ನಿಮ್ಮ ಕೋಪವನ್ನು ನಿಯಂತ್ರಣ ಮಾಡಿ
ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರ ವಹಿಸಿ
ವಿವಾಹ ವಿಚಾರವಿದ್ದರೆ ಮುಂದಕ್ಕೆ ಹಾಕಿ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ಸ್ವಾತಿ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.
ಮೇಷ :

- ಕುಟುಂಬದ ಸದಸ್ಯರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರುತ್ತೀರಿ
- ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ತೊಂದರೆಯಾಗಬಹುದು
- ಹಠದ ಸ್ವಭಾವ ಬೇಡ ಹಿನ್ನಡೆಯಾಗಲಿದೆ
- ಇಂದು ಕೋಪವನ್ನು ನಿಯಂತ್ರಣ ಮಾಡಿ
- ವೃತ್ತಿಯಲ್ಲಿ ಸ್ವಲ್ಪ ಸಂದಿಗ್ಧ ಪರಿಸ್ಥಿತಿಯನ್ನು ಅನುಭವಿಸುತ್ತೀರಿ
- ಚಿಕ್ಕ ಮಕ್ಕಳಿಗೆ ಆರೋಗ್ಯದ ಸಮಸ್ಯೆ ಉಂಟಾಗಬಹುದು
- ಮೃತ್ಯುಂಜಯ ಜಪವನ್ನು ಮಾಡಿಸಿ
ವೃಷಭ :

- ವ್ಯಾವಹಾರಿಕವಾಗಿ ಯಾವುದೇ ರೀತಿಯ ಆತುರದ ನಿರ್ಧಾರ ಬೇಡ
- ವಿವಾಹ ವಿಚಾರವಿದ್ದರೆ ಮುಂದಕ್ಕೆ ಹಾಕಿ
- ಸ್ವಂತ ನಿರ್ಧಾರಗಳಲ್ಲಿ ವಿಶ್ವಾಸದ ಕೊರತೆ ಇರಲಿದೆ
- ಕಾರ್ಯಕ್ಷೇತ್ರದಲ್ಲಿ ಮಾತಿನ ಬಗ್ಗೆ ಹಿಡಿತ ಇರಬೇಕು
- ಕುಟುಂಬದವರೇ ನಿಮ್ಮ ವಿಚಾರದಲ್ಲಿ ಅತೃಪ್ತರಾಗುತ್ತಾರೆ
- ಯೋಚಿಸಿ ನಿರ್ಧರಿಸಿ ನಂತರ ಕೆಲಸಕ್ಕೆ ಮುಂದಾಗಿ
- ಸ್ವಯಂವರ ಪಾರ್ವತಿಯನ್ನು ಪ್ರಾರ್ಥನೆ ಮಾಡಿ
ಮಿಥುನ :

- ಅತಿಥಿಗಳ ಆಗಮನದಿಂದ ಬೇಸರ ಆಗಲಿದೆ
- ಸಾಮಾಜಿಕ ಗೌರವ ಹೆಚ್ಚಾಗಲಿದೆ
- ಮಕ್ಕಳ ಸಾಧನೆಯಿಂದ ಹೆಮ್ಮೆ ಪಡುತ್ತೀರಿ
- ವ್ಯಾವಹಾರಿಕವಾಗಿ ಆರ್ಥಿಕ ಸಂಕಷ್ಟ ಎದುರಾಗಬಹುದು
- ಸಂತಾನಾಪೇಕ್ಷಿಗಳಿಗೆ ಶುಭವಾದ ಸಮಯ
- ದೂರದ ಪ್ರಯಾಣದ ಸಾಧ್ಯತೆ ಇದೆ ಆದರೆ ಪ್ರಯಾಣ ಮಾಡಬೇಡಿ
- ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ
ಕಟಕ :

- ಪೂರ್ವನಿಯೋಜಿತ ಕೆಲಸಗಳು ಪೂರ್ಣ ಆಗಲಿದೆ
- ಹಳೆಯ ಸ್ನೇಹಿತರ ಭೇಟಿಯಿಂದ ಸಂತೋಷ ಆಗಲಿದೆ
- ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಕೊರತೆ
- ನಿಮ್ಮ ಆದಾಯ ಗಮನಿಸಿ ಮುಂದಿನ ನಿರ್ಧಾರವನ್ನು ಮಾಡಿ
- ಮನಸ್ಸು ದೊಡ್ಡ ಆಲೋಚನೆಗಳಲ್ಲಿರಬಹುದು ಯೋಚಿಸಿ ತೀರ್ಮಾನ ಮಾಡಿ
- ಲೋಕ ಕಲ್ಯಾಣ, ಜನ ಕಲ್ಯಾಣ ಇತ್ಯಾದಿ ಮಾತುಗಳಿಗೆ ಮೋಸ ಹೋಗಬೇಡಿ
- ಸರಸ್ವತಿಯನ್ನು ಆರಾಧನೆ ಮಾಡಿ
ಸಿಂಹ :

- ಹೊಸ ಯೋಜನೆಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ
- ಜನರ ಸಮಸ್ಯೆ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ
- ಬುದ್ಧಿವಂತರ ಸಂಪರ್ಕದಿಂದ ಒಳಿತಾಗುತ್ತದೆ
- ಆರ್ಥಿಕವಾಗಿ ಅನುಕೂಲವಾಗುವ ದಿನ
- ಸಾಂಸಾರಿಕ ಜೀವನ ಹೆಚ್ಚು ಮಹತ್ವವನ್ನು ಪಡೆದುಕೊಳ್ಳುತ್ತದೆ
- ಜನರನ್ನ ಬಹಳ ಮೃದುವಾಗಿ ಉಪಚಾರ ಮಾಡಿ
- ಕುಲದೇವತಾ ಆರಾಧನೆ ಮಾಡಿ
ಕನ್ಯಾ :

- ಕೆಲವು ಕಾರಣಗಳಿಂದ ಮನಸ್ಸು ಚಂಚಲತೆ ಹೊಂದಲಿದೆ
- ಮಕ್ಕಳ ಕೆಟ್ಟ ಸಹವಾಸದಿಂದ ಬೇಸರ ಆಗಲಿದೆ
- ನಿಮ್ಮ ಮತ್ತು ಕುಟುಂಬದವರ ಹೊಂದಾಣಿಕೆ ಇರಲಿ
- ರಹಸ್ಯ ಶತ್ರುಗಳನ್ನ ಪತ್ತೆ ಹಚ್ಚಿ ಅವರಿಂದ ನೀವು ದೂರವಿರಿ
- ಯೋಗ್ಯವಲ್ಲದ ಚಟುವಟಿಕೆಗಳಿಗೆ ಆಸಕ್ತಿ ತೋರಬೇಡಿ
- ನಿಮ್ಮ ಜವಾಬ್ದಾರಿಯ ಬಗ್ಗೆ ಚಿಂತಿಸಿ ಶುಭವಿದೆ
- ಪ್ರತ್ಯಂಗಿರಾದೇವಿಯ ಆರಾಧನೆ ಮಾಡಿ
ತುಲಾ :

- ಸಾಂಸಾರಿಕವಾಗಿ ಮುಕ್ತವಾದ ಮನಸ್ಸಿನಿಂದ ಮಾತಾಡಿ
- ಧರ್ಮದ ವಿಚಾರವಾಗಿ ತಿಳುವಳಿಕೆಯನ್ನು ಹೇಳಿ
- ಭವಿಷ್ಯಕ್ಕಾಗಿ ಕೆಲವು ದೃಢ ನಿರ್ಧಾರವನ್ನು ಮಾಡಿ
- ಬುದ್ಧಿವಂತಿಕೆಯಿಂದ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕಿ
- ಉದ್ಯೋಗ ಮತ್ತು ವ್ಯವಹಾರ ಎರಡು ನಿಮ್ಮ ಕೈ ಹಿಡಿಯುವ ಯೋಗವಿದೆ
- ಮಕ್ಕಳಿಗಾಗಿ ಹೊಸ ಚಿಂತನೆಯನ್ನು ನಡೆಸುತ್ತೀರಿ
- ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ :

- ಜವಾಬ್ದಾರಿಯಿಂದ ದೂರ ಹೋಗಬೇಡಿ
- ಮಕ್ಕಳು ಉತ್ತಮವಾಗಿ ಸ್ಪಂದಿಸುವುದರಿಂದ ಸಂತೋಷ ಆಗಲಿದೆ
- ಬೆಲೆ ಬಾಳುವ ವಸ್ತುಗಳನ್ನು ಜೋಪಾನ ಮಾಡಿ
- ಕೆಲಸದ ಶೈಲಿಯಲ್ಲಿ ಬದಲಾವಣೆ ಮಾಡಿ
- ಹೊಸ ಉದ್ಯೋಗಕ್ಕೆ ಅವಕಾಶವಿದೆ
- ಪ್ರೇಮಿಗಳು ಸರಿಯಾದ ತೀರ್ಮಾನ ಮಾಡುವುದರಿಂದ ಶುಭವಿದೆ
- ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ
ಧನುಸ್ಸು :

- ಮನೆಯಲ್ಲಿ ಹಿರಿಯರ ಜೊತೆ ಕೆಲಸದಲ್ಲಿ ಅಧಿಕಾರಿಗಳ ಜೊತೆ ನಿಮ್ಮ ಬಾಂಧವ್ಯ ಚೆನ್ನಾಗಿರಬೇಕು
- ಮನೆಯಲ್ಲಿ ಮನಸ್ತಾಪ ಇರುತ್ತದೆ
- ಸಾಂಸಾರಿಕವಾಗಿ ಹಳೆಯದನ್ನ ಮರೆತುಬಿಡಿ ಸಂತೋಷ ಇರಲಿದೆ
- ಮನೆಯಲ್ಲಿ ಎಲ್ಲರ ಆರೋಗ್ಯದ ಬಗ್ಗೆ ಕಾಳಜಿ ಇರಲಿ
- ಸುಳ್ಳು ಹೇಳಿ ಸಿಕ್ಕಿ ಹಾಕಿಕೊಳ್ಳುತ್ತೀರಿ ಜಾಗ್ರತೆವಹಿಸಿ
- ಮಕ್ಕಳು ನಿಮಗೆ ಸಂತೋಷ ಕೊಡುವುದರಿಂದ ತೃಪ್ತಿಯಾಗಲಿದೆ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಮಕರ :

- ಕೆಲಸದ ಸ್ಥಳದಲ್ಲಿ ಜನರಿಂದ ಪ್ರಾಮುಖ್ಯತೆ ಇರುವುದಿಲ್ಲ
- ಸರಿಯಾದ ಮಾಹಿತಿಯನ್ನು ಸಂಗ್ರಹ ಮಾಡಿ
- ಕೌಟುಂಬಿಕ ಜಗಳಕ್ಕೆ ಹೆಚ್ಚಿನ ಅವಕಾಶವಿದೆ
- ಇಂದು ಮಕ್ಕಳ ಬಗ್ಗೆ ಚಿಂತನೆ ನಡೆಸಿ
- ಮಹಿಳೆಯರಿಗೆ ಆರೋಗ್ಯದ ಸಮಸ್ಯೆಯಾಗಬಹುದು
- ಹಳೆಯ ವಿಚಾರ ಇತ್ಯರ್ಥವಾಗದೆ ಬೇಸರ ಆಗಬಹುದು
- ಶ್ರೀರಾಮಚಂದ್ರನನ್ನು ಪ್ರಾರ್ಥನೆ ಮಾಡಿ
ಕುಂಭ :

- ಸ್ನೇಹಿತರಿಂದ ಶುಭ ಸುದ್ದಿ ಕೇಳುವುದರಿಂದ ಸಂತೋಷ ಪಡುತ್ತೀರಿ
- ಹೊಸ ವಿಚಾರಗಳನ್ನು ನೀವು ತಿಳಿದುಕೊಂಡು ಜೀವನದಲ್ಲಿ ರೂಢಿಸಿಕೊಳ್ಳಿ
- ವ್ಯವಹಾರದಲ್ಲಿ ಬದಲಾವಣೆ ಮಾಡುವುದರಿಂದ ಆರ್ಥಿಕ ಲಾಭ ಕಾಣುತ್ತೀರಿ
- ಬೇರೆಯವರಿಗೆ ಸಹಾಯ ಮಾಡಲು ಅವಕಾಶವಿದೆ
- ಆಡಳಿತಕ್ಕೆ ಸಂಬಂಧಿಸಿದ ಆರೋಪ ನಿಮ್ಮ ಮೇಲೆ ಬರುತ್ತದೆ ಜಾಗ್ರತೆವಹಿಸಿ
- ಪ್ರೇಮಿಗಳಿಗೆ ತಪ್ಪಿನ ಅರಿವಾಗುವ ಸಮಯ
- ಹನಮಾನ್ ಚಾಲೀಸ್ ಅನ್ನು ಪಠಣೆ ಮಾಡಿ
ಮೀನ :

- ವಿದ್ಯಾರ್ಥಿಗಳು ತುಂಬಾ ಶ್ರಮ ವಹಿಸಬೇಕು
- ರಾಜಕೀಯ ವಿಚಾರಗಳಲ್ಲಿ ಚರ್ಚೆ ನಡೆಯಲಿದೆ
- ವಿದೇಶ ಪ್ರವಾಸ,ವಿದ್ಯೆ,ಉದ್ಯೋಗ ಎಲ್ಲದಕ್ಕೂ ಅನುಕೂಲವಿದೆ
- ನಿಮ್ಮ ಪ್ರತಿಭೆಯನ್ನ ಅಭಿವೃದ್ಧಿ ಮಾಡಿಕೊಳ್ಳಿ
- ಜನರ ವಿಶ್ವಾಸಗಳಿಸಿ ಸಮಾಧಾನ ಇರುತ್ತದೆ
- ಸಾಂಸಾರಿಕವಾಗಿ ಕೆಲವು ನಿರ್ಧಾರಗಳನ್ನು ಮಾಡಿ ಅದರ ಅಗತ್ಯತೆ ಕುಟುಂಬಕ್ಕೆ ಇರುತ್ತದೆ
- ನರಸಿಂಹ ಸ್ವಾಮಿಯ ಆರಾಧನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ