ಅನಿರೀಕ್ಷಿತವಾಗಿ ಧನ ಲಾಭ ಆಗಬಹುದು
ಹಣದ ವಿಚಾರದಲ್ಲಿ ಅದೃಷ್ಟವಂತರು ನೀವು
ಪರೋಕ್ಷವಾಗಿ ಯಾರನ್ನು ಹಿಯಾಳಿಸಬೇಡಿ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ವಿಶಾಖ ನಕ್ಷತ್ರ ರಾಹುಕಾಲ ಭಾನುವಾರ ಸಂಜೆ 4:30 ರಿಂದ 6:00 ರವರೆಗೆ ಇರಲಿದೆ.
ಮೇಷ ರಾಶಿ

- ಇಂದು ವ್ಯಾವಹಾರಿಕವಾಗಿ ಅನುಕೂಲವಿದೆ
- ಮಕ್ಕಳ ಜೊತೆಯಲ್ಲಿ ಸ್ವಲ್ಪ ಮಾತುಕತೆ ಜಗಳವಾಗುವ ಸಾಧ್ಯತೆ ಇದೆ
- ಅನಿರೀಕ್ಷಿತವಾಗಿ ಧನ ಲಾಭ ಆಗಬಹುದು
- ಹಲವು ದಿನಗಳಿಂದ ನಿಂತು ಹೋಗಿದ್ದ ಕೆಲಸ ಪೂರ್ಣ ಆಗಲಿದೆ
- ಇಂದು ವೈರಿಗಳನ್ನು ಎದುರಿಸುತ್ತೀರಿ
- ಬಂಧುಗಳಲ್ಲಿ ವಿರೋಧ ಇರಲಿದೆ
- ಗಣಪತಿಯನ್ನು ಪ್ರಾರ್ಥನೆ ಮಾಡಿ
ವೃಷಭ

- ಮನಸ್ಸಿನಲ್ಲಿ ಸಂತೋಷದ ಕ್ಷಣಗಳು ಇರಲಿದೆ
- ಮನೆಯವರಲ್ಲಿ ಪರಸ್ಪರ ಅನ್ಯೋನ್ಯತೆ ಇದೆ
- ಮಕ್ಕಳ ಬಗ್ಗೆ ಹೆಚ್ಚು ಕಾಳಜಿವಹಿಸುತ್ತೀರಿ
- ಇಂದು ಆಸೆಗಳು ಈಡೇರಲಿದೆ
- ಹಣದ ವಿಚಾರದಲ್ಲಿ ಅದೃಷ್ಟವಂತರು
- ಹಣ ಹೂಡಿಕೆಗೆ ಒಳ್ಳೆಯ ಸಮಯ
- ಸುಬ್ರಹ್ಮಣ್ಯ ಸ್ವಾಮಿಯನ್ನು ಆರಾಧನೆ ಮಾಡಿ
ಮಿಥುನ

- ಯಾವುದೇ ರೀತಿಯ ಒಡಂಬಡಿಕೆ ಬೇಡ
- ವ್ಯವಹಾರದಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಿ
- ಕೋಪವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳಿ
- ಯಾವುದೇ ರೀತಿಯ ಆತುರದ ನಿರ್ಧಾರಗಳು ಬೇಡ
- ಪರೋಕ್ಷವಾಗಿ ಯಾರನ್ನು ಹಿಯಾಳಿಸಬೇಡಿ
- ಆರ್ಥಿಕವಾಗಿ ಈ ದಿನ ಚೆನ್ನಾಗಿರುತ್ತದೆ ಶುಭವಿದೆ
- ನರಸಿಂಹ ಸ್ವಾಮಿಯನ್ನು ಆರಾಧನೆ ಮಾಡಿ
ಕಟಕ

- ಸ್ವಂತ ಉದ್ಯಮದವರಿಗೆ ಅನುಕೂಲವಿದೆ
- ಅಧಿಕಾರಿಗಳಿಂದ ಹಣ ನಷ್ಟವಾಗಬಹುದು
- ಕುಟುಂಬದಲ್ಲಿ ಆಸ್ತಿ ವಿಚಾರಕ್ಕೆ ಮನಸ್ತಾಪ ಆಗಲಿದೆ
- ಯತ್ನ ಕಾರ್ಯದಲ್ಲಿ ಜಯ ಆದರೆ ಸಮಾಧಾನ ಇರುವುದಿಲ್ಲ
- ಒಗ್ಗಟ್ಟಿನ ಮಂತ್ರವನ್ನು ಜಪಿಸುತ್ತೀರಿ
- ನಿಮ್ಮ ಧನಾತ್ಮಕವಾದ ಚಿಂತನೆ ನಿಮಗೆ ಬಲ ಆಗಲಿದೆ
- ನಾಗಾರಾಧನೆ ಮಾಡಿ, ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಸಿಂಹ

- ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಿ ಭವಿಷ್ಯವಿದೆ
- ದೂರದ ಆಲೋಚನೆಗಳಿಗೆ ಪುಷ್ಠಿಯನ್ನು ಕೊಡಲಿದೆ
- ವಿದೇಶ ಪ್ರಯಾಣ ಮತ್ತು ವಿದ್ಯಾಭ್ಯಾಸದ ಚಿಂತನೆ ನಡೆಸುತ್ತೀರಿ
- ನಿಮ್ಮ ನಿರ್ಧಾರಗಳು ಮಾತ್ರ ಗಟ್ಟಿಯಾಗಿರಲಿ
- ಉತ್ತಮ ಸಮಯ ಬಂದಾಗ ಒಳ್ಳೆಯ ಕೆಲಸ ಮಾಡಿ
- ಹಣಕಾಸು ಮಾತ್ರ ನಿಮಗೆ ಬೆಂಬಲವಾಗಿದ್ದರೆ ಸಾಲದು ನಿಮ್ಮ ಪರಿಶ್ರಮ ಇರಬೇಕು
- ಈಶ್ವರನ ಆರಾಧನೆ ಮಾಡಿ
ಕನ್ಯಾ

- ದೈಹಿಕವಾಗಿ ಸಣ್ಣ ಪುಟ್ಟ ತೊಂದರೆಗಳು ಕಾಡಲಿದೆ
- ನಿಮ್ಮ ಸ್ವಭಾವದಿಂದ ನಿಮಗೆ ಕಿರಿಕಿರಿಯಾಗಬಹುದು
- ಕೊಟ್ಟಿದ್ದನ್ನ ಪುನಃ ಕೇಳಿ ನಿಷ್ಠೂರವಾಗುತ್ತೀರಿ
- ನಿಮ್ಮನ್ನು ಜನ ಒಪ್ಪುವುದಿಲ್ಲ ಗಮನಿಸಿಕೊಳ್ಳಿ
- ಕುತಂತ್ರ ಯಾವುದೇ ಕಾರಣಕ್ಕೂ ಮಾಡಬೇಡಿ
- ನಿಮ್ಮ ಕೆಲವು ನಿರ್ಧಾರಗಳನ್ನು ಸಡಿಲ ಮಾಡಿಕೊಳ್ಳಿ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ತುಲಾ

- ಮಕ್ಕಳ ಜೊತೆ ಉತ್ತಮ ಸಮಯವನ್ನು ಕಳೆಯುತ್ತೀರಿ
- ನಿಮ್ಮ ಎಲ್ಲಾ ವ್ಯವಹಾರಗಳು ಕಾನೂನಾತ್ಮಕವಾಗಿಯೇ ಇರಲಿ
- ಸ್ನೇಹಿತರು ಹಲವಾರು ವಿಚಾರಗಳನ್ನು ಚರ್ಚಿಸುತ್ತಾರೆ
- ಅನಗತ್ಯ ವಾದ-ವಿವಾದಗಳಿಂದ ದೂರ ಉಳಿಯುತ್ತೀರಿ
- ಕೆಲ ವಿಚಾರಗಳು ತಪ್ಪು ಎಂದು ತಿಳಿದರು ಸುಮ್ಮನೆ ಇರಬೇಕಾಗಬಹುದು
- ನಿಮ್ಮ ಸಮಯ ನಿಮಗೆ ವರದಾನವಾಗಲಿದೆ
- ಲಲಿತಾ ಪರಮೇಶ್ವರಿಯನ್ನು ಆರಾಧನೆ ಮಾಡಿ
ವೃಶ್ಚಿಕ

- ಸಹೋದ್ಯೋಗಿಗಳ ಒತ್ತಡದಿಂದ ಬೇಸರವಾಗಲಿದೆ
- ನಿಮ್ಮ ಯೋಜನೆಗಳನ್ನು ಯಶಸ್ವಿ ಮಾಡಲು ಪ್ರಯತ್ನಿಸಿ
- ಸಣ್ಣ ತಪ್ಪು ದೊಡ್ಡದಾಗಬಹುದು ಎಚ್ಚರಿಕೆವಹಿಸಿ
- ಮನೆಯಲ್ಲಿ ಘರ್ಷಣೆಯ ಸಾಧ್ಯತೆ ಇದೆ
- ಮಾನಸಿಕ ಸಂದಿಗ್ಧ ಪರಿಸ್ಥಿತಿ ಏರ್ಪಡುತ್ತದೆ
- ನಿಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕಿಕೊಳ್ಳಿ
- ಸಾಯಿಬಾಬಾರನ್ನು ಪ್ರಾರ್ಥನೆ ಮಾಡಿ
ಧನುಸ್ಸು

- ಸಾಂಸಾರಿಕವಾದಂತಹ ವಿಚಾರಗಳಲ್ಲಿ ನಿಷ್ಠೂರವಾಗುತ್ತೀರಿ
- ಯೋಚನೆ ಇಲ್ಲದ ಮಾತಿನಿಂದ ಗೌರವಕ್ಕೆ ಧಕ್ಕೆಯಾಗಬಹುದು
- ಜವಾಬ್ದಾರಿಗಳನ್ನು ನಿಭಾಯಿಸುವಲ್ಲಿ ವಿಫಲವಾಗುತ್ತೀರಿ
- ಎಲ್ಲಾ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು
- ಯಶಸ್ಸಿದೆ ಆದರೆ ಅದರ ಜೊತೆ ಪ್ರಾಮಾಣಿಕ ಪ್ರಯತ್ನವಿರಲಿ
- ಆರೋಗ್ಯ ಸುಧಾರಣೆಯಾಗಲಿದೆ
- ಶರಭೇಶ್ವರರನ್ನು ಪ್ರಾರ್ಥನೆ ಮಾಡಿ
ಮಕರ

- ನಿಮ್ಮ ಕಠಿಣವಾದ ಪರಿಶ್ರಮದಿಂದ ಎಲ್ಲವನ್ನು ಪಡೆದುಕೊಳ್ಳಬೇಕಾಗಲಿದೆ
- ತ್ವರಿತವಾದ ಲಾಭ ನಿರೀಕ್ಷಿಸಿದರೆ ನಿರಾಸೆ ಆಗಲಿದೆ
- ಇಂದು ವಿದ್ಯಾರ್ಥಿಗಳಿಗೆ ಅನಾನುಕೂಲವಿದೆ
- ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಿ
- ಬೇರೆಯವರನ್ನು ತಪ್ಪಿತಸ್ಥರನ್ನಾಗಿ ಮಾಡಲು ಹೋಗಿ ನೀವು ಸಿಕ್ಕಿಹಾಕಿ ಕೊಳ್ಳುತ್ತೀರಿ
- ನಿಮ್ಮ ಆಸೆಗೆ ಮಿತಿ ಇರಲಿ ತೊಂದರೆ ಮಾಡಿಕೊಳ್ಳಬೇಡಿ
- ಕುಲದೇವತಾ ಆರಾಧನೆ ಮಾಡಿ
ಕುಂಭ

- ಉದ್ಯೋಗದಲ್ಲಿ ಹಲವಾರು ರೀತಿಯ ಗೊಂದಲಗಳು ಬಗೆಹರಿಯುವುದಿಲ್ಲ
- ವಿಶ್ರಾಂತಿಯ ಅಗತ್ಯತೆ ಇರುತ್ತದೆ
- ಯಾವುದೇ ಕಾನೂನುಬಾಹಿರ ಚಟುವಟಿಕೆಗಳು ಬೇಡ
- ಬೇರೆಯವರಿಗೆ ನಿಮ್ಮಿಂದ ತೊಂದರೆ ಆಗಬಾರದು
- ಹಿರಿಯ ಅಧಿಕಾರಿಗಳ ಜೊತೆ ನಿಮ್ಮ ವಿಶ್ವಾಸ ಚೆನ್ನಾಗಿರಬೇಕು
- ಹಣಕ್ಕಾಗಿ ಮಾಡಿದ ಪ್ರಯತ್ನ ವಿಫಲ ಆಗುವುದರಿಂದ ನಿರಾಸೆ ಆಗಲಿದೆ
- ರುದ್ರಾಭಿಷೇಕವನ್ನು ಮಾಡಿಸಿ
ಮೀನ

- ವ್ಯಾವಹಾರಿಕವಾಗಿ ಅಥವಾ ಸಮಾಜದಲ್ಲಿ ಯಾವುದೇ ಆಸೆ ಆಮಿಷಗಳಿಗೆ ಒಳಗಾಗಬೇಡಿ
- ಕೆಲವು ಅನುಕೂಲಗಳು ನಿಮ್ಮ ಹತ್ತಿರಕ್ಕೆ ಬಂದರು ಅದರ ಹಿಂದೆ ವಂಚನೆಯ ಜಾಲ ಇರಲಿದೆ
- ಉದ್ಯೋಗದಲ್ಲಿ ಬದಲಾವಣೆಯ ಸೂಚನೆ ಇದೆ
- ಹಿರಿಯ ಅಧಿಕಾರಿಗಳಿಂದ ಪ್ರಶಂಸೆ ಮತ್ತು ಗೌರವ ಸಿಗಬಹುದು
- ಯಾವುದೇ ರೀತಿಯ ಹಣಕಾಸಿನ ಗೊಂದಲ ಮಾಡಿಕೊಳ್ಳಬೇಡಿ
- ವಿದ್ಯಾರ್ಥಿಗಳಿಗೆ ಅಗತ್ಯವಾದ ಸಹಾಯ ಸಿಗಲಿದೆ
- ಮನ್ಯುಸೂಕ್ತ ಮಂತ್ರವನ್ನು ಶ್ರವಣ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ