ಇಂದು ಯಾವುದೇ ಹಣಕಾಸಿನ ವ್ಯವಹಾರ ಬೇಡ
ಪ್ರವಾಸದ ವಿಚಾರವಾಗಿ ಸಂತೋಷ ವ್ಯಕ್ತಪಡಿಸುತ್ತೀರಿ
ಬೇರೆ ಬೇರೆ ವಿಚಾರಗಳಿಂದ ಹಿನ್ನಡೆಯಾಗಬಹುದು
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ಶರದ್ ಋತು, ಆಶ್ವೀಜ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಶತಭಿಷಾ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.
ಮೇಷ ರಾಶಿ

- ಯಾರನ್ನು ಅತಿಯಾಗಿ ಹೊಗಳಬೇಡಿ ನಿಮ್ಮ ಬಗ್ಗೆ ಅನುಮಾನ ಬರಬಹುದು
- ಕೆಲವು ಕೆಲಸಗಳು ನಿಮ್ಮ ಮನಸ್ಸಿಗೆ ಸಮಾಧಾನವಾಗುವುದಿಲ್ಲ
- ಇಂದು ನಿಧಾನವಾಗಿ ನಿಮ್ಮ ಕರ್ತವ್ಯವನ್ನ ನಿರ್ವಹಿಸಿ
- ನಿಮ್ಮ ಹಲವಾರು ಬೇಡಿಕೆಗಳು ಈಡೇರುತ್ತವೆ
- ನಿಮ್ಮ ಕಾರ್ಯಕ್ಷೇತ್ರದಲ್ಲಿ ಉತ್ಸಾಹ ಕಡಿಮೆ
- ಇಂದು ಬಾಕಿಯಿರುವ ಕೆಲಸಗಳನ್ನು ಅಗತ್ಯವಾಗಿ ಮುಗಿಸಿ
- ಅಯ್ಯಪ್ಪ ಸ್ವಾಮಿಯನ್ನ ಪ್ರಾರ್ಥನೆ ಮಾಡಿ
ವೃಷಭ

- ನಿಮ್ಮ ಆಲೋಚನೆಗೂ ಮೀರಿ ಕೆಲವು ಅನುಕೂಲವಾಗುವ ಯೋಗವಿದೆ
- ಮಕ್ಕಳ ಜೊತೆಯಲ್ಲಿ ಜಗಳವಾಗುವ ಸಾಧ್ಯತೆಯಿದೆ
- ನಿಮ್ಮ ಶಿಸ್ತು ನಿಮಗೆ ಧೈರ್ಯವನ್ನ ಕೊಡುತ್ತದೆ
- ಅನಗತ್ಯ ವಿಚಾರಗಳನ್ನು ತುಂಬಾ ವಿರೋಧಿಸುತ್ತೀರಿ
- ಸಮಾಜದಲ್ಲಿ ಹೆಸರುಗಳಿಸಲು ಪರಿಶ್ರಮ ಪಡುತ್ತೀರಿ
- ನಿಮ್ಮ ವೈಯಕ್ತಿಕ ಸಮಸ್ಯೆಗಳನ್ನ ಬಗೆಹರಿಸಿಕೊಳ್ಳಿ
- ನವಗ್ರಹರ ಆರಾಧನೆ ಮಾಡಿ
ಮಿಥುನ

- ಶುಭ ಕಾರ್ಯದ ಉತ್ಸಾಹದಲ್ಲಿರುತ್ತೀರಿ
- ಹಲವಾರು ಜನರಿಂದ ಪ್ರಶಂಸೆಗೆ ಒಳಗಾಗುತ್ತೀರಿ
- ಇಂದು ಮನೆಯಲ್ಲಿ ಹೊಂದಾಣಿಕೆಯಿರಲಿ
- ಇಂದು ಹೊಸ ವ್ಯವಹಾರಗಳು ಬೇಡ
- ಅತಿಯಾದ ನಂಬಿಕೆಯಿಂದ ಮೋಸ ಹೋಗಬಹುದು
- ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಬಹುದು
- ಕುಲದೇವತಾ ಆರಾಧನೆ ಮಾಡಿ
ಕಟಕ

- ಪ್ರವಾಸದ ವಿಚಾರವಾಗಿ ಸಂತೋಷ ವ್ಯಕ್ತ ಪಡಿಸುತ್ತೀರಿ
- ನಿಮ್ಮ ಹಠ ನಿಮಗೆ ಸಮಸ್ಯೆಯಾಗಬಹುದು
- ನಿಮ್ಮ ಓದಿನ ಬಗ್ಗೆ ಹೆಚ್ಚು ಗಮನಹರಿಸಿ
- ಹಿರಿಯರ ಮಾತಿಗೆ ಬೆಲೆಯಿರಲಿ
- ವ್ಯವಹಾರಿಕವಾಗಿ ಅನುಕೂಲಕರ ದಿನ
- ಸ್ನೇಹಿತರ ಭೇಟಿಗೆ ಪ್ರಯತ್ನ ಆದರೆ ವಿಫಲವಾಗಿ ನಿರಾಸೆಯಾಗಬಹುದು
- ಲಲಿತಾಪರಮೇಶ್ವರಿಯನ್ನ ಪ್ರಾರ್ಥನೆ ಮಾಡಿ
ಸಿಂಹ

- ಹಣದ ವಿಚಾರದಲ್ಲಿ ಸಮಾಧಾನದ ದಿನ
- ಬಂಧುಗಳಿಂದ ಸಹಕಾರ ಸಿಗಬಹುದು
- ಮಕ್ಕಳು ನಿಮ್ಮ ಇಚ್ಛೆಯಂತೆ ನಡೆದುಕೊಳ್ಳುವುದಿಲ್ಲ ಬೇಸರವಾಗಬಹುದು
- ಕುಟುಂಬದಲ್ಲಿ ಹೊಂದಾಣಿಕೆಯಿರಲಿ
- ಯಾರೊಂದಿಗೂ ಈ ದಿನ ಜಗಳ ಬೇಡ
- ಚಿನ್ನಾಭರಣಗಳ ವಿಚಾರದಲ್ಲಿ ಜಾಗ್ರತೆಯಿರಲಿ
- ಸುಬ್ರಹ್ಮಣ್ಯ ಸ್ವಾಮಿಯನ್ನು ಆರಾಧನೆ ಮಾಡಿ
ಕನ್ಯಾ

- ವೃತ್ತಿಯಲ್ಲಿ ಗಣನೀಯವಾದ ಬದಲಾವಣೆಯ ಸಾಧ್ಯತೆಯಿದೆ
- ಇಂದು ವ್ಯವಹಾರದಲ್ಲಿ ತುಂಬಾ ಜಾಗೃಕರಾಗಿರಿ
- ಇಂದು ವಿವಾಹ ಯೋಗವಿದೆ
- ಹಿರಿಯರ ಕೆಲವು ದ್ರವ್ಯ ನಿಮಗೆ ಸಿಗಬಹುದು
- ಲೇಖಕರಿಗೆ ಶುಭವಿರುವ ದಿನ
- ನಿರುದ್ಯೋಗಿಗಳಿಗೆ ಉದ್ಯೋಗಾವಕಾಶವಿದೆ
- ಶ್ರೀರಾಮನನ್ನ ಪ್ರಾರ್ಥನೆ ಮಾಡಿ
ತುಲಾ

- ಅನಾರೋಗ್ಯ ನಿಮಗೆ ತೊಂದರೆ ಮಾಡಬಹುದು
- ಮಾನಸಿಕವಾಗಿ ಅಸ್ಥಿರತೆ ಉಂಟಾಗಬಹುದು
- ಇಂದು ವಿದ್ಯಾರ್ಥಿಗಳಿಗೆ ಅಪಯಶಸ್ಸು ಸಾಧ್ಯತೆ
- ವಿವಾಹ ವಿಚಾರದಲ್ಲಿ ಸಂತಸದ ದಿನ
- ಇಂದು ಧೈರ್ಯವಿರಲಿ ಶುಭವಿದೆ
- ಆತುರದ ಸ್ವಭಾವದಿಂದ ತೊಂದರೆ ಉಂಟಾಗಬಹುದು
- ಗೋ ಸೇವೆಯನ್ನ ಮಾಡಿ
ವೃಶ್ಚಿಕ

- ನಿರೀಕ್ಷೆಯನ್ನು ಹೆಚ್ಚಾಗಿಟ್ಟುಕೊಂಡು ನಿರಾಸೆ ಹೊಂದಬಹುದು
- ವ್ಯಾಪಾರಸ್ಥರಿಗೆ ನಷ್ಟದ ಸಾಧ್ಯತೆಯಿದೆ
- ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಗಮನಹರಿಸಿ
- ವಿರೋಧಿಗಳಿಂದ ಬಹಳ ಎಚ್ಚರಿಕೆಯಿಂದಿರಿ
- ಇಂದು ನಿಮ್ಮ ವಿರುದ್ಧ ಕುತಂತ್ರ ನಡೆಯಬಹುದು
- ಆತ್ಮೀಯರ ಜೊತೆಯಲ್ಲಿ ವಾದ ಮಾಡುವುದರಿಂದ ಅವಮಾನವಾಗಬಹುದು
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಧನುಸ್ಸು

- ಸಹೋದ್ಯೋಗಿಗಳ ಜೊತೆ ಅತಿಯಾದ ದೋಸ್ತಿಯಿಂದ ತೊಂದರೆಯಾಗಬಹುದು
- ಆರ್ಥಿಕ ಕುಸಿತದಿಂದ ಸಮಸ್ಯೆಯಾಗಬಹುದು
- ಬಂಧುಗಳಲ್ಲಿ ದ್ವೇಷದ ಮಾತುಕತೆ ಬೆಳೆಯಬಹುದು
- ಇಂದು ನಂಬಿಕಸ್ಥರು ನಿಮ್ಮ ಸಹಾಯಕ್ಕೆ ಬರುತ್ತಾರೆ
- ವ್ಯವಹಾರದಲ್ಲಿ ನಿಧಾನಗತಿಯ ಪ್ರಗತಿಯಿದೆ
- ಮಕ್ಕಳಿಗೆ ಅಪಾಯದ ಸೂಚನೆಯಿದೆ
- ಶಿವಾರಾಧನೆಯನ್ನ ಮಾಡಿ
ಮಕರ

- ಸಾಲದ ವಿಚಾರಕ್ಕೆ ಮನೆಯಲ್ಲಿ ಜಗಳವಾಗಬಹುದು
- ಬೇರೆ ಬೇರೆ ವಿಚಾರಗಳಿಂದ ಹಿನ್ನಡೆಯಾಗಬಹುದು
- ಇಂದು ಹಣ ಸಂಪಾದನೆಗಾಗಿ ವಾಮಮಾರ್ಗ ಅನುಸರಿಸಬೇಡಿ
- ಅನಾವಶ್ಯಕವಾದ ಖರ್ಚು ಜೊತೆಗೆ ಆದಾಯದಲ್ಲಿ ಗಣನೀಯವಾದ ಕುಂಠಿತ
- ಪ್ರೇಮಿಗಳಿಗೆ ಕೆಲವು ಸವಾಲುಗಳು ಎದುರಾಗಿ ತೊಂದರೆಯಾಗಬಹುದು
- ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಕುಂಭ

- ಇಂದು ಬೇರೆಯವರ ಮನಸ್ಸನ್ನು ಗೆಲ್ಲುತ್ತೀರಿ
- ಆರ್ಥಿಕವಾಗಿ ಲಾಭವಾಗುವ ದಿನ
- ದಾಂಪತ್ಯದಲ್ಲಿ ಹೊಂದಾಣಿಕೆಯಿರಲಿ
- ನಿದ್ರಾಭಂಗವಾಗುವುದರಿಂದ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು
- ಸ್ನೇಹಿತರ ಮಧ್ಯದಲ್ಲಿನ ಸಲಿಗೆ ಜಗಳಕ್ಕೆ ಕಾರಣವಾಗಬಹುದು
- ಇಂದು ಕಾನೂನು ಹೋರಾಟದಲ್ಲಿ ಜಯವಿದೆ
- ಗಣಪತಿಯನ್ನು ಪ್ರಾರ್ಥನೆ ಮಾಡಿ
ಮೀನ

- ಬಂಧುಗಳನ್ನು ಭೇಟಿ ಆಗುವುದರಿಂದ ಸಂತೋಷ ಆಗಲಿದೆ
- ಆರೋಗ್ಯದ ಬಗ್ಗೆ ಕಾಳಜಿವಹಿಸಿ
- ಸಹೋದರರ ವಿಚಾರದಲ್ಲಿ ಅಸಮಾಧಾನ
- ಆಸ್ತಿಯ ಬಗ್ಗೆ ತುಂಬಾ ಚಿಂತಿಸುತ್ತೀರಿ
- ಮನೆಯಲ್ಲಿ ಹೊಂದಾಣಿಕೆಯ ಕೊರತೆ ಇರಲಿದೆ
- ಯಾವುದೇ ಅಸಂಬದ್ಧವಾದ ನಿರ್ಣಯಗಳು ಬೇಡ
- ಸಾಯಿಬಾಬಾರನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ