ತಾಯಿಯ ಸಲಹೆಯನ್ನು ಸ್ವೀಕರಿಸಿ ಶುಭವಿದೆ
ದೇಹದಲ್ಲಿ ಸ್ವಲ್ಪ ಸಮಸ್ಯೆ ಕಾಣಿಸಿಕೊಳ್ಳಬಹುದು
ಇಲ್ಲಿದೆ ನಿಮ್ಮ ಈ ದಿನದ ರಾಶಿ ಭವಿಷ್ಯ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠಮಾಸ, ಕೃಷ್ಣಪಕ್ಷ, ಪಂಚಮಿ ತಿಥಿ, ಶ್ರವಣ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.
ಮೇಷ ರಾಶಿ

- ದಿನಚರಿಯಲ್ಲಿ ವ್ಯತ್ಯಾಸ ಆಗದೆ ಇರುವ ಹಾಗೆ ಗಮನಿಸಿಕೊಳ್ಳಬೇಕು
- ದೇಹದಲ್ಲಿ ಸ್ವಲ್ಪ ಸಮಸ್ಯೆ ಕಾಣಬಹುದು
- ಮನೆಯವರ ಅಸಹಕಾರದಿಂದ ಕೆಲವು ಕೆಲಸಗಳಲ್ಲಿ ನಿಧಾನಗತಿ
- ಸಹೋದರ ವರ್ಗದವರಿಗೆ ಸಮಸ್ಯೆ, ತೊಂದರೆಯೂ ಇರಲಿದೆ
- ಪ್ರಯತ್ನವಿರಲಿ ಆದರೆ ನಿರಾಸೆ ಬೇಡ
- ಹಣದ ವಿಚಾರದಲ್ಲಿ ಸ್ವಲ್ಪ ಏರಿಳಿತಗಳು ಆಗಬಹುದು
- ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ
ವೃಷಭ

- ಉದ್ಯೋಗದಲ್ಲಿ, ನೌಕರಿಯಲ್ಲಿ ನಿಮ್ಮ ಪ್ರಭಾವ ಹೆಚ್ಚಾಗಲಿದೆ
- ವಿದ್ಯಾರ್ಥಿಗಳಿಗೆ ತುಂಬಾ ಪರಿಶ್ರಮವನ್ನು ಪಡಬೇಕಾಗುತ್ತದೆ
- ಅನಾವಶ್ಯಕವಾಗಿ ಚಿಂತಿಸಬೇಡಿ ಪ್ರಯೋಜನವಿಲ್ಲ
- ಕೆಲಸದ ಗುಣಮಟ್ಟವನ್ನು ಹೆಚ್ಚು ಮಾಡಿಕೊಳ್ಳಿ
- ಸಂತೋಷ ಮತ್ತು ನೆಮ್ಮದಿ ಕಾಣುತ್ತೀರಿ
- ಸ್ವಲ್ಪ ಸಮಸ್ಯೆಯ ವಿಚಾರಗಳನ್ನು ಜಾಣ್ಮೆಯಿಂದ ಬಗೆಹರಿಸಿಕೊಳ್ಳುವ ಶಕ್ತಿ ನಿಮಗಿದೆ
- ಪಾರಿಜಾತ ಸರಸ್ವತಿಯನ್ನು ಪ್ರಾರ್ಥನೆ ಮಾಡಿ
ಮಿಥುನ

- ಆಸ್ತಿಯ ವಿಚಾರವಾಗಿ ಹಣ ಹೂಡಿಕೆ ಮಾಡಬಹುದು
- ಸ್ನೇಹಿತರು ನಿಮ್ಮ ಜೊತೆಯಲ್ಲಿ ಚೆನ್ನಾಗಿರುತ್ತಾರೆ
- ಒತ್ತಡದಿಂದ ಮುಕ್ತವಾಗಿರಲು ಪ್ರಯತ್ನಿಸಿ
- ರಾಜಕೀಯ ವ್ಯಕ್ತಿಗಳಿಗೆ ಶುಭವಿದೆ
- ವಿಷಯವನ್ನು ಸರಿಯಾಗಿ ತಿಳಿದು ನಿರ್ಧಾರ ಮಾಡಿ
- ತಂದೆಯವರ ಆರೋಗ್ಯದಲ್ಲಿ ಏರುಪೇರು ಆಗಬಹುದು ಎಚ್ಚರಿಕೆವಹಿಸಿ
- ನವಗ್ರಹರ ಆರಾಧನೆ ಮಾಡಿ
ಕಟಕ

- ರಾಜಕೀಯ ವ್ಯಕ್ತಿಗಳ ಪ್ರಭಾವ ನಿಮ್ಮ ಮೇಲಿರಲಿದೆ
- ಷೇರು ಮಾರುಕಟ್ಟೆಯಲ್ಲಿ ಎಚ್ಚರಿಕೆಯಿಂದ ಹಣವನ್ನು ಹೂಡಿಕೆ ಮಾಡಬೇಕು
- ನವದಂಪತಿಗಳಿಗೆ ಶುಭ ಸಮಯ ಆನಂದ ಪಡುತ್ತೀರಿ
- ಮಾತಿನಲ್ಲಿ ತಾಳ್ಮೆಯಿರಲಿ ಒರಟುತನ ಬೇಡ
- ಅನಪೇಕ್ಷಿತ ಪ್ರಯಾಣದಿಂದ ತೊಂದರೆಯಾಗಬಹುದು
- ಪರಿಚಯವಿಲ್ಲದ ಜನರಿಂದ ನಷ್ಟ ಆಗುವ ಸಾಧ್ಯತೆ ಇದೆ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಸಿಂಹ

- ಕ್ರೀಡೆಗೆ ಸಂಬಂಧಿಸಿದಂತೆ ಹಠವನ್ನು ಮಾಡಬಾರದು
- ಉನ್ನತ ಅಧಿಕಾರಿಗಳೊಂದಿಗೆ ವಾದ ಮಾಡುವುದು ಬೇಡ
- ತಾಯಿಯ ಸಲಹೆಯನ್ನು ಸ್ವೀಕರಿಸಿ ಶುಭವಿದೆ
- ಕೌಟುಂಬಿಕವಾಗಿ ಉತ್ತಮ ವಾತಾವರಣ ಇರಲಿದೆ
- ಪ್ರಮುಖವಾದ ಕೆಲಸಗಳ ಬಗ್ಗೆ ಆಸಕ್ತಿವಹಿಸಿ
- ಹಲವಾರು ಸವಾಲುಗಳನ್ನು ಗೆಲ್ಲುವಂತಹ ದಿನ
- ಕುಲದೇವತಾ ಪ್ರಾರ್ಥನೆ ಮಾಡಿ
ಕನ್ಯಾ

- ಈ ದಿನ ತುಂಬಾ ಆರಾಮಮಾಗಿ ಕಾಲ ಕಳೆಯಲು ಪ್ರಯತ್ನಿಸುತ್ತೀರಿ
- ಹೊಸ ವ್ಯಾಪಾರವನ್ನು ಆರಂಭ ಮಾಡಬಹುದು
- ಪ್ರೇಮಿಗಳಿಗೆ ಸ್ವಲ್ಪ ಮಾನಸಿಕವಾದ ಹಿಂಸೆಯಾಗಬಹುದು
- ಪ್ರವಾಸಕ್ಕೆ ಯೋಜನೆಯನ್ನು ಹಾಕುತ್ತೀರಿ ಆದರೆ ಸಮಾಧಾನ ಇರುವುದಿಲ್ಲ
- ಬೇರೆಯವರ ಮಾತು ನಿಮಗೆ ಸರಿ ಅಂತ ಅನಿಸುವುದಿಲ್ಲ
- ಪ್ರತ್ಯಾಂಗಿರಾ ದೇವಿಯನ್ನು ಪ್ರಾರ್ಥನೆ ಮಾಡಿ
ತುಲಾ

- ಏಕನಕ್ಷತ್ರ ದಂಪತಿಗಳಿಗೆ ಸ್ವಲ್ಪ ಸಮಸ್ಯೆಯ ದಿನ
- ಮಕ್ಕಳ ಬಗ್ಗೆ ಉತ್ತಮ ಅಭಿಮಾನ ಹೆಚ್ಚಾಗುತ್ತದೆ
- ತಾಯಿಯ ಆರೋಗ್ಯದ ಬಗ್ಗೆ ಕಾಳಜಿವಹಿಸಿ
- ಉದ್ಯೋಗದ ಸ್ಥಾನ ಬಲವಾಗುತ್ತದೆ
- ಮಾನಸಿಕ ಒತ್ತಡವಿದ್ದರೂ ಎಲ್ಲ ಕೆಲಸಗಳಲ್ಲಿ ಜಯವಿದೆ
- ವ್ಯಾವಹಾರಿಕವಾಗಿ ತುಂಬಾ ಅನುಕೂಲವಿದೆ
- ಐಕ್ಯಮತ್ಯ ಮಂತ್ರವನ್ನ ಶ್ರವಣ ಮಾಡಿ
ವೃಶ್ಚಿಕ

- ಸಾಂಸಾರಿಕವಾದ ಜೀವನ ಚೆನ್ನಾಗಿರುತ್ತದೆ
- ಉದ್ಯೋಗದಲ್ಲಿರುವವರಿಗೆ ಬಡ್ತಿಯ ಸೂಚನೆ ಇದೆ
- ವ್ಯಾವಹಾರಿಕ ಪ್ರಗತಿಯಿಂದ ಹಣ, ಸಂತೋಷ ಸಿಗಲಿದೆ
- ಮನೆಯ ಅಲಂಕಾರಕ್ಕೆ ಹಣ ಖರ್ಚು ಮಾಡುತ್ತೀರಿ
- ಮಕ್ಕಳು ಸರಿಯಾದ ನಿರ್ಧಾರದಿಂದ ನಿಮಗೆ ನೆರವಾಗುತ್ತಾರೆ
- ಹಣಕಾಸಿನ ವಿಚಾರದಲ್ಲಿ ಅನುಕೂವಿದೆ ಆದರೆ ತೋರಿಕೆ ಬೇಡ
- ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ
ಧನುಸ್ಸು

- ಪ್ರಯಾಣದಲ್ಲಿ ಸ್ವಲ್ಪ ಅನುಕೂಲವಾಗಬಹುದು ಅನಗತ್ಯ ಪ್ರಯಾಣ ಬೇಡ
- ಇಂದು ಬುದ್ಧಿವಂತಿಕೆಯಿಂದ ವರ್ತಿಸಿ
- ಗೊತ್ತಿಲ್ಲದ ವಿಚಾರದಲ್ಲಿ ವಾದ ಮಾಡಬೇಡಿ
- ಮನೆಯಲ್ಲಿಯೇ ಜಗಳ ಮಾಡುವ ಸಾಧ್ಯತೆಯಿದೆ ಅದಕ್ಕೆ ಅವಕಾಶ ಕೊಡಬೇಡಿ
- ಮಕ್ಕಳಿಂದ ಸಂತೋಷಪಡುತ್ತೀರಿ
- ಗುರಿ ಸಾಧಿಸಲು ತುಂಬಾ ಪ್ರಯಾಸ ಪಡುತ್ತೀರಿ ಆದರೆ ವಿಫಲವಾಗುತ್ತೀರಿ
- ಆಂಜನೇಯನನ್ನು ಪ್ರಾರ್ಥನೆ ಮಾಡಿ
ಮಕರ

- ವೃತ್ತಿಗೆ ಸಂಬಂಧಿಸಿದಂತೆ ಒಳ್ಳೆಯ ಸುದ್ದಿ ಸಿಗಬಹುದು
- ನಿಮ್ಮ ಪ್ರಗತಿ, ಅಭಿವೃದ್ಧಿ ಹಿರಿಯರಿಗೆ ಬಹಳ ಸಂತೋಷ ಕೊಡಬಹುದು
- ಮನೆಗೆ ಹೊಸ ವಸ್ತುಗಳನ್ನು ಖರೀದಿಸಬಹುದು
- ಹಿರಿಯರ ಮಾತುಗಳನ್ನು ಎಚ್ಚರಿಕೆಯಿಂದ ಕೇಳಿ
- ಜನರು ನಿಮ್ಮ ಸಂಪರ್ಕಕ್ಕೆ ಕಾದಿರುತ್ತಾರೆ
- ಸಾಮಾಜಿಕವಾಗಿ ನಿಮ್ಮ ಗೌರವ ಹೆಚ್ಚಾಗುತ್ತದೆ
- ನವಗ್ರಹಾರಾಧನೆ ಮಾಡಿ
ಕುಂಭ

- ಮನಃ ಶಾಂತಿಗಾಗಿ ಏಕಾಂತತೆ ಬಯಸುತ್ತೀರಿ ಆದರೆ ಅದು ಅಸಾಧ್ಯ
- ಉದ್ಯೋಗಸ್ಥರಿಗೆ ಹಣದ ಚಿಂತೆ ಕಾಡಬಹುದು
- ರಾಜಕಾರಣಿಗಳಿಗೆ ಹಲವಾರು ಸವಾಲುಗಳು ಆದರೆ ಜಯವಿದೆ
- ಹಣ ಹೂಡಿಕೆಗೆ ಉತ್ತಮವಾದ ಸಮಯ
- ಭವಿಷ್ಯದ ಯೋಜನೆಗಳಿಗೆ ಭದ್ರ ಅಡಿಪಾಯ ಹಾಕಬಹುದು
- ಮನೆಯಲ್ಲಿ, ಕಾರ್ಯಕ್ಷೇತ್ರದಲ್ಲಿ ಶಿಸ್ತು ಕಾಪಾಡಿ
- ಈಶ್ವರಾರಾಧನೆ ಮಾಡಿ
ಮೀನಾ

- ಜೀವನದ ಮೌಲ್ಯಗಳ ಬಗ್ಗೆ ತುಂಬಾ ಹೆಮ್ಮೆ ಪಡುತ್ತೀರಿ
- ಕುಟುಂಬದ ಸದಸ್ಯರ ಜೊತೆ ಸಂತೋಷದಿಂದ ಇರಬಹುದು
- ನಿಮ್ಮ ನಿರ್ಧಾರ, ನಿಮ್ಮ ಕೆಲಸ ಬೇರೆಯವರಿಗೆ ತುಂಬಾ ಮೆಚ್ಚುಗೆ ಆಗಬಹುದು
- ಅನುಭವದ ಮಾತು ನಿಮಗೆ ಸ್ಫೂರ್ತಿಯಾಗಬಹುದು
- ಕೆಲಸದ ಒತ್ತಡ ತುಂಬಾ ಇರಬಹುದು ಆದರೂ ನಿಭಾಯಿಸುತ್ತೀರಿ
- ನಿಮ್ಮ ಗುಪ್ತರೋಗದ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ
- ಇಷ್ಟದೇವತಾ ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ