newsfirstkannada.com

ತನ್ನ ವಿರುದ್ಧ ಪಿತೂರಿ ಕೇಸ್; ಹೈಕೋರ್ಟ್​ ಮಹತ್ವದ ಆದೇಶ; ಮುರುಘಾ ಶ್ರೀಗೆ ಭಾರೀ ಮುಖಭಂಗ!

Share :

03-11-2023

    ಮುರುಘಾ ಶ್ರೀ ವಿರುದ್ಧ ಪೋಕ್ಸೋ ಕೇಸ್​ ಮಾಡಲು ಪಿತೂರಿ ಆರೋಪ

    ಬಸವರಾಜನ್, ಸೌಭಾಗ್ಯ ಎಂಬುವರ ವಿರುದ್ಧ ದಾಖಲಾಗಿದ್ದ ಎಫ್​​ಐಆರ್

    ಇಬ್ಬರ ವಿರುದ್ಧದ ಎಫ್​ಐಆರ್​​ ರದ್ದುಗೊಳಿಸಿ ಹೈಕೋರ್ಟ್​​ ಮಹತ್ವದ ಆದೇಶ!

ಬೆಂಗಳೂರು: ಮುರುಘಾ ಶ್ರೀಗಳ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಲು ಪಿತೂರಿ ನಡೆಸಿದ್ದರು ಎಂದು ಆರೋಪಿಸಿ ಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ ಬಸವರಾಜನ್ ಮತ್ತವರ ಪತ್ನಿ ಸೌಭಾಗ್ಯ ವಿರುದ್ಧ ಎಫ್​​ಐಆರ್​​ ದಾಖಲು ಮಾಡಲಾಗಿತ್ತು. ಈ ಎಫ್​ಐಆರ್​​ ರದ್ದು ಕೋರಿ ಬಸವರಾಜನ್ ಮತ್ತು ಸೌಭಾಗ್ಯ ಹೈಕೋರ್ಟ್​ ಮೆಟ್ಟಿಲೇರಿದ್ದರು.

ಇಂದು ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​ ಎಫ್​ಐಆರ್​ ರದ್ದುಗೊಳಿಸಿ ಆದೇಶಿಸಿದೆ. ಈ ಮೂಲಕ ಹೈಕೋರ್ಟ್​ ಮಹತ್ವದ ಆದೇಶ ಹೊರಡಿಸಿದೆ. ಇದರ ಪರಿಣಾಮ ಹೈಕೋರ್ಟ್​ನಲ್ಲಿ ಮರುಘಾ ಶ್ರೀಗಳಿಗೆ ಭಾರೀ ಹಿನ್ನಡೆಯಾಗಿದೆ.

ಏನಿದು ಕೇಸ್​..?

ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಶಿವಮೂರ್ತಿ ಶರಣರ ವಿರುದ್ಧ ಸುಳ್ಳು ಕೇಸು ದಾಖಲು ಮಾಡಲಾಗಿದೆ. ಇದಕ್ಕಾಗಿ ಹಲವರು ಸಂತ್ರಸ್ತ ಬಾಲಕಿಯರನ್ನು ಪ್ರೇರೇಪಿಸಿದ್ದಾರೆ. ಹಣ ಪಡೆಯಬೇಕು ಅನ್ನೋ ಉದ್ದೇಶದಿಂದ ಈ ಕೆಲಸ ಮಾಡಲಾಗಿದೆ. ಈ ವ್ಯವಸ್ಥಿತ ಪಿತೂರಿ ಮಾಡಿದವರನ್ನು ಬಂಧಿಸಿ ಎಂದು ಮಠದ ಉಸ್ತುವಾರಿ ಸ್ವಾಮೀಜಿಯಾದ ಬಸವಪ್ರಭು ಮಾಜಿ ಆಡಳಿತಾಧಿಕಾರಿ ಎಸ್.ಕೆ ಬಸವರಾಜನ್ ಮತ್ತವರ ಪತ್ನಿ ಸೌಭಾಗ್ಯ ವಿರುದ್ಧ ಕೇಸ್​ ಮಾಡಿದ್ದರು. ಈ ಸಂಬಂಧ ಚಿತ್ರದುರ್ಗ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತನ್ನ ವಿರುದ್ಧ ಪಿತೂರಿ ಕೇಸ್; ಹೈಕೋರ್ಟ್​ ಮಹತ್ವದ ಆದೇಶ; ಮುರುಘಾ ಶ್ರೀಗೆ ಭಾರೀ ಮುಖಭಂಗ!

https://newsfirstlive.com/wp-content/uploads/2023/11/Murugha-Shree.jpg

    ಮುರುಘಾ ಶ್ರೀ ವಿರುದ್ಧ ಪೋಕ್ಸೋ ಕೇಸ್​ ಮಾಡಲು ಪಿತೂರಿ ಆರೋಪ

    ಬಸವರಾಜನ್, ಸೌಭಾಗ್ಯ ಎಂಬುವರ ವಿರುದ್ಧ ದಾಖಲಾಗಿದ್ದ ಎಫ್​​ಐಆರ್

    ಇಬ್ಬರ ವಿರುದ್ಧದ ಎಫ್​ಐಆರ್​​ ರದ್ದುಗೊಳಿಸಿ ಹೈಕೋರ್ಟ್​​ ಮಹತ್ವದ ಆದೇಶ!

ಬೆಂಗಳೂರು: ಮುರುಘಾ ಶ್ರೀಗಳ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಲು ಪಿತೂರಿ ನಡೆಸಿದ್ದರು ಎಂದು ಆರೋಪಿಸಿ ಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ ಬಸವರಾಜನ್ ಮತ್ತವರ ಪತ್ನಿ ಸೌಭಾಗ್ಯ ವಿರುದ್ಧ ಎಫ್​​ಐಆರ್​​ ದಾಖಲು ಮಾಡಲಾಗಿತ್ತು. ಈ ಎಫ್​ಐಆರ್​​ ರದ್ದು ಕೋರಿ ಬಸವರಾಜನ್ ಮತ್ತು ಸೌಭಾಗ್ಯ ಹೈಕೋರ್ಟ್​ ಮೆಟ್ಟಿಲೇರಿದ್ದರು.

ಇಂದು ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​ ಎಫ್​ಐಆರ್​ ರದ್ದುಗೊಳಿಸಿ ಆದೇಶಿಸಿದೆ. ಈ ಮೂಲಕ ಹೈಕೋರ್ಟ್​ ಮಹತ್ವದ ಆದೇಶ ಹೊರಡಿಸಿದೆ. ಇದರ ಪರಿಣಾಮ ಹೈಕೋರ್ಟ್​ನಲ್ಲಿ ಮರುಘಾ ಶ್ರೀಗಳಿಗೆ ಭಾರೀ ಹಿನ್ನಡೆಯಾಗಿದೆ.

ಏನಿದು ಕೇಸ್​..?

ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಶಿವಮೂರ್ತಿ ಶರಣರ ವಿರುದ್ಧ ಸುಳ್ಳು ಕೇಸು ದಾಖಲು ಮಾಡಲಾಗಿದೆ. ಇದಕ್ಕಾಗಿ ಹಲವರು ಸಂತ್ರಸ್ತ ಬಾಲಕಿಯರನ್ನು ಪ್ರೇರೇಪಿಸಿದ್ದಾರೆ. ಹಣ ಪಡೆಯಬೇಕು ಅನ್ನೋ ಉದ್ದೇಶದಿಂದ ಈ ಕೆಲಸ ಮಾಡಲಾಗಿದೆ. ಈ ವ್ಯವಸ್ಥಿತ ಪಿತೂರಿ ಮಾಡಿದವರನ್ನು ಬಂಧಿಸಿ ಎಂದು ಮಠದ ಉಸ್ತುವಾರಿ ಸ್ವಾಮೀಜಿಯಾದ ಬಸವಪ್ರಭು ಮಾಜಿ ಆಡಳಿತಾಧಿಕಾರಿ ಎಸ್.ಕೆ ಬಸವರಾಜನ್ ಮತ್ತವರ ಪತ್ನಿ ಸೌಭಾಗ್ಯ ವಿರುದ್ಧ ಕೇಸ್​ ಮಾಡಿದ್ದರು. ಈ ಸಂಬಂಧ ಚಿತ್ರದುರ್ಗ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More