newsfirstkannada.com

ಹಾಲಶ್ರೀ ಸ್ವಾಮೀಜಿ ಕೈವಾಡ ಇದೆ ಅಂದ್ರೆ ಆ ಬಗ್ಗೆ ತನಿಖೆ ಆಗುತ್ತೆ; ಗೃಹ ಸಚಿವ ಜಿ ಪರಮೇಶ್ವರ್​

Share :

14-09-2023

    ಸ್ವಾಮೀಜಿ ತಪ್ಪಿದ್ರೆ ಅವರ ಬಂಧನ ಕೂಡ ಆಗುತ್ತೆ

    ಕಂಪ್ಲೆಂಟ್ ಆಧಾರದ ಮೇಲೆ ಬಂಧನ ಆಗಿದೆ ಎಂದ ಜಿ ಪರಮೇಶ್ವರ್​

    ತಪ್ಪು ಯಾರದ್ದೇ ಆಗಿದ್ರು ಕ್ರಮ ಆಗಲಿದೆ ಎಂದ ಗೃಹ ಸಚಿವ

ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಬಂಧನದ ವಿಚಾರವಾಗಿ ಗೃಹ ಸಚಿವ ಜಿ ಪರಮೇಶ್ವರ್​ ಮಾತನಾಡಿದ್ದಾರೆ. ಉದ್ಯಮಿ ಗೋವಿಂದ ಬಾಬು ಪೂಜಾರಿಯ ಹೇಳಿಕೆ ಮೇಲೆ ಈಗ ಚೈತ್ರಾ ಕುಂದಾಪುರ ಆ್ಯಂಡ್​ ಟೀಮ್ ಅನ್ನು ಬಂಧನ ಮಾಡಲಾಗಿದೆ. ಮಿಕ್ಕಿದ ವಿಚಾರ ತನಿಖೆ ಬಳಿಕ ಗೊತ್ತಾಗಲಿದೆ ಎಂದು ಹೇಳಿದ್ದಾರೆ.

ನಂತರ ಮಾತನಾಡಿದ ಜಿ.ಪರಮೇಶ್ವರ್, ಇನ್ನು ಈ ಪ್ರಕರಣದಲ್ಲಿ ಹಾಲಶ್ರೀ ಸ್ವಾಮೀಜಿ ಕೈವಾಡ ಇದೆ ಅಂದ್ರೆ ಆ ಬಗ್ಗೆ ತನಿಖೆ ಆಗುತ್ತೆ. ಒಂದು ವೇಳೆ ಸ್ವಾಮೀಜಿ ತಪ್ಪಿದ್ರೆ ಅವರ ಬಂಧನ ಕೂಡ ಆಗುತ್ತೆ ಎಂದಿದ್ದಾರೆ.

ಪೊಲೀಸರು ಸುಮೋಟೋ ಹಾಕಿಕೊಂಡಿಲ್ಲ. ಕಂಪ್ಲೆಂಟ್ ಆಧಾರದ ಮೇಲೆ ಬಂಧನ ಆಗಿದೆ. ತಪ್ಪು ಯಾರದ್ದೇ ಆಗಿದ್ರು ಕ್ರಮ ಆಗಲಿದೆ. ಹಿಂದೂ ಪರವಾದ ಭಾಷಣ ಮಾಡಿದ್ದಾರೆ. ಅದನ್ನ ಇದಕ್ಕೆ ಮಿಕ್ಸಪ್ ಮಾಡೋದು ಬೇಡ. ನನಗೆ ಬಂದ ಮಾಹಿತಿ ಬಿಜೆಪಿಯಲ್ಲಿ ಟಿಕೆಟ್ ಕೊಡಿಸೋದಾಗಿ ಹಣ ಪಡೆದಿದ್ದಾರೆ. 3.5 ಕೋಟಿ ಹಣ ಪಡೆದಿರೋ ಕಂಪ್ಲೆಂಟ್ ಆಗಿದೆ. ಆ ಪ್ರಕರಣದ ಕಂಪ್ಲೆಂಟ್ ಪಡೆದು ವಿಚಾರಣೆ ನಡೆಯುತ್ತಿದೆ. ಮಿಕ್ಕಿದ ವಿಚಾರ ತನಿಖೆ ಬಳಿಕ ಗೊತ್ತಾಗಲಿದೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಾಲಶ್ರೀ ಸ್ವಾಮೀಜಿ ಕೈವಾಡ ಇದೆ ಅಂದ್ರೆ ಆ ಬಗ್ಗೆ ತನಿಖೆ ಆಗುತ್ತೆ; ಗೃಹ ಸಚಿವ ಜಿ ಪರಮೇಶ್ವರ್​

https://newsfirstlive.com/wp-content/uploads/2023/07/Parameshwar.jpg

    ಸ್ವಾಮೀಜಿ ತಪ್ಪಿದ್ರೆ ಅವರ ಬಂಧನ ಕೂಡ ಆಗುತ್ತೆ

    ಕಂಪ್ಲೆಂಟ್ ಆಧಾರದ ಮೇಲೆ ಬಂಧನ ಆಗಿದೆ ಎಂದ ಜಿ ಪರಮೇಶ್ವರ್​

    ತಪ್ಪು ಯಾರದ್ದೇ ಆಗಿದ್ರು ಕ್ರಮ ಆಗಲಿದೆ ಎಂದ ಗೃಹ ಸಚಿವ

ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಬಂಧನದ ವಿಚಾರವಾಗಿ ಗೃಹ ಸಚಿವ ಜಿ ಪರಮೇಶ್ವರ್​ ಮಾತನಾಡಿದ್ದಾರೆ. ಉದ್ಯಮಿ ಗೋವಿಂದ ಬಾಬು ಪೂಜಾರಿಯ ಹೇಳಿಕೆ ಮೇಲೆ ಈಗ ಚೈತ್ರಾ ಕುಂದಾಪುರ ಆ್ಯಂಡ್​ ಟೀಮ್ ಅನ್ನು ಬಂಧನ ಮಾಡಲಾಗಿದೆ. ಮಿಕ್ಕಿದ ವಿಚಾರ ತನಿಖೆ ಬಳಿಕ ಗೊತ್ತಾಗಲಿದೆ ಎಂದು ಹೇಳಿದ್ದಾರೆ.

ನಂತರ ಮಾತನಾಡಿದ ಜಿ.ಪರಮೇಶ್ವರ್, ಇನ್ನು ಈ ಪ್ರಕರಣದಲ್ಲಿ ಹಾಲಶ್ರೀ ಸ್ವಾಮೀಜಿ ಕೈವಾಡ ಇದೆ ಅಂದ್ರೆ ಆ ಬಗ್ಗೆ ತನಿಖೆ ಆಗುತ್ತೆ. ಒಂದು ವೇಳೆ ಸ್ವಾಮೀಜಿ ತಪ್ಪಿದ್ರೆ ಅವರ ಬಂಧನ ಕೂಡ ಆಗುತ್ತೆ ಎಂದಿದ್ದಾರೆ.

ಪೊಲೀಸರು ಸುಮೋಟೋ ಹಾಕಿಕೊಂಡಿಲ್ಲ. ಕಂಪ್ಲೆಂಟ್ ಆಧಾರದ ಮೇಲೆ ಬಂಧನ ಆಗಿದೆ. ತಪ್ಪು ಯಾರದ್ದೇ ಆಗಿದ್ರು ಕ್ರಮ ಆಗಲಿದೆ. ಹಿಂದೂ ಪರವಾದ ಭಾಷಣ ಮಾಡಿದ್ದಾರೆ. ಅದನ್ನ ಇದಕ್ಕೆ ಮಿಕ್ಸಪ್ ಮಾಡೋದು ಬೇಡ. ನನಗೆ ಬಂದ ಮಾಹಿತಿ ಬಿಜೆಪಿಯಲ್ಲಿ ಟಿಕೆಟ್ ಕೊಡಿಸೋದಾಗಿ ಹಣ ಪಡೆದಿದ್ದಾರೆ. 3.5 ಕೋಟಿ ಹಣ ಪಡೆದಿರೋ ಕಂಪ್ಲೆಂಟ್ ಆಗಿದೆ. ಆ ಪ್ರಕರಣದ ಕಂಪ್ಲೆಂಟ್ ಪಡೆದು ವಿಚಾರಣೆ ನಡೆಯುತ್ತಿದೆ. ಮಿಕ್ಕಿದ ವಿಚಾರ ತನಿಖೆ ಬಳಿಕ ಗೊತ್ತಾಗಲಿದೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More