ಮಕ್ಕಳಿಂದ ಉತ್ತಮವಾದ ವಾರ್ತೆ ಕೇಳುವುದರಿಂದ ಸಂತಸ ಆಗಲಿದೆ
ಉನ್ನತ ಶಿಕ್ಷಣಕ್ಕಾಗಿ ದೂರದ ಊರಿನ ಪ್ರಯಾಣದ ಸಾಧ್ಯತೆಯಿದೆ
ಕುಟುಂಬ ಸದಸ್ಯರ ಸಮಸ್ಯೆಯನ್ನು ಬಗೆಹರಿಸಲು ಸಮಯ ನೀಡಿ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ಶರದ್ ಋತು, ಆಶ್ವೀಜ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಶತಭಿಷಾ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.
ಮೇಷ ರಾಶಿ

- ದಂಪತಿಗಳ ಮಧ್ಯೆ ಕಲಹವಾಗಬಹುದು
- ಜವಾಬ್ದಾರಿಯುತ ಕೆಲಸಕ್ಕೆ ಅಡ್ಡಿ ಉಂಟಾಗಬಹುದು
- ಕುಟುಂಬ ಸದಸ್ಯರ ಸಮಸ್ಯೆಯನ್ನು ಬಗೆಹರಿಸಲು ಸಮಯ ನೀಡಿ
- ಆರೋಗ್ಯ ಸಮಸ್ಯೆಗಳಿಂದ ಬೇಸರ ಉಂಟಾಗಬಹುದು
- ಕೆಲಸದ ವಿಧಾನದಲ್ಲಿ ಬದಲಾವಣೆಯ ಅಗತ್ಯವಿದೆ
- ಆತ್ಮ ವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೇಕು
- ನವಗ್ರಹರ ಆರಾಧನೆ ಮಾಡಿ ವಿಶೇಷವಾಗಿ ರವಿಯನ್ನು ಪ್ರಾರ್ಥನೆ ಮಾಡಿ
ವೃಷಭ

- ವಿವಾದಿತ ವಿಚಾರಗಳು ಬರಬಹುದು
- ಸಾಲದ ವಿಚಾರದಲ್ಲಿ ಸ್ವಲ್ಪ ಜಾಗ್ರತೆವಹಿಸಿ
- ಉನ್ನತ ಶಿಕ್ಷಣಕ್ಕಾಗಿ ದೂರದ ಊರಿನ ಪ್ರಯಾಣದ ಸಾಧ್ಯತೆಯಿದೆ
- ಮನೆಯ ಖರ್ಚು ಹೆಚ್ಚಾಗಬಹುದು
- ಕೋಪವನ್ನು ಕಡಿಮೆ ಮಾಡಿ, ಜವಾಬ್ದಾರಿಯುತ ಕೆಲಸದ ಕಡೆ ಗಮನ ಕೊಡಿ
- ಕೆಲವು ಕೆಲಸಗಳು ಪೂರ್ಣವಾಗುವುದರಿಂದ ಸಮಾಧಾನವಿದೆ
- ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಮಿಥುನ

- ಆರೋಗ್ಯ ದುರ್ಬಲ, ಹೊಟ್ಟೆಗೆ ಸಂಬಂಧಿಸಿದ ತೊಂದರೆ ಕಾಡಬಹುದು
- ಬೇರೆಯವರನ್ನು ನಿರ್ಲಕ್ಷಿಸಬೇಡಿ
- ಶತ್ರುಗಳ ಬಲ ಹೆಚ್ಚಾಗಿ ತೊಂದರೆಯಾಗಬಹುದು
- ಮಾಡಿದ ತಪ್ಪುಗಳನ್ನು ಪದೇ ಪದೇ ಮಾಡಬೇಡಿ
- ಮಕ್ಕಳ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಹರಿಸಿ
- ಮಕ್ಕಳಿಂದ ಸ್ವಲ್ಪ ಸಮಸ್ಯೆಯೂ ಆಗಬಹುದು
- ಕುಲದೇವತಾ ಪ್ರಾರ್ಥನೆ ಮಾಡಿ
ಕಟಕ

- ಉದ್ಯೋಗದಲ್ಲಿ ಮೆಚ್ಚುಗೆ ಪಡೆಯುತ್ತೀರಿ
- ಮಕ್ಕಳಿಂದ ಉತ್ತಮವಾದ ವಾರ್ತೆ ಕೇಳುವುದರಿಂದ ಸಂತಸ ಆಗಲಿದೆ
- ಅತಿಯಾದ ಕೋಪ ತೊಂದರೆಯಾಗಬಹುದು
- ಸಹೋದರರ ವಿಚಾರದಲ್ಲಿ ಸ್ವಲ್ಪ ಬೇಸರವಾಗಬಹುದು
- ಇಂದು ಆದಾಯ ಹೆಚ್ಚಾಗುವ ಲಕ್ಷಣಗಳಿವೆ
- ಮನೆಯಲ್ಲಿ ತೃಪ್ತಿದಾಯಕವಾದ ಕೆಲಸಗಳು ಪೂರ್ಣವಾಗಲಿದೆ
- ದುರ್ಗಾದೇವಿಯನ್ನು ಪ್ರಾರ್ಥನೆ ಮಾಡಿ
ಸಿಂಹ

- ಮೇಲಾಧಿಕಾರಿಗಳ ಆದೇಶ ಪಾಲಿಸುವಲ್ಲಿ ವಿಫಲರಾಗುತ್ತೀರಿ
- ಅನಗತ್ಯ ಮಾತುಗಳಿಂದ ದೂರ ಉಳಿಯುತ್ತೀರಿ
- ಅಧ್ಯಯನದಲ್ಲಿ ಆಸಕ್ತಿಯಿಂದ ಜಾಗೃತರಾಗಬಹುದು
- ವಿರೋಧಿಗಳಿಂದ ನಿಮ್ಮ ಕೆಲಸಕ್ಕೆ ಅಡ್ಡಿ ಉಂಟಾಗಬಹುದು
- ನಿಮ್ಮ ಬುದ್ಧಿವಂತಿಕೆಯಿಂದ ಎಲ್ಲವನ್ನು ಪಡೆಯುತ್ತೀರಿ
- ನಿಮ್ಮ ದೃಢ ನಿರ್ಧಾರದಿಂದ ಬೇರೆಯವರಿಗೆ ಅನುಕೂಲವಿದೆ
- ಪ್ರತ್ಯಂಗಿರಾ ದೇವಿಯನ್ನು ಪ್ರಾರ್ಥನೆ ಮಾಡಿ
ಕನ್ಯಾ

- ಮಾನಸಿಕ ಉದ್ವಿಗ್ನತೆಯಿಂದ ಹತಾಶರಾಗುತ್ತೀರಿ
- ವಿದ್ಯಾರ್ಥಿಗಳಿಗೆ ತುಂಬಾ ಪರಿಶ್ರಮ ಪಡಬೇಕಾದ ದಿನ
- ನಿಮ್ಮ ಸಲಹೆಯಿಂದ ಜನರಿಗೆ ಪ್ರಯೋಜನವಾಗಲಿದೆ
- ನಿಮ್ಮ ಕೆಲವು ವಿಚಾರಗಳಿಂದ ನಿಮಗೆ ಹಿನ್ನಡೆಯಾಗಬಹುದು
- ಮನೆಯಲ್ಲಿ ಜಗಳ ಮಾಡಬೇಡಿ
- ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ ಮಾಡಿ
- ಸರಸ್ವತಿ ದೇವಿಯನ್ನು ಪ್ರಾರ್ಥನೆ ಮಾಡಿ
ತುಲಾ

- ವ್ಯವಹಾರದಲ್ಲಿ ಹೊಸ ಪ್ರಯೋಗಗಳನ್ನು ಮಾಡಬೇಡಿ
- ಹಣದ ಹರಿವು ಚೆನ್ನಾಗಿರುತ್ತೆ ಅಧಿಕ ಖರ್ಚಿದೆ
- ಸ್ನೇಹಿತರು ನಿಮ್ಮನ್ನು ಭೇಟಿಯಾಗಬಹುದು
- ಶತ್ರುಗಳಿಂದ ನಿಮಗೆ ತೊಂದರೆ ಇರುವುದಿಲ್ಲ
- ಹಣಕ್ಕಾಗಿ ಕೆಲವು ವಿಚಾರಗಳನ್ನು ಕೇಳಬಹುದು
- ಮಕ್ಕಳ ವಿಚಾರದಲ್ಲಿ ಖುಷಿ ಇರಲಿದೆ
- ಮನ್ಯು ಸೂಕ್ತ ಮಂತ್ರ ಶ್ರವಣ ಮಾಡಿ
ವೃಶ್ಚಿಕ

- ವ್ಯಕ್ತಿತ್ವದ ವಿಚಾರದಲ್ಲಿ ರಾಜಿ ಬೇಡ
- ವಿವಾಹ ವಿಚಾರದಲ್ಲಿ ಶುಭ ಸೂಚನೆ ಇದೆ
- ಹೊರಗಡೆ ಓಡಾಡಲು ಹೋಗಬಹುದು
- ವಾಹನ ಅಪಘಾತವಾಗುವ ಸಾಧ್ಯತೆಯಿದೆ
- ನಿಮ್ಮ ಕ್ಷೇತ್ರದಲ್ಲಿ ನಿಮಗೆ ಅನುಕೂಲವಿದೆ
- ನಿರುದ್ಯೋಗಿಗಳಿಗೆ ಸಮಸ್ಯೆ ಸ್ವಲ್ಪ ಕಡಿಮೆಯಾಗಬಹುದು
- ಅಮೃತ ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ
ಧನುಸ್ಸು

- ಇಂದು ಆತ್ಮೀಯರ ಬೆಂಬಲ ಸಿಗಬಹುದು
- ಅತಿಯಾದ ಆತ್ಮವಿಶ್ವಾಸ ನಷ್ಟಕ್ಕೆ ಕಾರಣವಾಗಲಿದೆ
- ಕುಟುಂಬ ಸದಸ್ಯರ ಸಂಪರ್ಕ ಚೆನ್ನಾಗಿರಲಿ
- ಮಾನಸಿಕ ಉದ್ವೇಗಗಳನ್ನು ದೂರ ಮಾಡಿಕೊಳ್ಳಿ
- ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆಯಾಗಬಹುದು
- ಸ್ಥಿರಾಸ್ತಿಯ ವಿಚಾರದಲ್ಲಿ ಸ್ವಲ್ಪ ಗೊಂದಲವಾಗಬಹುದು
- ಇಷ್ಟ ದೇವತಾ ಆರಾಧನೆ ಮಾಡಿ
ಮಕರ

- ನೌಕರಿಯಲ್ಲಿ ಉನ್ನತವಾದ ಸ್ಥಾನ ಪಡೆಯುವ ಅವಕಾಶವಿದೆ
- ಕೆಲಸದ ಒತ್ತಡ ಸ್ವಲ್ಪ ಕಡಿಮೆ ಮಾಡಿಕೊಳ್ಳಿ
- ವ್ಯಾಪರದ ಅಭಿವೃದ್ಧಿ ವ್ಯವಹಾರದ ವಿಸ್ತಾರವನ್ನು ಕಾಣುವ ಅವಕಾಶವಿದೆ
- ಇಂದು ಮನಸ್ಥಿತಿ ಚೆನ್ನಾಗಿರಲಿದೆ
- ಆರೋಗ್ಯ ಸಂಬಂಧಿ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತೀರಿ
- ಹಣ ನಷ್ಟವಾಗುವುದರಿಂದ ಬೇಸರವಾಗಬಹುದು
- ಕುಬೇರ ಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ
ಕುಂಭ

- ನೀವಂದುಕೊಂಡಂತೆ ಎಲ್ಲಾ ಕೆಲಸ ನಡೆಯುವುದಿಲ್ಲ
- ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಕೊರತೆ ಕಾಡಬಹುದು
- ತಾಯಿಯ ಆರೋಗ್ಯದ ಬಗ್ಗೆ ಕಾಳಜಿವಹಿಸಿ
- ಔಷಧಕ್ಕೆ ಹಣ ಖರ್ಚಾಗುವುದರಿಂದ ಬೇಸರವಾಗಬಹುದು
- ಇಂದು ಕೋಪವನ್ನು ನಿಯಂತ್ರಿಸಿ
- ಹಣದ ವಿಚಾರದಲ್ಲಿ ಕಿರಿಕಿರಿಯಾಗಬಹುದು
- ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ
ಮೀನ

- ನಿಮ್ಮ ಕಾರ್ಯಕ್ಷೇತ್ರದಲ್ಲಿ ಬದಲಾವಣೆಯ ಸಾಧ್ಯತೆಯಿದೆ
- ವೃತ್ತಿ ಜೀವನದಲ್ಲಿ ಗೌರವ ಇರಲಿದೆ
- ವ್ಯಂಗ್ಯ ಮಾತುಗಳನ್ನಾಡಬೇಡಿ ಅವಮಾನವಾಗಬಹುದು
- ಹಳೆಯ ಸ್ನೇಹಿತರ ಸಂಪರ್ಕದಿಂದ ಹಣ ನಷ್ಟವಾಗಬಹುದು
- ಸ್ಥಿರಾಸ್ತಿಯ ಬಗ್ಗೆ ಕೆಲವು ಗೊಂದಲಗಳಿರಲಿದೆ
- ಮನೆಯಲ್ಲಿ ಎಲ್ಲಾ ವಿಚಾರಗಳನ್ನು ಚರ್ಚಿಸಿ ನಿರ್ಧಾರ ಮಾಡಿ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ