ವ್ಯಾವಹಾರಿಕ ದೃಷ್ಠಿಯಿಂದ ಹಣದ ದೃಷ್ಠಿಯಿಂದ ಜಗಳವಾಗಬಹುದು
ವ್ಯಾವಹಾರಿಕವಾದ ಪದ್ಧತಿಯ ಬದಲಾವಣೆಗೆ ಪ್ರಯತ್ನ ಮಾಡುತ್ತೀರಿ
ಸುಖ ಭೋಜನ ಉತ್ತಮವಾದ ಜನರ ಒಡನಾಟಕ್ಕೆ ಅವಕಾಶ ಸಿಗಲಿದೆ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ಶರದ್ ಋತು, ಆಶ್ವೀಜ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಶತಭಿಷಾ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.
ಮೇಷ ರಾಶಿ

- ವ್ಯಾವಹಾರಿಕ ದೃಷ್ಠಿಯಿಂದ ಹಣದ ದೃಷ್ಠಿಯಿಂದ ಜಗಳವಾಗಬಹುದು
- ಕಾಪಾಡಿಕೊಂಡಿದ್ದ ಜನಮನ್ನಣೆಗೆ ಹಾನಿಯಾಗಬಹುದು
- ಸಂಬಂಧಿಸಿದ್ದ ವಿಚಾರಕ್ಕೆ ಅವಮಾನ ಪಡುತ್ತೀರಿ
- ಮಕ್ಕಳ ಭವಿಷ್ಯ ಕುರಿತು ಚಿಂತಿಸಬೇಕಾಗಲಿದೆ
- ಪ್ರೇಮಿಗಳಿಗೆ ಸಂಕಷ್ಟ ಎದುರಾಗಬಹುದು
- ನಾಟಕೀಯವಾಗಿ ನಡೆದುಕೊಳ್ಳಬೇಡಿ
- ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ
ವೃಷಭ

- ಕೆಲಸದ ಒತ್ತಡ ಅತಿಯಾಗಬಹುದು
- ಆರ್ಥಿಕ ವಿಚಾರದಲ್ಲಿ ಗೊಂದಲ ನಿವಾರಣೆಯಾಗಲಿದೆ
- ತಾಯಿಯವರಿಗೆ ಆರೋಗ್ಯದ ಸಮಸ್ಯೆಯಾಗಬಹುದು
- ಬಂಧುಗಳಲ್ಲಿ ಕಲಹಕ್ಕೆ ಅವಕಾಶವಿದೆ
- ಸುಖ ಭೋಜನ ಉತ್ತಮವಾದ ಜನರ ಒಡನಾಟಕ್ಕೆ ಅವಕಾಶ ಸಿಗಲಿದೆ
- ಅಮೃತ ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ
ಮಿಥುನ

- ನಿಮ್ಮ ವೃತ್ತಿಯಲ್ಲಿ ವೈಶಮ್ಯ ಇರಲಿದೆ
- ಶತ್ರುಭಾದೆಯಿಂದ ಹತಾಶರಾಗುವಿರಿ
- ನಿರೀಕ್ಷಿತ ಖರ್ಚು ಆದರೂ ಅಸಮಾಧಾನ
- ಅವಕಾಶಗಳಿಗಾಗಿ ಕಾಯುತ್ತಿದ್ದರೆ ಒಳ್ಳೆಯದಿದೆ
- ವಿದ್ಯಾರ್ಥಿಗಳಿಗೆ ಮನಸ್ತಾಪಕ್ಕೆ ಅವಕಾಶವಿದೆ
- ಸುದರ್ಶನ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ
ಕಟಕ

- ಆರೋಗ್ಯದಲ್ಲಿ ಏರುಪೇರಾಗಬಹುದು
- ಮನಸ್ಸಿಗೆ ಸಂಕಷ್ಟದ ಅನುಭವ ಆಗಬಹುದು
- ವಿನಾಕಾರಣ ನಿಷ್ಠೂರ ಆಗಲಿದೆ
- ಮನೆಯಲ್ಲಿ ಅಶಾಂತಿ ಇರಲಿದೆ
- ಕೋರ್ಟ್ ಕೇಸುಗಳಲ್ಲಿ ವಿಘ್ನವಾಗಬಹುದು
- ಬೇರೆಯವರನ್ನು ನಂಬಿ ಅನ್ಯಾಯವಾಗಬಹುದು
- ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ
ಸಿಂಹ

- ವ್ಯಾವಹಾರಿಕವಾದ ಪದ್ಧತಿಯ ಬದಲಾವಣೆಗೆ ಪ್ರಯತ್ನ ಮಾಡುತ್ತೀರಿ
- ದೋಷದಿಂದ ಸಮಸ್ಯೆಯಾಗಬಹುದು
- ಶತ್ರುಬಾಧೆಯನ್ನು ಎದುರಿಸುತ್ತೀರಿ
- ಎಲ್ಲಾ ಕೆಲಸಗಳನ್ನು ತಾಳ್ಮೆಯಿಂದ ನಿಭಾಯಿಸಬೇಕು
- ಸರ್ಕಾರಿ ಉದ್ಯೋಗದಲ್ಲಿ ಮಂದಗತಿ
- ನಿಮ್ಮ ಆತುರಕ್ಕೆ ಯಾವ ಕೆಲಸಗಳು ಆಗುವುದಿಲ್ಲ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಕನ್ಯಾ

- ಮನೆಯಲ್ಲಿ ಮನಸ್ತಾಪ ಉಂಟಾಗಬಹುದು
- ಅನುಮಾನಗಳಿಂದ ಕೆಲವು ಸಂಬಂಧ ಹಾಳಾಗಬಹುದು
- ಮಕ್ಕಳ ವಿಚಾರದಲ್ಲಿ ಅತಿಯಾದ ಬೇಸರ ಮಾಡಿಕೊಳ್ಳುತ್ತೀರಿ
- ಆಸ್ತಿ ವಿಚಾರದಲ್ಲಿ ಸಹೋದರರಲ್ಲಿ ಕಲಹ ಉಂಟಾಗಬಹುದು
- ಆರೋಗ್ಯ ಸಮಸ್ಯೆ ಹೆಚ್ಚಾಗಬಹುದು
- ವೈಯಕ್ತಿಕವಾದ ವಿಚಾರದಲ್ಲಿ ಅವಮಾನವಾಗಬಹುದು
- ಭೂವರಾಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ತುಲಾ

- ವೃತ್ತಿಯಲ್ಲಿ ಗಣನೀಯ ಅಭ್ಯುದಯ
- ಮಕ್ಕಳ ವಿಚಾರದಲ್ಲಿ ನೆಮ್ಮದಿ ಸಿಗಲಿದೆ
- ದಾಂಪತ್ಯ ಸುಖ, ಹಲವಾರು ಮಹತ್ತರ ನಿರ್ಧಾರಗಳು
- ಜವಾಬ್ದಾರಿಯುತವಾದ ಕೆಲಸದಿಂದ ಗೌರವ ಸನ್ಮಾನಗಳು ಸಿಗಲಿದೆ
- ಆರ್ಥಿಕವಾಗಿ ಸಮಾಧಾನದ ಸಂಗತಿ
- ಹಲವು ಆಸೆಗಳು ಪೂರೈಸಲಿದೆ
- ಕುಬೇರ ಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ

- ಮನೋ ವ್ಯಥೆ ತುಂಬಾ ಬೇಸರ ಆಗಬಹುದು
- ಹೇಳಿಕೊಳ್ಳಲು ಆಗದೇ ಅನುಭವಿಸುತ್ತೀರಿ
- ಆಲಸ್ಯದಿಂದ ಅವಕಾಶ ವಂಚನೆಯಾಗಲಿದೆ
- ವಾಹನ ಅಪಘಾತದ ಸಂಭವವಿದೆ
- ಮಕ್ಕಳ ಜೊತೆಯಲ್ಲಿ ಎಚ್ಚರಿಕೆಯಿಂದಿರಬೇಕು
- ಒಳ್ಳೆಯ ಸಮಯಕ್ಕಾಗಿ ಕಾದು ಸಂಕಟ ಪಡುತ್ತೀರಿ
- ದುರ್ಗಾದೇವಿಯ ಆರಾಧನೆ ಮಾಡಿ
ಧನುಸ್ಸು

- ಸಾಕು ಪ್ರಾಣಿಗಳಿಂದ ದೂರವಿರಿ ತೊಂದರೆಯಾಗಬಹುದು
- ಅಕಾಲ ಭೋಜನ ಆರೋಗ್ಯದಲ್ಲಿ ವ್ಯತ್ಯಾಸ ಕಾಣಲಿದೆ
- ನಿಮ್ಮ ವಿರುದ್ಧವಾದ ಮಾತಿನಿಂದ ಕೋಪ ಬರಬಹುದು
- ಬಂಧುಗಳಲ್ಲಿ ಅತಿಯಾದ ವಿಶ್ವಾಸವನ್ನಿಟ್ಟುಕೊಂಡಿರುತ್ತೀರಿ ಆದರೆ ವಂಚನೆಯಾಗಲಿದೆ
- ಸಹೋದರ ವರ್ಗದಲ್ಲಿ ಆಸ್ತಿಯ ಕಲಹ ಹೆಚ್ಚಾಗುವ ಸಾಧ್ಯತೆಯಿದೆ
- ವಿವಾಹ ವಿಚಾರದಲ್ಲಿ ಅಡಚಣೆಯಾಗಬಹುದು
- ಲಕ್ಷ್ಮಿನಾರಾಯಣ ಹೃದಯ ಸ್ತೋತ್ರ ಶ್ರವಣ ಮಾಡಿ
ಮಕರ

- ಅಭಿವೃದ್ಧಿಯ ಜಪ ಮಾಡುತ್ತೀರಿ ಹಣದ ಕೊರತೆ ಉಂಟಾಗಬಹುದು
- ಸಂಬಂಧಿಕರಲ್ಲಿ ಕೆಲವು ವಿಚಾರಕ್ಕೆ ಮನಸ್ತಾಪ ಆಗಬಹುದು
- ಆಪ್ತರಿಂದ ಸಹಾಯವನ್ನು ನಿರೀಕ್ಷೆ ಮಾಡುತ್ತೀರಿ ಅದರೆ ಅದು ಹುಸಿಯಾಗಲಿದೆ
- ಇಂದು ಮಾನಸಿಕ ಸಮಾಧಾನವಿರುವುದಿಲ್ಲ
- ತಪ್ಪಿನ ಅರಿವಾಗುವವರೆಗೂ ತೊಂದರೆ ತಪ್ಪಿದಲ್ಲ
- ಅನೇಕ ರೀತಿಯ ಮಾನಸಿಕ ಸಂಕಟ ಕಾಡಲಿದೆ
- ಕುಲದೇವತಾ ಪ್ರಾರ್ಥನೆ ಮಾಡಿ
ಕುಂಭ

- ದುಂದು ವೆಚ್ಚದಿಂದ ಅತಿಯಾದ ಬೇಸರ, ಕೋಪ ಕಾಡಲಿದೆ
- ವಿರೋಧಿಗಳು ನಿಮ್ಮಗೆ ತೊಂದರೆ ಮಾಡಬಹುದು
- ಪ್ರಯತ್ನಕ್ಕೆ ಸಾಧಾರಣ ಫಲ ಸಿಗಲಿದೆ
- ಸಾಲದ ಪರಿಸ್ಥಿತಿಯು ಸಂಕಷ್ಟವಾಗಬಹುದು
- ಹೆಂಗಸರಿಗೆ ಆರೋಗ್ಯದ ಸಮಸ್ಯೆ ಉಂಟಾಗಬಹುದು
- ಬೇಡದ ವಿಚಾರದಲ್ಲಿ ಹೆಚ್ಚು ಆಸಕ್ತಿ ಬರಲಿದೆ
- ನವಗ್ರಹರ ಪ್ರಾರ್ಥನೆ ಮಾಡಿ ಅದರಲ್ಲೂ ಕುಜ ಗ್ರಹನನ್ನು ಆರಾಧನೆ ಮಾಡಿ
ಮೀನ

- ಅತಿಯಾದ ಕೋಪದಿಂದ ಮನೆಯಲ್ಲಿ ನಿಷ್ಠೂರವಾಗಲಿದೆ
- ಬೇರೆಯವರಿಂದ ತಿಳುವಳಿಕೆ ಹೇಳಿಸಿಕೊಳ್ಳುವ ಸಂದರ್ಭ ಬರಬಹುದು
- ನಿಮ್ಮದೇ ಆದ ಕೆಲವು ನಡುವಳಿಕೆಯಿಂದ ತೊಂದರೆಯಾಗಬಹುದು
- ಅತಿಯಾದ ತಿರುಗಾಟದಿಂದ ಬೇಸರವಾಗಬಹುದು
- ಬೇರೆಯವರ ಹಣ ಅಥವಾ ದ್ರವ್ಯ ಸಿಗಬಹುದು
- ಸ್ತ್ರೀಯರಿಗೆ ವಸ್ತ್ರಾಭರಣ ಪ್ರಾಪ್ತಿಯ ಯೋಗವಿದೆ
- ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ