುವುದಿಲ್ಲ
- ವ್ಯವಹಾರಿಕವಾಗಿ ಸಮಾಧಾನವಿರುವುದಿಲ್ಲ
- ಆಸ್ತಿ ವಿಚಾರದಲ್ಲಿ ಗೊಂದಲಗಳು ಉಂಟಾಗಬಹುದು
- ಸ್ತ್ರೀಯರಿಗೆ ಆಸ್ತಿ ವಿಚಾರದಲ್ಲಿ ಬೇಸರವಾಗಬಹುದು
- ಸುದರ್ಶನ ಮಹಾವಿಷ್ಣುವನ್ನ ಪ್ರಾರ್ಥನೆ ಮಾಡಿ
ಕುಂಭ

- ಇಂದು ಸಾಲ ಮಾಡಬೇಡಿ, ನಿಮ್ಮ ವೃತ್ತಿ, ವ್ಯವಹಾರದಲ್ಲಿ ನಿಧಾನವಾದ ಅಭಿವೃದ್ಧಿ
- ಮನೆಯಲ್ಲಿ ಅಸಹಕಾರದಿಂದ ಬೇಸರವಾಗಬಹುದು
- ಬೇರೆ ಬೇರೆ ವಿಚಾರಗಳಲ್ಲಿ ಆಸಕ್ತಿ ಬರಬಹುದು
- ಅವಶ್ಯ ಖರ್ಚಿಗೆ ಪರದಾಡಬೇಕಾಗಬಹುದು
- ಶತ್ರುಕಾಟದಿಂದ ನೋವನ್ನ ಅನುಭವಿಸಬಹುದು
- ಬಂಧುಗಳಿಂದ ಅಸಹಕಾರ, ಹಿನ್ನಡೆಯಾಗಬಹುದು
- ಅಯ್ಯಪ್ಪ ಸ್ವಾಮಿಯನ್ನ ಪ್ರಾರ್ಥನೆ ಮಾಡಿ
ಮೀನ

- ಸಮಾಜದಲ್ಲಿ ಹೆಸರನ್ನ ಮಾಡ್ತೀರಿ ಆದರೆ ಮನೆಯಲ್ಲಿ ಅಸಮಾಧಾನ
- ನಿಮ್ಮ ಶಿಸ್ತಿಗೆ ಅಡ್ಡಿ ಬರಬಹುದು ಗಮನಿಸಿ
- ಮಕ್ಕಳಿಂದ ಶುಭವಾರ್ತೆ ಸಿಗಬಹುದು
- ಹಣದ ವಿಚಾರವಾಗಿ ಸಮಾಧಾನದ ದಿನ
- ಇಂದು ಹಿರಿಯರ ಆಶೀರ್ವಾದ ಪಡೆಯಿರಿ
- ನಿವೃತ್ತ ನೌಕರರಿಗೆ ಹೊಸ ಯೋಜನೆಗಳಿಂದ ಖರ್ಚು ಹೆಚ್ಚಾಗಬಹುದು
- ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ