ವಿರೋಧಿಗಳಿಗೆ ಹೆದರಿಕೆ ಉಂಟಾಗುವ ಸಮಯ
ಮಕ್ಕಳ ಚಟುವಟಿಕೆಯಿಂದ ಸಂತೋಷ ಆಗಲಿದೆ
ಗೊಂದಲದ ಯಾವ ವ್ಯವಹಾರಗಳನ್ನು ಮಾಡಬೇಡಿ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ವಿಶಾಖ ನಕ್ಷತ್ರ ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.
ಮೇಷ ರಾಶಿ

- ಉದ್ಯೋಗಿಗಳಿಗೆ ವರ್ಗಾವಣೆಯ ಭಯ ಕಾಡಬಹುದು
- ವಿನಾಕಾರಣ ತಿರುಗಾಟವನ್ನು ಮಾಡುವುದರಿಂದ ಬೇಸರ ಆಗಲಿದೆ
- ರಾಜಕಾರಣಿಗಳು ಸವಾಲುಗಳನ್ನು ಎದುರಿಸಬೇಕಾಗಬಹುದು
- ವೈದ್ಯಕೀಯ ರಂಗದವರಿಗೆ ಶುಭದಿನ
- ನಿಮ್ಮ ವಿರೋಧಿಗಳ ಚಟುವಟಿಕೆಗಳನ್ನ ಗಮನಿಸಿ
- ಗೊಂದಲದ ಯಾವ ವ್ಯವಹಾರಗಳನ್ನು ಮಾಡಬೇಡಿ
- ಕುಲದೇವತಾ ಆರಾಧನೆ ಮಾಡಿ
ವೃಷಭ

- ವಿದ್ಯಾರ್ಥಿಗಳು ಹೆಚ್ಚು ಶ್ರಮಿಸಬೇಕಾಗುವ ದಿನ
- ಮಹಿಳೆಯರಿಗೆ ಕೆಲಸದ ಒತ್ತಡ ಇರಬಹುದು
- ಕೈಗೊಂಡ ಕೆಲಸಕ್ಕೆ ಬದ್ಧರಾಗಿರಿ
- ಬಂಧು ಬಾಂಧವರಲ್ಲಿ ಅಸಮಾಧಾನ
- ಉದ್ಯೋಗದಲ್ಲಿ ಸಮಾಧಾನವಿದೆ
- ಮಕ್ಕಳ ಚಟುವಟಿಕೆಯಿಂದ ಸಂತೋಷ ಆಗಲಿದೆ
- ಮಹಾಗಣಪತಿಯನ್ನು ಪ್ರಾರ್ಥನೆ ಮಾಡಿ
ಮಿಥುನ

- ಆರ್ಥಿಕವಾದ ಸಂಕಷ್ಟ ಎದುರಾಗಬಹುದು
- ಕುಟುಂಬದಲ್ಲಿ ಕಲಹ ನಿಮಗೆ ತೊಂದರೆಯನ್ನು ಉಂಟುಮಾಡಬಹುದು
- ದುಂದು ವೆಚ್ಚ ಹೆಚ್ಚು ಕಾಡುವಂತಹದ್ದು
- ಮಾನಸಿಕವಾಗಿ ಕಿರಿಕಿರಿ ಉಂಟಾಗಬಹುದು
- ಇಂದು ವಿದ್ಯಾರ್ಥಿಗಳಿಗೆ ಯಶಸ್ಸಿದೆ
- ನಿಂತಿದ್ದ ಕೆಲಸಗಳು ಮುಂದುವರಿಯಲಿದೆ
- ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ
ಕಟಕ

- ಮಕ್ಕಳ ಆರೋಗ್ಯದಲ್ಲಿ ಏರುಪೇರು ಆಗಬಹುದು
- ಸಂಶಯಾಸ್ಪದವಾದ ಯಾವ ಕೆಲಸವನ್ನು ಮಾಡಬೇಡಿ
- ಹಣ ಹೂಡಿಕೆಯಿಂದ ದೂರ ಉಳಿಯಿರಿ
- ಬಹುದಿನದ ಕನಸು ನನಸಾಗಬಹುದು
- ಕುಟುಂಬದಲ್ಲಿ ಸಂತಸದ ವಾತಾವರಣ
- ಬಂಧುಗಳಿಂದ ಪ್ರಶಂಸೆ ಸಿಗಬಹುದು
- ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ
ಸಿಂಹ

- ಅಧಿಕ ಖರ್ಚು ಆದರೂ ಕೂಡ ಸಂತೋಷ ಇರಲಿದೆ
- ಮನೋರಂಜನೆಯಿಂದ ನಿದ್ರಾಭಂಗ ಆಗಬಹುದು
- ವಿರೋಧಿಗಳಿಗೆ ಹೆದರಿಕೆ ಉಂಟಾಗುವ ಸಮಯ
- ಧನ ಲಾಭವಿದೆ ಆದರೆ ಸಮಾಧಾನವಿಲ್ಲ
- ಆಸ್ತಿಯ ವಿಚಾರವನ್ನು ಮಾಡುತ್ತೀರಿ
- ವಿಶೇಷ ಅಧ್ಯಯನದ ಬಗ್ಗೆ ಕಾಳಜಿವಹಿಸುತ್ತೀರಿ
- ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಕನ್ಯಾ

- ವಿದ್ಯಾರ್ಥಿಗಳಿಗೆ ಅನುಕೂಲಕರವಾದ ದಿನ
- ಇಂದು ಅಧಿಕ ಪ್ರಯಾಣ ಬೇಡ
- ಕೆಲಸದ ಒತ್ತಡದಿಂದ ಆಯಾಸ ಆಗಬಹುದು
- ಮಕ್ಕಳಿಂದ ಯಾವುದೇ ರೀತಿಯ ಬೆಂಬಲ ಸಿಗುವುದಿಲ್ಲ
- ನಿಮ್ಮ ವರ್ತನೆಯಿಂದ ಅವಮಾನ ಆಗಬಹುದು
- ಹಲವು ಕೆಲಸಗಳು ನಿಧಾನ ಆಗಬಹುದು
- ಇಷ್ಟ ದೇವತಾ ಪ್ರಾರ್ಥನೆ ಮಾಡಿ
ತುಲಾ

- ಉದ್ಯೋಗದಲ್ಲಿ ವಿಶೇಷ ಆಸಕ್ತಿ ವಹಿಸುತ್ತೀರಿ
- ಅಧಿಕಾರಿಗಳಿಂದ ಬೆಂಬಲವಿದೆ
- ಹಿರಿಯರ ಆಶೀರ್ವಾದ ಸಿಗಲಿದೆ
- ಆರ್ಥಿಕವಾಗಿ ಹಲವಾರು ರೀತಿಯಲ್ಲಿ ಬದಲಾವಣೆಯಾಗುವುದರಿಂದ ಶುಭವಿದೆ
- ದೂರದ ಬಂಧುಗಳು ಬರುವುದರಿಂಧ ಸಂತೋಷ ಆಗಲಿದೆ
- ಸಾಧು ಸಂತರ ದರ್ಶನದ ಭಾಗ್ಯವಿದೆ
- ಈಶ್ವರರ ಆರಾಧನೆ ಮಾಡಿ
ವೃಶ್ಚಿಕ

- ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಆಸಕ್ತಿ ಇಲ್ಲದೆ ಇರುವ ವಾತಾವರಣ
- ಮನೆಯಿಂದ ಬೇರೆ ಉಳಿಯುವ ಚಿಂತೆ ಮನಸ್ಸಿಗೆ ಬರಬಹುದು
- ಯಾವುದೊ ಜಾಹೀರಾತು, ಯಾರನ್ನೋ ನೋಡಿ ಮರುಳಾಗಬಹುದು
- ಉದ್ಯೋಗದಲ್ಲಿ ಕಿರಿಕಿರಿ ಉಂಟಾಗಬಹುದು
- ಆನಿರೀಕ್ಷಿತ ಅವಕಾಶಗಳಿದ್ದರೂ ನಿಮಗೆ ಸಮಾಧಾನವಿಲ್ಲ
- ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು
- ನವಗ್ರಹ ಆರಾಧನೆ ಮಾಡಿ ವಿಶೇಷವಾಗಿ ಗುರುಗ್ರಹರ ಪ್ರಾರ್ಥನೆ ಮಾಡಿ
ಧನುಸ್ಸು

- ಮನೆಯ ಸದಸ್ಯರ ನಡುವಳಿಕೆಯಿಂದ ಬೇಸರ ಆಗಬಹುದು
- ಉದ್ಯೋಗದಲ್ಲಿ ನಷ್ಟ ಆಗಬಹುದು
- ಸ್ನೇಹಿತರು ಅಥವಾ ಬಂಧುಗಳಿಂದ ನಿರಾಸೆಯಾಗಬಹುದು
- ವೈರಾಗ್ಯ ಅಥವಾ ಬೇಸರ ಕಾಡಬಹುದು
- ಅಂದುಕೊಂಡಿದ್ದು ಯಾವುದು ಆಗುವುದಿಲ್ಲ
- ಮಾನಸಿಕವಾದ ವ್ಯಥೆ ಕಣ್ಣೀರಿನಿಂದ ಮುಕ್ತಾಯ ಆಗಲಿದೆ
- ವೆಂಕಟರಮಣನನ್ನು ಪ್ರಾರ್ಥನೆ ಮಾಡಿ
ಮಕರ

- ದಾಂಪತ್ಯದಲ್ಲಿ ವಿರಸ ಶೀತಲ ಸಮರ ಉಂಟಾಗಬಹುದು
- ವಿರೋಧಿಗಳೊಂದಿಗೆ ವಾಗ್ವಾದ ಮಾಡಬಹುದು
- ಭೂ ವಿಚಾರದಲ್ಲಿ ಸೋಲನ್ನು ಅನುಭವಿಸುತ್ತೀರಿ
- ಪ್ರಯಾಣದಲ್ಲಿ ಹಿನ್ನಡೆಯಾಗಬಹುದು
- ಮಕ್ಕಳಿಂದ ಯೋಚನೆ ಕಾಡಬಹುದು
- ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಹಿನ್ನಡೆಯಾಗಬಹುದು
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಕುಂಭ

- ಮಕ್ಕಳ ಚಟುವಟಿಕೆಯಿಂದ ಸಮಾಧಾನ ಸಿಗಬಹುದು
- ಆಕಸ್ಮಿಕ ಧನ ಲಾಭ ಆಗಬಹುದು
- ಉದ್ಯೋಗ ಮತ್ತು ಮನೆಯಲ್ಲಿ ಕಿರಿಕಿರಿಯಾಗಲಿದೆ
- ಇಂದು ಆತ್ಮೀಯರೇ ಶತ್ರುಗಳಾಗಬಹುದು
- ಅನಾರೋಗ್ಯದ ಭಯ ಕಾಡಬಹುದು
- ಮಾನಸಿಕವಾದ ನೆಮ್ಮದಿ ಇಲ್ಲದೆ ಹಿಂಸೆಯನ್ನು ಪಡುತ್ತೀರಿ
- ಪ್ರತ್ಯಂಗಿರಾ ದೇವಿಯನ್ನು ಪ್ರಾರ್ಥನೆ ಮಾಡಿ
ಮೀನಾ

- ಜವಾಬ್ದಾರಿಯಿಂದ ವರ್ತಿಸಬೇಕಾಗಲಿದೆ
- ವಾಹನ ಅಥವಾ ಹಣ ನಷ್ಟದ ಸಾಧ್ಯತೆ ಇದೆ
- ಶತ್ರುಗಳ ವಿರುದ್ಧ ಜಯವಿದೆ
- ಹೃದ್ರೋಗಿಗಳಿಗೆ ಸಮಸ್ಯೆ ಉಂಟಾಗಬಹುದು
- ಒತ್ತಡದ ಬದುಕಿನಿಂದ ಹೊರ ಬರಬೇಕು
- ವಿರೋಧಿಗಳು ಹೆಚ್ಚಾಗುವುದರಿಂದ ಆತಂಕ ಉಂಟಾಗಬಹುದು
- ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ